ನಾನಿನ್ನೂ ಬದುಕಿದ್ದೇನೆ ; ಅಮರ್ ಸಿಂಗ್ ವೀಡಿಯೋ ಟ್ವೀಟ್

ದೆಹಲಿ: ನಾನಿನ್ನೂ ಬದುಕಿದ್ದೇನೆ, ಸಾಧ್ಯವೇ ಭಾರತಕ್ಕೆ ಬರುತ್ತೇನೆ ಎಂದು ಹಿರಿಯ ರಾಜಕಾರಣಿ, ಸಮಾಜವಾದಿ ಪಕ್ಷದ ಮಾಜಿ ಮುಖಂಡ ಅಮರ್ ಸಿಂಗ್ ಹೇಳಿದ್ದಾರೆ.

ಅಮರ್ ಸಿಂಗ್ ಮೃತಪಟ್ಟಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ಇದರಿಂದಾಗಿ ಅವರ ಬೆಂಬಲಿಗರು ಗಲಿಬಿಲಿಗೊಂಡಿದ್ದರು. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಅಮರ್ ಸಿಂಗ್ ತಾನಿನ್ನೂ ಬದುಕಿದ್ದೇನೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.

‘ಕಿಡ್ನಿ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಸಿಂಗಾಪುರದಲ್ಲಿದ್ದೇನೆ. ಚಿಕಿತ್ಸೆ ಮುಗಿಸಿ ಭಾರತಕ್ಕೆ ವಾಪಸ್​ ಆಗುತ್ತೇನೆ’ ಎಂದು ಅಮರ್ ಸಿಂಗ್ ವಿಡಿಯೋ ಮಾಡಿ ಟ್ವೀಟರ್​ನಲ್ಲಿ ಹಂಚಿಕೊಂಡಿದ್ದಾರೆ. ‘ಟೈಗರ್​ ಜಿಂದಾ ಹೈ’ ಎಂಬ ಶೀರ್ಷಿಕೆ ನೀಡಿ ಅವರು ಈ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

 

Related posts