ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

ಉಡುಪಿ: ಬೈಂದೂರು ಸಮೀಪ ಉಪ್ಪುಂದದ ಮೆಡಿಕಲ್‌ ಕರ್ಕಿಕಳಿ ಕಡಲ ತೀರದಲ್ಲಿ ಸೋಮವಾರ ಮೀನುಗಾರಿಕಾ ದೋಣಿ ದುರಂತದ ಬಳಿಕ ನಾಪತ್ತೆಯಾಗಿದ್ದ ಸತೀಶ್‌ ಖಾರ್ವಿ ಅವರ ಮೃತದೇಹ ಪತ್ತೆಯಾಗಿದೆ.

ಮೀನುಗಾರಿಕೆ ನಡೆಸಿ ವಾಪಾಸಾಗುತ್ತಿದ್ದಾ ದೋಣಿ ಅವಘಡಕ್ಕೀಡಾಗಿತ್ತು. ಘಟನೆಯಲ್ಲಿ ನಾಗೇಶ್‌ (29) ಎಂಬವರು ಸಾವನ್ನಪ್ಪಿದ್ದು ಸತೀಶ್‌ ಖಾರ್ವಿ (30) ನಾಪತ್ತೆಯಾಗಿದ್ದರು. ಸುದೀರ್ಘ ಕಾಲ ಶೋಧ ಕಾರ್ಯ ನಡೆಸಿದ ಬಳಿಕ ತಡ ರಾತ್ರಿ ಉಪ್ಪುಂದ ಕೊಡೇರಿ ಸಿ ವಾಕ್‌ನ ಬಲ ಬದಿಯಲ್ಲಿ ಸತೀಶ್‌ ಖಾರ್ವಿ ಅವರ ಮೃತದೇಹ ಪತ್ತೆಯಾಗಿದೆ. ಬೈಂದೂರು ಠಾಣೆಯ ಪೊಲೀಸರು ಹಾಗೂ ಕರಾವಳಿ ಕಾವಲು ಪೊಲೀಸ್‌ ಠಾಣೆಯ ಸಿಬ್ಬಂದಿ ಡ್ರೋನ್‌ ಕೆಮರಾ ಬಳಸಿ ಮೀನುಗಾರನ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Related posts