ಇಂದು ವರಮಹಾಲಕ್ಷ್ಮಿ ಹಬ್ಬ. ಎಲ್ಲೆಲ್ಲೂ ಹಬ್ಬದ ಆಚರಣೆಯ ಸೊಬಗು.. ಎಲ್ಲೆಲ್ಲೂ ಅದೃಷ್ಟ ಲಕ್ಷ್ಮಿಯ ಆರಾಧನೆಯ ಸೊಗಸು.. ಆಸ್ತಿಕ ಬಂಧುಗಳು ಮನೆಗಳಲ್ಲಿ ಲಕ್ಷ್ಮೀಯನ್ನು ಪ್ರತಿಷ್ಠಾಪಿಸಿ ವರಮಹಾ ಲಕ್ಷ್ಮಿ ಪೂಜೆಯನ್ನು ಶ್ರದ್ದಾ ಭಕ್ತಿಯಿಂದ ಆಚರಿಸುತ್ತಿದ್ದಾರೆ. ನಾಡಿನ ದೇವಾಲಯಗಳಲ್ಲೂ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದೆ. ಈ ನಡುವೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಾಡಿನ ಜನತೆಗೆ ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ‘ಈ ಹಬ್ಬವು ಎಲ್ಲರಿಗೂ ಸುಖ, ಸಂತೋಷ, ಸಮೃದ್ಧಿಗಳನ್ನು ಕರುಣಿಸಲಿ, ಎಲ್ಲ ಸಂಕಷ್ಟಗಳನ್ನು ಪರಿಹರಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಭಕ್ತಿಪೂರ್ವಕ ಶುಭಕಾಮನೆಗಳು. ಜಗನ್ಮಾತೆಯು ಎಲ್ಲರಿಗೂ ಸುಖ, ಸಂತೋಷ, ಸಮೃದ್ಧಿಗಳನ್ನು ಕರುಣಿಸಲಿ, ಎಲ್ಲ ಸಂಕಷ್ಟಗಳನ್ನು ಪರಿಹರಿಸಲಿ ಎಂದು ಪ್ರಾರ್ಥಿಸುತ್ತೇನೆ. ಕೊರೋನಾ ಹಿನ್ನಲೆಯಲ್ಲಿ ಮನೆಗಳಲ್ಲಿಯೇ ಸರಳವಾಗಿ ಹಬ್ಬವನ್ನು ಆಚರಿಸೋಣ, ಮುನ್ನೆಚ್ಚರಿಕೆಗಳನ್ನು, ಸುರಕ್ಷತಾ ನಿಯಮಗಳನ್ನು ಪಾಲಿಸೋಣ. pic.twitter.com/rADdi5vf6j — B.S.Yediyurappa…
Category: ವೈವಿದ್ಯ
ಒಂದೇ ನಂಬರ್.. 4 ಮೊಬೈಲ್’ಗಳಲ್ಲಿ ಬಳಕೆ : WhatsApp ಹೊಸ ಫೀಚರ್ ಬಗ್ಗೆ ಗೊತ್ತಾ?
