ಬೆಂಗಳೂರು: ದೇಶದಲ್ಲೇ ಅತ್ಯುತ್ತಮ ಸಾರ್ವಜನಿಕ ಸಂಪರ್ಕಾಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಡಾ.ಲತಾ ಟಿ.ಎಸ್ ಅವರು ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಗೆ ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ರಾಜ್ಯ ಸರ್ಕಾರೀ ಸ್ವಾಮ್ಯದ ಕರ್ನಾಟಕ ರಸ್ತೆ ಸಾರಿಗೆ ನಿಗಮ (KSRTC) ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿರುವ ಡಾ.ಲತಾ ಟಿ.ಎಸ್. ಅವರು ರಾಜ್ಯ ಸರ್ಕಾರದ ಅಧೀನದ ನಿಗಮಗಳ ಸಾರ್ವಜನಿಕ ಸಂಪರ್ಕ ವ್ಯವಸ್ಥೆಯಲ್ಲಿ ಮಾದರಿ ಸೇವೆ ಸಲ್ಲಿಸಿದ್ದಾರೆ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. KSRTC ನಿಗಮ ಮತ್ತು ಸಾರ್ವಜನಿಕರ ಮಧ್ಯೆ ರಾಯಬಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಲತಾ ಟಿ.ಎಸ್. ಅವರು ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯಲ್ಲೂ ಸುದೀರ್ಘ ಕಾಲದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಯುವ ಸಾರ್ವಜನಿಕ ಸಂಪರ್ಕಾಧಿಕಾರಿಗಳಿಗೆ ಮಾದರಿಯಾಗಿರುವ ಡಾ.ಲತಾ ಅವರನ್ನು ಇದೀಗ ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಗೆ ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಮಂಡಳಿಯ ಮುಖ್ಯಸ್ಥ ಎಂ.ಬಿ.ಜಯರಾಂ ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿ ಅಧ್ಯಕ್ಷರಾದ ಗೀತಾ ಶಂಕರ್ ತಿಳಿಸಿದ್ದಾರೆ.…
Month: April 2025
ಪಾಕ್ ಸೇನೆಯಿಂದ ಕದನ ವಿರಾಮ ಉಲ್ಲಂಘನೆ; ಗುಂಡಿನ ಚಕಮಕಿ
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಗಾಡಿಯಲ್ಲಿ ಭಾರತ-ಪಾಕ್ ಸೇನೆಯ ನಡುವೆ ಗುಂಡಿನ ಚಕಮಕಿಯಾಗಿದೆ. ಗಡಿ ನಿಯಂತ್ರಣ ರೇಖೆ, ಪರ್ಗ್ವಾಲ್ ವಲಯ ಮತ್ತು ರಾಜೌರಿ ಜಿಲ್ಲೆಯ ಸುಂದರ್ಬನಿ ಮತ್ತು ನೌಶೇರಾ ವಲಯಗಳಲ್ಲಿ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ ಜಮ್ಮು ಮತ್ತು ಕಾಶ್ಮೀರದ ನಾಲ್ಕು ಜಿಲ್ಲೆಗಳ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಮತ್ತು ಅಂತರರಾಷ್ಟ್ರೀಯ ಗಡಿ (ಐಬಿ) ಪ್ರದೇಶದಲ್ಲಿ ಪಾಕಿಸ್ತಾನ ಸೈನಿಕರು ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ್ದಾರೆ. ಪಾಕಿಸ್ತಾನ ಸೈನಿಕರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಭಾರತೀಯ ಸೇನೆ ಪ್ರತಿದಾಳಿ ನಡೆಸಿ ಉತ್ತರ ನೀಡುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಕೊಲ್ಕತ್ತಾದ ಹೋಟೆಲ್ ನಲ್ಲಿ ಭೀಕರ ಅಗ್ನಿ ದುರಂತ:14 ಮಂದಿ ಸಾವು
ಕೊಲ್ಕತ್ತಾ: ಪಶ್ಚಿಮ ಬಂಗಾಲ ರಾಜಧಾನಿ ಕೊಲ್ಕತ್ತಾದ ಹೋಟೆಲ್ ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದಾರೆ. ಫಲಪತ್ತಿ ಮಚ್ಚುವಾ ಬಳಿ ಈ ದುರ್ಘಟನೆ ಸಂಭವಿಸಿದೆ. ಕಳೆದ ರಾತ್ರಿ 8.15ರ ಸುಮಾರಿಗೆ ಈ ದುರಂತ ಸಂಭವಿಸಿದ್ದು, 14 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ತಿಳಿಸಿರುವ ಕೊಲ್ಕತ್ತಾ ಪೊಲೀಸ್ ಆಯುಕ್ತ ಮನೋಜ್ ಕುಮಾರ್ ವರ್ಮಾ, ರಕ್ಷಣಾ ತಂಡಗಳು ಹಲವು ಮಂದಿಯನ್ನು ರಕ್ಷಿಸಿವೆ ಎಂದು ತಿಳಿಸಿದ್ದಾರೆ.
