ಬೆಂಗಳೂರು: ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದು ಅಖಾಡಕ್ಕೆ ಧುಮುಕಿರುವ ಜಾತ್ಯಾತೀತ ಜನತಾದಳ ಶುಕ್ರವಾರ ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಾಸನ ಕ್ಷೇತ್ರದಲ್ಲಿ ರೇವಣ್ಣ ಪತ್ನಿ ಭವಾನಿ ಅವರು ಸ್ಪರ್ಧಾಕಾಂಕ್ಷಿಯಾಗಿದ್ದರೂ ಅವರಿಗೆ ಟಿಕೆಟ್ ಘೋಷಣೆಯಾಗಿಲ್ಲ. ಈ ಕ್ಷೇತ್ರದಲ್ಲಿ ಭವಾನಿ ಪುತ್ರ ಸ್ವರೂಪ್ಗೆ ಟಿಕೆಟ್ ಪ್ರಕಟಿಸಲಾಗಿದೆ.
ಅಭ್ಯರ್ಥಿಗಳ ಪಟ್ಟಿ ಹೀಗಿದೆ.
- ಕುಡುಚಿ- ಆನಂದ ಮಾಳಗಿ
- ರಾಯಭಾಗ-ಪ್ರದೀಪ ಮಾಳಗಿ
- ಸವದತ್ತಿ ಯಲ್ಲಮ್ಮ-ಸೌರಭ್ ಆನಂದ ಚೋಪ್ರಾ
- ಅಥಣಿ – ಶ್ರೀ ಶಶಿಕಾಂತ ಪಡಸಲಗಿ ಗುರುಗಳು
- ಹುಬ್ಬಳ್ಳಿ ಧಾರವಾಡ ಪೂರ್ವ-ವೀರಭದ್ರಪ್ಪ ಹಾಲಹರವಿ
- ಕುಮಟಾ -ಸೂರಜ್ ಸೋನಿ ನಾಯ್ಕ
- ಹಳಿಯಾಳ-ಎಸ್.ಎಲ್. ಘೋಟ್ನೆಕರ್
- ಭಟ್ಕಳ -ನಾಗೇಂದ್ರ ನಾಯಕ
- ಶಿರಸಿ- ಉಪೇಂದ್ರ ಪೈ
- ಯಲ್ಲಾಪುರ-ಡಾ.ನಾಗೇಶ್ ನಾಯಕ್
- ಚಿತ್ತಾಪುರ- ಸುಭಾಷ್ ಚಂದ್ರ ರಾಥೋಡ್
- ಕಲಬುರಗಿ ಉತ್ತರ-ನಾಸಿರ್ ಹುಸೇನ್ ಉಸ್ತಾದ್
- ಬಳ್ಳಾರಿ ನಗರ-ಅಲ್ಲಾಭಕ್ಷ ಅಲಿಯಾಸ್ ಮುನ್ನಾ
- ಹಗರಿಬೊಮ್ಮನಹಳ್ಳಿ-ಪರಮೇಶ್ವರಪ್ಪ
- ಹರಪನಹಳ್ಳಿ- ಎನ್ .ಎಂ. ನೂರ್ ಅಹ್ಮದ್
- ಸಿರಗುಪ್ಪ-ಪರಮೇಶ್ವರ ನಾಯಕ
- ಹೊಳೆನರಸೀಪುರ-ಹೆಚ್.ಡಿ.ರೇವಣ್ಣ
- ಪುತ್ತೂರು-ದಿವ್ಯಪ್ರಭಾ
- ಬೇಲೂರು-ಕೆ.ಎಸ್.ಲಿಂಗೇಶ್
- ಸಕಲೇಶಪುರ-ಹೆಚ್.ಕೆ.ಕುಮಾರಸ್ವಾಮಿ
- ಅರಕಲಗೂಡು-ಎ. ಮಂಜು
- ಶ್ರವಣಬೆಳಗೊಳ-ಸಿ. ಎನ್. ಬಾಲಕೃಷ್ಣ
- ಮಹಾಲಕ್ಷ್ಮೀ ಲೇಔಟ್ – ರಾಜಣ್ಣ
- ಹಿರಿಯೂರು-ರವೀಂದ್ರಪ್ಪ
- ಮಾಯಕೊಂಡ-ಆನಂದಪ್ಪ
- ಕಂಪ್ಲಿ-ರಾಜು ನಾಯಕ್
- ಕೊಳ್ಳೇಗಾಲ-ಪುಟ್ಟಸ್ವಾಮಿ
- ಗುಂಡ್ಲುಪೇಟೆ-ಕಡಬೂರು ಮಂಜುನಾಥ್
- ಕಾಪು-ಕು.ಸಬೀನಾ ಸಮದ್
- ಕಾರ್ಕಳ-ಶ್ರೀಕಾಂತ ಕುಚ್ಚೂರ್
- ಉಡುಪಿ-ದಕ್ಷತ್ ಆರ್. ಶೆಟ್ಟಿ
- ಬೈಂದೂರು-ಮನ್ಸೂರ್ ಇಬ್ರಾಹಿಂ
- ಕುಂದಾಪುರ- ರಮೇಶ್ ಕುಂದಾಪುರ
- ಮಂಗಳೂರು ದಕ್ಷಿಣ-ಸುಮತಿ ಹೆಗಡೆ
- ಕನಕಪುರ-ನಾಗರಾಜ
- ಯಲಹಂಕ-ಎಂ.ಮುನೇಗೌಡ
- ಸರ್ವಜ್ಞನಗರ- ಮೊಹ್ಮದ್ ಮುಸ್ತಾಫ್
- ಯಶವಂತಪುರ -ಜವರಾಯಿ ಗೌಡ
- ತಿಪಟೂರು-ಶಾಂತಕುಮಾರ
- ಶಿರಾ-ಆರ್. ಉಗ್ರೇಶ್
- ಹಾನಗಲ್-ಮನೋಹರ್ ತಹಶೀಲ್ದಾರ್
- ಸಿಂಧಗಿ-ವಿಶಾಲಾಕ್ಷಿ ಶಿವಾನಂದ
- ಗಂಗಾವತಿ-ಹೆಚ್.ಆರ್.ಚನ್ನಕೇಶವ
- ಹೆಚ್.ಡಿ.ಕೋಟೆ- ಜಯಪ್ರಕಾಶ್ ಸಿ
- ಜೇವರ್ಗಿ- ದೊಡ್ಡಪ್ಪಗೌಡ ಶಿವಲಿಂಗಪ್ಪ ಗೌಡ
- ಶಹಾಪೂರ-ಗುರುಲಿಂಗಪ್ಪಗೌಡ
- ಕಾರವಾರ-ಚೈತ್ರಾ ಕೋಟ ಕಾರ