ಸಾಮಾಜಿಕ ಜಾಲತಾಣಗಳ ಪೈಕಿ ಜನಸ್ನೇಹಿಯಾಗಿರುವ ವಾಟ್ಸಪ್ ಇದೀಗ ತನ್ನ ಚಂದಾದಾರರಿಗೆ ಮತ್ತಷ್ಟು ಅನುಕೂಲ ಕಲ್ಪಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಫೇಸ್’ಬುಕ್’ನ ಅಂಗ ಸಂಸ್ಥೆ ವಾಟ್ಸಪ್ ದಿಟ್ಟ ಹೆಜ್ಜೆ ಇಟ್ಟಿದೆ. ಒಂದೇ ನಂಬರಿನ ವಾಟ್ಸಪ್’ನ್ನು ನಾಲ್ಕು ಮೊಬೈಲ್ ಸೆಟ್’ಗಳಲ್ಲಿ ಆಪರೇಟ್ ಮಾಡಲು ಸಾಧ್ಯವಾಗುವ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಪ್ರಸ್ತುತ ಒಂದು ನಂಬರಿನಲ್ಲಿ ಇನ್’ಸ್ಟಾಲ್ ಮಾಡಿರುವ ವಾಟ್ಸಪ್’ನ ಆಪ್ ಅದೇ ಹೊತ್ತಿಗೆ ಬೇರೋದು ಸೆಟ್’ನಲ್ಲಿ ಬಳಸಲು ಸಾಧ್ಯವಿಲ್ಲ. ಒಂದು ಮೊಬೈಲ್ ಸೆಟ್ ಹಾಗೂ ನಿಗದಿತ ಅಂತರದಲ್ಲಿ ಒಂದು ವೆಬ್ ವಾಟ್ಸಾಪ್ ಮೂಲಕ ಬಳಕೆ ಸಾಧ್ಯವಿದೆ. ಇನ್ನು ಮುಂದೆ ಮಲ್ಟಿ ಡಿವೈಸ್ ಫೀಚರನ್ನು ನೀಡಲು ವಾಟ್ಸಪ್ ಮುಂದಾಗಿದೆ. ಈ ಮೂಲಕ ಯಾರಾದರೂ ತಮ್ಮ ಒಂದೇ ವಾಟ್ಸಪ್ ನಂಬರನ್ನು ಏಕಕಾಲದಲ್ಲಿ ನಾಲ್ಕು ಬೇರೆಬೇರೆ ಡಿವೈಸ್ ಗಳಲ್ಲಿ ಬಳಸಲು ಅನುಕೂಲವಾಗಲಿದೆ. ಸಧ್ಯ ವಾಟ್ಸಪ್ ಬಿಟಾ ಆವೃತ್ತಿಯಲ್ಲಿ ಈ ಫೀಚರ್ ಲಭ್ಯವಿದ್ದು, ಶೀಘ್ರದಲ್ಲೇ ಎಲ್ಲರೂ…
ಪೈನಾಪಲ್ ದೋಸಾ.. ಸ್ವಾದಿಷ್ಟದ ಖಾದ್ಯ
ನಳಪಾಕ ಪ್ರವೀಣರು ಏನು ಮಾಡಿದರೂ ಸ್ವಾದಿಷ್ಟ. ಆ ಪಟ್ಟಿಯಲ್ಲಿದೆ ಅನಾನಾಸು ದೋಸೆ. ಅನಾನಾಸು ಕೇವಲ ಹಣ್ಣಲ್ಲ, ಜ್ಯುಸ್ ಅಷ್ಟೇ ಅಲ್ಲ, ತಿಂಡಿ ತಿನಿಸಿಗೂ ಈ ಹಣ್ಣು ಸೂಕ್ತ. ಇದೇ ಹಣ್ಣಿನ ದೋಸೆ ಕೂಡಾ ಬಲು ರುಚಿ. ಇದನ್ನು ಮಾಡುವ ವಿಧಾನವೂ ಸುಲಭ.. ಬೇಕಾದ ಸಾಮಾಗ್ರಿ: ದೋಸೆ ಅಕ್ಕಿ 2 ಕಪ್ ಅನಾನಾಸು 1 ಕಪ್ ಉಪ್ಪು ರುಚಿಗೆ ತಕ್ಕಷ್ಟು ಮಾಡುವ ವಿಧಾನ: ದೋಸೆ ಅಕ್ಕಿಯನ್ನು 4 ಗಂಟೆ ಅಥವಾ ರಾತ್ರಿ ಇಡಿ ನೆನೆ ಹಾಕಿ. ನಂತರ ಒಂದು ಜಾರಿನಲ್ಲಿ ನೆನೆ ಹಾಕಿದ ಅಕ್ಕಿ, ತುಂಡು ಮಾಡಿಕೊಂಡ ಅನಾನಸ್, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಬೇಕಾದಲ್ಲಿ ನೀರು ಹಾಕಿ ಹಿಟ್ಟಿನ ಹದ ಮಾಡಿಕೊಳ್ಳಬೇಕು. ಬಿಸಿ ಬಿಸಿ ಕಾವಲಿಗೆ ಹಿಟ್ಟನ್ನು ಹಾಕಿ ದೋಸೆ ಎರೆದು ಬೇಯಿಸಿ. ಬೇಯಿಸುವಾಗ ತುಪ್ಪ ಅಥವಾ ಎಣ್ಣೆ…
ಮಾವಿನ ದೋಸೆಯ ಸವಿ.. ಆಹಾ..
