ದೀಪಾವಳಿಯಂದೇ ಘೋರ ದುರಂತ; ಮುತ್ತಿನ ನಗರಿಯಲ್ಲಿ 9 ಮಂದಿ ಸಜೀವ ದಹನ

ಹೈದರಾಬಾದ್​: ತೆಲಂಗಾಣದಲ್ಲಿ ದೀಪಾವಳಿ ದಿನದಂದು ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 9 ಮಂದಿ ಸಜೀವ ದಹನವಾಗಿದ್ದಾರೆ.

ಹೈದರಾಬಾದ್ ಸಮೀಪದ ನಾಂಪಲ್ಲಿ ಬಜಾರ್ ಘಾಟ್‌ನಲ್ಲಿ ಈ ದುರಂತ ಘಟಿಸಿದೆ. ನಾಲ್ಕು ಅಂತಸ್ತಿನ ಕಟ್ಟಡದಲ್ಲಿರುವ ರಾಸಾಯನಿಕ ಸಂಗ್ರಹಣಾ ಕೊಠಡಿಯಲ್ಲಿ ಹಠಾತ್ತನೆ ಬೆಂಕಿ ಕಾಣಿಸಿಕೊಂಡು ಭೀಕರ ಅನಾಹುತ ಸಂಭವಿಸಿದೆ.

ಬೆಳಿಗ್ಗೆ 9.30ರ ಸುಮಾರಿಗೆ ಕಟ್ಟಡದ ನೆಲಮಹಡಿಯಲ್ಲಿ ಕಾರು ದುರಸ್ತಿ ನಡೆಯುತ್ತಿದ್ದಾಗ ಸ್ಥಳದಲ್ಲಿದ್ದ ರಾಸಾಯನಿಕ ಡ್ರಮ್‌ಗಳಿಗೆ ಬೆಂಕಿ ತಗುಲಿದೆ ಎನ್ನಲಾಗಿದೆ. ಬೆಂಕಿ ಇಡೋ‌ಕಟ್ಟಡವನ್ನು ಆವರಿಸಿ ಭೀಕರ ದುರಂತಕ್ಕೆ ಕಾರಣವಾಯಿತು ಎನ್ನಲಾಗಿದೆ. ಈ ಸಂದರ್ಭದಲ್ಲಿ 16 ಮಂದಿಯನ್ನು ರಕ್ಷಣೆ ಮಾಡಲಾಯಿತಾದರೂ ಹಲವರು ಜೀವಂತ ದಹನಗೊಂಡರೆಂದು ಮೂಲಗಳು ತಿಳಿಸಿವೆ.

Related posts