ಕಾನೂನು ಕಾಲೇಜುಗಳಲ್ಲಿ ಪ್ರಾಯೋಗಿಕ ಶಿಕ್ಷಣಕ್ಕೆ ಆದ್ಯತೆ; KSLU ಕುಲಪತಿ ಸುಳಿವು

ಬೆಂಗಳೂರು: ಕಾನೂನು ವಿದ್ಯಾರ್ಥಿಗಳಿಗೆ ನ್ಯಾಯಾಲಯ ಕಲಾಪಗಳ ಸಂಪೂರ್ಣ ತಿಳುವಳಿಕೆ ಸಿಗುವಂತಾಗಲು ಪ್ರಾಯೋಗಿಕ ಶಿಕ್ಷಣದಲ್ಲಿ ಸುಧಾರಣೆ ತರಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಸಿ. ಬಸವರಾಜು ತಿಳಿಸಿದ್ದಾರೆ. ವೈದೇಹಿ ಕಾನೂನು ಸಂಸ್ಥೆಯ ವತಿಯಿಂದ ನಡೆದ ‘ಸಾಮಾಜಿಕ, ನ್ಯಾಯ ಮತ್ತು ಲಿಂಗ ಸಮಾನತೆ’ ಕುರಿತ ರಾಷ್ಟ್ರೀಯ ಸಮ್ಮೇಳನ ಮತ್ತು ವೈದೇಹಿ ವೈದ್ಯಕೀಯ ಕಾಲೇಜಿನಲ್ಲಿ ಹೊಸ ಮೂಟ್ ಕೋರ್ಟ್ ಹಾಲ್ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಪಾಲ್ಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಕುಲಪತಿ ಡಾ.ಸಿ. ಬಸವರಾಜು, ರಾಜ್ಯದ ಕಾನೂನು ಮಹಾವಿದ್ಯಾಲಯಗಳಲ್ಲಿ ಮೂಟ್ ಕೋರ್ಟ್ ವ್ಯವಸ್ಥೆಯು ನ್ಯಾಯಾಲಯ ಸ್ವರೂಪದ ವೇದಿಕೆಯಂತಿದ್ದರೂ ಕೂಡಾ, ತಜ್ಞರ ನಿರಂತರ ಮಾರ್ಗದರ್ಶನ ಅವಶ್ಯವಿದೆ. ಈ ನಿಟ್ಟಿನಲ್ಲಿ ಪರಿಪೂರ್ಣ ಶಿಕ್ಶಣ, ಮಾರ್ಗದರ್ಶನ ಅಗತ್ಯವಿದೆ. ಈ ರೀತಿಯ ಶಿಕ್ಷಣದಿಂದ ಕಾನೂನು ವಿದ್ಯಾರ್ಥಿಗಳು ಪಠ್ಯದ ಜೊತೆಗೆ ನ್ಯಾಯಾಂಗದ ಬಗ್ಗೆ ಪರಿಪೂರ್ಣ ತಿಳುವಳಿಕೆ ಹೊಂದಲು ಪೂರಕ ವ್ಯವಸ್ಥೆ ರೂಪಿಸಿದಂತಾಗುತ್ತದೆ ಎಂದು ಪ್ರತಿಪಾದಿಸಿದರು. ವೈದೇಹಿ…