ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಇದೀಗ ಪರಿಪೂರ್ಣ ಆಡಳಿತಕ್ಕೆ ಮುನ್ನುಡಿ ಬರೆದಿದೆ. ಖಾತೆ ಕ್ಯಾತೆಗಳನ್ನೂ ಬಗೆಹರಿಸಿ ಸಚಿವರಿಗೆ ಇಲಾಖೆಗಳ ನಿರ್ವಹಣೆಯನ್ನು ವಹಿಸಿಕೊಟ್ಟಿರುವ ಸಿಎಂ ಸಿದ್ದರಾಮಯ್ಯ ಅವರು ಇದೀಗ ಜಿಲ್ಲಾ ಉಸ್ತುವಾರಿ ಹಂಚಿಕೆ ಬಗ್ಗೆಯೂ ಗಮನಹರಿಸಿದ್ದಾರೆ. ಈಗಾಗಲೇ ಪಟ್ಟಿ ಸಿದ್ದಪಡಿಸಿರುವ ಸಿಎಂ ಅವರು, ಅಲ್ಪ ಸ್ವಲ್ಪ ಮಾರ್ಪಾಡುಗಳನ್ನು ಮಾಡಿ ಪ್ರಕಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿಎಂ ಸಿದ್ದಪಡಿಸಿರುವ ನೂತನ ಜಿಲ್ಲಾ ಉಸ್ತುವಾರಿ ಸಚಿವರ ತಾತ್ಕಾಲಿಕ ಪಟ್ಟಿ ಹೀಗಿದೆ.
ಬೆಂಗಳೂರು ನಗರ: ಕೆಜೆ ಜಾರ್ಜ್
ಬೆಂಗಳೂರು ಗ್ರಾಮಾಂತರ: ರಾಮಲಿಂಗಾ ರೆಡ್ಡಿ
ಕೋಲಾರ : ಕೆ ಎಚ್ ಮುನಿಯಪ್ಪ
ಚಿಕ್ಕಬಳ್ಳಾಪುರ: ಡಾ ಎಮ್ ಸಿ ಸುಧಾಕರ್
ರಾಮನಗರ: ಡಿ ಕೆ ಶಿವಕುಮಾರ್
ಮಂಡ್ಯ: ಚೆಲುವರಾಯ ಸ್ವಾಮಿ
ಮೈಸೂರು: ಡಾ.ಎಚ್ ಸಿ ಮಹದೇವಪ್ಪ
ಚಾಮರಾಜನಗರ: ದಿನೇಶ್ ಗುಂಡೂರಾವ್
ಕೊಡಗು: ವೆಂಕಟೇಶ್
ದಕ್ಷಿಣಕನ್ನಡ: ಕೃಷ್ಣ ಬೈರೇಗೌಡ
ಉಡುಪಿ: ಡಾ ಜಿ ಪರಮೇಶ್ವರ್
ಉತ್ತರ ಕನ್ನಡ: ಮಂಕಾಲ್ ವೈದ್ಯ
ಧಾರವಾಡ: ಸಂತೋಷ್ ಲಾಡ್
ಬೆಳಗಾವಿ: ಸತೀಶ್ ಜಾರಕಿಹೊಳಿ
ಬೀದರ್: ರಹೀಮ್ ಖಾನ್
ಕಲಬುರ್ಗಿ: ಶರಣ ಪ್ರಕಾಶ್ ಪಾಟೀಲ್
ವಿಜಯಪುರ: ಎಮ್ ಬಿ ಪಾಟೀಲ್
ಬಳ್ಳಾರಿ: ನಾಗೇಂದ್ರ
ಗದಗ: ಎಚ್ ಕೆ ಪಾಟೀಲ್
ಹಾವೇರಿ: ಬಿ ಝಡ್ ಝಮೀರ್ ಅಹ್ಮದ್ ಖಾನ್
ಕೊಪ್ಪಳ: ಶಿವರಾಜ್ ತಂಗಡಗಿ
ಯಾದಗಿರಿ: ಶರಣಪ್ಪಬಸಪ್ಪ ದರ್ಶಣಾಪುರ
ಬಾಗಲಕೋಟೆ: ಶೀವನಾಂದ ಪಾಟೀಲ್
ವಿಜಯನಗರ: ಲಕ್ಷ್ಮೀ ಹೆಬ್ಬಲ್ಕರ್
ತುಮಕೂರು: ಕೆ ಎನ್ ರಾಜಣ್ಣ
ಚಿತ್ರದುರ್ಗ: ಡಿ ಸುಧಾಕರ್
ಶಿವಮೊಗ್ಗ: ಮಧು ಬಂಗಾರಪ್ಪ
ಹಾಸನ: ಈಶ್ವರ್ ಖಂಡ್ರೆ
ಚಿಕ್ಕಮಗಳೂರು: ಪ್ರಿಯಾಂಕ್ ಖರ್ಗೆ
ದಾವಣಗೆರೆ: ಎಸ್ ಎಸ್ ಮಲ್ಲಿಕಾರ್ಜುನ
ರಾಯಚೂರು: ಎನ್ ಎಸ್ ಬೋಸರಾಜು