ಕೀನ್ಯಾದಲ್ಲಿ ಭೀಕರ ಬಸ್ ಅಪಘಾತ; ಕೇರಳ ಮೂಲದ ಐವರ ದುರ್ಮರಣ

ತಿರುವನಂತಪುರಂ: ಕೀನ್ಯಾದಲ್ಲಿ ಸಂಭವಿಸಿದ ನಿಹೀಕರ ಅಪಘಾತದಲ್ಲಿ ಆರು ಜನರು ಸಾವನ್ನಪ್ಪಿದ ದ್ದಾರೆ.

ಕತಾರ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮಂಗಳವಾರ X ನಲ್ಲಿ ಪೋಸ್ಟ್‌ನಲ್ಲಿ ಘಟನೆಯನ್ನು ದೃಢಪಡಿಸಿದ್ದು, ಮೃತರ ಕುಟುಂಬಗಳಿಗೆ ಬೆಂಬಲ ನೀಡಲು ಕೀನ್ಯಾದಲ್ಲಿನ ಸ್ಥಳೀಯ ಅಧಿಕಾರಿಗಳು ಮತ್ತು ಭಾರತೀಯ ಸಮುದಾಯ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಹೇಳಿದೆ.

28 ಜನ ಭಾರತೀಯರಿದ್ದ ವಾಹನ ಅಪಘಾತವಾಗಿದೆ ಎನ್ನಲಾಗಿದ್ದು, ಅವರಲ್ಲಿ 14 ಮಂದಿ ಕೇರಳದವರು. ಅವರೆಲ್ಲರೂ ಕತಾರ್‌ನಲ್ಲಿ ಕೆಲಸ ಮಾಡುವವರು ಕೀನ್ಯಾದಲ್ಲಿ ರಜೆ ಕಾರಣದಿಂದ ಪ್ರವಾಸ ತೆರಳಿದ್ದರು ಎನ್ನಲಾಗಿದೆ. ಸೋಮವಾರ ಸಂಜೆ 4:30 ಕ್ಕೆ ಅಪಘಾತ ಸಂಭವಿಸಿದೆ. ಈಶಾನ್ಯ ಕೀನ್ಯಾದ ನ್ಯಾಂಡರುವಾ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದ್ದು, ಗುಂಪು ನ್ಯಾಹುರುರು ಪಟ್ಟಣಕ್ಕೆ ಪ್ರಯಾಣಿಸುತ್ತಿದ್ದಾಗ, ಅಲ್ಲಿ ಅವರು ಪನಾರಿ ಹೋಟೆಲ್‌ನಲ್ಲಿ ತಂಗಲು ಯೋಜಿಸಿದ್ದರು. ಮೂವರು ಪ್ರವಾಸಿ ಮಾರ್ಗದರ್ಶಕರು ಮತ್ತು ಚಾಲಕ ಸೇರಿದಂತೆ ಒಟ್ಟು 32 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್, ಮಳೆಯಿಂದ ನೆನೆದ ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡು, ಮಗುಚಿ, ಮರಕ್ಕೆ ಡಿಕ್ಕಿ ಹೊಡೆದು ಉರುಳಿದೆ ಎಂದು ವರದಿಯಾಗಿದೆ.

ಕೇರಳದಲ್ಲಿ ಪಡೆದ ಮಾಹಿತಿಯ ಪ್ರಕಾರ, ಪಾಲಕ್ಕಾಡ್ ಮೂಲದ ಮತ್ತು ಕತಾರ್‌ನಲ್ಲಿ ನೆಲೆಸಿರುವ ಇಬ್ಬರು ಜನರನ್ನು ಮೃತರೆಂದು ಗುರುತಿಸಲಾಗಿದೆ. ಅದರಲ್ಲಿ 41 ವರ್ಷದ ರಿಯಾ ಆನ್ ಮತ್ತು ಅವರ ಏಳು ವರ್ಷದ ಮಗಳು ಸೇರಿದ್ದಾರೆ. ಆಕೆಯ ಪತಿ ಮತ್ತು ಮಗ ಗಾಯಗೊಂಡಿದ್ದು, ಕೀನ್ಯಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮೃತರೆಂದು ವರದಿಯಾಗಿರುವ ಕೇರಳದ ಇತರ ಮೂವರು ವ್ಯಕ್ತಿಗಳ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related posts