ಪಾಕ್ ಪಾತಕ ಲೋಕ ಅನಾವರಣಕ್ಕೆ ತಂಡ ಸಿದ್ದ, ತರೂರ್, ತೇಜಸ್ವಿ ಸೂರ್ಯ, ಬ್ರಿಜೇಶ್ ಚೌಟಾಗೂ ಸ್ಥಾನ ನೀಡಿದ ಮೋದಿ ಸರ್ಕಾರ

‘ಒಂದು ಧ್ಯೇಯ, ಒಂದು ಸಂದೇಶ, ಒಂದು ಭಾರತ’ ಸೂತ್ರದಡಿ ಏಳು ಸರ್ವಪಕ್ಷ ನಿಯೋಗಗಳು ಶೀಘ್ರದಲ್ಲೇ ಆಪರೇಷನ್ ಸಿಂಧೂರ್ ಅಡಿಯಲ್ಲಿ ಪ್ರಮುಖ ರಾಷ್ಟ್ರಗಳಿಗೆ ಭೇಟಿ ನೀಡಲಿವೆ.

ಭಯೋತ್ಪಾದನೆಯ ವಿರುದ್ಧ ಭಾರತದ ಸಾಮೂಹಿಕ ಸಂಕಲ್ಪವನ್ನು ಪ್ರತಿಬಿಂಬಿಸುವ ಏಳು ಸರ್ವಪಕ್ಷ ನಿಯೋಗಗಳು ಶೀಘ್ರದಲ್ಲೇ ಆಪರೇಷನ್ ಸಿಂಧೂರ್ ಅಡಿಯಲ್ಲಿ ಪ್ರಮುಖ ರಾಷ್ಟ್ರಗಳನ್ನು ತೊಡಗಿಸಿಕೊಳ್ಳಲಿವೆ. ಮೇ 22ರಿಂದ ಪ್ರವಾಸ ಆರಂಭಿಸಲಿರುವ ಈ 1 ಸರ್ವಪಕ್ಷ ನಿಯೋಗಗಳು ವಿವಿಧ ದೇಶಗಳಿಗೆ ಹೋಗಿ, ಭಾರತದ ರಾಷ್ಟ್ರೀಯ ಒಮ್ಮತ ಮತ್ತು ಎಲ್ಲಾ ವಿಧದ ಭಯೋತ್ಪಾದನೆಯನ್ನು ಎದುರಿಸಲು ದೃಢನಿಶ್ಚಯವನ್ನು ಪ್ರದರ್ಶಿಸುತ್ತವೆ. ಉಗ್ರವಾದದ ವಿರುದ್ಧ ಶೂನ್ಯ ಸಹಿಷ್ಣುತೆಯ ಸಂದೇಶವನ್ನು ಜಗತ್ತಿಗೆ ಸಾರುತ್ತಾರೆ’ ಎಂದು ಸಂಸದೀಯ ವ್ಯವಹಾರ ಗಳ ಸಚಿವಾಲಯ ಪ್ರಕಟಣೆ ಹೊರಡಿಸಿದೆ. ಈ ನಿಯೋಗಗಳಲ್ಲಿ ಕಾಂಗ್ರೆಸ್ ಸಂಸದರಾದ ಶಶಿ ತರೂರ್, ಮನೀಶ್ ತಿವಾರಿ, ಅಸಾದುದ್ದೀನ್ ಒವೈಸಿ ಸಹಿತ ಹಲವು ನಾಯಕರು ಇದ್ದಾರೆ.

ಪ್ರಮುಖ ತಂಡಗಳು ಹೀಗಿವೆ.

  • ಸೌದಿ ಅರೇಬಿಯಾ, ಕುವೈತ್, ಬಹ್ರೈನ್ ಮತ್ತು ಅಲ್ಜೀರಿಯಾ:

ಬೈಜಯಂತ್ ಪಾಂಡಾ, ಗುಲಾಮ್ ನಬಿ ಆಜಾದ್, ನಿಶಿಕಾಂತ್ ದುಬೆ, ಫಾಂಗ್ನಾನ್ ಕೊನ್ಯಾಕ್, ರೇಖಾ ಶರ್ಮಾ, ಅಸದುದ್ದೀನ್ ಓವೈಸಿ, ಸತ್ನಮ್ ಸಿಂಗ್ ಸಂಧು, ಹರ್ಷವರ್ಧನ್ ಶ್ರಿಂಗ್ಲಾ ಇದ್ದಾರೆ.

  • ಫ್ರಾನ್ಸ್, ಬ್ರಿಟನ್, ಜರ್ಮನಿ, ಯುರೋಪ್, ಇಟಲಿ ಮತ್ತು ಡೆನ್ಮಾರ್ಕ್‌:

ರವಿಶಂಕರ್ ಪ್ರಸಾದ್, ದಗ್ಗುಬತಿ ಪುರಂದೇಶ್ವರಿ, ಪ್ರಿಯಾಂಕಾ ಚತುರ್ವೇದಿ, ಗುಲಾಮ್ ಅಲಿ ಖತಾನಾ, ಅಮರ್ ಸಿಂಗ್, ಸಮಿಕ್ ಭಟ್ಟಾಚಾರ್ಯ, ಎಂ.ಜೆ. ಅಕ್ಬರ್, ಪಂಕಜ್ ಸರನ್ ಇರಲಿದ್ದಾರೆ.