ಡಿಜಿಟಲ್ ಮಾಧ್ಯಮಕ್ಕೆ ಶಕ್ತಿ ತುಂಬಿದ ಸಿಎಂ: ಕೆ.ವಿ ಪ್ರಭಾಕರ್’ಗೆ KSDMF ಸನ್ಮಾನ
ಬೆಂಗಳೂರು: ಡಿಜಿಟಲ್ ಮಾಧ್ಯಮಕ್ಕೆ ಜಾಹಿರಾತು ನೀಡಲು ರಾಜ್ಯದಲ್ಲಿ ಮೊದಲ ಬಾರಿಗೆ ಡಿಜಿಟಲ್ ಜಾಹೀರಾತು ನೀತಿ-2024 ಜಾರಿಗೊಳಿಸಿರುವುದು ನಮಗೆ ಶಕ್ತಿತುಂಬಿದೆ. ಈ ಹಿನ್ನೆಲೆಯಲ್ಲಿ ಶೀಘ್ರ ಬೆಂಗಳೂರಿನಲ್ಲಿ ವಿಶೇಷವಾದ ಡಿಜಿಟಲ್ ಮಾಧ್ಯಮ ಸಮೇಳನವನ್ನು ಹಮ್ಮಿಕೊಂಡು ರಾಷ್ಟ್ರಮಟ್ಟದ ಹಾಗೂ ಅಂತರರಾಷ್ಟ್ರೀಯ ಮಟ್ಟದ ಡಿಜಿಟಲ್ ಮಾಧ್ಯಮದ ಪತ್ರಕರ್ತರನ್ನು ಆಹ್ವಾನಿಸುವ ಚಿಂತನೆಯಿದೆ ಎಂದು ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಂ (KSDMF)ರಾಜ್ಯಾಧ್ಯಕ್ಷರಾದ ಬಿ. ಸಮೀವುಲ್ಲಾ ತಿಳಿಸಿದ್ದಾರೆ. KSDMF ವತಿಯಿಂದ ನಗರದ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ ಪ್ರಭಾಕರ್ ಹಾಗೂ ವಾರ್ತಾ ಇಲಾಖೆಯ ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಡಿಜಿಟಲ್ ಮಾಧ್ಯಮ ನೀತಿಯಿಂದಾಗಿ ಬೇರೆ ಪತ್ರಿಕೆ, ಟಿವಿಯಂತೆ ಡಿಜಿಟಲ್ ಮಾಧ್ಯಮವು ಪತ್ರಿಕೋದ್ಯಮದ ಭಾಗವೆಂದು ಅಧಿಕೃತವಾಗಿದೆ. ದೇಶದಲ್ಲಿ ಡಿಜಿಟಲ್ ಪಾಲಿಸಿ ಕೆಲವು ರಾಜ್ಯಗಳಲ್ಲಿ ಇದೆಯಾದರೂ ನಮ್ಮ ರಾಜ್ಯದಲ್ಲಿ ಈ ನೀತಿ ಸಮಗ್ರವಾಗಿದ್ದು, ವೃತ್ತಿಪರವಾಗಿ ರಚನೆಯಾಗಿದೆ ಎಂದರು.…
ನ್ಯಾಷನಲ್ ಕ್ರಿಕೆಟ್ ಹೀರೊ ಆದ 14ರ ಕುವರ ವೈಭವ್ ಸೂರ್ಯವಂಶಿ
