RSS ಇಲ್ಲದಿದ್ದರೆ ಭಾರತ ಮುಸ್ಲಿಂ ರಾಷ್ಟ್ರವಾಗುತ್ತಿತ್ತು: ಜಗದೀಶ್ ಶೆಟ್ಟರ್

ಹುಬ್ಬಳ್ಳಿ: “ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಇಲ್ಲದಿದ್ದರೆ ಇವತ್ತಿಗೆ ಭಾರತ ಮುಸ್ಲಿಂ ರಾಷ್ಟ್ರವಾಗುತ್ತಿತ್ತು” ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಬೆಳಗಾವಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “RSS ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು. ಅವರಿಗೇ ಸಂಘದ ಬಗ್ಗೆ ಏನು ಅರಿವು ಇದೆ?” ಎಂದು ಪ್ರಶ್ನಿಸಿದರು.

“ಶತಮಾನಗಳ ಇತಿಹಾಸ ಹೊಂದಿರುವ ಶಿಸ್ತಿನ ಸಂಘಟನೆ ಇದಾಗಿದೆ. ದೇಶದಲ್ಲಿ ಹಿಂದೂ ಸಮುದಾಯದ ಏಕತೆ ಹಾಗೂ ಸಂಸ್ಕೃತಿಯ ಉಳಿವಿಗೆ ಸಂಘವೇ ಆಧಾರ. ಕಾಂಗ್ರೆಸ್ ನಾಯಕರು, ವಿಶೇಷವಾಗಿ ಖರ್ಗೆ ಹಾಗೂ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಹಾಗೂ RSS ವಿರುದ್ಧ ಕೆಟ್ಟ ಪದಗಳನ್ನು ಬಳಸುತ್ತಿದ್ದಾರೆ. ಧಾನ್ಯರಾಗಬೇಕೆಂದು ಬಯಸುವವರು ಇಂತಹ ಮಟ್ಟಕ್ಕೆ ಇಳಿಯಬಾರದು,” ಎಂದು ಶೆಟ್ಟರ್ ವಾಗ್ದಾಳಿ ನಡೆಸಿದರು.

“ಕಾಂಗ್ರೆಸ್‌ ಪಕ್ಷದ ನಾಯಕರಿಗೆ RSS ವಿರುದ್ಧ ದ್ವೇಷ ಹರಡುವುದೇ ಈಗ ಕೆಲಸವಾಗಿದೆ. ಮುಸ್ಲಿಂ ಸಮುದಾಯದ ಮತ ಲಾಭಕ್ಕಾಗಿ ಸಂಘದ ವಿರುದ್ಧ ಟೀಕಿಸುತ್ತಿದ್ದಾರೆ. ಆದರೆ ಅವರ ಟೀಕೆಗಳಿಂದ RSSಗೆ ಯಾವುದೇ ಧಕ್ಕೆಯಾಗದು,” ಎಂದು ಶೆಟ್ಟರ್ ಹೇಳಿದರು.

Related posts