ಹಬ್ಬಗಳು ಸಾಲು ಸಾಲಾಗಿ ಬರುತ್ತಿವೆ. ಖಾದ್ಯಗಳ ಪಟ್ಟಿಯೂ ಬೆಳೆಯುತ್ತಿವೆ. ಆ ಆ ಪಟ್ಟಿಗೆ ಮಾವಿನ ದೋಸೆ ಸೇರ್ಪಡೆಯಾಗಿದೆ. ಮಾವು ಯಾರಿಗೆ ತಾನೇ ಇಷ್ಟವಿಲ್ಲ? ಅದರ ಖಾದ್ಯಗಳೂ ಅಷ್ಟೇ ರುಚಿ. ಅದರಲ್ಲೂ ಮಾವಿನ ದೋಸೆಯ ಸವಿ.. ಆಹಾ.. ಇದನ್ನು ಮಾಡುವ ವಿಧಾನವೂ ಬಲು ಸುಲಭ ಬೇಕಾದ ಸಾಮಾಗ್ರಿ ದೋಸೆ ಅಕ್ಕಿ 2 ಕಪ್ ಮಾವಿನಹಣ್ಣು 1 ಕಪ್ ಉಪ್ಪು ರುಚಿಗೆ ತಕ್ಕಷ್ಟು ಮಾಡುವ ವಿಧಾನ ದೋಸೆ ಅಕ್ಕಿಯನ್ನು 4 ಗಂಟೆ ಅಥವಾ ರಾತ್ರಿ ಇಡಿ ನೆನೆ ಹಾಕಿ. ನಂತರ ಒಂದು ಜಾರಿನಲ್ಲಿ ನೆನೆ ಹಾಕಿದ ಅಕ್ಕಿ, ತುಂಡು ಮಾಡಿಕೊಂಡ ಮಾವಿನಹಣ್ಣು, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಬೇಕಾದಲ್ಲಿ ನೀರು ಹಾಕಿ ಹಿಟ್ಟಿನ ಹದ ಮಾಡಿಕೊಳ್ಳಬೇಕು. ಬಿಸಿ ಬಿಸಿ ಕಾವಲಿಗೆ ಹಿಟ್ಟನ್ನು ಹಾಕಿ ದೋಸೆ ಎರೆದು ಬೇಯಿಸಿ. ಬೇಯಿಸುವಾಗ ತುಪ್ಪ ಅಥವಾ…
ಅರಿಶಿನ ಎಲೆ ಗಟ್ಟಿ; ಹಬ್ಬಕ್ಕೆ ಸ್ವಾದಿಷ್ಟದ ಮೆರಗು
ಹಬ್ಬಗಳು ಸಾಲು ಸಾಲಾಗಿ ಬರುತ್ತಿವೆ. ಪ್ರತೀ ಹಬ್ಬಗಳನ್ನೂ ಒಂದೊಂದು ಖಾದ್ಯದ ವಿಶೇಶದೊಂದಿಗೆ ಗುರುತಿಸಲಾಗುತ್ತಿದೆ. ಅದರಲ್ಲೂ ನಾಗರ ಪಂಚಮಿ ಹಾಗೂ ಶ್ರಾವಣ ಮಾಸದ ಹಬ್ಬಗಳಲ್ಲಿ ಅರಿಶಿನ ಎಲೆ ಗಟ್ಟಿ ಅಥವಾ ಕಡುಬು ಗಮನಸೆಳೆಯುತ್ತವೆ. .ಅರಿಶಿನ ಔಷಧಿಯುಕ್ತ ಸಸ್ಯ. ಅದರ ಎಲೆ ಪರಿಮಳ ಕೂಡಾ. ಅದರ ಎಳೆಯಲ್ಲಿ ಮಾಡಿದ ಗಟ್ಟಿ ಅಥವಾ ಕಡುಬು ಸ್ವಾದಿಷ್ಟ ಖಾದ್ಯ. ಇದನ್ನು ಮಾಡುವ ವಿಧಾನ ಕೂಡಾ ಬಲು ಸುಲಭ.
