ರಾಜ್ಯದಲ್ಲಿ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ ಕೊರೋನಾ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಾಣು ಸೋಂಕು ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಕೆಲ ಸಮಯದ ಹಿಂದೆ ಪಾಸಿಟಿವ್ ಸಂಖ್ಯೆಗಳು ಕಡಿನೆಯಾಗುತ್ತಾ ಆಶಾವಾದ ಮೂಡಿತ್ತು. ಆದರೆ ಪ್ರಸಕ್ತ ದಿನೇ ದಿನೇ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ದೃಢಪಡುತ್ತಿದೆ. ಸೋಮವಾರ ಕೂಡಾ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪಾಸಿಟಿವ್ ಕೇಸ್ಉಗಳು 2,792 ದಾಖಲಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 9,89,804ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಸೋಮವಾರ ಸಂಜೆಯ ಹೊತ್ತಿಗೆ 1,742 ಮಂದಿಗೆ ಸೋಂಕು ದೃಢಪಟ್ಟಿರುವ ಮಾಹಿತಿ ಸಿಕ್ಕಿದ್ದು, ಇದರೊಂದಿಗೆ ರಾಜಧಾನಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 4,29,915ಕ್ಕೆ ಏರಿಕೆಯಾಗಿದೆ ಎಂದು ಹೆಲ್ತ್ ಬುಲೆಟಿನ್ ತಿಳಿಸಿದೆ. ಈ ನಡುವೆ, ಭಾನುವಾರ ಸಂಜೆಯಿಂದ ಸೋಮವಾರ ಸಂಜೆಯನಡುವೆ ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ 16 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 12,520ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆಯು ಹೆಲ್ತಬುಲೆಟಿನ್ ಮೂಲಕ ಮಾಹಿತಿ ನೀಡಿದೆ‌.

ಅಲ್ಲಿ ಕಣ್ ಸನ್ನೆ.. ಕನ್ನಡಲ್ಲಿ ಕೈ ಸನ್ನೆ.. ಪ್ರಿಯಾ ವಾರಿಯರ್ ಕುತೂಹಲ

ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ಕನ್ನಡದಲ್ಲಿ ನಟಿಸುತ್ತಿರುವ ‘ವಿಷ್ಣುಪ್ರಿಯ’ ಚಿತ್ರ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ. ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಶ್ರೇಯಸ್ ಮಂಜು ಕೂಡಾ ನಟಿಸಿದ್ದಾರೆ.

‘ಕಟ್ಟಿಂಗ್ ಶಾಪ್’ನಲ್ಲಿ ಪ್ರವೀಣ್, ಅರ್ಚನಾ ಆಕರ್ಷಣೆ

ಕನ್ನಡ ಸಿನಿಮಾ ಕ್ಷೇತ್ರದಲ್ಲೀಗ ಬಗೆಬಗೆಯ ಟೈಟಲ್ ನಲ್ಲಿ ಚಿತ್ರಗಳು ಹೊರಬರುತ್ತಿವೆ. ಇದೀಗ ಕೆಬಿ ಪ್ರವೀಣ್ ಮತ್ತು ಅರ್ಚನಾ ಕೊಟ್ಟಿಗೆ ಅಭಿನಯದ ‘ಕಟ್ಟಿಂಗ್ ಶಾಪ್’ ಚಿತ್ರ ಕೂಡಾ ವಿಭಿನ್ನ ಟೈಟಲ್’ನಿಂದ ಗಮನಸೆಳೆದಿದೆ. ಪವನ್ ಭಟ್ ನಿರ್ದೇಶಿಸಿರುವ ಈ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಜಾಲತಾಣಗಳಲ್ಲಿ ಈ ಟೀಸರ್ ಸಕತ್ ಸದ್ದು ಮಾಡುತ್ತಿದೆ.