ಮಂಗಳೂರು: ಉನ್ನತ ಹಾಗೂ ವೈದ್ಯಕೀಯ ಶಿಕ್ಷಣ ಪ್ರವೇಶ ಸಂಬಂಧ ತರಬೇತಿಯಲ್ಲಿ ಯಶೋಗಾಥೆ ಬರೆದಿರುವ ಮಂಗಳೂರಿನ ‘ವೈವಿಧ್ಯ’ ಸಂಸ್ಥೆಯ ಸಹಭಾಗಿತ್ವದ ‘ವೇದಾಂತ ಪದವಿ ಪೂರ್ವ ಕಾಲೇಜು’ ಸ್ಕಾಲರ್ಶಿಪ್ ಸಂಬಂಧ ನಡೆಸುತ್ತಿರುವ ಪ್ರವೇಶ ಪರೀಕ್ಷೆ ಜನಪ್ರಿಯವಾಗುತ್ತಿದೆ. ಮಂಗಳೂರಿನ ನೀರುಮಾರ್ಗ ಸಮೀಪದ ಫರ್ಮಾಯಿ ಚರ್ಚ್ ಸಮೀಪ ಇರುವ ವೇದಾಂತ ಪದವಿ ಪೂರ್ವ ಕಾಲೇಜು’ NEET, JEE, CET ಸಹಿತ ಸ್ಪರ್ಧಾತ್ಮಕ ಪರೀಕ್ಷೆಯ ಶಿಕ್ಷಣ ನೀಡುತ್ತಿದೆ. ಹಾಗಾಗಿ ಪ್ರವೇಶಕ್ಕಾಗಿ ಬೇಡಿಕೆ ಹೆಚ್ಚಾಗಿದೆ. ಇದರ ಜೊತೆಯಲ್ಲೇ, ವಿದ್ಯಾರ್ಥಿ ವೇತನ ಸಹಿತ ಉಚಿತ ಪ್ರವೇಶವನ್ನು ಕೂಡಾ ಶಿಕ್ಷಣ ಸಂಸ್ಥೆ ಕಲ್ಪಿಸುತ್ತದೆ. ಇದಕ್ಕಾಗಿ ರಾಜ್ಯದ ಹಲವೆಡೆ ಪರೀಕ್ಷೆ ನಡೆಸಲಾಗುತ್ತಿದೆ. ಭಾನುವಾರ (21 ಸೆಪ್ಟೆಂಬರ್, 2025) ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ನಡೆದ ‘ಉಚಿತ ವೇದಾಂತ ವಿದ್ಯಾರ್ಥಿವೇತನ ಪರೀಕ್ಷೆ’ಯಲ್ಲಿ ದಾಖಲೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಚಿಕ್ಕೋಡಿಯ GSES English Medium School ನಲ್ಲಿ ನಡೆದ ಪರೀಕ್ಷೆಯಲ್ಲಿ ಬೆಳಗಾವಿ ಸುತ್ತಮುತ್ತಲ…