ನವದೆಹಲಿ: ಸೋಮವಾರ ರಾತ್ರಿ 14 ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕ ಗಳಿಸುವ ಮೂಲಕ ತನ್ನ ಹೆಸರನ್ನು ದಾಖಲಿಸಿದಾಗ ಇಂಟರ್ನೆಟ್ ಭರಾಟೆ ಜೋರಾಗಿತ್ತು. ಈ ಹಿಂದೆ ದಾಖಲೆ ಹೊಂದಿದ್ದ ಯೂಸುಫ್ ಪಠಾಣ್ ಸೇರಿದಂತೆ ಕ್ರಿಕೆಟ್ ವಲಯದ ಎಲ್ಲರೂ ಸಾಮಾಜಿಕ ಮಾಧ್ಯಮಗಳಲ್ಲಿ ಯುವಕನ ಅದ್ಭುತ ರಾತ್ರಿಯನ್ನು ಶ್ಲಾಘಿಸಿದ್ದಾರೆ. 𝗟𝗲𝗮𝘃𝗶𝗻𝗴 𝗮 𝗹𝗮𝘀𝘁𝗶𝗻𝗴 𝗶𝗺𝗽𝗿𝗲𝘀𝘀𝗶𝗼𝗻 🤩 Praise of the highest order for the sensational Vaibhav Suryavanshi 👏🩷#TATAIPL | #RRvGT | @rajasthanroyals pic.twitter.com/K1McsTVQU8 — IndianPremierLeague (@IPL) April 29, 2025 ರಾಜಸ್ತಾನ್ ರಾಯಲ್ಸ್ ತಂಡದ ವೈಭವ್ ಸೂರ್ಯವಂಶಿ ಗುಜರಾತ್ ಟೈಟಾನ್ಸ್ ವಿರುದ್ಧದ ಸೋಮವಾರದ ಪಂದ್ಯದಲ್ಲಿ 101 ರನ್ಗಳಲ್ಲಿ 94 ರನ್ಗಳನ್ನು ಭಾರಿಸಿದ್ದಾರೆ. 11 ಸಿಕ್ಸರ್ಗಳು ಮತ್ತು ಏಳು ಬೌಂಡರಿಗಳೊಂದಿಗೆ ಗಳಿಸಿದ್ದು ಇನ್ನೂ ಹೆಚ್ಚು ಆಕರ್ಷಕವಾಗಿತ್ತು. ಯಶಸ್ವಿ ಜೈಸ್ವಾಲ್ ಅವರೊಂದಿಗೆ…
ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕ; ವೈಭವ್ ಸೂರ್ಯವಂಶಿ ಹೊಸ ದಾಖಲೆ
ನವದೆಹಲಿ: ಸೋಮವಾರ ರಾತ್ರಿ 14 ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕ ಗಳಿಸುವ ಮೂಲಕ ತನ್ನ ಹೆಸರನ್ನು ದಾಖಲಿಸಿದಾಗ ಇಂಟರ್ನೆಟ್ ಭರಾಟೆ ಜೋರಾಗಿತ್ತು. ಈ ಹಿಂದೆ ದಾಖಲೆ ಹೊಂದಿದ್ದ ಯೂಸುಫ್ ಪಠಾಣ್ ಸೇರಿದಂತೆ ಕ್ರಿಕೆಟ್ ವಲಯದ ಎಲ್ಲರೂ ಸಾಮಾಜಿಕ ಮಾಧ್ಯಮಗಳಲ್ಲಿ ಯುವಕನ ಅದ್ಭುತ ರಾತ್ರಿಯನ್ನು ಶ್ಲಾಘಿಸಿದ್ದಾರೆ. Youngest to score a T20 1⃣0⃣0⃣ ✅ Fastest TATA IPL hundred by an Indian ✅ Second-fastest hundred in TATA IPL ✅ Vaibhav