ಕೊರೋನಾ ನಿವಾರಣೆಗಾಗಿ ದೇಶಭಕ್ತಿಯ ಕೈಂಕರ್ಯ; ಪ್ರಾರ್ಥನಾ ಅಭಿಯಾನದಲ್ಲಿ ಭಾಗಿಯಾದ ಸಿಎಂ

ಕೊರೋನಾ ನಿಯಂತ್ರಣ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶಿಸಲು ಚಪ್ಪಾಳೆ ನಂತರ ದೀಪೋತ್ಸವಕ್ಕೆ ಪ್ರಧಾನಿ ಮೋದಿ ಕರೆ ನೀಡಿದ್ದರು. ಈ ಭಾನುವಾರ ಪ್ರಾರ್ಥನೆ ಕೈಂಕರ್ಯ ನೆರವೇರಿಸಲಾಯಿತು.

ಬೆಂಗಳೂರು: ಕೊರೋನಾ ಮಹಾಮಾರಿಯನ್ನು ಪರಿಸರದಿಂದ ದೂರ ಎತ್ತದಿದ್ದರೆ ಪರಿಸ್ಥಿತಿ ತಿಳಿಯಾಗಲ್ಲ ಎನ್ನುವುದು ಎಲ್ಲರ ಜಾಗೃತಿ ಕಹಳೆ. ಒಂದೆಡೆ ಲಾಕ್ ಡೌನ್ ಜಾರಿಯಲ್ಲಿದ್ದು, ಇದೆ ಸಂದರ್ಭದಲ್ಲಿ ಜನತಾ ಕರ್ಫ್ಯೂ, ಸಾಮೂಹಿಕ ಚಪ್ಪಾಳೆ, ಸಾಮೂಹಿಕ ಶಂಖ ನಾದ, ಜಾಗಟೆಗಳ ನಿನಾದ, ದೀಪೋತ್ಸವದ ಕೈಂಕರ್ಯ.. ಹೀಗೆ ಸರಣಿ ಕಾರ್ಯಕ್ರಮಗಳ ನಂತರ ಇದೀಗ ಈ ಭಾನುವಾರದಂದು ಸಾಮೂಹಿಕ ಪ್ರಾರ್ಥನೆ ಕೈಂಕರ್ಯ ನೆರವೇರಿತು.

ಸಂಘ ಪರಿವಾರ ಪ್ರಮುಖರು ಪ್ರಾಂತ ಪ್ರಾರ್ಥನಾ ದಿನ ಆಚರಿಸಲು ನೀಡಿದ ಕರೆಗೆ ರಾಜ್ಯವ್ಯಾಪಿ ಸ್ವಯಂಸೇವಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ತಮ್ಮ ತಮ್ಮ ಮನೆಗಳಲ್ಲೇ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಾಥನೆ ನೆರವೇರಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ನಿವಾಸದಲ್ಲಿ ಭಾಗವಧ್ವಜ ವಂದನೆ ಹಾಗೂ ಸಂಘದ ಪ್ರಾಥನೆ ನೆರವೇರಿಸಿದರು. ಆರೆಸ್ಸೆಸ್ ಕರೆಯನ್ನು ಗೌರವಿಸಿ ತಾನೊಬ್ಬ ಸಂಘದ ಸೇನಾನಿ ಎಂಬುದನ್ನು ತೋರಿಸಿಕೊಟ್ಟರು.

ಇಷ್ಟಲಿಂಗ ಪೂಜೆ
ಈನೊಂದೆಡೆ ಮೋದಿಯವರು ದೀಪೋತ್ಸವಕ್ಕೆ ಕರೆ ನೀಡಿರುವ ಮಾದರಿಯಲ್ಲೇ ಕಾಂಗ್ರೆಸ್ ನಾಯಕ, ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲರು ಇಷ್ಟಲಿಂಗ ಪೂಜೆಗೆ ಕರೆ ಕೊಟ್ಟಿದ್ದಾರೆ. ಏಪ್ರಿಲ್ 13ರ ಸೋಮವಾರ ಸಂಜೆ 7ಗಂಟೆಗೆ ಲಿಂಗವಂತರು ಹಾಗೂ ಬಸವಾದಿ ಎಲ್ಲ ಶರಣರ ಭಕ್ತರು ತಮ್ಮ ತಮ್ಮ ಮನೆಗಳಿಂದಲೇ ಧ್ಯಾನಸ್ಥರಾಗಿ ವಿಶ್ವಕ್ಕೆ ಮಾರಕವಾಗಿರುವ ಕೊರೋನಾ ಹಾವಳಿಯಿಂದ ಮುಕ್ತಗೊಳಿಸಲು ಸಾಮೂಹಿಕ ಪೂಜೆ ನೆರವೇರಿಸಬೇಕೆಂದು ಕರೆ ಕೊಟ್ಟಿದ್ದಾರೆ.

ಇದನ್ನೂ ಓದಿ.. ಸೆಕ್ಯುರಿಟಿ ಬಿಡಲಿಲ್ಲ ಅಂತ ಸ್ನೇಹಿತನನ್ನು ಸೂಟ್’ಕೇಸ್’ನಲ್ಲಿರಿಸಿ ಅಪಾರ್ಟ್’ಮೆಂಟ್’ಗೆ ಕರೆತಂದ … ಪೊಲೀಸರ ಅತಿಥಿಯಾದ 

 

Related posts