ಬಡಪಾಯಿ ಮಹಿಳೆ ಬದುಕಲ್ಲಿ ‘ಸಂತೋಷ’ ಮೂಡಿಸಿದ ಸಚಿವ.. ಲಾಡ್ ನಡೆಗೆ ‘Hats Off’ ಎಂದ ಜನ

ಧಾರವಾಡ: ಸಚಿವ ಸಂತೋಷ್ ಲಾಡ್ ಒಂದಿಲ್ಲೊಂದು ವಿಚಾರಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಗಣಿ ಧಣಿಯಾಗಿ ಸಾವಿರಾರು ಮಂದಿಯ ಪಾಲಿಗೆ ಉದ್ಯೋಗದಾತನಾಗಿ ಗಮನಸೆಳೆದಿರುವ ಸಂತೋಷ್ ಲಾಡ್, ಜನಾನುರಾಗಿ ಶಾಸಕರಾಗಿ ಉತ್ತರ ಕರ್ನಾಟಕದಲ್ಲಿ ಕುತೂಹಲದ ಕೇಂದ್ರಬಿಂದುವಾಗಿದ್ದಾರೆ. ಇದೀಗ ಅವರು, ತಮ್ಮ ವಿಶೇಷ ನಡೆಯಿಂದಾಗಿ ಮತ್ತೊಮ್ಮೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಲಾಡ್ ಅವರು ‘ನೊಂದವರ ಪಾಲಿಗೆ ಆಶಾಕಿರಣ’ ಎಂಬುದು ಅವರ ಕ್ಷೇತ್ರದ ಜನರ ಅಂಬೋಣ. ಇದೀಗ ಭಿಕ್ಷೆ ಬೇಡುತ್ತಿದ್ದ ಮಹಿಳೆಯ ಬದುಕಿಗೆ ಮಾರ್ಗದರ್ಶಿಯಾದ ಪರಿ ಶಹಬ್ಬಾಸ್‌ಗಿರಿ ಗಿಟ್ಟಿಸುವಂತೆ ಮಾಡಿದೆ. ಧಾರವಾಡ ಜಿಲ್ಲಾ ಪ್ರವಾಸ ಸಂದರ್ಭದಲ್ಲಿ ಸಚಿವ ಲಾಡ್ ಅವರಿಗೆ ಶನಿವಾರ ಅಚ್ಚರಿಯ ಸನ್ನಿವೇಶವೊಂದು ಎದುರಾಗಿತ್ತು. ಪುಟ್ಟ ಮಗುವನ್ನು ಹಿಡಿದುಕೊಂಡು ಮಹಿಳೆಯೊಬ್ಬರು ಹೊಟ್ಟೆಪಾಡಿಗಾಗಿ ಭಿಕ್ಷೆ ಬೇಡುತ್ತಿದ್ದ ಸ್ಥಿತಿಯನ್ನು ಕಂಡು ಅವರು ಮಮ್ಮಲ ಮರುಗಿದರು. ಮಹಿಳೆಯ ಬಳಿ ತೆರಳಿ ಕಷ್ಯಸುಖ ಆಲಿಸಿದರು. ಆಕೆಯ ಹಸಿವು ನೀಗಿಸಲು ಒಂದಷ್ಟು ಮೊತ್ತವನ್ನು ನೀಡಿದ ಲಾಡ್, ಆಕೆಗೆ ಸ್ವಾವಲಂಬಿ ಪಾಠ ಹೇಳಿದರು.…