ಮುಂಬೈ: ಅಕ್ಷಯ್ ಕುಮಾರ್ ಅಭಿನಯದ ಹಾರರ್-ಹಾಸ್ಯ ಚಿತ್ರ ಭೂತ್ ಬಾಂಗ್ಲಾ ಬಿಡುಗಡೆ ದಿನಾಂಕವನ್ನು ನಿರ್ಮಾಪಕರು ಬದಲಾಯಿಸಿದ್ದು, ಇದೀಗ ಏಪ್ರಿಲ್ 16ರಂದು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ. ಚಿತ್ರದ ಸಹ-ನಿರ್ಮಾಪಕಿ ಏಕ್ತಾ ಕಪೂರ್ ಸಾಮಾಜಿಕ ಜಾಲತಾಣದ ಮೂಲಕ ಈ ಮಾಹಿತಿ ಹಂಚಿಕೊಂಡಿದ್ದಾರೆ. ರಣವೀರ್ ಸಿಂಗ್ ಅಭಿನಯದ ಧುರಂಧರ್: ದಿ ರಿವೆಂಜ್ ಚಿತ್ರ ಉತ್ತಮ ಪ್ರದರ್ಶನ ನೀಡುತ್ತಿರುವ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಮೊದಲು ಏಪ್ರಿಲ್ 10ರಂದು ಬಿಡುಗಡೆಯಾಗಬೇಕಿದ್ದ ಈ ಚಿತ್ರ, ಇದೀಗ ಏಪ್ರಿಲ್ 16, 2026ರಂದು ರಾತ್ರಿ 9 ಗಂಟೆಯಿಂದ ಪ್ರದರ್ಶನ ಆರಂಭವಾಗಲಿದೆ. ಈ ಚಿತ್ರದಲ್ಲಿ ವಾಮಿಕಾ ಗಬ್ಬಿ, ಪರೇಶ್ ರಾವಲ್, ಟಬು, ರಾಜ್ಪಾಲ್ ಯಾದವ್, ಜಿಶು ಸೇನ್ಗುಪ್ತಾ ಮತ್ತು ಮಿಥಿಲಾ ಪಾಲ್ಕರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರವು ಪ್ರಿಯದರ್ಶನ್ ನಿರ್ದೇಶನದಲ್ಲಿ ಮೂಡಿಬರುತ್ತಿದ್ದು, ಅಕ್ಷಯ್ ಕುಮಾರ್ ಮತ್ತು ಪ್ರಿಯದರ್ಶನ್ ಅವರ ಹಳೆಯ ಯಶಸ್ವಿ ಜೋಡಿ ಮತ್ತೆ ಒಂದಾಗಿರುವುದು ಅಭಿಮಾನಿಗಳಲ್ಲಿ…
Category: ಸಿನಿಮಾ
‘ಲವ್ ಇನ್ಶುರೆನ್ಸ್ ಕಂಪನಿ’; LIK ಬಿಡುಗಡೆ ಮತ್ತೆ ಮುಂದೂಡಿಕೆ
ಚೆನ್ನೈ: ನಿರ್ದೇಶಕ ವಿಘ್ನೇಶ್ ಶಿವನ್ ಅವರ ಬಹುನಿರೀಕ್ಷಿತ ಪ್ರಣಯ ಚಿತ್ರ ಲವ್ ಇನ್ಶುರೆನ್ಸ್ ಕೊಂಪನಿ (LIK) ಬಿಡುಗಡೆಯನ್ನು ಮತ್ತೊಮ್ಮೆ ಮುಂದೂಡಲಾಗಿದ್ದು, ಇದೀಗ ಏಪ್ರಿಲ್ 10ರಂದು ತೆರೆಗೆ ಬರಲಿದೆ. ಈ ಹಿಂದೆ ಏಪ್ರಿಲ್ 3ರಂದು ಬಿಡುಗಡೆ ಮಾಡಲು ಯೋಜಿಸಿದ್ದ ಚಿತ್ರವನ್ನು ವಾರದ ಅಂತರದಲ್ಲಿ ಮುಂದೂಡಲಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಈ ಚಿತ್ರದ ಬಿಡುಗಡೆ ದಿನಾಂಕ ಪದೇಪದೇ ಬದಲಾಗುತ್ತಿರುವುದು ಗಮನಾರ್ಹ. ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದ ವಿಘ್ನೇಶ್ ಶಿವನ್, “#LIK from April 10… ಟ್ರಸ್ಟ್ ಮಿ ಬ್ರೋ” ಎಂದು ಹೇಳಿ ಹೊಸ ದಿನಾಂಕವನ್ನು ದೃಢಪಡಿಸಿದರು. ಇದೇ ವೇಳೆ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್, ನಟ ಪ್ರದೀಪ್ ರಂಗನಾಥನ್ ಹಾಗೂ ತಾವು ಸೇರಿರುವ ತಮಾಷೆಯ ವಿಡಿಯೋವನ್ನೂ ಹಂಚಿಕೊಂಡಿದ್ದಾರೆ. ಚಿತ್ರದ ಬಿಡುಗಡೆಯು ಹಲವು ಹಂತಗಳಲ್ಲಿ ಮುಂದೂಡಿಕೆಯನ್ನು ಕಂಡಿದೆ. ಮೊದಲಿಗೆ ಕಳೆದ ವರ್ಷದ ಸೆಪ್ಟೆಂಬರ್ 18ಕ್ಕೆ ನಿಗದಿಯಾಗಿದ್ದ ಬಿಡುಗಡೆ, ನಂತರ ದೀಪಾವಳಿ ಪ್ರಯುಕ್ತ…
‘ಕಾರ’ ಚಿತ್ರದಲ್ಲಿ ಮುರುಗೇಶನ್ ಆಗಿ ಪೃಥ್ವಿ ಪಾಂಡಿಯರಾಜನ್
ಚೆನ್ನೈ: ನಟ ಧನುಷ್ ಅಭಿನಯದ ಬಹುನಿರೀಕ್ಷಿತ ‘ಕಾರ’ ಚಿತ್ರದಿಂದ ಮತ್ತೊಂದು ಪ್ರಮುಖ ಪಾತ್ರದ ಲುಕ್ ಬಹಿರಂಗವಾಗಿದೆ. ನಿರ್ದೇಶಕ ವಿಘ್ನೇಶ್ ರಾಜಾ ನಿರ್ದೇಶನದ ಈ ಆಕ್ಷನ್ ಎಂಟರ್ಟೈನರ್ನಲ್ಲಿ ಮುರುಗೇಶನ್ ಪಾತ್ರದಲ್ಲಿ ಪೃಥ್ವಿ ಪಾಂಡಿಯರಾಜನ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ ನಿರ್ಮಾಣ ಸಂಸ್ಥೆ ವೆಲ್ಸ್ ಫಿಲ್ಮ್ ಇಂಟರ್ನ್ಯಾಷನಲ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಈ ಲುಕ್ ಬಿಡುಗಡೆ ಮಾಡಿದ್ದು, “ಮುರುಗೇಶನ್ ‘ಕಾರಾ’ ಲೋಕಕ್ಕೆ ಕಾಲಿಡುತ್ತಿದ್ದಾನೆ” ಎಂದು ಘೋಷಿಸಿದೆ. #FacesOfKara ವಿಡಿಯೋ ಬಿಡುಗಡೆಗೂ ದಿನಾಂಕ ನಿಗದಿಪಡಿಸಲಾಗಿದೆ. ಇದಕ್ಕೂ ಮೊದಲು, ನಟ ಜಯರಾಮ್ ಅವರ ಮುತ್ತು ಸೆಲ್ವನ್ ಪಾತ್ರ, ಕರುಣಾಸ್ ಅವರ ಕಾಶಿ ಮಾಯನ್, ಮತ್ತು ಸೂರಜ್ ವೆಂಜರಮೂಡು ಅವರ ಭರತನ್ ಪಾತ್ರಗಳ ಲುಕ್ಗಳನ್ನು ನಿರ್ಮಾಪಕರು ಬಿಡುಗಡೆ ಮಾಡಿದ್ದರು. ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಮಮಿತಾ ಬೈಜು ‘ಸೆಲ್ಲಿ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ, ನಿರ್ದೇಶಕ ಕೆ ಎಸ್ ರವಿಕುಮಾರ್ ‘ಕಂದಸಾಮಿ’ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ವರ್ಷದ ಪೊಂಗಲ್ ಸಂದರ್ಭದಲ್ಲಿ…
