ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮತ್ತಷ್ಟು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ. 35 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿ ಬಹಿರಂಗವಾಗಿದ್ದು, ಅನುಪಮ್ ಅಗರ್ವಾಲ್ ಅವರನ್ನು ಮಂಗಳೂರು ಪೊಲೀಸ್ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ. ಮಂಗಳೂರು ಆಯುಕ್ತರಾಗಿ ಈ ವರೆಗೂ ಕುಲದೀಪ್ ಕುಮಾರ್ ಜೈನ್ ಕಾರ್ಯನಿರ್ಹಿಸುತ್ತಿದ್ದರು.
ಇದೇ ವೇಳೆ, ಬೆಂಗಳೂರು ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಎಸ್. ಡಿ ಶರಣಪ್ಪ ಅವರನ್ನು ಡಿಐಜಿಪಿ ಪೊಲೀಸ್ ಅಕಾಡೆಮಿ ಮೈಸೂರಿಗೆ ವರ್ಗಾಯಿಸಲಾಗಿದೆ. ಇದೇ ವೇಳೆ ಬೆಂಗಳೂರಿನ ಬಹುತೇಕ ಡಿಸಿಪಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ವರ್ಗಾವಣೆ ಪಟ್ಟಿ ಹೀಗಿದೆ:
ಅನುಪಮ್ ಅಗರ್ವಾಲ್-ಮಂಗಳೂರು ಸಿಟಿ ಕಮಿಷನರ್
ಡಾ.ಶರಣಪ್ಪ-ಡಿಐಜಿಪಿ & ಡೈರೆಕ್ಟರ್, ಪೊಲೀಸ್ ಅಕಾಡೆಮಿ, ಮೈಸೂರು
ಪಿ.ಕೃಷ್ಣಕಾಂತ್-ಎಐಜಿಪಿ(ಆಡಳಿತ ವಿಭಾಗ)
ಕೆ.ಸಂತೋಷ್ ಬಾಬು-ಡಿಸಿಪಿ ಆಡಳಿತ ವಿಭಾಗ, ಬೆಂಗಳೂರು ನಗರ,
ಅಬ್ದುಲ್ ಅಹದ್-ಡಿಸಿಪಿ, ಬೆಂಗಳೂರು ಕೇಂದ್ರ ವಿಭಾಗ
ಆರ್.ಶ್ರೀನಿವಾಸ್ ಗೌಡ- ಡಿಸಿಪಿ 2, ಸಿಸಿಬಿ ಬೆಂಗಳೂರು,
ಶೇಖರ್.ಹೆಚ್.ತೆಕ್ಕನ್ನವರ್, ಡಿಸಿಪಿ, ಸಿಸಿಬಿ ಬೆಂಗಳೂರು,
ಕಾರ್ತಿಕ್ ರೆಡ್ಡಿ- ಡಿಸಿಪಿ, ಬೆಂಗಳೂರು ಸಂಚಾರ ದಕ್ಷಿಣ ವಿಭಾಗ,
ಸಾರಾ ಫಾತೀಮಾ- ಬೆಂಗಳೂರು ಸಂಚಾರ ಪಶ್ಚಿಮ ವಿಭಾಗ,
ಡಿ.ದೇವರಾಜ್-ಡಿಸಿಪಿ, ಬೆಂಗಳೂರು ಪೂರ್ವ ವಿಭಾಗ,