‘ಮ್ಯಾಂಗೋ ಫ್ರೂಟಿ’ ಮಾಡೋ ವಿಧಾನ ಬಲು ಸುಲಭ;
ಮಾವಿನ ಹಣ್ಣು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.. ಸಿಹಿಯಾದ ರುಚಿಯಾದ ಮಾವಿನ ಹಣ್ಣಿನಿಂದ ಜ್ಯುಸ್ ಅಷ್ಟೇ ಅಲ್ಲ, ಹಲವಾರು ಖಾದ್ಯಗಳನ್ನೂ ತಯಾರಿಸಬಹುದು. ಅದರಲ್ಲೂ ‘ಮ್ಯಾಂಗೋ ಫ್ರೂಟಿ’ ಅಂದ್ರೆ ಎಲ್ಲರ ಬಾಯಲ್ಲೂ ನೀರೂರಿಸುತ್ತೆ. ಈ ‘ಮ್ಯಾಂಗೋ ಫ್ರೂಟಿ’ ಮಾಡೋ ವಿಧಾನವೂ ಬಲು ಸುಲಭ. ಒಂದಿಷ್ಟು ಸಮಯ ಹೊಂದಿಸಿಕೊಂಡು ಮನೆಯಲ್ಲೇ ‘ಮ್ಯಾಂಗೋ ಫ್ರೂಟಿ’ ತಯಾರಿಸಿ ರುಚಿ ಸವಿಯಿರಿ.. ಇದನ್ನೂ ಮಾಡಿ ರುಚಿ ನೋಡಿ.. ನೈಸರ್ಗಿಕ ಸೊಪ್ಪಿನ ‘ಪತ್ರೊಡೆ..’ ರುಚಿಯಷ್ಟೇ ಅಲ್ಲ ಆರೋಗ್ಯಪೂರ್ಣ ಖಾದ್ಯ
ಮನೆಗಾಗಿ ಪೂಜಿಸಿದ್ದು ದೇವರನ್ನು, ವರ ನೀಡಿದ್ದು ಪೂಜಾರಿ; ಬಡಪಾಯಿಗೆ ಮನೆ ನಿರ್ಮಿಸಿಕೊಟ್ಟ ಉದ್ಯಮಿ
ಉಡುಪಿ: ಬದುಕಿನಲ್ಲಿದ್ದಾಗ ಮದುವೆ ಮಾಡಿಕೊಳ್ಳಬೇಕು, ಮನೆ ಕಟ್ಟಿಕೊಳ್ಳಬೇಕು ಎಂಬುದು ನಾಣ್ಣುಡಿ. ಆದರೆ ಬಹಳಷ್ಟು ಮಂದಿಯ ಪಾಲಿಗೆ ಈ ಹೆಗ್ಗುರಿ ಕನಸಾಗಿಯೇ ಉಳಿಯುತ್ತದೆ. ಈ ಕನಸು ನನಸಾಗಲು ಅವೆಷ್ಟೋ ಬಡಪಾಯಿಗಳು ನಿತ್ಯ ದೇವರ ಜಪ, ಪೂಜೆ ಮಾಡ್ತಾರೆ. ಅಂತಹಾ ಅಸಹಾಯಕ ಕುಟುಂಬವೊಂದು ದೇವರ ಪ್ರಾರ್ಥನೆಯಲ್ಲಿದ್ದಾಗ ದೇವರಂತೆ ಮುಂದೆ ಬಂದು ನಿಂತವರು ಜನಾನುರಾಗಿ ಉದ್ಯಮಿ. ಹೌದು, ಊರಿಗೆಲ್ಲಾ ಊಟೋಪಚಾರ ನೀಡುವ ಕಾಯಕದಲ್ಲಿ ತೊಡಗಿರುವ ಉದ್ಯಮಿ ಗೋವಿಂದ ಬಾಬು ಪೂಜಾರಿಯವರು ಉಡುಪಿ ಜಿಲ್ಲೆ ಉಪ್ಪುಂದದ ಬಾಯಂಹಿತ್ಲುವಿನಲ್ಲಿ ಬಡ ಕುಟುಂಬವೊಂದಕ್ಕೆ ಸುಂದರವಾದ ಮನೆ ನಿರ್ಮಿಸಿ ಕೊಟ್ಟು