ಮತ್ತೊಮ್ಮೆ ದೇಶವನ್ನುದ್ದೇಶಿಸಿ ಮೋದಿ ಮಾತು; ಪ್ರಧಾನಿ ಭಾಷಣದ ಹೈಲೈಟ್ ಇಲ್ಲಿದೆ

ದೆಹಲಿ: ಜಗತ್ತಿನಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೋವಿಡ್-19 ವೈರಸ್ ಹಾವಳಿ ಭಾರತದಲ್ಲೂ ಆತಂಕದ ಅಲೆ ಎಬ್ಬಿಸಿದ್ದು ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಕೊರೋನಾ ವೈರಾಣು ಹರಡುವುದನ್ನು ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೊಂದೇ ಮಾರ್ಗ. ಈ ಸೂತ್ರ ಅನುಸರಿಸಲೆಂದೇ ದೇಶಾದ್ಯಂತ ಲಾಕ್’ಡೌನ್ ಜಾರಿಯಲ್ಲಿದ್ದು, ಸಾರ್ವಜನಿಕ ಸಭೆ ಸಮಾರಂಭಗಳಿಗಿಲ್ಲ ಅವಕಾಶ. ಸಮಾರಂಭ, ಸಭೆಗಳೂ ನಡೆಯದೆ ಜನ ಗುಂಪು ಸೇರುತ್ತಿಲ್ಲ. ಆದರೂ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇರುವುದು ದೇಶಕ್ಕೆ ಸವಾಲೆಂಬಂತಾಗಿದೆ.

ಈ ಸಂದರ್ಭದಲ್ಲಿ ಇದೀಗ ಮತ್ತೆ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ಬಾರಿ ಮತ್ತಷ್ಟು ಕಿವಿಮಾತು ಹೇಳಿದ್ದಾರೆ. ಲಾಕ್’ಡೌನ್ ಬಳಿಕ 2 ನೇ ಮನ್ ಕೀ ಬಾತ್ ರೇಡಿಯೋ ಭಾಷಣ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ ಮೋದಿ, ಇಡೀ ದೇಶದ ಜನ ಕೊರೋನಾ ವಿರುದ್ಧ ಯುದ್ಧ ಮಾಡುತ್ತಿದ್ದಾರೆ ಎಂದರು.

—– ಪ್ರಮುಖ ಸುದ್ದಿಗಳು: ಇದನ್ನೂ ಓದಿ —-

 