Suryavanshi, TAKE. A. BOW 🙇 ✨ Updates ▶ https://t.co/HvqSuGgTlN#TATAIPL | #RRvGT | @rajasthanroyals pic.twitter.com/sn4HjurqR6 — IndianPremierLeague (@IPL) April 28, 2025 ರಾಜಸ್ತಾನ್ ರಾಯಲ್ಸ್ ತಂಡದ ವೈಭವ್ ಸೂರ್ಯವಂಶಿ ಗುಜರಾತ್ ಟೈಟಾನ್ಸ್ ವಿರುದ್ಧದ ಸೋಮವಾರದ ಪಂದ್ಯದಲ್ಲಿ 101 ರನ್ಗಳಲ್ಲಿ…
ಪಹಲ್ಗಾಮ್ ದಾಳಿ ಬಗ್ಗೆ ತನಿಖೆ ಚುರುಕು: ಉಗ್ರರ ಸುಳಿವು ನೀಡಿದರೆ 20 ಲಕ್ಷ ಬಹುಮಾನ
ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿ ನಂತರ ಸೇನಾಕಾರ್ಯಾಚರಣೆ ಬಿರುಸುಗೊಂಡಿದೆ. ಅದರ ಜಿತೆಯಲ್ಲೇ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕೆಕೂಡಾ ತನಿಖೆಯನ್ನು ಚುರುಕುಗೊಳಿಸಿದೆ. ಕಾಶ್ಮೀರದ ವಿವಿಧೆಡೆ 12ಕ್ಕೂ ಹೆಚ್ಚು ಉಗ್ರರ ಇರುವಿಕೆಯನ್ನು ಗುರುತಿಸಿರುವ ತನಿಖಾ ತಂಡಗಳು ಅವರ ಪತ್ತೆಗಾಗಿ ಕಾರ್ಯಾಚರಣೆಯಲ್ಲಿ ತೊಡಗಿದೆ. ಈ ನಡುವೆ, ಎಂಟು ಮಂದಿ ಲಷ್ಕರ್-ಎ-ತೋಯ್ಬಾ( LET) ಮತ್ತು ಹಾಗೂ ಮೂವರು ಜೈಶ್-ಎ-ಮೊಹಮ್ಮದ್ ಮತ್ತು ಮೂವರು ಹಿಜ್ಬುಲ್ ಮುಜಾಹಿದೀನ್ ಸಂಘಟನೆಗೆ ಸೇರಿದ ಶಂಕಿತರು ಪಹಲ್ಗಾಮ್ ದಾಳಿಗೆ ನೆರವು ನೀಡಿದ್ದಾರೆ ಎಂಬ ಸಂಗತಿಯನ್ನು ತನಿಖಾಧಿಕಾರಿಗಳು ಪತ್ತೆ ಮಾಡಿದ್ದಾರೆ. ಈ ನಡುವೆ, ಶಂಕಿತ ಉಗ್ರರಾದ ಅಲಿ ಭಾಯಿ ಮತ್ತು ಹಾಶಿಮ್ ಮೂಸಾ ಮತ್ತು ಆದಿಲ್ ಹುಸೇನ್ ಥೋಕರ್ ರೇಖಾಚಿತ್ರಗಳನ್ನು ಬಿಡುಗಡೆ ಮಾದಲಾಗಿದ್ದು ಇವರ ಸುಳಿವು ನೀಡಿದವರಿಗೆ ತಲಾ 20 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ.