ಮಾದರಿಯಾಗಿದ್ದಾರೆ. ಬೈಂದೂರಿನ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್’ನ ಮುಖ್ಯಸ್ಥರೂ ಆಗಿರುವ ಗೋವಿಂದ ಬಾಬು ಪೂಜಾರಿ ಬೆಂಗಳೂರು, ಮುಂಬೈ, ಹೈದರಾಬಾದ್ ಸೇರಿದಂತೆ ದೇಶದ ಹಲವಾರು ನಗರಗಳಲ್ಲಿ ಪರ್ಯಟನೆ ನಿರತರಾಗಿರುವವರು. ಮಾರ್ಚ್-ಏಪ್ರಿಲ್ ವೇಳೆ ಕೊರೋನಾ ಸಂದರ್ಭದಲ್ಲಿ ಕುಂದಾಪುರಕ್ಕೆ ಭೇಟಿ ನೀಡಿದ್ದ ಅವರು ಲಾಕ್’ಡೌನ್ ಜಾರಿಯಾದ ಕಾರಣ ಅಲ್ಲೇ ಕೆಲ…
ನೈಸರ್ಗಿಕ ಸೊಪ್ಪಿನ ‘ಪತ್ರೊಡೆ..’ ರುಚಿಯಷ್ಟೇ ಅಲ್ಲ ಆರೋಗ್ಯಪೂರ್ಣ ಖಾದ್ಯ
ಕರಾವಳಿಯ ವಿಶಿಷ್ಟ ತಿಂಡಿಗಳಲ್ಲಿ ಪತ್ರೊಡೆ ಕೂಡಾ ಒಂದು. ಮಳೆಗಾಲದ ತಿಂಡಿ ಎಂದೇ ಅದನ್ನು ಹೇಳಲಾಗುತ್ತಿದೆ. ಮಳೆಗಾಲದ ಸಂದರ್ಭದಲ್ಲಿ ಸಿಗುವ ಹಲಸು, ಕೇಸು, ಅಣಬೆ ಹಾಗೂ ಇನ್ನಿತರೇ ಸೊಪ್ಪುಗಳಿಂದ ಬಗೆ ಬಗೆಯ ಖಾದ್ಯಗಳನ್ನು ತಯಾರಿಸುವ ಕರಾವಳಿ ಪಾಕ ಪ್ರವೀಣರು, ನೈಸರ್ಗಿಕವಾಗಿ ಬೆಳೆಯುವ ಕೆಸುವಿನಿಂದ ಪತ್ರೊಡೆ ತಯಾರಿಸುತ್ತಾರೆ. ಪತ್ರೊಡೆ ರುಚಿಯಷ್ಟೇ ಅಲ್ಲ ಆರೋಗ್ಯಪೂರ್ಣ ಖಾದ್ಯವೂ ಹೌದು. ಇದನ್ನು ತಯಾರಿಸುವ ವಿಧಾನವೂ ಬಲು ಸುಲಭ. ಇದನ್ನೂ ಮಾಡಿ ರುಚಿ ನೋಡಿ.. ‘ಬಾಳೆ ಹಣ್ಣಿನ ದೋಸೆ’.. ಶಕ್ತಿ-ಚೈತನ್ಯಕ್ಕೆ ಸೂಕ್ತ ಈ ಖಾದ್ಯ
ರುಚಿಯಾದ ಪಪ್ಪಾಯ ಲಡ್ಡು ತಯಾರಿ ಬಲು ಸುಲಭ
ಪಪ್ಪಾಯ ಕೇವಲ ಹಣ್ಣಷ್ಟೆ ಅಲ್ಲ. ಅದು ಔಷಧಿ ಕೂಡಾ ಹೌದು. ಜ್ಯುಸ್ ಅಥವಾ ಸಲಾಡ್’ಗೆ ಉಪಯುಕ್ತ ಅಂದುಕೊಂಡಿರುವ ಪಪ್ಪಾಯದಿಂದ ಸಿಹಿತಿಂಡಿ ಮಾಡಲೂ ಸಾಧ್ಯವಿದೆ. ಅದರಲ್ಲೂ ಪಪ್ಪಾಯ ಲಡ್ಡು ತಯಾರಿ ಬಲು ಸುಲಭ.. ಬೇಕಾದ ಸಾಮಾಗ್ರಿ ಪಪ್ಪಾಯ ರಸ 2 