ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಘಟಬಂಧನ್ 40 ಸ್ಥಾನಗಳಿಗಿಂತ ಕಡಿಮೆ ಸ್ಥಾನಗಳನ್ನು ಪಡೆದು ಹೀನಾಯ ಸೋಲುಂಡಿದೆ. ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರುವ ಮಹಾಘಟಬಂಧನ್ ಕನಸು ಭಗ್ನವಾಗಿದ್ದು, ಈ ಬಗ್ಗೆ ಇದೀಗ ಮೈತ್ರಿಪಕ್ಷಗಳು ಆತ್ಮವಳಿಕಣಕ್ಕೆ ಮುಂದಾಗಿವೆ. ಫಲಿತಾಂಶ ಬಹಿರಂಗವಾಗುತ್ತಿದ್ದಂತೆಯೇ, ಬಿಹಾರದ ಉಸ್ತುವಾರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮತದಾರರ ಅಭಿಪ್ರಾಯಗಳು, ಬೂತ್ ಮಟ್ಟದ ವ್ಯತ್ಯಾಸಗಳು ಮತ್ತು ಇವಿಎಂ ಚಲನೆಯ ದಾಖಲೆಗಳ “ವಿಧಿವಿಜ್ಞಾನ ಲೆಕ್ಕಪರಿಶೋಧನೆ”ಗೆ ಸೂಚನೆ ನೀಡಿದ್ದಾರೆ. ಇನ್ನೊಂದೆಡೆ, ಇಂಡಿಯಾ ಬ್ಲಾಕ್ನೊಳಗೆ ಚಿಂತನ-ಮಂಥನ ಸಾಗಿದೆ. ಆರ್ಜೆಡಿಯ ತೇಜಸ್ವಿ ಯಾದವ್ ಅವರ ಪಕ್ಷ 75 ರಿಂದ 31 ಸ್ಥಾನಗಳಿಗೆ ಕುಸಿದಿದೆ. ರಾಹುಲ್ ಗಾಂಧಿಯವರ “ನೈತಿಕ ಸ್ಪಷ್ಟತೆ”ಯನ್ನು ಶ್ಲಾಘಿಸಿರುವ ತೇಜಸ್ವಿ ಯಾದವ್, ಆದರೆ ಸಾಂಸ್ಥಿಕ ವಿಧ್ವಂಸಕತೆಯ ಮೇಲೆ ಮಾತ್ರ ಗಮನಹರಿಸುವ ಬದಲು “ಸಾಂಸ್ಥಿಕ ಕುಸಿತ”ದ ಮೇಲೆ ಕೇಂದ್ರೀಕರಿಸಬೇಕೆಂದು ಸಲಹೆ ಮುಂದಿಟ್ಟಿದ್ದಾರೆ. ಸಿಪಿಐ(ಎಂಎಲ್) ಲಿಬರೇಶನ್ನ ದೀಪಂಕರ್ ಭಟ್ಟಾಚಾರ್ಯ ಅವರು “ಅನ್ಯಾಯಯುತ ಚುನಾವಣೆ”…
Day: November 15, 2025
ಬಿಹಾರ: ರಾಹುಲ್ ಗಾಂಧಿ ಪ್ರಚಾರ ಮಾಡಿದ ಎಲ್ಲ ಕ್ಷೇತ್ರಗಳಲ್ಲೂ NDA ಗೆಲುವು, ಬಿಜೆಪಿ ಟೀಕೆ
ಗುವಾಹಟಿ: ಬಿಹಾರ ವಿಧಾನಸಭಾ ಚುನಾವಣೆಯ ಸೋಲಿನ ಬೆನ್ನಲ್ಲೇ, ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ‘ವೋಟ್ ಚೋರಿ’ ಹೇಳಿಕೆಯೇ ಪಕ್ಷಕ್ಕೆ ತಿರುಗುಬಾಣವಾಗಿದೆಯೇ? ಎಂದು ಪ್ರಶ್ನೆಗಳು ಎದ್ದಿವೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಈ ಹೇಳಿಕೆಯನ್ನು ಗುರಿಯಾಗಿ ಕಟುವಾಗಿ ಟೀಕಿಸಿದ್ದು, ರಾಹುಲ್ ಗಾಂಧಿ ಮಾಡಿದ ಆರೋಪ ಜನರ ಮನಸ್ಸಿನಲ್ಲಿ ಪ್ರತಿಕೂಲ ಪರಿಣಾಮ ಬೀರಿದಂತೆಯೇ, ಅದು ಬಿಜೆಪಿಗೆ ಹೆಚ್ಚುವರಿ ಜನಾದೇಶ ತಂದುಕೊಟ್ಟಿದೆ ಎಂದರು. ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಶರ್ಮಾ, “ರಾಹುಲ್ ಗಾಂಧಿಯವರ ‘ವೋಟ್ ಚೋರಿ’ ಹೇಳಿಕೆಯನ್ನು ಜನರು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಬದಲಿಗೆ, ಈ ಹೇಳಿಕೆ ಕಾಂಗ್ರೆಸ್ ವಿರುದ್ಧ ಜನಪ್ರತಿಕ್ರಿಯೆ ಹುಟ್ಟುಹಾಕಿತು. ಆಕ್ರೋಶ ಮತವಾಗಿ ಹೊರಹೊಮ್ಮಿ ಬಿಹಾರದಲ್ಲಿ ಕಾಂಗ್ರೆಸ್ ಸಂಪೂರ್ಣ ಕುಸಿತ ಅನುಭವಿಸಿತು. ಜನರು ಕಾಂಗ್ರೆಸ್ ಅನ್ನು ರಾಜ್ಯದ ರಾಜಕೀಯ ಸಮೀಕರಣದಿಂದಲೇ ಹೊರಗೆ ತಳ್ಳಿದ್ದಾರೆ. NDAಗೆ ಭಾರೀ ಜನಾದೇಶವೇ ಅದಕ್ಕೆ ಸಾಕ್ಷಿ,” ಎಂದು ವಾಗ್ದಾಳಿ ನಡೆಸಿದರು. ಬಿಹಾರದಲ್ಲಿ ಪ್ರಧಾನಮಂತ್ರಿ…
ಶ್ರೀನಗರದ ಪೊಲೀಸ್ ಠಾಣೆಯಲ್ಲಿ ಸ್ಫೋಟ; 6 ಪೊಲೀಸರು ಸಾವು, 27 ಮಂದಿ ಗಾಯ
ಶ್ರೀನಗರ: ದೆಹಲಿ ಸ್ಫೋಟದ ಬೆನ್ನಲ್ಲೇ ಕಣಿವೆ ರಾಜ್ಯ ಮತ್ತೆ ಆತಂಕಕ್ಕೆ ಒಳಗಾಗಿದೆ. ಜಮ್ಮು–ಕಾಶ್ಮೀರದ ಶ್ರೀನಗರದ ನೌಗಾಮ್ ಪೊಲೀಸ್ ಠಾಣೆಯಲ್ಲಿ ಸಂಭವಿಸಿದ ಭಾರೀ ಸ್ಫೋಟದಲ್ಲಿ ಆರು ಮಂದಿ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದು, 27 ಮಂದಿ ಗಾಯಗೊಂಡಿದ್ದಾರೆ. ಉಗ್ರರಿಂದ ವಶಪಡಿಸಿಕೊಂಡಿದ್ದ ಸ್ಫೋಟಕ ವಸ್ತುಗಳು ಆಕಸ್ಮಿಕವಾಗಿ ಸ್ಫೋಟಗೊಂಡ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿ ತನಿಖೆ ಮುಂದುವರೆಸಿವೆ. ಹರಿಯಾಣದ ಫರಿದಾಬಾದ್ನಲ್ಲಿ ವಶಪಡಿಸಿಕೊಂಡಿದ್ದ ಸ್ಫೋಟಕ ವಸ್ತುಗಳ ಮಾದರಿಯನ್ನು ನೌಗಾಮ್ ಪೊಲೀಸ್ ಠಾಣೆಯಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಸುಮಾರು 360 ಕಿಲೋಗ್ರಾಂ ತೂಕದ ಸ್ಫೋಟಕಗಳಲ್ಲಿ ಹೆಚ್ಚಿನ ಪ್ರಮಾಣದ ವಸ್ತುಗಳನ್ನು ಭಯೋತ್ಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿದ್ದ ಇದೇ ಠಾಣೆಯಲ್ಲಿ ಇಡಲಾಗಿತ್ತು. ಸಂಗ್ರಹಣೆಯ ಸಮಯದಲ್ಲೇ ಸಂಭವಿಸಿದ ಆಕಸ್ಮಿಕ ಸ್ಫೋಟದಲ್ಲಿ 6 ಪೊಲೀಸರು ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡವರಿಗೆ ಸಮೀಪದ ಆಸ್ಪತ್ರೆಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಹಾರ ಫಲಿತಾಂಶ ‘ಆಶ್ಚರ್ಯಕರ’ ಎಂದ ರಾಹುಲ್ ಗಾಂಧಿ; ಸಂವಿಧಾನಕ್ಕಾಗಿ ತೀವ್ರ ಹೋರಾಟದ ಘೋಷಣೆ
ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಶುಕ್ರವಾರ ಬಿಹಾರದ ಸೋಲಿನ ಬಗ್ಗೆ ತಮ್ಮದೇ ಶೈಲಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಎನ್ಡಿಎಯ 200 ಕ್ಕೂ ಹೆಚ್ಚು ಸ್ಥಾನಗಳ ಸಾಧನೆಯನ್ನು “ನಿಜವಾಗಿಯೂ ಆಶ್ಚರ್ಯಕರ” ಎಂದು ಹೇಳಿದ್ದಾರೆ. ಚುನಾವಣೆ “ಆರಂಭದಿಂದಲೂ ನ್ಯಾಯಯುತವಾಗಿರಲಿಲ್ಲ” ಎಂದು ಅವರು ಆರೋಪಿಸಿದ್ದಾರೆ. ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ, ರಾಹುಲ್ ಗಾಂಧಿ, “ಬಿಹಾರದಲ್ಲಿನ ಈ ಫಲಿತಾಂಶ ನಿಜವಾಗಿಯೂ ಆಶ್ಚರ್ಯಕರವಾಗಿದೆ. ಆರಂಭದಿಂದಲೂ ನ್ಯಾಯಯುತವಲ್ಲದ ಚುನಾವಣೆಯಲ್ಲಿ ನಾವು ಗೆಲ್ಲಲು ವಿಫಲರಾಗಿದ್ದೇವೆ. ಈ ಹೋರಾಟ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವುದು. ಕಾಂಗ್ರೆಸ್ ಪಕ್ಷ ಮತ್ತು ಭಾರತ ಮೈತ್ರಿಕೂಟ ಈ ಫಲಿತಾಂಶವನ್ನು ಆಳವಾಗಿ ಪರಿಶೀಲಿಸುತ್ತದೆ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ತಮ್ಮ ಪ್ರಯತ್ನಗಳನ್ನು ತೀವ್ರಗೊಳಿಸುತ್ತದೆ” ಎಂದು ಬರೆದುಕೊಂಡಿದ್ದಾರೆ. ಮಹಾಘಟಬಂಧನ್ 40 ಸ್ಥಾನಗಳಿಗಿಂತ ಕಡಿಮೆ ಸೋತ ನಂತರ, ಸ್ಪರ್ಧಿಸಿದ್ದ 61 ಸ್ಥಾನಗಳಲ್ಲಿ ಕಾಂಗ್ರೆಸ್ 5-6 ಸ್ಥಾನಗಳಿಗೆ ಇಳಿದ ನಂತರ ಈ ಹೇಳಿಕೆ ಬಂದಿದೆ. ರಾಹುಲ್…
ಬಿಹಾರ ತೀರ್ಪು NDA ಪರ: ಮಹಾಘಟಬಂಧನ ಕನಸು ಭಗ್ನ
ಪಾಟ್ನಾ: ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಮತ್ತೆ ಜನಮನ್ನಣೆ ದೊರೆತಿದೆ. ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಸ್ಪಷ್ಟ ಬಹುಮತದ ಜಯಭೇರಿ ಬಾರಿಸಿದ್ದು, ರಾಜ್ಯದಾದ್ಯಂತ ವಿಜಯೋತ್ಸವದ ಸಂಭ್ರಮ ಹರಡಿದೆ. ಈ ಬಾರಿ ಬಿಹಾರದಲ್ಲಿ ಅಧಿಕಾರಕ್ಕೆ ಬರಬೇಕೆಂದು ಭರವಸೆ ಬೆಳೆಸಿಕೊಂಡಿದ್ದ ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನದ ಕನಸು ಭಗ್ನಗೊಂಡಿದೆ. ಜನತೆ ಮತದಾನದಿಂದಲೇ ತಮ್ಮ ತೀರ್ಪು ಪ್ರಕಟಿಸಿದ್ದು, NDA ದಿಕ್ಕಿನತ್ತ ಸ್ಪಷ್ಟ ಆದೇಶ ನೀಡಿದೆ. 243 ಸ್ಥಾನಗಳಿರುವ ವಿಧಾನಸಭೆಯಲ್ಲಿ NDA ಭಾರೀ ಮುನ್ನಡೆ ಸಾಧಿಸಿ 202 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. JDU 85 ಸ್ಥಾನಗಳನ್ನು ಗೆದ್ದರೆ, ಪ್ರಮುಖ ಮಿತ್ರಪಕ್ಷವಾದ ಭಾರತೀಯ ಜನತಾ ಪಕ್ಷ 89 ಸ್ಥಾನಗಳನ್ನು ಪಡೆದುಕೊಂಡಿದೆ. ಉಳಿದ ಮಿತ್ರಪಕ್ಷಗಳು 28 ಸ್ಥಾನಗಳನ್ನು ಗೆದ್ದು NDAಯ ಬಲವನ್ನು 200ರ ಗಡಿಯಾಚೆಗೆ ಕೊಂಡೊಯ್ದಿವೆ. ಇನ್ನೊಂದೆಡೆ, ಮಹಾಘಟಬಂಧನಕ್ಕೆ ಗಂಭೀರ ಹಿನ್ನಡೆ ಎದುರಾಗಿದೆ. ರಾಷ್ಟ್ರಿಯ ಜನತಾ ದಳ…