‘ವಾಲ್ಮೀಕಿ ರಾಮಾಯಣ’; ಪೋಸ್ಟರ್ ಕುತೂಹಲ
ಮುಂಬೈ: ಮುಂಬರುವ ‘ವಾಲ್ಮೀಕಿ ರಾಮಾಯಣ’ ಚಿತ್ರದ ಮೊದಲ ಪೋಸ್ಟರ್ ಗುರುವಾರ ಅನಾವರಣಗೊಂಡಿದ್ದು, ಭಕ್ತಿ, ಶುದ್ಧತೆ ಮತ್ತು ಗೌರವದ ಮೌಲ್ಯಗಳನ್ನು ಪ್ರತಿಬಿಂಬಿಸುವ ದೃಶ್ಯಗಳು ಗಮನ ಸೆಳೆದಿವೆ. ಭಾರತೀಯರ ಪವಿತ್ರ ಮಹಾಕಾವ್ಯವನ್ನು ಆಧರಿಸಿದ ಈ ಚಿತ್ರವನ್ನು ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಅನುಭವವಾಗಿ ರೂಪಿಸಲಾಗುತ್ತಿದೆ. ಈ ಚಿತ್ರವನ್ನು ಭಾವನಾ ತಲ್ವಾರ್ ನಿರ್ದೇಶಿಸುತ್ತಿದ್ದು, ಮಹಾಕಾವ್ಯವನ್ನು ಅಧಿಕೃತತೆ ಮತ್ತು ಭಾವನಾತ್ಮಕ ಆಳದೊಂದಿಗೆ ಪ್ರಸ್ತುತಪಡಿಸುವ ಉದ್ದೇಶ ಹೊಂದಿದೆ. ಪ್ರಸಿದ್ಧ ನಿರ್ಮಾಣ ವಿನ್ಯಾಸಕ ಸಾಬು ಸಿರಿಲ್ ದೃಶ್ಯ ವಿನ್ಯಾಸದ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರಕಥೆಯನ್ನು ಖ್ಯಾತ ಲೇಖಕ ಆನಂದ್ ನೀಲಕಂಠನ್ ಮೂಲ ‘ವಾಲ್ಮೀಕಿ ರಾಮಾಯಣ’ ಆಧರಿಸಿ ರಚಿಸಿದ್ದಾರೆ. ಹಿರಿಯ ಛಾಯಾಗ್ರಾಹಕ ಬಿನೋದ್ ಪ್ರಧಾನ್ ತಮ್ಮ ವಿಶಿಷ್ಟ ದೃಶ್ಯ ಶೈಲಿಯನ್ನು ನೀಡಲಿದ್ದಾರೆ. ಜೊತೆಗೆ, ಆಸ್ಕರ್ ಪ್ರಶಸ್ತಿ ವಿಜೇತ ಧ್ವನಿ ವಿನ್ಯಾಸಕ ರೆಸುಲ್ ಪೂಕುಟ್ಟಿ ಧ್ವನಿ ವಿನ್ಯಾಸವನ್ನು ನೋಡಿಕೊಳ್ಳುತ್ತಿದ್ದಾರೆ. ಚಿತ್ರ ನಿರ್ಮಾಣಕ್ಕೆ ಮತ್ತಷ್ಟು ಬಲ ತುಂಬಲು, ಚಲನಚಿತ್ರ ನಿರ್ಮಾಪಕ ಮತ್ತು ವಿದ್ವಾಂಸ…
ಸಂಜಯ್ ದತ್ ‘ಆಖ್ರಿ ಸವಾಲ್’ ಮೇ 15ರಂದು ಬಿಡುಗಡೆ
ಮುಂಬೈ: ನಟ ಸಂಜಯ್ ದತ್ ಅಭಿನಯದ ‘ಆಖ್ರಿ ಸವಾಲ್’ ಚಿತ್ರದ ಬಿಡುಗಡೆ ದಿನಾಂಕವನ್ನು ನಿರ್ಮಾಪಕರು ಘೋಷಿಸಿದ್ದಾರೆ. ಈ ಚಿತ್ರವು ಮೇ 15, 2026ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರತಂಡ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಪೋಸ್ಟರ್ ಬಿಡುಗಡೆ ಮಾಡಿ, “ಭಾರತ ಎಂದಿಗೂ ಪ್ರಶ್ನೆ ಕೇಳುವುದನ್ನು ನಿಲ್ಲಿಸಲಿಲ್ಲ… ಮೇ 15ರಂದು ಉತ್ತರ ತಿಳಿದುಕೊಳ್ಳಲು ಸಿದ್ಧರಾಗಿ” ಎಂಬ ಟ್ಯಾಗ್ಲೈನ್ ಮೂಲಕ ಕುತೂಹಲ ಹೆಚ್ಚಿಸಿದೆ. ಈ ಚಿತ್ರದಲ್ಲಿ ಅಮಿತ್ ಸಾಧ್, ನಮಾಶಿ ಚಕ್ರವರ್ತಿ, ಸಮೀರಾ ರೆಡ್ಡಿ, ತ್ರಿಧಾ ಚೌಧರಿ ಹಾಗೂ ನೀತು ಚಂದ್ರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಅಭಿಜೀತ್ ಮೋಹನ್ ವಾರಂಗ್ ನಿರ್ದೇಶಿಸಿದ್ದಾರೆ. ‘ಪಿಕಾಸೊ’ ಚಿತ್ರಕ್ಕಾಗಿ ವಿಶೇಷ ಮೆಚ್ಚುಗೆಯನ್ನು ಪಡೆದ ಅವರು, ವಿಭಿನ್ನ ಕಥಾಹಂದರಗಳ ಮೂಲಕ ಗಮನ ಸೆಳೆದಿದ್ದಾರೆ. ‘ಆಖ್ರಿ ಸವಾಲ್’ ಚಿತ್ರವು ರಾಷ್ಟ್ರೀಯ ಸ್ವಯಂಸೇವಕ ಸಂಘದ 100 ವರ್ಷಗಳ ಪ್ರಯಾಣವನ್ನು ಆಧರಿಸಿದ ನೈಜ ಕಥೆಯನ್ನು ತೆರೆಗೆ…
‘ಧುರಂಧರ್ 2’ ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕಾದ ಸಿನಿಮಾ: ರಜನಿಕಾಂತ್ ಪ್ರಶಂಸೆ
ಮುಂಬೈ: ‘ಧುರಂಧರ್: ದಿ ರಿವೆಂಜ್’ ಚಿತ್ರಕ್ಕೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದು, “ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕಾದ ಚಿತ್ರ” ಎಂದು ಹೊಗಳಿದ್ದಾರೆ. ಸೋಮವಾರ ತಮ್ಮ ಸಾಮಾಜಿಕ ಜಾಲತಾಣ Xನಲ್ಲಿ ಪ್ರತಿಕ್ರಿಯಿಸಿದ ಅವರು, “ಎಂತಹ ಚಿತ್ರ ‘ಧುರಂಧರ್ 2’. ನಿರ್ದೇಶಕ ಆದಿತ್ಯ ಧರ್ ಬಾಕ್ಸ್ ಆಫೀಸ್ ಕಾ ಬಾಪ್. ರಣವೀರ್ ಸಿಂಗ್ ಹಾಗೂ ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು. ಇದು ನೋಡಲೇಬೇಕಾದ ಸಿನಿಮಾ. ಜೈ ಹಿಂದ್” ಎಂದು ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಿರ್ದೇಶಕ ಆದಿತ್ಯ ಧರ್, ರಜನಿಕಾಂತ್ ಅವರ ಮಾತುಗಳನ್ನು “ಜೀವನದ ಅತ್ಯಂತ ದೊಡ್ಡ ಸೂಪರ್ ಸ್ಟಾರ್ ಕ್ಷಣ” ಎಂದು ವರ್ಣಿಸಿದರು. “ನಮ್ಮಲ್ಲಿ ಮನರಂಜನೆಗೆ ಮಾನದಂಡವೇ ನೀವು. ನಿಮ್ಮಿಂದಲೇ ನಾವು ಪ್ರೇರಿತರಾಗಿದ್ದೇವೆ. ‘ಧುರಂಧರ್ 2’ ಅನ್ನು ನೀವು ನೋಡಲೇಬೇಕಾದ ಸಿನಿಮಾ ಎಂದಿರುವುದು ನನಗೆ ಅತ್ಯಂತ ಗೌರವದ ಸಂಗತಿ” ಎಂದು ಹೇಳಿದರು. ಆದಿತ್ಯ ಧರ್ ನಿರ್ದೇಶನದ ಈ ಚಿತ್ರದಲ್ಲಿ…
