ನವದೆಹಲಿ: ಜನವರಿ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವು ಕಳೆದ ವರ್ಷದ ಇದೇ ಅವಧಿಯೊಂದಿಗೆ ಹೋಲಿಸಿದರೆ ಶೇ.6.2ರಷ್ಟು ಹೆಚ್ಚಳಗೊಂಡು ₹1,93,384 ಕೋಟಿ ದಾಖಲಿಸಿದೆ ಎಂದು ಅಧಿಕೃತ ಅಂಕಿಅಂಶಗಳು ಭಾನುವಾರ ಪ್ರಕಟಿಸಿವೆ. ಕಳೆದ ವರ್ಷ ಜನವರಿಯಲ್ಲಿ ಒಟ್ಟು ಜಿಎಸ್ಟಿ ಸಂಗ್ರಹ ₹1,82,094 ಕೋಟಿ ಆಗಿತ್ತು. ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್–ಜನವರಿ ಅವಧಿಯಲ್ಲಿ ಒಟ್ಟು ಜಿಎಸ್ಟಿ ಸಂಗ್ರಹ ₹18,43,423 ಕೋಟಿಗೆ ತಲುಪಿದ್ದು, ವರ್ಷದಿಂದ ವರ್ಷಕ್ಕೆ ಶೇ.8.3ರಷ್ಟು ಬಲವಾದ ವೃದ್ಧಿಯನ್ನು ತೋರಿಸಿದೆ. ಜನವರಿಯಲ್ಲಿ ನಿವ್ವಳ ಜಿಎಸ್ಟಿ ಆದಾಯ ₹1,70,719 ಕೋಟಿ ಆಗಿದ್ದು, ಇದು ಕಳೆದ ವರ್ಷದ ಇದೇ ತಿಂಗಳಿಗಿಂತ ಶೇ.7.6ರಷ್ಟು ಹೆಚ್ಚಾಗಿದೆ. ಏಪ್ರಿಲ್ನಿಂದ ಜನವರಿವರೆಗೆ ನಿವ್ವಳ ಜಿಎಸ್ಟಿ ಆದಾಯ ₹15,95,752 ಕೋಟಿಗೆ ಏರಿಕೆಯಾಗಿದ್ದು, ಶೇ.6.8ರಷ್ಟು ವೃದ್ಧಿ ಕಂಡಿದೆ. ದೇಶೀಯ ಜಿಎಸ್ಟಿ ಸಂಗ್ರಹವು ಶೇ.4.8ರಷ್ಟು ಹೆಚ್ಚಳಗೊಂಡು ₹1,41,132 ಕೋಟಿಗೆ ತಲುಪಿದೆ. ಆಮದು ಆಧಾರಿತ ಜಿಎಸ್ಟಿ ಸಂಗ್ರಹವು ಶೇ.10.1ರಷ್ಟು ಏರಿಕೆಯೊಂದಿಗೆ ₹52,253…
Category: ದೇಶ-ವಿದೇಶ
ಕಿಶ್ತ್ವಾರ್ ಎನ್ಕೌಂಟರ್: ಮೂವರು ಸೈನಿಕರಿಗೆ ಗಾಯ
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಡೋಲ್ಗಾಮ್ ಗ್ರಾಮದಲ್ಲಿ ಶನಿವಾರ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಮೂವರು ಸೇನಾ ಸೈನಿಕರು ಗಾಯಗೊಂಡಿದ್ದಾರೆ. ಜೈಶ್-ಎ-ಮೊಹಮ್ಮದ್ (ಜೆಇಎಂ) ಸಂಘಟನೆಯ 2–3 ಉಗ್ರರು ಭದ್ರತಾ ಪಡೆಗಳು ಹಾಕಿರುವ ಸುತ್ತುವರಿಯೊಳಗೆ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಮುಂಜಾನೆ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ಆರಂಭವಾಗಿದ್ದು, ಗಾಯಗೊಂಡ ಸೈನಿಕರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೇನೆ, ಜಮ್ಮು–ಕಾಶ್ಮೀರ ಪೊಲೀಸ್ ಹಾಗೂ ಸಿಆರ್ಪಿಎಫ್ನ ಜಂಟಿ ಪಡೆಗಳು ಪ್ರದೇಶವನ್ನು ಸಂಪೂರ್ಣವಾಗಿ ಸುತ್ತುವರಿದು ಶೋಧ ಕಾರ್ಯಾಚರಣೆ ಮುಂದುವರಿಸಿವೆ. ಸೇನೆ ತಿಳಿಸಿರುವಂತೆ, ‘ಆಪರೇಷನ್ ಟ್ರಾಶಿ–I’ ಎಂಬ ಹೆಸರಿನಲ್ಲಿ ಜನವರಿ 31ರ ಮುಂಜಾನೆ ಡೋಲ್ಗಾಮ್ ಪ್ರದೇಶದಲ್ಲಿ ಉಗ್ರರೊಂದಿಗೆ ಮತ್ತೆ ಸಂಪರ್ಕ ಸ್ಥಾಪನೆಯಾದ ಬಳಿಕ ಎನ್ಕೌಂಟರ್ ಪ್ರಾರಂಭವಾಗಿದೆ. ಉಗ್ರರ ಚಲನವಲನದ ಬಗ್ಗೆ ಎಲ್ಲ ಮೂಲಗಳಿಂದ ಲಭಿಸಿದ ಗುಪ್ತಚರ ಮಾಹಿತಿಯ ಆಧಾರದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಭದ್ರತಾ ದೃಷ್ಟಿಯಿಂದ ಡೋಲ್ಗಾಮ್…
‘ಜನ ನಾಯಗನ್’ ಸೆನ್ಸಾರ್ ವಿವಾದ: ತಕ್ಷಣದ ಪ್ರಮಾಣೀಕರಣ ಆದೇಶ ರದ್ದು
ಚೆನ್ನೈ: ನಟ ವಿಜಯ್ ಅಭಿನಯದ ‘ಜನ ನಾಯಗನ್’ ಚಿತ್ರದ ನಿರ್ಮಾಪಕರಿಗೆ ಹಿನ್ನಡೆಯಾಗಿದ್ದು, ಚಿತ್ರಕ್ಕೆ ತಕ್ಷಣವೇ ಸೆನ್ಸಾರ್ ಪ್ರಮಾಣಪತ್ರ ನೀಡುವಂತೆ ಏಕಸದಸ್ಯ ನ್ಯಾಯಮೂರ್ತಿ ನೀಡಿದ್ದ ಆದೇಶವನ್ನು ಮದ್ರಾಸ್ ಹೈಕೋರ್ಟ್ನ ವಿಭಾಗೀಯ ಪೀಠ ರದ್ದುಗೊಳಿಸಿದೆ. ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್ಸಿ) ಸಲ್ಲಿಸಿದ್ದ ಮೇಲ್ಮನವಿಯನ್ನು ಪೀಠ ಮಂಗಳವಾರ ಅಂಗೀಕರಿಸಿದೆ. ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಹಾಗೂ ನ್ಯಾಯಮೂರ್ತಿ ಅರುಲ್ ಮುರುಗನ್ ಅವರನ್ನೊಳಗೊಂಡ ಪೀಠ, ಮಧ್ಯಂತರ ಹಂತದಲ್ಲೇ ಚಿತ್ರದ ವಿಷಯದ ಕುರಿತ ದೂರುಗಳ ಅರ್ಹತೆಯನ್ನು ಪರಿಶೀಲಿಸುವುದು ಕಾನೂನುಬದ್ಧವಲ್ಲ ಎಂದು ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ಏಕಸದಸ್ಯ ನ್ಯಾಯಮೂರ್ತಿ ಅನುಸರಿಸಿದ್ದ ವಿಧಾನ ದೋಷಪೂರಿತವಾಗಿದೆ ಎಂದು ಹೇಳಿ ಆದೇಶವನ್ನು ರದ್ದುಗೊಳಿಸಿ, ವಿಷಯವನ್ನು ಹೊಸದಾಗಿ ಪರಿಗಣಿಸಲು ಹಿಂತಿರುಗಿಸಲಾಗಿದೆ. ಅರ್ಜಿಯನ್ನು ತಿದ್ದುಪಡಿ ಮಾಡಲು ನಿರ್ಮಾಪಕರಿಗೆ ನ್ಯಾಯಾಲಯ ಸ್ವಾತಂತ್ರ್ಯ ನೀಡಿದ್ದು, ಇದರ ಪರಿಣಾಮವಾಗಿ ಚಿತ್ರದ ಥಿಯೇಟರ್ ಬಿಡುಗಡೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರಕ್ಕೆ ಪ್ರತಿಕ್ರಿಯೆ ಸಲ್ಲಿಸಲು…