  • ಇಂಡೋನೇಷ್ಯಾ, ಮಲೇಷ್ಯಾ, ದಕ್ಷಿಣ ಕೊರಿಯಾ, ಜಪಾನ್ ಮತ್ತು ಸಿಂಗಾಪುರ:

ಸಂಜಯ್ ಕುಮಾರ್ ಝಾ, ಅಪರಾಜಿತಾ ಸಾರಂಗಿ, ಬ್ರಿಜ್ ಲಾಲ್, ಪ್ರದಾನ್ ಬರುವಾ,ಹೇಮಾಂಗ್ ಜೋಶಿ, ಯೂಸುಫ್ ಪಠಾಣ್, ಜಾನ್ ಬ್ರಿಟ್ಟಾಸ್, ಸಲ್ಮಾನ್ ಖುರ್ಷಿದ್. ಮೋಹನ್ ಕುಮಾರ್ ಇರಲಿದ್ದಾರೆ.

  • ಯುಎಇ, ಲೈಬೀರಿಯಾ, ಪ್ರಜಾಸತ್ತಾತ್ಮಕ ಗಣರಾಜ್ಯ ಕಾಂಗೋ ಮತ್ತು ಸಿಯೆರಾ ಲಿಯೋನ್:

ಶ್ರೀಕಾಂತ್ ಶಿಂಧೆ, ಬನ್ಸುರಿ ಸ್ವರಾಜ್, ಅತುಲ್ ಗರ್ಗ್, ಮನನ್ ಕುಮಾರ್ ಮಿಶ್ರಾ, ಇ.ಟಿ. ಮೊಹಮ್ಮದ್ ಬಶೀರ್, ಡಾ.ಸಸ್ಮಿತ್ ಪತ್ರ, ಎಸ್.ಎಸ್. ಅಹ್ಲುವಾಲಿಯಾ, ಸುಜನ್ ಚಿನೋಯ್ ಇರಲಿದ್ದಾರೆ.

  • ಅಮೆರಿಕ, ಪನಾಮ, ಗಯಾನಾ, ಬ್ರೆಜಿಲ್ ಮತ್ತು ಕೊಲಂಬಿಯಾ:

ಡಾ. ಶಶಿ ತರೂರ್, ತೇಜಸ್ವಿ ಸೂರ್ಯ, ಶಾಂಭವಿ, ಡಾ.ಸರ್ಫರಾಜ್ ಅಹ್ಮದ್, ಜಿ.ಎಂ. ಹರೀಶ್ ಬಾಲಯೋಗಿ, ಶಶಾಂಕ್ ಮಣಿ ತ್ರಿಪಾಠಿ, ಭುವನೇಶ್ವರ್ ಕಲಿತಾ, ಮಿಲಿಂದ್ ದಿಯೋರಾ ತರಂಜಿತ್ ಸಿಂಗ್ ಸಂಧು ಇರಲಿದ್ದಾರೆ.

  • ಗ್ರೀಸ್, ಸ್ಲೊವೇನಿಯಾ, ಲಾಟ್ವಿಯಾ ಮತ್ತು ರಷ್ಯಾ:

ಕನಿಮೋಳಿ ಕರುಣಾನಿಧಿ, ಬ್ರಿಜೇಶ್ ಚೌಟಾ, ರಾಜೀವ್ ರೈ, ಮಿಯಾನ್ ಅಲ್ತಾಫ್ ಅಹ್ಮದ್, ಆರ್‌ಜೆಡಿಯ ಪ್ರೇಮ್ ಚಂದ್ ಗುಪ್ತಾ, ಡಾ. ಅಶೋಕ್ ಕುಮಾರ್ ಮಿತ್ತಲ್, ಮಂಜೀವ್ ಸಿಂಗ್ ಪುರಿ,ಜಾವೇದ್ ಅಶ್ರಫ್ ಇರಲಿದ್ದಾರೆ.

ಈಜಿಪ್ಟ್, ಕತಾರ್, ಇಥಿಯೋಪಿಯಾ ಮತ್ತು ದಕ್ಷಿಣ ಆಫ್ರಿಕಾ:

ಸುಪ್ರಿಯಾ ಸುಳೆ, ರಾಜೀವ್ ಪ್ರತಾಪ್ ರೂಡಿ, ಅನುರಾಗ್ ಠಾಕೂರ್, ವಿಕ್ರಮ್‌ಜೀತ್ ಸಿಂಗ್ ಸಹ್ನಿ, ಮನೀಶ್ ತಿವಾರಿ, ಲಾವು ಶ್ರೀ ಕೃಷ್ಣ ದೇವರಾಯಲು, ಸೈಯದ್ ಅಕ್ಬರುದ್ದೀನ್, ಆನಂದ್ ಶರ್ಮಾ ಮತ್ತು ವಿ. ಮುರಳೀಧರನ್ ಇರಲಿದ್ದಾರೆ.

Related posts