‘ಮಾಧುರಿ ದೀಕ್ಷಿತ್ ಅವರ ನೃತ್ಯವೇ ಸ್ಫೂರ್ತಿ’ ಎಂದ ಸಂದೀಪಾ ಧಾರ್
ಮುಂಬೈ: ಅಂತರರಾಷ್ಟ್ರೀಯ ನೃತ್ಯ ದಿನವನ್ನು ಆಚರಿಸುವ ಹೊತ್ತಲ್ಲೇ, ನಟಿ ಸಂದೀಪ ಧಾರ್ ನೃತ್ಯದೊಂದಿಗಿನ ತನ್ನ ಜೀವಮಾನದ ಸಂಬಂಧವನ್ನು – ಮತ್ತು ಆ ಉತ್ಸಾಹವನ್ನು ಮೊದಲು ಹೊತ್ತಿಸಿದ ಏಕೈಕ ಹೆಸರು ಮಾಧುರಿ ದೀಕ್ಷಿತ್ ಬಗ್ಗೆ ಪ್ರತಿಬಿಂಬಿಸಿದರು. “ಚಲನೆಯಲ್ಲಿ ಆಳವಾದ ಪ್ರಾಮಾಣಿಕತೆಯಿದೆ, ಅದನ್ನು ಪದಗಳು ಹೆಚ್ಚಾಗಿ ಸೆರೆಹಿಡಿಯಲು ವಿಫಲವಾಗುತ್ತವೆ. ದಶಕಗಳಿಂದ, ನೃತ್ಯವು ನನ್ನ ಪವಿತ್ರ ಸ್ಥಳವಾಗಿದೆ – ಕೇವಲ ಒಂದು ಕಲಾ ಪ್ರಕಾರವಲ್ಲ, ಆದರೆ ಜಗತ್ತನ್ನು ಸಂಪೂರ್ಣವಾಗಿ ಅನುಭವಿಸುವ ಒಂದು ಮಾರ್ಗವಾಗಿದೆ,” ಎಂದು ಧರ್ ಹೇಳಿದ್ದಾರೆ. ಬೆಳೆದುಬಂದ ಮಾಧುರಿಯ ಪ್ರಯತ್ನವಿಲ್ಲದ ಕೃಪೆ ಮತ್ತು ಅಭಿವ್ಯಕ್ತಿಶೀಲ ಕಲಾತ್ಮಕತೆಯು ಮೊದಲು ಸಂದೀಪಳಿಗೆ ನೃತ್ಯದ ಪರಿವರ್ತಕ ಶಕ್ತಿಯನ್ನು ತೋರಿಸಿತು. ಮಾಧುರಿಯ ಮೇಲಿನ ತನ್ನ ಪ್ರೀತಿ ಮತ್ತು ಗೌರವವನ್ನು ವ್ಯಕ್ತಪಡಿಸಿದ ಧರ್, “ಮಾಧುರಿ ಮೇಡಂ ನೃತ್ಯವನ್ನು ನೋಡುವುದು ಕಾವ್ಯವು ಜೀವಂತವಾಗುವುದನ್ನು ವೀಕ್ಷಿಸಿದಂತೆ ಇತ್ತು. ಅವರು ಕೇವಲ ಹೆಜ್ಜೆಗಳನ್ನು ಪ್ರದರ್ಶಿಸಲಿಲ್ಲ – ಅವರು ಕಥೆಗಳನ್ನು ಹೇಳಿದರು, ಅವರು…
ಕೆನಡಾ ಚುನಾವಣೆ: ಲಿಬರಲ್ ಪಕ್ಷ ಮೇಲುಗೈ
ಒಟ್ಟಾವಾ: ಕೆನಡಾ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ (CBC) ಚುನಾವಣೆಯಲ್ಲಿ ಆಡಳಿತಾರೂಢ ಲಿಬರಲ್ ಪಾರ್ಟಿ ಆಫ್ ಕೆನಡಾ ಮೇಲುಗೈ ಸಾಧಿಸಿದೆ. “ಲಿಬರಲ್ಗಳು ಸತತ ನಾಲ್ಕನೇ ಸರ್ಕಾರವನ್ನು ರಚಿಸುತ್ತಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಲಂಡನ್ನಿನ ಸ್ಥಳೀಯ ಕಾಲಮಾನ ರಾತ್ರಿ 10:30 ರ ಹೊತ್ತಿಗೆ ಫಲಿತಾಂಶಗಳನ್ನು ಘೋಷಿಸಲಾದ 65 ಸ್ಥಾನಗಳಲ್ಲಿ 33 ಸ್ಥಾನಗಳನ್ನು ಲಿಬರಲ್ ಪಕ್ಷ ವಶಪಡಿಸಿಕೊಂಡಿತ್ತು. ಅನಂತರದಲ್ಲಿ ಸ್ಥಾನಗಳನ್ನು ಹೆಚ್ಚಿಸಿಕೊಂಡಿದೆ ಎಂದು ಹೇಳಲಾಗಿದೆ. ಖಲಿಸ್ತಾನ್ ಬೆಂಬಲಿಗ ಎಂದು