‘IEW 2026’ ಚಾಲನೆ; ಪ್ರಧಾನಿಯಿಂದ ‘ಮಹತ್ವದ’ ಭಾರತ-EU ವ್ಯಾಪಾರ ಅಭಿವೃದ್ಧಿ’ ಘೋಷಣೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಭಾರತ ಇಂಧನ ಸಪ್ತಾಹ (IEW) 2026 ರ ನಾಲ್ಕನೇ ಆವೃತ್ತಿಯ ಸಮಾವೇಶವನ್ನು ವರ್ಚುವಲ್ ಆಗಿ ಉದ್ಘಾಟಿಸಿದರು ಮತ್ತು ಭಾರತ-EU ಮುಕ್ತ ವ್ಯಾಪಾರ ಒಪ್ಪಂದವನ್ನು “ಎಲ್ಲಾ ಒಪ್ಪಂದಗಳ ತಾಯಿ” ಮತ್ತು ವಿಶ್ವದ ಎರಡು ದೊಡ್ಡ ಆರ್ಥಿಕತೆಗಳ ನಡುವಿನ “ಸಿನರ್ಜಿಯ ಅತ್ಯುತ್ತಮ ಉದಾಹರಣೆ” ಎಂದು ಶ್ಲಾಘಿಸಿದರು. ವರ್ಚುವಲ್ ಉದ್ಘಾಟನೆ ನಂತರ ದಕ್ಷಿಣ ಗೋವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ನೀವೆಲ್ಲರೂ ಇಂಧನ ಮತ್ತು ಸುಸ್ಥಿರತೆಯ ಬಗ್ಗೆ ಚರ್ಚಿಸಲು ಭಾರತಕ್ಕೆ ಬಂದಿದ್ದೀರಿ; ನಾನು ಎಲ್ಲರನ್ನು ಸ್ವಾಗತಿಸುತ್ತೇನೆ. ಭಾರತ ಇಂಧನ ಸಪ್ತಾಹ (IEW) ಬಹಳ ಕಡಿಮೆ ಅವಧಿಯಲ್ಲಿ ಸಂವಾದ ಮತ್ತು ಕ್ರಿಯೆಗೆ ಜಾಗತಿಕ ವೇದಿಕೆಯಾಗಿದೆ” ಎಂದು ಹೇಳಿದರು. ಇಂದು ಭಾರತವು ಇಂಧನ ವಲಯಕ್ಕೆ “ಅಪಾರ ಅವಕಾಶಗಳ ಭೂಮಿ”ಯಾಗಿದೆ ಎಂದು ಅವರು ಹೇಳಿದರು. ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ,…
’18 ವರ್ಷ ತುಂಬಿದ ಯುವಕರು ಮತದಾರರಾಗಿ ನೋಂದಾಯಿಸಿಕೊಳ್ಳಿ’: ‘ಮನ್ ಕಿ ಬಾತ್’ನಲ್ಲಿ ಮೋದಿ ಕರೆ
ನವದೆಹಲಿ: ದೇಶದ ಯುವಕರು 18 ವರ್ಷ ತುಂಬಿದ ಕೂಡಲೇ ಮತದಾರರಾಗಿ ನೋಂದಾಯಿಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮನವಿ ಮಾಡಿದರು. ಇದರಿಂದ ಭಾರತದ ಪ್ರಜಾಪ್ರಭುತ್ವ ಮತ್ತಷ್ಟು ಬಲಗೊಳ್ಳುತ್ತದೆ ಹಾಗೂ ನಾಗರಿಕರಾಗಿ ಸಂವಿಧಾನಾತ್ಮಕ ಕರ್ತವ್ಯವನ್ನು ಪೂರೈಸಿದಂತಾಗುತ್ತದೆ ಎಂದು ಅವರು ಹೇಳಿದರು. ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನ 130ನೇ ಸಂಚಿಕೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಜನವರಿ 26ರಂದು ಗಣರಾಜ್ಯೋತ್ಸವ ಆಚರಣೆ ನಡೆಯಲಿದ್ದು, ಇದೇ ದಿನ ಸಂವಿಧಾನ ಜಾರಿಗೆ ಬಂದಿತ್ತು ಎಂದು ಸ್ಮರಿಸಿದರು. ಈ ದಿನವು ಸಂವಿಧಾನದ ಶಿಲ್ಪಿಗಳಿಗೆ ಗೌರವ ಸಲ್ಲಿಸುವ ಮಹತ್ವದ ಅವಕಾಶವನ್ನೂ ನೀಡುತ್ತದೆ ಎಂದು ಅವರು ಹೇಳಿದರು. ಜನವರಿ 25ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ ಎಂದು ಉಲ್ಲೇಖಿಸಿದ ಪ್ರಧಾನಿ, “ಮತದಾರರು ಪ್ರಜಾಪ್ರಭುತ್ವದ ಆತ್ಮ. 18 ವರ್ಷ ತುಂಬಿದಾಗ ಮತದಾರರಾಗುವುದು ಜೀವನದ ಒಂದು ಸಾಮಾನ್ಯ ಹಂತವೆಂದು ಕಾಣಬಹುದು. ಆದರೆ, ಭಾರತೀಯರ ಜೀವನದಲ್ಲಿ ಇದು ಅತ್ಯಂತ…
‘ಆವಾಜ್ ಭಾರತ್ ಕಿ’: ವಾಯು ಮಾಲಿನ್ಯದ ಪರಿಣಾಮ ಹಂಚಿಕೊಳ್ಳಲು ನಾಗರಿಕರಿಗೆ ರಾಹುಲ್ ಗಾಂಧಿ ಆಹ್ವಾನ
ನವದೆಹಲಿ: ದೇಶಾದ್ಯಂತ ವಾಯು ಮಾಲಿನ್ಯವು ತಮ್ಮ ಆರೋಗ್ಯ ಹಾಗೂ ಕುಟುಂಬದ ಯೋಗಕ್ಷೇಮದ ಮೇಲೆ ಬೀರುತ್ತಿರುವ ಪರಿಣಾಮಗಳ ಕುರಿತು ನಾಗರಿಕರು ತಮ್ಮ ವೈಯಕ್ತಿಕ ಅನುಭವಗಳನ್ನು ‘ಆವಾಜ್ ಭಾರತ್ ಕಿ’ ಪೋರ್ಟಲ್ ಮೂಲಕ ಹಂಚಿಕೊಳ್ಳಬೇಕೆಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭಾನುವಾರ ಮನವಿ ಮಾಡಿದ್ದಾರೆ. ‘ಆವಾಜ್ ಭಾರತ್ ಕಿ’ ರಾಹುಲ್ ಗಾಂಧಿ ಆರಂಭಿಸಿರುವ ಉಪಕ್ರಮವಾಗಿದ್ದು, ಸಾರ್ವಜನಿಕರು ತಮ್ಮ ಅಭಿಪ್ರಾಯಗಳು, ಸಲಹೆಗಳು ಮತ್ತು ಕಳವಳಗಳನ್ನು ನೇರವಾಗಿ ತಮ್ಮ ಕಚೇರಿಗೆ ತಲುಪಿಸುವ ವೇದಿಕೆಯಾಗಿದ್ದುದು ಅದರ ಅಧಿಕೃತ ವೆಬ್ಸೈಟ್ನಲ್ಲಿ ಉಲ್ಲೇಖಿಸಲಾಗಿದೆ. ಎಕ್ಸ್ನಲ್ಲಿ ಪ್ರಕಟಿಸಿದ ಸಂದೇಶದಲ್ಲಿ ಗಾಂಧಿ, ವಾಯು ಮಾಲಿನ್ಯದಿಂದಾಗುವ ಮಾನವೀಯ ಹಾಗೂ ಆರ್ಥಿಕ ನಷ್ಟವನ್ನು ಎತ್ತಿ ತೋರಿಸಿದರು. “ನಾವು ನಮ್ಮ ಆರೋಗ್ಯ ಮತ್ತು ಆರ್ಥಿಕತೆಯೊಂದಿಗೆ ಭಾರಿ ಬೆಲೆ ಪಾವತಿಸುತ್ತಿದ್ದೇವೆ. ಪ್ರತಿದಿನ ಕೋಟ್ಯಂತರ ಸಾಮಾನ್ಯ ಭಾರತೀಯರು ಈ ಹೊರೆಯನ್ನು ಅನುಭವಿಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ. ಮಾಲಿನ್ಯದ ದುಷ್ಪರಿಣಾಮಗಳು ಸಮಾಜದ ದುರ್ಬಲ ವರ್ಗಗಳ ಮೇಲೆ…
