ಜಿಗಲೂರು ಕ್ರಾಸ್ ಬಳಿ ಅಪಘಾತ; ಮೂವರು ಮಹಿಳೆಯರು ಸಾವು

ಗದಗ: ಜಿಲ್ಲೆಯ ಜಿಗಲೂರು ಕ್ರಾಸ್ ಬಳಿ ಗುರುವಾರ ಪ್ರಯಾಣಿಕ ವಾಹನ ಹಾಗೂ ಕ್ಯಾಂಟರ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂವರು ರೈತ ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೃತರನ್ನು ಗಜೇಂದ್ರಗಡದ ಶಿವಾಜಿಪೇಟೆ ನಿವಾಸಿಗಳಾದ ಅನ್ನಪೂರ್ಣ (56), ಸಂಗೀತಾ ಹೊಸಮಣಿ (48) ಮತ್ತು ಮರಿಯಮ್ಮ ಹುನಗುಂದ (55) ಎಂದು ಗುರುತಿಸಲಾಗಿದೆ. ಇವರು ರೋಣ ತಾಲ್ಲೂಕಿಗೆ ನೆಲಗಡಲೆ ಕೊಯ್ಲು ಕೆಲಸಕ್ಕಾಗಿ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಗಜೇಂದ್ರಗಡದ ಶಿವಾಜಿ ನಗರ ಪ್ರದೇಶದ ದಿನಗೂಲಿ ಕಾರ್ಮಿಕರು ಪ್ರಯಾಣಿಕ ವಾಹನದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ವಾಹನ ನಜ್ಜುಗುಜ್ಜಾಗಿದೆ. ಗಾಯಾಳುಗಳನ್ನು ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಐಎಂಎಸ್) ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಆರು ಮಂದಿಗೆ ಕೈ–ಕಾಲುಗಳಲ್ಲಿ ಮುರಿತಗಳಾಗಿವೆ ಎಂದು ಆಸ್ಪತ್ರೆ ಮೂಲಗಳು…

ಸದನದಲ್ಲಿ ಯಾವುದೇ ಅಸಂಸದೀಯ, ಮಾನಹಾನಿಕರ ಪದಬಳಕೆ ಮಾಡಿಲ್ಲ; ಸಿ.ಟಿ.ರವಿ ಸ್ಪಷ್ಟನೆ

ಬೆಂಗಳೂರು: ‘ವಿಧಾನ ಪರಿಷತ್ತಿನಲ್ಲಿ ಮಾತನಾಡುವ ಸಂದರ್ಭದಲ್ಲಿ, ನಾನು ಯಾವುದೇ ಅಸಂಸದೀಯ, ಮಾನಹಾನಿಕರ ಪದಬಳಕೆ ಮಾಡಿಲ್ಲ. ನನ್ನ ನಿಲುವಿನಲ್ಲಿ ನಾನು ಸ್ಪಷ್ಟವಾಗಿದ್ದೇನೆ’ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಸ್ಪಷ್ಟನೆ ನೀಡಿದ್ದಾರೆ. ಭಾರತದ ಪ್ರಧಾನ ಮಂತ್ರಿಯ ಹುದ್ದೆ ಎನ್ನುವುದು ಒಂದು ಉನ್ನತವಾದ, ಪಕ್ಷಾತೀತವಾದ ಸಂಸದೀಯ ಹುದ್ದೆ. ಯಾವ ಪಕ್ಷದ ನಾಯಕ ಪ್ರಧಾನಿಯಾಗಿದ್ದರೂ, ಅವರು ಸಮಸ್ತ ದೇಶದ ಪ್ರಧಾನಿ. ಆ ಸ್ಥಾನವನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ ಮತ್ತು ಜವಾಬ್ದಾರಿ. ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಸಮರ್ಥರಲ್ಲದಿದ್ದರೆ, ದೇಶದ ಜನರು ಸತತವಾಗಿ ಮೂರು ಅವಧಿಗೆ ಎನ್‌ಡಿಎ ಸರ್ಕಾರವನ್ನು ಅಧಿಕಾರಕ್ಕೆ ತರುತ್ತಿತ್ತೇನು? ಪ್ರಧಾನಿಯವರ ಕುರಿತು ಕಾಂಗ್ರೆಸ್ ನಾಯಕರು ಆಡಿರುವ ಅಗೌರವದ ಮಾತುಗಳು ಸಮಸ್ತ ದೇಶಕ್ಕೇ ಮಾಡಿರುವ ಅವಮಾನ’ ಎಂದು ಸಿ.ಟಿ.ರವಿ ಎದಿರೇಟು ನೀಡಿದ್ದಾರೆ. ಸರ್ಕಾರದ ನಡೆಗಳನ್ನು ಟೀಕಿಸಿ, ಕ್ರಮಗಳನ್ನು ಟೀಕಿಸಿ. ಪ್ರಜಾಪ್ರಭುತ್ವದಲ್ಲಿ ಅದಕ್ಕೆ ಸಂಪೂರ್ಣ ಸ್ವಾತಂತ್ರ್ಯವಿದೆ. ಆದರೆ, ಓರ್ವ ಪ್ರಧಾನಿಯ ಕುರಿತು ದೇಶದ್ರೋಹದ…