ಮಂಗಳೂರು ರಥಬೀಧಿಯಲ್ಲಿ ಭಾರೀ ದುರಂತ; ನೆಲಕ್ಕುರುಳಿದ ಬೃಹತ್ ಅಶ್ವಥ ಮರ

ಮಂಗಳೂರು: ಬಂದರು ಮಂಗಳೂರಿನ ಕಾರ್ಸ್ಟ್ರೀಟ್’ನ ವೆಂಕಟರಮಣ ದೇವಾಲಯ ಬಳಿಯ ಬೃಹತ್ ಅಶ್ವಥ ಮರ ಇದ್ದಕ್ಕಿದ್ದಂತೆ ನೆಲಕ್ಕುರುಳಿದೆ.

ಮಂಗಳೂರಿನ ರಥಬೀದಿಯ ಪ್ರಮುಖ ಆಕರ್ಷಣೆ ಹಾಗೂ ಜನರ ಪೂಜ್ಯ ಭಾವನೆಯ ಕೇಂದ್ರವಾಗಿ ಈ ಬೃಹತ್ ಮರ ಗುರುತಾಗಿತ್ತು. ದೇವಾಲಯದ ಉತ್ಸವ ಸಂದರ್ಭದಲ್ಲಿ ವಿವಿಧ ಕೈಂಕರ್ಯಗಳಿಗೂ ಈ ರಾಜ ವೃಕ್ಷ ಸಾಕ್ಷಿಯಾಗುತ್ತಿತ್ತು.

 

ಈ ದೈತ್ಯ ಮರ ಇದ್ದಕ್ಕಿದ್ದಂತೆ ನೆಲಕ್ಕುರುಳಿಬಿದ್ದಿದ್ದು ಈ ಅವಘಡದಲ್ಲಿ ಸಮೀಪದಲ್ಲಿದ್ದ ನೀರಿನ ತಾಂಕಾ ಹಾಗೂ ಕೆಲವು ವಾಹನಗಳಿಗೆ ಹಾನಿಯುಂಟಾಗಿದೆ ಎನ್ನಲಾಗಿದೆ.

Related posts