18ನೇ ರೋಜ್ಗಾರ್ ಮೇಳ: 61,000ಕ್ಕೂ ಹೆಚ್ಚು ಮಂದಿಗೆ ನೇಮಕಾತಿ ಪತ್ರ ವಿತರಿಸಿದ ಮೋದಿ
ನವದೆಹಲಿ: ಯುವಜನರನ್ನು ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಅವಕಾಶಗಳೊಂದಿಗೆ ಸಂಪರ್ಕಿಸುವುದು ಕೇಂದ್ರ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಶನಿವಾರ 18ನೇ ರೋಜ್ಗಾರ್ ಮೇಳದಲ್ಲಿ ವಿವಿಧ ಕೇಂದ್ರ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ಆಯ್ಕೆಯಾದ 61,000ಕ್ಕೂ ಹೆಚ್ಚು ಯುವಕರಿಗೆ ಅವರು ನೇಮಕಾತಿ ಪತ್ರಗಳನ್ನು ವಿತರಿಸಿದರು. ದೇಶದಾದ್ಯಂತ 45 ಸ್ಥಳಗಳಲ್ಲಿ ನಡೆದ ಕಾರ್ಯಕ್ರಮವನ್ನು ವರ್ಚುವಲ್ ಮೂಲಕ ಉದ್ದೇಶಿಸಿ ಮಾತನಾಡಿದ ಪ್ರಧಾನಿ, “2026ರ ಆರಂಭವು ಹೊಸ ಸಂತೋಷಗಳ ಆರಂಭವನ್ನು ಸೂಚಿಸುತ್ತದೆ. ವಸಂತ ಪಂಚಮಿಯ ನಂತರ ನಿಮ್ಮ ಜೀವನದಲ್ಲೂ ಹೊಸ ವಸಂತ ಆರಂಭವಾಗುತ್ತಿದೆ” ಎಂದು ಹೇಳಿದರು. ನೇಮಕಾತಿ ಪತ್ರಗಳನ್ನು ರಾಷ್ಟ್ರ ನಿರ್ಮಾಣದ ಆಹ್ವಾನ ಪತ್ರ ಹಾಗೂ ‘ವಿಕ್ಷಿತ್ ಭಾರತ’ದ ಸಂಕಲ್ಪ ಪತ್ರ ಎಂದು ಅವರು ವರ್ಣಿಸಿದರು. ಗೃಹ ವ್ಯವಹಾರಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಹಣಕಾಸು ಸೇವೆಗಳು, ಉನ್ನತ ಶಿಕ್ಷಣ ಸೇರಿದಂತೆ ವಿವಿಧ ಸಚಿವಾಲಯಗಳಿಗೆ ಹೊಸದಾಗಿ ಆಯ್ಕೆಯಾದ…
ವಿಶ್ವಾಸಘಾತುಕತೆ ಮಹಾರಾಷ್ಟ್ರಕ್ಕೆ ಹೊಸದಲ್ಲ, ಅದು ಇತಿಹಾಸದ ಶಾಪ; ಬಿಜೆಪಿ ಬಗ್ಗೆ ಉದ್ಧವ್ ಕೆಂಡ
