ದೀಪದ ಹೆಸರಲ್ಲಿ ರಾತ್ರಿ ಮನೆಯಿಂದ ಹೊರಬಂದೀರಿ ಜೊಕೆ; ಪೊಲೀಸ್ ಎಚ್ಚರಿಕೆ

ಬೆಂಗಳೂರು: ದೀಪದ ಹೆಸರಲ್ಲಿ ಜನರು ಮನೆಯಿಂದ ಹೊರ ಬರುಂತಿಲ್ಲ. ಒಂದು ವೇಳೆ ನಿಯಮ ಮೀರಿ ಗುಂಪು ಸೇರಿದರೆ ಪ್ರಕರಣ ದಾಖಲಿಸಲು ಪೊಲೀಸರು ನಿರ್ಧರಿಸಿದ್ದಾರೆ.

ಕೊರೋನಾ ವೈರಸ್ ಹಾವಳಿಯಿಂದ ದೇಶದಲ್ಲಿ ತಲ್ಲಣ ಸೃಷ್ಟಿಯಾಗಿದೆ. ಕೋವಿಡ್-19 ವೈರಾಣು ಹರಡುವಿಕೆ ತಡೆಯಲು ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಲಾಗಿದ್ದು ಜನಸಾಮಾನ್ಯರು ಕಾನೂನಿನ ವ್ಯಾಪ್ತಿಯಲ್ಲಿ ಬಂಧಿಯಾಗಿದ್ದಾರೆ. ಈ ಸಂಧಿಕಾಲದಲ್ಲಿ ದೇಶವನ್ನು ಕಾಪಾಡಲು ಜನ ಒಗ್ಗಟ್ಟು ಪ್ರದರ್ಶಿಸಬೇಕೆಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಕೆಲ ವಾರಗಳ ಹಿಂದಿನ ಜನತಾ ಕರ್ಫ್ಯೂ ರೀತಿಯಲ್ಲೇ ಈ ಭಾನುವಾರ ರಾತ್ರಿ ದೀಪೋತ್ಸವಕ್ಕೆ ಕರೆ ನೀಡಿದ್ದಾರೆ.ಜಗತ್ತಿನ ಅಂಧಕಾರವನ್ನು ತೊಲಗಿಸೋಣ, ಇದಕ್ಕಾಗಿ ಮನೆ ಮನೆಗಳಲ್ಲಿ ದೀಪ ಬೆಳಗಿಸೋಣ ಎಂದು ಅವರು ಕರೆ ಕೊಟ್ಟಿದ್ದಾರೆ.

ಈ ನಡುವೆ, ದೀಪಾರಾಧನೆ ಸಂದರ್ಭದಲ್ಲಿ ಅಭಿಮಾನದ ಪರಾಕಾಷ್ಠೆ ಮೆರೆದು ಲಾಕ್ ಡೌನ್ ಜಾರಿಗೆ ಅಡ್ಡಿಯಾಗುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಗಳೂ ಇವೆ. ಈ ಬಗ್ಗೆ ಕಟ್ಟೆಚ್ಚರ ವಹಿಸುವಂತೆ ಬೆಂಗಳೂರು ಪೊಲೀಸರಿಗೆ ಆಯುಕ್ತ ಭಾಸ್ಕರ್ ರಾವ್ ಸೂಚಿಸಿದ್ದಾರೆ.

ಇದೇ ವೇಳೆ, ದೀಪದ ಹೆಸರಲ್ಲಿ ಜನರು ಗುಂಪು ಸೇರುವುದು, ಮೆರವಣಿಗೆ ಮಾಡುವುದು ಸೇರಿದಂತೆ ನಿಯಮ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಕಮೀಷನರ್ ಭಾಸ್ಕರ ರಾವ್ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ.. ಮೋದಿ ಬೆಂಬಲಿಸಿ ಅಖಾಡಕ್ಕೆ ಧುಮುಕಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

Related posts