ಅಳಿಸಲಾದ ಪ್ರತಿಯೊಂದು ಮತವು ಕದ್ದ ಧ್ವನಿಯಾಗಿದೆ; ಮತಗಳ್ಳತನ ಆರೋಪ ಬಗ್ಗೆ ರಾಹುಲ್ ಹೇಳಿಕೆ

ನವದೆಹಲಿ: ಮತಗಳ್ಳತನ ಬಗ್ಗೆ ಸರಣಿ ಆರೋಪಗಳನ್ನು ಮಾಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮತದಾರರ ಪಟ್ಟಿಯಿಂದ ಹೆಸರುಗಳನ್ನೂ ಯಾವ ರೀತಿ ತೆಗೆದುಹಾಕಲಾಗಿದೆ ಎಂಬ ಬಗ್ಗೆ ವಿವರಿಸಿರುವ ವೈಖರಿ ಗಮನಸೆಳೆದಿದೆ.

ಕೇವಲ 14 ನಿಮಿಷಗಳಲ್ಲಿ, ಸೂರ್ಯಕಾಂತ್ ಹೆಸರಿನಲ್ಲಿ 12 ಮತದಾರರನ್ನು ಅಳಿಸಲಾಗಿದೆ ಎಂದು ರಾಹುಲ್ ಗಾಂಧಿ ಬೊಟ್ಟು ಮಾಡಿದ್ದಾರೆ. ಒಬ್ಬರು ಬಬಿತಾ ಚೌಧರಿ, ಅವರ ಅರಿವಿಲ್ಲದೆ ಅವರ ಧ್ವನಿಯನ್ನು ಕದ್ದಿದ್ದಾರೆ. ಸೂರ್ಯಕಾಂತ್ ಅವರಿಗೂ ತಮ್ಮ ಲಾಗಿನ್ ಬಳಸಲಾಗುತ್ತಿದೆ ಎಂದು ತಿಳಿದಿರಲಿಲ್ಲ. ಹಾಗಾದರೆ ಇದರ ಹಿಂದೆ ಯಾರು ಇದ್ದರು? ಯಾರಿಗೆ ಪ್ರವೇಶವಿತ್ತು? ಕಾಂಗ್ರೆಸ್ ಮತಗಳನ್ನು ಅಳಿಸಲು ಈ ಸಂಘಟಿತ ಪಿತೂರಿಯನ್ನು ಯಾರು ನಡೆಸುತ್ತಿದ್ದಾರೆ? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಇದು ಕ್ಲೆರಿಕಲ್ ದೋಷವಲ್ಲ. ಇದು ವ್ಯವಸ್ಥಿತ ವಂಚನೆ ಎಂದು ಆರೋಪಿಸಿರುವ ರಾಹುಲ್ ಗಾಂಧಿ, ಅಳಿಸಲಾದ ಪ್ರತಿಯೊಂದು ಮತವು ಕದ್ದ ಧ್ವನಿಯಾಗಿದೆ ಎಂದಿದ್ದಾರೆ.

Related posts