ಮುಂಬೈ: ಶಿವಸೇನಾ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಜನ್ಮ ಶತಮಾನೋತ್ಸವದ ಆರಂಭದ ಹಿನ್ನೆಲೆಯಲ್ಲಿ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಶುಕ್ರವಾರ ಏಕನಾಥ್ ಶಿಂಧೆ ಬಣ ಹಾಗೂ ಬಿಜೆಪಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ವಿಶ್ವಾಸಘಾತುಕತೆ ಮಹಾರಾಷ್ಟ್ರಕ್ಕೆ ಹೊಸದಲ್ಲ, ಅದು ಇತಿಹಾಸದ ಶಾಪ ಎಂದು ಅವರು ಹೇಳಿದರು. “ಬಿರುಗಾಳಿಗಳು ನಮ್ಮನ್ನು ಹೆದರಿಸುವುದಿಲ್ಲ. ನಾವು ಅವುಗಳಲ್ಲೇ ಬೆಳೆದಿದ್ದೇವೆ,” ಎಂದು ಹೇಳಿದ ಠಾಕ್ರೆ, ಶತ್ರುಗಳು ನೇರವಾಗಿ ಗೆಲ್ಲಲು ಸಾಧ್ಯವಾಗದಾಗ ದೇಶದ್ರೋಹಿಗಳ ಸಹಾಯವನ್ನು ಪಡೆದುಕೊಳ್ಳುತ್ತಾರೆ ಎಂದು ಆರೋಪಿಸಿದರು. ಕೇಸರಿ ಧ್ವಜವನ್ನು ಒಳಗಿನಿಂದ ದ್ರೋಹ ಮಾಡದೇ ಇದ್ದಿದ್ದರೆ, ಮಹಾರಾಷ್ಟ್ರ ಇತಿಹಾಸವನ್ನೇ ಮರುಬರೆಯುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟರು. ಇತ್ತೀಚಿನ ಚುನಾವಣೆಗಳಲ್ಲಿ ಹಣದ ಶಕ್ತಿಯನ್ನು ಹಿಂದೆಂದೂ ಕಾಣದ ರೀತಿಯಲ್ಲಿ ಬಳಸಲಾಗಿದೆ ಎಂದು ಆರೋಪಿಸಿದ ಅವರು, “ಹಣದಿಂದ ಮತಗಳನ್ನು ಖರೀದಿಸಬಹುದು, ಆದರೆ ಹೃದಯಗಳನ್ನು ಖರೀದಿಸಲು ಸಾಧ್ಯವಿಲ್ಲ” ಎಂದು ಹೇಳಿದರು. ಕೇಂದ್ರದ ನಾಯಕತ್ವವನ್ನು ಉಲ್ಲೇಖಿಸಿ, “ಇಬ್ಬರು ವ್ಯಾಪಾರಿಗಳು ಪಕ್ಷದವರನ್ನೇ…
ಪಿಎಸ್ಜಿಐಸಿಗಳು, ನಬಾರ್ಡ್, ಆರ್ಬಿಐಗಳಿಗೆ ವೇತನ–ಪಿಂಚಣಿ ಪರಿಷ್ಕರಣೆ; ಕೇಂದ್ರ ಸರ್ಕಾರ ಅನುಮೋದನೆ
ನವದೆಹಲಿ: ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಗಳು (ಪಿಎಸ್ಜಿಐಸಿಗಳು), ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಉದ್ಯೋಗಿಗಳು ಮತ್ತು ನಿವೃತ್ತರಿಗೆ ದೀರ್ಘಕಾಲದಿಂದ ಬಾಕಿ ಇದ್ದ ವೇತನ ಮತ್ತು ಪಿಂಚಣಿ ಪರಿಷ್ಕರಣೆಗೆ ಕೇಂದ್ರ ಸರ್ಕಾರ ಶುಕ್ರವಾರ ಅನುಮೋದನೆ ನೀಡಿದೆ. ಈ ನಿರ್ಧಾರದಿಂದ ಒಟ್ಟು ಸುಮಾರು 46,322 ಉದ್ಯೋಗಿಗಳು, 23,570 ಪಿಂಚಣಿದಾರರು ಮತ್ತು 23,260 ಕುಟುಂಬ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ. ಪಿಎಸ್ಜಿಐಸಿಗಳ ಉದ್ಯೋಗಿಗಳಿಗೆ ವೇತನ ಪರಿಷ್ಕರಣೆ 2022ರ ಆಗಸ್ಟ್ 1ರಿಂದ ಜಾರಿಗೆ ಬರಲಿದೆ. ವೇತನ ಬಿಲ್ನಲ್ಲಿ ಒಟ್ಟಾರೆ ಶೇ.12.41ರಷ್ಟು ಹೆಚ್ಚಳವಾಗಿದ್ದು, ಮೂಲ ವೇತನ ಮತ್ತು ತುಟ್ಟಿ ಭತ್ಯೆಯ ಮೇಲೆ ಶೇ.14ರಷ್ಟು ಹೆಚ್ಚಳ ನೀಡಲಾಗಿದೆ. ಒಟ್ಟು 43,247 ಉದ್ಯೋಗಿಗಳು ಇದರಿಂದ ಲಾಭ ಪಡೆಯಲಿದ್ದಾರೆ. ಜೊತೆಗೆ, 2010ರ ಏಪ್ರಿಲ್ 1 ನಂತರ ನೇಮಕವಾದ ಉದ್ಯೋಗಿಗಳ ಎನ್ಪಿಎಸ್ ಕೊಡುಗೆಯನ್ನು ಶೇ.10ರಿಂದ ಶೇ.14ಕ್ಕೆ ಹೆಚ್ಚಿಸಲಾಗಿದೆ. ಕುಟುಂಬ ಪಿಂಚಣಿಯನ್ನು…
‘ನಿಮ್ಮಷ್ಟು ಪೂರ್ವಾಗ್ರಹಪೀಡಿತ ವ್ಯಕ್ತಿಯನ್ನು ನಾನು ನೋಡಿಲ್ಲ’ ರೆಹಮಾನ್ ಬಗ್ಗೆ ಕಂಗನಾ
ಮುಂಬೈ: ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಅವರ ‘ಕೋಮುವಾದಿ’ ಹೇಳಿಕೆ ವಿವಾದದ ನಡುವೆ, ನಟಿ ಹಾಗೂ ನಿರ್ದೇಶಕಿ ಕಂಗನಾ ರನೌತ್ ತಮ್ಮ ನಿರ್ದೇಶನದ ಎಮರ್ಜೆನ್ಸಿ ಚಿತ್ರದ ಸಂದರ್ಭದಲ್ಲಿನ ‘ಅಹಿತಕರ ಅನುಭವ’ವನ್ನು ನೆನಪಿಸಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರೀಸ್ನಲ್ಲಿ ಪೋಸ್ಟ್ ಮಾಡಿರುವ ಕಂಗನಾ, ಚಿತ್ರಕ್ಕಾಗಿ ರೆಹಮಾನ್ ಅವರನ್ನು ಭೇಟಿಯಾಗಿ ಕಥಾನಕವನ್ನು ವಿವರಿಸಲು ತಾವು ಉತ್ಸುಕರಾಗಿದ್ದೆವು. ಆದರೆ, ಅವರು ಪ್ರಚಾರ ಚಿತ್ರದ ಭಾಗವಾಗಲು ಇಚ್ಛಿಸಿಲ್ಲ ಎಂದು ಹೇಳಿಕೊಂಡು ಭೇಟಿಗೂ ನಿರಾಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ತಮ್ಮ ರಾಜಕೀಯ ನಿಲುವಿನ ಕಾರಣಕ್ಕೆ ಚಿತ್ರರಂಗದಲ್ಲಿ ಪೂರ್ವಾಗ್ರಹ ಮತ್ತು ಪಕ್ಷಪಾತವನ್ನು ಎದುರಿಸಬೇಕಾಗುತ್ತಿದೆ ಎಂದು ಕಂಗನಾ ದೂರಿದ್ದಾರೆ. “ನಾನು ಕೇಸರಿ ಪಕ್ಷವನ್ನು ಬೆಂಬಲಿಸುವುದರಿಂದ ನನಗೆ ಚಿತ್ರರಂಗದಲ್ಲಿ ಪಕ್ಷಪಾತ ಎದುರಾಗುತ್ತಿದೆ. ಆದರೆ ನಿಮ್ಮಷ್ಟು ಪೂರ್ವಾಗ್ರಹಪೀಡಿತ ಮತ್ತು ದ್ವೇಷಪೂರಿತ ವ್ಯಕ್ತಿಯನ್ನು ನಾನು ನೋಡಿಲ್ಲ. ಎಮರ್ಜೆನ್ಸಿ ಬಗ್ಗೆ ನಿಮಗೆ ಹೇಳಲು ಬಯಸಿದ್ದೆ, ಆದರೆ ನೀವು ಭೇಟಿಗೂ ನಿರಾಕರಿಸಿದ್ದೀರಿ” ಎಂದು ಕಂಗನಾ…