ಪ್ರಧಾನಿ ಭಾಷಣದ ಹೈಲೈಟ್ ಇಲ್ಲಿದೆ

  • ಬಡವರಿಂದ ಹಿಡಿದು ಶ್ರೀಮಂತರವರೆಗೆ ಎಲ್ಲರೂ ಈ ಯುದ್ಧ ಮಾಡುತ್ತಿದ್ದಾರೆ.
  • ಸಾಮಾನ್ಯ ಜನರ ನೇತೃತ್ವದಲ್ಲಿ ನಡೆಯುತ್ತಿರುವ ಯುದ್ಧ ಇದಾಗಿದೆ.
  • ನಿಮ್ಮ ಮನದ ಮಾತುಗಳು ನನ್ನನ್ನು ತಲುಪಿದೆ
  • ಜನ ಒಬ್ಬರಿಗೊಬ್ಬರು ಸಹಾಯ ಮಾಡುತ್ತಿದ್ದಾರೆ.
  • ಇಡೀ ದೇಶದ ಚಿತ್ತ ಒಂದೇ ಕಡೆ ಇದೆ
  • ಈ ಯುದ್ಧ ಮೂಲಕ ಇಡೀ ದೇಶ ಒಂದಾಗಿದೆ.
  • ಪ್ರತಿಯೊಬ್ಬ ನಾಗರಿಕನೂ ಇದರಲ್ಲಿ ಸೈನಿಕ.
  • ದೇಶದ 130 ಕೋಟಿ ಜನರೂ ಇದರಲ್ಲಿ ಸೈನಿಕ. 
  • ನಾವೆಲ್ಲರೂ ಒಗ್ಗಟ್ಟಾಗಿ ಕೊರೋನಾವನ್ನು ಓಡಿಸಬೇಕಾಗಿದೆ.
  • ಮಹಾಮಾರಿ ನಡುವೆಯೂ ರೈತರು ಕೃಷಿಯಲ್ಲಿ ತೊಡಗಿದ್ದಾರೆ.
  • ಕೆಲವರು ತಮ್ಮ ಬೆಳೆಗಳನ್ನು ದಾನ ಮಾಡುತ್ತಿದ್ದಾರೆ
  • ದೇಶವು ವೈದ್ಯಕೀಯ ಕ್ಷೇತ್ರದಲ್ಲೂ ಸಾಧಿಸುತ್ತಿದೆ.
  • ಇಡೀ ವೈದ್ಯಲೋಕ ಕೊರೋನಾ ವಿರುದ್ಧ ಸೆಣಸಾಡುತ್ತಿದೆ.
  • ವೈದ್ಯರ, ನರ್ಸ್’ಗಳ ಸೇವೆ, ತ್ಯಾಗಕ್ಕೆ ನಾವು ಗೌರವ ಸಲ್ಲಿಸಲೇಬೇಕು
  • ಪೊಲೀಸರೂ ತಮ್ಮ ಕರ್ತವ್ಯ ಮಾಡುತ್ತಿದ್ದಾರೆ.
  • ಕೊರೋನಾ ವಾರಿಯರ್ಸ್ ಮೇಲಿನ ದಾಳಿಯನ್ನು ಸಹಿಸಲು ಸಾಧ್ಯವೇ ಇಲ್ಲ
  • ಕೊರೋನಾ ವಾರಿಯರ್ಸ್’ಗಾಗಿ ವೆಬ್ಸೈಟ್ ಆರಂಭಿಸಲಾಗಿದೆ.
  • ವೈದ್ಯಕೀಯ ಸಿಬ್ಬಂದಿ ರಕ್ಷಣಗೆ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ.
  • ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದವರನ್ನು ಶಿಕ್ಷಿಸಲಾಗುತ್ತದೆ.
  • ಪೌರ ಕಾರ್ಮಿಕರಿಗೂ ಹೂಮಾಲೆ ಮೂಲಕ ಅಭಿನಂದಿಸಲಾಗುತ್ತಿದೆ.
  • ಲಾಕ್ ಡೌನ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿ 
  • ಜಗತ್ತಿನ ಇತರ ರಾಷ್ಟ್ರಗಳಿಗೂ ಭಾರತ ಸಹಾಯಹಸ್ತ ಚಾಚಿದೆ. 
  • ಅಗತ್ಯ ವಸ್ತುಗಳನ್ನು ವಿದೇಶಗಳಿಗೆ ನೀಡಿದೆ
  • ಭಾರತದ ಕೊಡುಗೆಯನ್ನು ಇಡೀ ವಿಶ್ವವೇ ಹೊಗಳುತ್ತಿದೆ
  • ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ನಮ್ಮ ಕ್ರತವ್ಯ
  • ಕೊರೋನಾ ವಿರುದ್ಧ ಹೋರಾಟದಲ್ಲಿ ಭಾರತ ಇಡೀ ಜಗತ್ತಿಗೆ ಮಾದರಿಯಾಗಿದೆ
  • ವಿವಿಧ ದೇಶಗಳ ನಾಯಕರು ಕರೆ ಮಾಡಿ ಕೃತಜ್ಞತೆ ಸಲ್ಲಿಸುತ್ತಿದ್ದಾರೆ
  • ದಯವಿಟ್ಟು ಮಾಸ್ಕ್ ಧರಿಸಿ ಎಂದು ಇಡೀ ದೇಶಕ್ಕೆ ಮನವಿ ಮಾಡುತ್ತಿದ್ದೇನೆ
  • ಮಾಸ್ಕ್ ಧರಿಸುವುದರಿಂದ ಮಾತ್ರ ಕೊರೋನಾದಿಂದ ಪಾರಾಗಬಹುದು 
  • ಸಾಮಾಜಿಕ ಅಂತರ ಕಾಯ್ದುಕೊಳ್ಳಿ
  • ಪರಿಸರದ ಬಗ್ಗೆ ಎಲ್ಲರೂ ಕಾಳಜಿ ವಹಿಸಿ
  • ಯಾವುದೇ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಉಗುಳಬೇಡಿ
  • ಸರ್ಕಾರಾದ ನಿಯಮಗಳನ್ನು ತಪ್ಪದೆ ಪಾಲಿಸಿ
  • ಟ್ಯಾಂಕ್ಯು ಇಂಡಿಯಾ ಅಂತ ಹೇಳುತ್ತಿದ್ದೇನೆ 
  • ಇಂದು ಭಗವಾನ್ ಮಹಾವೀರ ಜಯಂತಿ
  • ಅಕ್ಷಯ ತೃತೀಯ ದಿನವೂ ಹೌದು.
  • ನಮ್ಮ ಆತ್ಮ, ಭಾವ ಅಕ್ಷಯವಾಗಲಿ
  • ಒಳ್ಳಯ ಕೆಲಸ ಆರಂಭಿಸಲು ಶುಭ ದಿನ
  • ಬಸವ ಜಯಂತಿಯಾದ ಇಂದು ಇಡೀ ದೇಶ ಬಸವಣ್ಣರನ್ನು ನೆನಪಿಸುತ್ತಿದ್ದೇವೆ.
  • ಇಂತಹಾ ಕಷ್ಟದ ದಿನಗಳಲ್ಲಿ ಬಸವಣ್ಣನ ಮಾತುಗಳು ನಮಗೆ ಆದರ್ಶ
  • ಈಸ್ಟರ್ ಹಬ್ಬವನ್ನೂ ಮನೆಯಲ್ಲೇ ಕುಳಿತು ಆಚರಿಸಲಾಯಿತು
  • ಎಲ್ಲಾ ಹಬ್ಬಗಳನ್ನೂ ಮನೆಯೊಳಗೇ ಸೀಮಿತಗೊಳಿಸಲಾಯಿತು 

ಇದನ್ನೂ ಓದಿ.. ಜೂನ್ 30ರ ವರೆಗೂ ಮದುವೆ, ಸಭೆ ಸಮಾರಂಭ ನಿಷೇಧ..? 

 

 

Related posts