‘ದೃಶ್ಯಂ 3’ ಬಿಡುಗಡೆ ಮುಂದೂಡಿಕೆ; ಮೋಹನ್ ಲಾಲ್ ಹುಟ್ಟುಹಬ್ಬದಂದು ಥಿಯೇಟರ್ಗಳಿಗೆ ಎಂಟ್ರಿ
ಮುಂಬೈ: ಮಲಯಾಳಂ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರ ‘ದೃಶ್ಯಂ 3’ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಇದೀಗ ಈ ಚಿತ್ರವು ಮೇ 21ರಂದು, ನಟ ಮೋಹನ್ ಲಾಲ್ ಅವರ ಹುಟ್ಟುಹಬ್ಬದಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಮೊದಲಿಗೆ ಏಪ್ರಿಲ್ 2ರಂದು ಬಿಡುಗಡೆಯಾಗಬೇಕಿದ್ದ ಚಿತ್ರವನ್ನು ತಯಾರಕರು ಮುಂದೂಡಿದ್ದು, ಹೊಸ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಮಾಹಿತಿ ಹಂಚಿಕೊಂಡ ಮೋಹನ್ ಲಾಲ್, “ಭೂತಕಾಲ ಎಂದಿಗೂ ಮೌನವಾಗಿರುವುದಿಲ್ಲ… ಅದು ಕಾಯುತ್ತದೆ. ಜಾರ್ಜ್ಕುಟ್ಟಿ ಮೇ 21, 2026ರಂದು ಬರುತ್ತಾನೆ” ಎಂದು ಬರೆದುಕೊಂಡಿದ್ದಾರೆ. ಈ ಚಿತ್ರದ ನಿರ್ದೇಶನವನ್ನು ಜೀತು ಜೋಸೆಫ್ ಮಾಡಿದ್ದು, ಬಿಡುಗಡೆ ಮುಂದೂಡಿಕೆಗೆ ಪಶ್ಚಿಮ ಏಷ್ಯಾದ ಉದ್ವಿಗ್ನತೆಯೂ ಒಂದು ಕಾರಣವಾಗಿರಬಹುದು ಎಂದು ವರದಿಗಳು ಸೂಚಿಸುತ್ತಿವೆ. ‘ದೃಶ್ಯಂ 3’ ಚಿತ್ರದಲ್ಲಿ ಮೋಹನ್ ಲಾಲ್ ಮತ್ತೆ ಜಾರ್ಜ್ಕುಟ್ಟಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಮೀನಾ, ಅನ್ಸಿಬಾ ಹಸನ್, ಎಸ್ತರ್ ಅನಿಲ್, ಆಶಾ ಶರತ್, ಸಿದ್ದಿಕ್ ಸೇರಿದಂತೆ ಪ್ರಮುಖ ಕಲಾವಿದರು ನಟಿಸಿದ್ದಾರೆ.…
ನಟ ಲೆಜೆಂಡ್ ಸರವಣನ್ ಮೂವಿ ‘ಲೀಡರ್’ ಏಪ್ರಿಲ್ 9ರಂದು ತೆರೆಗೆ
