ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆಯ ಆರ್ಭಟ ತೀವ್ರಗೊಂಡಿದ್ದು, ಮಡಿಕೇರಿ ತಾಲೂಕಿನ ಭಾಗಮಂಡಲ ಗ್ರಾಮದಲ್ಲಿರುವ ತ್ರಿವೇಣಿ ಸಂಗಮ ಸಂಪೂರ್ಣವಾಗಿ ಜಲಾವೃತಗೊಂಡಿದೆ.
Visited to Bhagamandala Triveni Sangama & Talakaveri with Friends with monsoon rain.@ravikeerthi22 @navin_ankampali @namma_vjy @MasRainman @KarnatakaSNDMC #Monsoon2025 #KarnatakaRains #Bhagamandala #Talakaveri pic.twitter.com/Juz7W8WTKx
— Sudeep C G (@SudeepCG18) June 15, 2025
ಭಾಗಮಂಡಲ–ನಾಪೋಕ್ಲು ರಸ್ತೆಯು ನೀರಿನಿಂದ ಆವರಿತಗೊಂಡಿರುವದರಿಂದ ಸಂಚಾರಕ್ಕೆ ತೊಂದರೆ ಉಂಟಾಗುವ ಭೀತಿ ಇದ್ದರೂ, ನೂತನ ಫ್ಲೈಓವರ್ ಇರುವ ಕಾರಣ ಸಂಚಾರ ನಿರಾತಂಕವಾಗಿ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ಮಳೆ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಶಾಲಾ ಮತ್ತು ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ.