ವಲಸೆ ಕಾರ್ಮಿಕರಿಗೆ ಇದೆಂತಾ ಶಿಕ್ಷೆ? ಕಣ್ಣಿದ್ದೂ ಕುರುಡಾಯಿತೇ ಸರ್ಕಾರ?

ಕೊರೋನಾ ಕಾರಣಕ್ಕಾಗಿ ಲಾಕ್’ಡೌನ್ ಜಾರಿಯಲ್ಲಿದ್ದು, ಅನೇಕರು ಸಂಕಷ್ಟದಲ್ಲಿದ್ದಾರೆ. ಈ ಸಂದರ್ಭದಲ್ಲಿ ಸಾವಿರಾರು ಮಂದಿ ಕೊರೋನಾ ಸೈನಿಕರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಆದರೆ ಅಧಿಕಾರಿಗಳು..? ಕೆಲವೊಮ್ಮೆ ಅವರೂ ಕೂಡಾ ಕಣ್ಣಿದ್ದು ಕುರುಡರಂತಾಗುತ್ತಾರೆ ಎಂಬುದಕ್ಕೆ ಈ ವಲಸೆ ಕಾರ್ಮಿಕರ ಕಣ್ಣೀರ ಕಥೆ ಉದಾಹರಣೆಯಾಗಿದೆ. ಕಳೆದ 3 ದಿನಗಳಿಂದ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಕಾಲಿ ಗ್ರಾಮದ ಭೀಮಾ ಸೇತುವೆಯ ಅಡಿಯಲ್ಲಿ ಕರ್ನಾಟಕದ 14 ವಲಸೆ ಕಾರ್ಮಿಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ 10 ಮಂದಿ ಶಿವಮೊಗ್ಗ ಜಿಲ್ಲೆಯ ಇಬ್ಬರು ರಾಮನಗರ ಜಿಲ್ಲೆಯ ಒಬ್ಬರು ಕಾರವಾರ ಜಿಲ್ಲೆಯ ಒಬ್ಬರು ಕೆಲಸ ಅರಸಿ ಮಹಾರಾಷ್ಟ್ರಕ್ಕೆ ತೆರಳಿದ್ದ ಕನ್ನಡಿಗ ವಲಸೆ ಕಾರ್ಮಿಕರು ಲಾಕ್’ಡೌನ್ ಘೋಷಣೆಯಾದ ನಂತರ ಅತಂತ್ರರಾದರು. ಹಾಗಾಗಿ ತವರಿನತ್ತ ಮುಖ ಮಾಡಿದ ಇವರು ಮಹಾರಾಷ್ಟ್ರದ ಲಾಥೂರ್’ನಿಂದ ಕರ್ನಾಟಕಕ್ಕೆ ತೆರಳಿದ್ದರು. ಮಾರ್ಚ್ 28 ರಿಂದ ಮಾರ್ಚ್ 31 ರವರೆಗೆ 184 ಕಿಲೋ ಮೀಟರ್ ದೂರ … Continue reading ವಲಸೆ ಕಾರ್ಮಿಕರಿಗೆ ಇದೆಂತಾ ಶಿಕ್ಷೆ? ಕಣ್ಣಿದ್ದೂ ಕುರುಡಾಯಿತೇ ಸರ್ಕಾರ?