ಚೆನ್ನೈ: ಉದ್ಯಮಿ-ನಟ ಲೆಜೆಂಡ್ ಸರವಣನ್ ನಾಯಕನಾಗಿ ಅಭಿನಯಿಸಿರುವ ಬಹು ನಿರೀಕ್ಷಿತ ತಮಿಳು ಚಿತ್ರ ಲೀಡರ್ ಏಪ್ರಿಲ್ 9ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಚಿತ್ರಕ್ಕೆ ಆರ್.ಎಸ್. ದುರೈ ಸೆಂಥಿಲ್ಕುಮಾರ್ ನಿರ್ದೇಶನ ನೀಡಿದ್ದು, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಯು/ಎ ಪ್ರಮಾಣಪತ್ರ ನೀಡಿರುವುದರಿಂದ ಕುಟುಂಬ ಸಮೇತರಾಗಿ ವೀಕ್ಷಿಸಬಹುದಾಗಿದೆ. ನಿರ್ದೇಶಕರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ದಿನಾಂಕದ ಪೋಸ್ಟರ್ ಹಂಚಿಕೊಂಡು, ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಈಗಾಗಲೇ ಬಿಡುಗಡೆಯಾದ ಟೀಸರ್ ಸಿನಿ ಪ್ರೇಮಿಗಳ ಗಮನ ಸೆಳೆದಿದ್ದು, ತಂದೆ-ಮಗಳು ಸಂಬಂಧದ ಸುತ್ತ ಸಾಗುವ ಭಾವನಾತ್ಮಕ ಕಥೆಯ ಜೊತೆಗೆ ಆಕ್ಷನ್ ಮತ್ತು ಥ್ರಿಲ್ ಅಂಶಗಳು ಚಿತ್ರದಲ್ಲಿ ಮೇಳೈಸಿರುವುದು ಕಂಡುಬರುತ್ತಿದೆ. ಸರವಣನ್ ಅವರು ‘ಶಕ್ತಿವೇಲ್’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತನ್ನ ಮಗಳನ್ನು ರಕ್ಷಿಸಲು ಯಾವ ಮಟ್ಟಕ್ಕೂ ಹೋಗುವ ತಂದೆಯ ಕಥೆಯನ್ನು ಚಿತ್ರ ಹೇಳಲಿದೆ. ಚಿತ್ರದಲ್ಲಿ ಬಾಲಿವುಡ್ ನಟಿ ಪಾಯಲ್…
‘ಕರುಪ್ಪು’: ಮೇ 14, 2026ರಂದು ವಿಶ್ವಾದ್ಯಂತ ತೆರೆಗೆ
ಚೆನ್ನೈ: ತಮಿಳು ಸಿನಿ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿರುವ ಆಕ್ಷನ್ ಥ್ರಿಲ್ಲರ್ ಕರುಪ್ಪು ಮೇ 14, 2026ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ ಎಂದು ನಿರ್ಮಾಪಕರು ಘೋಷಿಸಿದ್ದಾರೆ. ಚಿತ್ರದಲ್ಲಿ ನಟ ಸೂರ್ಯ ನಾಯಕನಾಗಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ನಿರ್ದೇಶನ ನೀಡಿರುವ ಆರ್ ಜೆ ಬಾಲಾಜಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ದಿನಾಂಕವನ್ನು ಪ್ರಕಟಿಸಿ, “#ಕರುಪ್ಪು – 14-05-2026. ಬ್ಲಾಕ್ಬಸ್ಟರ್ ಬೇಸಿಗೆ ಪ್ರಾರಂಭವಾಗುತ್ತದೆ!” ಎಂದು ಬರೆದು ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಿಸಿದ್ದಾರೆ. ಈಗಾಗಲೇ ಬಿಡುಗಡೆಯಾದ ಟೀಸರ್ ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಕರುಪ್ಪು ದೇವರ ಆರಾಧನೆಯ ಹಿನ್ನೆಲೆಯೊಂದಿಗೆ ಕಥೆ ಸಾಗುವುದರ ಸೂಚನೆ ನೀಡಿದೆ. ಟೀಸರ್ನಲ್ಲಿ ಸೂರ್ಯ ಅವರು ‘ಸರವಣನ್’ ಎಂಬ ವಕೀಲರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, “ಕರುಪ್ಪು” ಎಂಬ ಇನ್ನೊಂದು ಗುರುತಿನೊಂದಿಗೆ ತೀವ್ರ ಆಕ್ಷನ್ ಅವತಾರದಲ್ಲಿ ಮಿಂಚಿದ್ದಾರೆ. ಚಿತ್ರವು ಆಕ್ಷನ್, ಸಸ್ಪೆನ್ಸ್ ಮತ್ತು ವಾಣಿಜ್ಯ ಅಂಶಗಳ ಸಮನ್ವಯವಾಗಿದ್ದು, ಹಲವು ಪವರ್ಫುಲ್ ಡೈಲಾಗ್ಗಳು ಮತ್ತು ಭರ್ಜರಿ ಹೋರಾಟದ…
‘ಕೆಡಿ ದಿ ಡೆವಿಲ್’ ಹಾಡು ವಿವಾದ: ಮಹಿಳಾ ಆಯೋಗ ಕೆಂಡ
ಬೆಂಗಳೂರು : ‘ಕೆಡಿ ದಿ ಡೆವಿಲ್’ (KD The Devil) ಚಿತ್ರದ ‘ಸರ್ಸೆ ನಿನ್ನ ಸೆರಗ’ ಹಾಡು ಬಿಡುಗಡೆಯಾಗುತ್ತಿದ್ದಂತೆಯೇ ಭಾರೀ ವಿವಾದಕ್ಕೆ ಗುರಿಯಾಗಿದೆ. ಜೋಗಿ ಪ್ರೇಮ್ ನಿರ್ದೇಶನದಲ್ಲಿ ಧ್ರುವ ಸರ್ಜಾ (Dhruva Sarja) ಅಭಿನಯದ ಈ ಚಿತ್ರಕ್ಕೆ ಆರಂಭದಲ್ಲೇ ಅಡೆತಡೆ ಎದುರಾಗಿದ್ದು, ಹಾಡಿನ ಹಿಂದಿ ಆವೃತ್ತಿಯನ್ನು ಯೂಟ್ಯೂಬ್ (YouTube) ಸೇರಿದಂತೆ ಎಲ್ಲ ಪ್ಲಾಟ್ಫಾರ್ಮ್ಗಳಿಂದ ತೆಗೆದುಹಾಕಲಾಗಿದೆ ಎಂದು ತಿಳಿದುಬಂದಿದೆ. ಹಾಡಿನ ಸಾಹಿತ್ಯ ಮಾತ್ರವಲ್ಲದೆ ನೃತ್ಯ ಸಂಯೋಜನೆಯ ಮೇಲೂ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೃಶ್ಯಗಳು ಅಸಭ್ಯವಾಗಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ಕೇಳಿಬಂದಿದೆ. ವಿವಾದ ತೀವ್ರಗೊಳ್ಳುತ್ತಿದ್ದಂತೆಯೇ ಕರ್ನಾಟಕ ರಾಜ್ಯ ಮಹಿಳಾ ಆಯೋಗ (Karnataka State Women Commission) ಚಿತ್ರರಂಗದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film Chamber of Commerce) ಹಾಗೂ ಕೇಂದ್ರೀಯ ಚಲನಚಿತ್ರ ಪ್ರಮಾಣಪತ್ರ ಮಂಡಳಿ (Central Board of Film Certification)ಗೆ ಪತ್ರ…
