ಸಿದ್ದರಾಮಯ್ಯ ಅವರಿಗೆ ಒಂದೆಡೆ ಫಲಿತಾಂಶದ ಖುಷಿ.. ಮತ್ತೊಂದೆಡೆ ಸಾವಿನ ಸುದ್ದಿಯ ಆಘಾತ

ಮೈಸೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಒಂದೆಡೆ ಈ ಚುನಾವಣೆಯ ದಿಗ್ವಿಜಯದ ಖುಷಿ. ಮತ್ತೊಂದೆಡೆ ತಮ್ಮ ಪರಿವಾರ ಸದಸ್ಯರೊಬ್ಬರ ಸಾವಿನ ಸುದ್ದಿ ತಂದ ನೋವು.

ಸಿದ್ದರಾಮಯ್ಯ ಅವರ ಸಹೋದರಿ ಶಿವಮ್ಮ‌ ಅವರ ಪತಿ ರಾಮೇಗೌಡ ಶನಿವಾರ‌ ನಿಧನ‌ರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ 69 ವರ್ಷ ವಯಸ್ಸಿನ ಅವರನ್ನು ಬೆಳಿಗ್ಗೆಮೈಸೂರಿನ ಜೆಎಸ್ ಎಸ್ ಆಸ್ಪತ್ರೆ ಗೆ ದಾಖಲಿಸಲಾಗಿತ್ತು. ಬೆಳಿಗ್ಗೆ 8.30ರ ಸುಮಾರಿಗೆ ಕೊನೆಯುಸಿರೆಳೆದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

Related posts