ಕಾಂಗ್ರೆಸ್ ಅಭ್ಯರ್ಥಿಗಳ ಮತ್ತೊಂದು ಪಟ್ಟಿ ಬಿಡುಗಡೆ..

ಬೆಂಗಳೂರು ಕಾಂಗ್ರೆಸ್ ಅಭ್ಯರ್ಥಿಗಳ ಮತ್ತೊಂದು ಪಟ್ಟಿ ಬಿಡುಗಡೆಯಾಗಿದೆ. ಬಿಜೆಪಿ ಭದ್ರಕೋಟೆಗೆ ಲಗ್ಗೆ ಹಾಕಲು ರಣವ್ಯೂಹ ರೂಪಿಸಿರುವ ಕಾಂಗ್ರೆಸ್ ಅಥಣಿ ಕ್ಷೇತ್ರದಲ್ಲಿ ಲಕ್ಷ್ಮಣ್ ಸವದಿ ಅವರಿಗೆ ಟಿಕೆಟ್ ಘೋಷಿಸಿದೆ. ಪುತ್ತೂರು ಕ್ಷೇತ್ರಕ್ಕೆ ಅಶೋಕ್ ಕುಮಾರ್ ರೈ ಹಾಗೂ ಮಂಗಳೂರು ದಕ್ಷಿಣಕ್ಕೆ ಜೆ.ಆರ್.ಲೋಬೋ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಘೋಷಿಸಿದೆ. ಕಾರ್ಕಳದಲ್ಲಿ ಉದಯ್ ಶೆಟ್ಟಿ ಅವರಿಗೆ ಟಿಕೆಟ್ ನೀಡಲಾಗಿದೆ.

ಸಿದ್ದರಾಮಯ್ಯ ಅವರು ಸ್ಪರ್ಧಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದ್ದ ಕೋಲಾರದಲ್ಲಿ ಕೊತ್ತೂರು ಮಂಜುನಾಥ್ ಅವರಿಗೆ ಟಿಕೆಟ್ ಘೋಷಿಸಲಾಗಿದೆ.

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ:

  • ಅಥಣಿ: ಲಕ್ಷ್ಮಣ್ ಸವದಿ
  • ರಾಯಬಾಗ: ಮಹಾವೀರ ಮೋಹಿತ್
  • ಅರಭಾವಿ: ಅರವಿಂದ ದಳವಾಯಿ
  • ಬೆಳಗಾವಿ  ಉತ್ತರ: ಆಸೀಫ್ ಸೇಠ್
  • ಬೆಳಗಾವಿ ದಕ್ಷಿಣ: ಪ್ರಭಾವತಿ
  • ತೇರದಾಳ: ಸಿದ್ದಪ್ಪ ಕೊಣ್ಣರು
  • ದೇವರ ಹಿಪ್ಪರಗಿ: ಶರಣಪ್ಪ ಸುನಗಾರ್
  • ಸಿಂದಗಿ: ಅಶೋಕ್ ಮನಗೂಳಿ
  • ಗುಲ್ಬರ್ಗಾ ಗ್ರಾಮೀಣ: ರೇವು ನಾಯಕ್ ಬೆಳಮಗಿ
  • ಔರಾದ್: ಶಿಂಧೆ ಭೀಮಸೇನ್ ರಾವ್
  • ಮಾನ್ವಿ: ಹಂಪಯ್ಯ ನಾಯಕ್
  • ದೇವದುರ್ಗ: ಶ್ರೀದೇವಿ ನಾಯಕ್
  • ಸಿಂಧನೂರು: ಹಂಪನಗೌಡ ಬಾದರ್ಲಿ
  • ಶಿರಹಟ್ಟಿ: ಸುಜಾತಾ ದೊಡ್ಡಮನಿ
  • ನವಲಗುಂದ: ಎನ್ ಹೆಚ್ ಕೋನರೆಡ್ಡಿ
  • ಕುಂದಗೋಳ: ಕುಸುಮಾವತಿ ಶಿವಳ್ಳಿ
  • ಕುಮಟಾ: ನಿವೇದಿತಾ ಆಳ್ವಾ
  • ಶಿರಗುಪ್ಪ: ಬಿಎಂ ನಾಗರಾಜ್
  • ಬಳ್ಳಾರಿ ನಗರ: ನಾರಾ ಭರತ್ ರೆಡ್ಡಿ
  • ಜಗಳೂರು: ದೇವೇಂದ್ರಪ್ಪ
  • ಹರಪನಹಳ್ಳಿ: ಎನ್ ಕೊಟ್ರೇಶ್
  • ಶಿವಮೊಗ್ಗ ಗ್ರಾಮೀಣ: ಶ್ರೀನಿವಾಸ್ ಕರಿಯಣ್ಣ
  • ಶಿವಮೊಗ್ಗ: ಹೆಚ್ ಸಿ ಯೋಗೇಶ್
  • ಶಿಕಾರಿಪುರ: ಜಿನಿ ಮಾಲತೇಶ್
  • ಕಾರ್ಕಳ: ಉದಯ್ ಶೆಟ್ಟಿ
  • ಮೂಡಿಗೆರೆ: ನಯನ ಮೋಟಮ್ಮ
  • ತರೀಕೆರೆ: ಜಿ ಎಚ್ ಶ್ರೀನಿವಾಸ್
  • ತುಮಕೂರು ಗ್ರಾಮೀಣ: ಶಣ್ಮುಖಪ್ಪ ಯಾದವ್
  • ಚಿಕ್ಕಬಳ್ಳಾಪುರ: ಪ್ರದೀಪ್ ಅಯ್ಯರ್
  • ಕೋಲಾರ: ಕೊತ್ತರೂ ಮಂಜುನಾಥ್
  • ದಾಸರಹಳ್ಳಿ: ಧನಂಜಯ್ ಗಂಗಾಧರಯ್ಯ
  • ಚಿಕ್ಕಪೇಟೆ: ಆರ್ ವಿ ದೇವರಾಜು
  • ಬೊಮ್ಮನಹಳ್ಳಿ: ಉಮಾಪತಿ
  • ಬೆಂಗಳೂರು ದಕ್ಷಿಣ: ಆರ್ ಕೆ ರಮೇಶ್
  • ಚನ್ನಪಟ್ಟಣ: ಗಂಗಾಧರ್  ಎಸ್
  • ಮದ್ದೂರು: ಕೆ ಎಂ  ಉದಯ್
  • ಅರಸೀಕೆರೆ: ಶಿವಲಿಂಗೇಗೌಡ
  • ಹಾಸನ: ಬನವಾಸಿ ರಂಗಸ್ವಾಮಿ
  • ಮಂಗಳೂರು ನಗರ ದಕ್ಷಿಣ:  ಜಾನ್ ರಿಚರ್ಡ್ ಲೋಬೋ
  • ಪುತ್ತೂರು: ಅಶೋಕ್ ಕುಮಾರ್ ರೈ
  • ಕೃಷ್ಣ ರಾಜ: ಎಂಕೆ ಸೋಮಶೇಖರ್
  • ಚಾಮರಾಜ: ಕೆ ಹರೀಶ್ ಗೌಡ

Related posts