ಹೇಳಲಾದ ಜಗ್ಮೀತ್ ಸಿಂಗ್ ನೇತೃತ್ವದ ನ್ಯೂ ಡೆಮಾಕ್ರಟಿಕ್ ಪಾರ್ಟಿ ರಾತ್ರಿವರೆಗೂ ಒಂದು ಸ್ಥಾನವನ್ನೂ ಗೆದ್ದಿರಲಿಲ್ಲ ಆದರೆ ಐದರಲ್ಲಿ ಮುನ್ನಡೆ ಸಾಧಿಸಿತ್ತು. ಲಿಬರಲ್ ಪಕ್ಷ ಗೆದ್ದರೆ, ಜಸ್ಟಿನ್ ಟ್ರುಡೊ ಬದಲಿಗೆ ಬಂದ ಮಾರ್ಕ್ ಕಾರ್ನಿ ಪ್ರಧಾನಿಯಾಗಿ ಮುಂದುವರಿಯುತ್ತಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ನಡುವೆ, ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆನಡಾದ ಮೇಲೆ ಸುಂಕದ ಯುದ್ಧವನ್ನು ಘೋಷಿಸಿ ಅದನ್ನು ಸ್ವಾಧೀನಪಡಿಸಿಕೊಳ್ಳುವ ಬೆದರಿಕೆ ಹಾಕಿದ ಪರಿಣಾಮವಾಗಿ…
ಪೊಲೀಸ್ ಅಧಿಕಾರಿಗೆ ‘ಕೈ’ ಎತ್ತಿದ ಸಿದ್ದರಾಮಯ್ಯ
ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶ ಗೊಂದಲದ ಗೂಡಾಗಿ ಪರಿಣಮಿಸಿತು. ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಬಿಜೆಪಿ ಕಾರ್ಯಕರ್ತೆಯರ ಪ್ರತಿಭಟನೆಯಿಂದ ಕೆರಳಿದ ಸಿಎಂ ಸಿದ್ದರಾಮಯ್ಯ ವೇದಿಕೆ ಮೇಲೆಯೇ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮೇಲೆ ರೌದ್ರಾವತಾರ ತೋರಿದ ಪ್ರಸಂಗ ನಡೆದಿದೆ. ಪಾಕಿಸ್ತಾನದ ಪರ ಸಹಾನುಭೂತಿ ಮಾತನಾಡಿ ಅಖಂಡ ಭಾರತದ ಏಕತೆಯ ನಡುವೆ ಬಿರುಕು ಮೂಡಿಸುವ ಮಾತನಾಡಿರುವ ಮುಖ್ಯಮಂತ್ರಿ @siddaramaiah ನವರ ವಿರುದ್ಧ ಇಂದು ಬೆಳಗಾವಿಯ ಕಾಂಗ್ರೆಸ್ ಸಮಾವೇಶದಲ್ಲಿ ರಾಷ್ಟ್ರಭಕ್ತ ಮಹಿಳೆಯರು ದಿಟ್ಟತನದಿಂದ ಘೋಷಣೆ ಕೂಗುವ ಮೂಲಕ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಇದರಿಂದ ವಿಚಲಿತಗೊಂಡ ಮುಖ್ಯಮಂತ್ರಿಗಳು… pic.twitter.com/8xiwMbHjqV — Vijayendra Yediyurappa (@BYVijayendra) April 28, 2025 ಪ್ರತಿಭಟನಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದಂತೆಯೇ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಕಪ್ಪು ಪಟ್ಟಿ ಪ್ರದರ್ಶಿಸಿ, ‘ಪಾಕಿಸ್ಥಾನ…