ಕಪ್ ಉಪ್ಪು ಒಂದು ಚಿಟಿಕೆ ತೆಂಗಿನಕಾಯಿ ಹುಡಿ 1 ವರೆ ಕಪ್ ತುಪ್ಪ 5 ಚಮಚ ಏಲಕ್ಕಿ ಪುಡಿ 1 ಚಮಚ ಕಾರ್ನ್ ಹುಡಿ 1 ಚಮಚ ಮಾಡುವ ವಿಧಾನ ಮೊದಲಿಗೆ ಪಪ್ಪಾಯ ಸಿಪ್ಪೆ ಮತ್ತು ಬೀಜ ತೆಗೆದು ತುಂಡು ಮಾಡಿಕೊಳ್ಳಬೇಕು. ಒಂದು ಜಾರಿನಲ್ಲಿ ತುಂಡು ಮಾಡಿಕೊಂಡ ಪಪ್ಪಾಯ ಹಾಕಿ ನುಣ್ಣಗೆ ರುಬ್ಬಿಕೊಂಡಾಗ ರಸ ಸಿದ್ಧವಾಗುತ್ತದೆ. ನಂತರ ಒಂದು ಕಾಡಾಯಿ ಅಥವಾ ಬಾಣಲೆಯಲ್ಲಿ ಪಪ್ಪಾಯ ರಸ ಹಾಕಿ 5 ರಿಂದ 10 ನಿಮಿಷಗಳ ಕಾಲ ಇಡಬೇಕು. ಅದಕ್ಕೆ ಒಂದು ಚಿಟಿಕೆ ಉಪ್ಪು, ತೆಂಗಿನ ಹುಡಿ ಹಾಕಿ ಚೆನ್ನಾಗಿ…
ಬದನೆ ಸುಟ್ಟು ಗೊಜ್ಜು ಮಾಡುವ ವಿಧಾನ
ಹಳ್ಳಿ ಸೊಗಡಿನ ಊಟ ಅಂದ್ರೆ ಅದು ಭರ್ಜರಿ ಭೋಜನ. ಬಗೆ ಬಗೆಯ ಖಾದ್ಯಗಳನ್ನು ಊಹಿಸಿದರೆ ಸಾಕು, ಮತ್ತೆ ಹಳ್ಳಿಗೆ ಹೋಗಬೇಕೆನಿಸುತ್ತದೆ. ಈ ಹಳ್ಳಿ ತಿಂಡಿ ತಯಾರಿ ವಿಧಾನವೂ ಸುಲಭ. ಬದನೆ ಸುಟ್ಟು ಗೊಜ್ಜು ಮಾಡುವ ವಿಧಾನ ಇಲ್ಲಿದೆ. ಬದನೆ ಸುಟ್ಟು ಗೊಜ್ಜು ಬೇಕಾದ ಸಾಮಗ್ರಿ ಬದನೆ 2 ಕಾಯಿಮೆಣಸು 1 ಬೆಲ್ಲ 5 ಚಮಚ ನೀರು 1 ಗ್ಲಾಸ್ ಹುಳಿ 1 ನಿಂಬೆ ಗ್ರಾತ್ರದಷ್ಟು ಉಪ್ಪು ರುಚಿಗೆ ತಕ್ಕಷ್ಟು ಎಣ್ಣೆ 4 ಚಮಚ ಬೆಳ್ಳುಳ್ಳಿ 5-6 ಸಾಸಿವೆ 1 ಚಮಚ ಕರಿಬೇವು ಮಾಡುವ ವಿಧಾನ ಬದನೆಕಾಯಿಯನ್ನು ತೊಳೆದು ಅದನ್ನು ಬೆಂಕಿಯಲ್ಲಿ ಸುಟ್ಟು ಹಾಕಬೇಕು. ಬದನೆ ಬೇಯುವ ವರೆಗೂ ಸುಡಬೇಕು. ಹೊರಗಿನ ಸಿಪ್ಪೆ ತೆಗೆದು ಚೆನ್ನಾಗಿ ಕಿವುಚಬೇಕು. ನಂತರ ಅದಕ್ಕೆ ಹುಳಿ, ಬೆಲ್ಲ, ಕಾಯಿಮೆಣಸು, ಎಷ್ಟು ಬೇಕೋ ಅಷ್ಟು ನೀರು, ಉಪ್ಪು ಸೇರಿಸಬೇಕು. ಒಂದು ಸಣ್ಣ ಬಾಣಲೆಯಲ್ಲಿ ಎಣ್ಣೆ,…
