ಶಹಬ್ಬಾಶ್ ಮೋದಿ.. ಸಮರ ಸಜ್ಜಾಗಿರುವ ಯೋಧರಿಗೆ ಧೈರ್ಯ ತುಂಬಿದ ಪ್ರಧಾನಿ

ದೆಹಲಿ: ಭಾರತ ಚೀನಾ ಸಂಘರ್ಷದ ಆತಂಕದಲ್ಲಿರುವ ಲಡಾಖ್ ಕಣಿವೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಭೇಟಿ ನೀಡಿದ್ದಾರೆ. ಗಲ್ವಾನ್ ಕಣಿವೆ ಪ್ರದೇಶದಲ್ಲಿ ಚೀನಾ- ಭಾರತೀಯ ಸೇನಾ ಸಂಘರ್ಷದ ಸಂದರ್ಭದಲ್ಲೇ ಪ್ರಧಾನಿ ನರೇಂದ್ರ ಮೋದಿಯವರ ಈ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.

ಇಂದು ಬೆಳ್ಳಂಬೆಳಿಗ್ಗೆ ರಕ್ಷಣಾ ಪಡೆ ಮುಖ್ಯಸ್ಥ ಬಿಪಿನ್ ರಾವತ್, ಭಾರತೀಯ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರಾವಣೆ ಜೊತೆ ಗಡಿ ಪ್ರದೇಶಕ್ಕೆ ತೆರಳಿದ ಮೋದಿ ಅಲ್ಲಿನ ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಿದರು.

ಲೆಹ್ ಸಮೀಪದ ‘ನಿಮೂ’ ಎಂಬಲ್ಲಿಗೂ ತೆರಳಿಯಾದ ಪ್ರಧಾನಿಯವರು ಅಲ್ಲಿ ಬಹ್ರಾತೆ ಕೈಗೊಂಡಿರುವ ಯೋಧರೊಂದಿಗೆ ಮಾತುಕತೆ ನಡೆಸಿ ಧೈರ್ಯ ತುಂಬಿದರು.

ಇದನ್ನೂ ಓದಿ.. ಖ್ಯಾತ ಬಾಲಿವುಡ್ ಕೊರಿಯೋಗ್ರಾಫರ್ ಸರೋಜ್ ಖಾನ್ ವಿಧಿವಶ

 

Related posts