ಚೆನ್ನೈ: ನಟ ವಿಜಯ್ ಅಭಿನಯದ ‘ಜನ ನಾಯಗನ್’ ಚಿತ್ರದ ನಿರ್ಮಾಪಕರಿಗೆ ಹಿನ್ನಡೆಯಾಗಿದ್ದು, ಚಿತ್ರಕ್ಕೆ ತಕ್ಷಣವೇ ಸೆನ್ಸಾರ್ ಪ್ರಮಾಣಪತ್ರ ನೀಡುವಂತೆ ಏಕಸದಸ್ಯ ನ್ಯಾಯಮೂರ್ತಿ ನೀಡಿದ್ದ ಆದೇಶವನ್ನು ಮದ್ರಾಸ್ ಹೈಕೋರ್ಟ್ನ ವಿಭಾಗೀಯ ಪೀಠ ರದ್ದುಗೊಳಿಸಿದೆ. ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್ಸಿ) ಸಲ್ಲಿಸಿದ್ದ ಮೇಲ್ಮನವಿಯನ್ನು ಪೀಠ ಮಂಗಳವಾರ ಅಂಗೀಕರಿಸಿದೆ. ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಹಾಗೂ ನ್ಯಾಯಮೂರ್ತಿ ಅರುಲ್ ಮುರುಗನ್ ಅವರನ್ನೊಳಗೊಂಡ ಪೀಠ, ಮಧ್ಯಂತರ ಹಂತದಲ್ಲೇ ಚಿತ್ರದ ವಿಷಯದ ಕುರಿತ ದೂರುಗಳ ಅರ್ಹತೆಯನ್ನು ಪರಿಶೀಲಿಸುವುದು ಕಾನೂನುಬದ್ಧವಲ್ಲ ಎಂದು ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ಏಕಸದಸ್ಯ ನ್ಯಾಯಮೂರ್ತಿ ಅನುಸರಿಸಿದ್ದ ವಿಧಾನ ದೋಷಪೂರಿತವಾಗಿದೆ ಎಂದು ಹೇಳಿ ಆದೇಶವನ್ನು ರದ್ದುಗೊಳಿಸಿ, ವಿಷಯವನ್ನು ಹೊಸದಾಗಿ ಪರಿಗಣಿಸಲು ಹಿಂತಿರುಗಿಸಲಾಗಿದೆ. ಅರ್ಜಿಯನ್ನು ತಿದ್ದುಪಡಿ ಮಾಡಲು ನಿರ್ಮಾಪಕರಿಗೆ ನ್ಯಾಯಾಲಯ ಸ್ವಾತಂತ್ರ್ಯ ನೀಡಿದ್ದು, ಇದರ ಪರಿಣಾಮವಾಗಿ ಚಿತ್ರದ ಥಿಯೇಟರ್ ಬಿಡುಗಡೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರಕ್ಕೆ ಪ್ರತಿಕ್ರಿಯೆ ಸಲ್ಲಿಸಲು…
Day: January 27, 2026
‘IEW 2026’ ಚಾಲನೆ; ಪ್ರಧಾನಿಯಿಂದ ‘ಮಹತ್ವದ’ ಭಾರತ-EU ವ್ಯಾಪಾರ ಅಭಿವೃದ್ಧಿ’ ಘೋಷಣೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಭಾರತ ಇಂಧನ ಸಪ್ತಾಹ (IEW) 2026 ರ ನಾಲ್ಕನೇ ಆವೃತ್ತಿಯ ಸಮಾವೇಶವನ್ನು ವರ್ಚುವಲ್ ಆಗಿ ಉದ್ಘಾಟಿಸಿದರು ಮತ್ತು ಭಾರತ-EU ಮುಕ್ತ ವ್ಯಾಪಾರ ಒಪ್ಪಂದವನ್ನು “ಎಲ್ಲಾ ಒಪ್ಪಂದಗಳ ತಾಯಿ” ಮತ್ತು ವಿಶ್ವದ ಎರಡು ದೊಡ್ಡ ಆರ್ಥಿಕತೆಗಳ ನಡುವಿನ “ಸಿನರ್ಜಿಯ ಅತ್ಯುತ್ತಮ ಉದಾಹರಣೆ” ಎಂದು ಶ್ಲಾಘಿಸಿದರು. ವರ್ಚುವಲ್ ಉದ್ಘಾಟನೆ ನಂತರ ದಕ್ಷಿಣ ಗೋವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ನೀವೆಲ್ಲರೂ ಇಂಧನ ಮತ್ತು ಸುಸ್ಥಿರತೆಯ ಬಗ್ಗೆ ಚರ್ಚಿಸಲು ಭಾರತಕ್ಕೆ ಬಂದಿದ್ದೀರಿ; ನಾನು ಎಲ್ಲರನ್ನು ಸ್ವಾಗತಿಸುತ್ತೇನೆ. ಭಾರತ ಇಂಧನ ಸಪ್ತಾಹ (IEW) ಬಹಳ ಕಡಿಮೆ ಅವಧಿಯಲ್ಲಿ ಸಂವಾದ ಮತ್ತು ಕ್ರಿಯೆಗೆ ಜಾಗತಿಕ ವೇದಿಕೆಯಾಗಿದೆ” ಎಂದು ಹೇಳಿದರು. ಇಂದು ಭಾರತವು ಇಂಧನ ವಲಯಕ್ಕೆ “ಅಪಾರ ಅವಕಾಶಗಳ ಭೂಮಿ”ಯಾಗಿದೆ ಎಂದು ಅವರು ಹೇಳಿದರು. ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ,…
