ಇಂಡಿಯನ್ ಪ್ರೀಮಿಯರ್ ಲೀಗ್ನ ಸೋಮವಾರದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳ ಆಟಗಾರರು ರಣಾಂಗಣದಲ್ಲೇ ಜಗಳಕ್ಕಿಳಿದ ಪ್ರಸಂಗ ಗೊಂದಲ ಸೃಷ್ಟಿಸಿತು. Lit Abhishek Sharma 🗿🥵🔥 pic.twitter.com/zyBhiQxByJ — Antara (@AntaraonX) May 19, 2025 ಲಕ್ನೋದಲ್ಲಿನ ಏಕಾನ ಸ್ಡೇಡಿಯಂನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಮಹತ್ವದ ಪಂದ್ಯ ನಡೆಯಿತು. ಸನ್ರೈಸರ್ಸ್ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಔಟಾದ ಸಂದರ್ಭದಲ್ಲಿ ಲಕ್ನೋ ಸ್ಪಿನ್ನರ್ ದಿಗ್ವೇಶ್ ರಾಥಿ, ತಮಾಷೆಯ ಮಾತುಗಳಿಂದ ಕೆಣಕಿದರು. ‘ಹೋಯ್ತಾ ಇರು’ ಎಂಬ ದಿಗ್ವೇಶ್ ರಾಥಿ ಅವರ ಕೈ ಸನ್ನೆ ಅಭಿಷೇಕ್ ಶರ್ಮಾ ಅವರನ್ನು ಕೆರಳಿಸಿತು. ಈ ಆಸಂದರ್ಭದಲ್ಲಿ ಇಬ್ಬರ ನಡುವೆ ಜಗಳ ಏರ್ಪಟ್ಟಿತು. ಇಬ್ಬರ ಜಗಳವು ತಾರಕ್ಕೇರುತ್ತಿದ್ದಂತೆ ಅಂಪೈರ್ ಹಾಗೂ ಇತರ ಆಟಗಾರರು ಮಧ್ಯ ಪ್ರವೇಶಿಸಿ ಕುಪಿತ ಇಬ್ಬರು ಆಟಗಾರರನ್ನೂ ದೂರ ಸರಿಯುವಂತೆ…