ಮೂರು ದಶಕಗಳ ನಂತರ ಕಾಂಗ್ರೆಸ್ ಪಕ್ಷಕ್ಕೆ ದಾಖಲೆಯ ವಿಜಯ: ಅಂತಿಮ ಫಲಿತಾಂಶ ಹೀಗಿದೆ

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಗೆ ತೀವ್ರ ಮುಖಬಂಗವಾಗಿದೆ. ಮೂರು ದಶಕಗಳ ನಂತರ ಕಾಂಗ್ರೆಸ್ ಪಕ್ಷ ದಾಖಲೆಯ ವಿಜಯ ಸಾಧಿಸಿದ್ದು ಕೈ ಪಾಳಯದಲ್ಲಿ ಸಂಭ್ರಮ ಮನೆ‌ಮಾಡಿದೆ.

ಬಿಜೆಪಿ ಸರ್ಕಾರದಲ್ಲಿದ್ದ ಸಚಿವರನೇಕರು ಸೋಲನ್ನು ಅನುಭವಿಸುದ್ದಾರೆ‌  ಡಾ. ಸುಧಾಕರ್. ಬಿ,ಸಿ,ಪಾಟೀಲ್, ಮಹೇಶ್ ಕುಮಟಳ್ಳಿ, ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್, ನಾಗೇಶ್, ಸಹಿತ ಕಳೆದ ವಿಧಾನಸಭಾ ಅವಧಿಯಲ್ಲಿ ಆಪರೇಷನ್ ಕಮಲಕ್ಕೆ ಬಲಿಯಾಗಿದ್ದ ನಾಯಕರನೇಕರು ಈ ಬಾರಿಯ ಚುನಾವಣೆಯಲ್ಲಿ ಸೋಲುಂಡಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ. ಇದೆ ವೇಳೆ, ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷಾಂತರ ಮಾಡಿರುವ ನಾಯಕರೂ ಈ ಚುನಾವಣೆಯಲ್ಲಿ ಸೋಲುಂಡಿರುವುದೂ ಅಚ್ಚರಿಯ ಸಂಗತಿ.

ಪಕ್ಷಗಳ ಅಂತಿಮ ಬಲಾಬಲ 

  • ಒಟ್ಟು ಸ್ಥಾನಗಳು – 224

  • ಕಾಂಗ್ರೆಸ್ : 135

  • ಬಿಜೆಪಿ : 66

  • ಜೆಡಿಎಸ್ : 19

  • ಇತರರು : 04

Related posts