ಎಸ್.ಗಿರೀಶ್-ಡಿಸಿಪಿ, ಬೆಂಗಳೂರು ಪಶ್ಚಿಮ ವಿಭಾಗ,
ರಾಹುಲ್ ಕುಮಾರ್ ಶಹಾಪುರವಾಡ್- ಡಿಸಿಪಿ, ಬೆಂಗಳೂರು ದಕ್ಷಿಣ ವಿಭಾಗ,
ವರ್ತಿಕಾ ಕಟಿಯಾರ್-ಎಸ್ಪಿ, ಸ್ಟೇಟ್ ಕ್ರೈಂ ರೆಕಾರ್ಡ್ ಬ್ಯೂರೋ
ಹರಿರಾಮ್ ಶಂಕರ್- ಎಸ್ಪಿ, ಇಂಟೆಲಿಜೆನ್ಸ್ ವಿಭಾಗ
ರವೀಂದ್ರ ಕಾಶಿನಾಥ್ ಗಡದಿ- ಎಸ್ಪಿ, ಇಂಟೆಲಿಜೆನ್ಸ್ ವಿಭಾಗ
ಜಯಪ್ರಕಾಶ್-ಎಸ್ಪಿ, ಇಂಟೆಲಿಜೆನ್ಸ್ ವಿಭಾಗ
ಡಾ.ಕೋನ ವಂಶಿಕೃಷ್ಣ-ಡಿಸಿಪಿ, ಕಮಾಂಡ್ ಸೆಂಟರ್, ಬೆಂಗಳೂರು,,
ಯತೀಶ್ ಚಂದ್ರ-ಎಸ್ಪಿ, ಆಂತರಿಕ ಭದ್ರತಾ ವಿಭಾಗ
ಕೆ.ಪರಶುರಾಮ್-ಎಸ್ಪಿ, ಇಂಟೆಲಿಜೆನ್ಸ್ ವಿಭಾಗ
ನಿಕಂ ಪ್ರಕಾಶ್ ಅಮ್ರಿತ್-ಎಸ್ಪಿ, ವೈರ್ ಲೆಸ್
ಲಕ್ಷ್ಮಣ್ ನಿಂಬರಗಿ-ಎಸ್ಪಿ, ಸ್ಟೇಟ್ ಕ್ರೈಂ ರೆಕಾರ್ಡ್ ಬ್ಯೂರೋ
H.D.ಆನಂದ್ ಕುಮಾರ್-ಡೈರೆಕ್ಟೋರೆಟ್ ಸಿವಿಲ್ ರೈಟ್ಸ್, ಎನ್ಪೋರ್ಸ್ಮೆಂಟ್
ಕುಶಾಲ್ ಚೌಸ್ಕಿ-ಜಂಟಿ ನಿರ್ದೇಶಕ, ವಿಧಿವಿಜ್ಞಾನ ಪ್ರಯೋಗಾಲಯ, ಬೆಂಗಳೂರು
ಸಂಜೀವ್ ಎಂ. ಪಾಟೀಲ್-ಡಿಸಿಪಿ, ವೈಟ್ಫೀಲ್ಡ್ ವಿಭಾಗ
ಡಾ.ಸುಮನ್ ಡಿ.ಪನ್ನೇಕರ್-ಎಐಜಿಪಿ, ಹೆಡ್ ಕ್ವಾರ್ಟರ್ಸ್-1
ಡಾ.ಭೀಮಾಶಂಕರ ಗುಳೇದ್- ಎಸ್ಪಿ, ಬೆಳಗಾವಿ
ಡಾ.ಕೆ.ಅರುಣ್-ಎಸ್ಪಿ, ಉಡುಪಿ
ವೈ.ಅಮರನಾಥ್ ರೆಡ್ಡಿ-ಎಸ್ಪಿ, ಬಾಗಲಕೋಟ
ಲೋಕೇಶ್ ಭರಮಪ್ಪ-ಎಸ್ಪಿ, ರಾಜ್ಯ ಪೊಲೀಸ್ ಅಕಾಡೆಮಿ, ಮೈಸೂರು
ಕಿಶೋರ್ ಬಾಬು- SP&ಪ್ರಿನ್ಸಿಪಲ್, ಪೊಲೀಸ್ ತರಬೇತಿ ಕೇಂದ್ರ, ಕಲಬುರಗಿ
ಎಂ.ಎಸ್.ಮಹಮ್ಮದ್ ಸುಜೀತಾ-ಎಸ್ಪಿ, ಹಾಸನ
ಅದ್ದೂರು ಶ್ರೀನಿವಾಸುಲು-ಎಸ್ಪಿ, ಕಲಬುರಗಿ
ಸೋನಾವಾನೆ ರಿಷಿಕೇಶ್ ಭಗವಾನ್-ಎಸ್ಪಿ, ವಿಜಯಪುರ
ಕನ್ನಿಕಾ ಸಿಕ್ರಿವಾಲ್-ಡಿಸಿಪಿ, ಕಾನೂನು ಸುವ್ಯವಸ್ಥೆ, ಕಲಬುರಗಿ