ಸರ್ಕಾರದ ಖಜಾನೆಯಿಂದ ಮೊಗೆಮೊಗೆದು ಸಿಎಂ ಮಜಾ? ಇದು ‘ಮಜಾವಾದ’ ಎಂದ ಪ್ರತಿಪಕ್ಷ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಆಡಳಿತ ಪ್ರತಿಪಕ್ಷ ನಾಯಕರ ನಡುವಿನ ಜಟಾಪಟಿ ಮುಂದುವರಿದಿದ್ದು, ಇದೀಗ ಬರಗಾಲ ಸಂದರ್ಭದಲ್ಲಿ ಸಿಎಂ ಮಜಾ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಬಿಜೆಪಿ, ಸಮಾಜವಾದ ಮತ್ತು ಬಡವರ ಹೆಸರು ಹೇಳಿಯೇ ರಾಜಕಾರಣ ಮಾಡುತ್ತಾ ಬಂದಿರುವ ಸಿದ್ದರಾಮಯ್ಯ ಅವರು ವಾಸ್ತವದಲ್ಲಿ ಮಜಾವಾದಿ ಎಂಬುದನ್ನು ಮತ್ತೆ ಸಾಬೀತು ಪಡಿಸಿದ್ದಾರೆ ಎಂದು ಗೇಲಿ ಮಾಡಿದೆ.

‘ರಾಜ್ಯದಲ್ಲಿ ಬರ ಆವರಿಸಿದೆ, ಹೈನುಗಾರರು ಕಣ್ಣೀರು ಹಾಕಿ ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದಾರೆ, ರೈತರು ಗುಳೆ ಹೊರಟಿದ್ದಾರೆ. ಜನೋಪಯೋಗಿ ಕಾರ್ಯಗಳಿಗೆ ಅನುದಾನ ನೀಡಲು ದುಡ್ಡಿಲ್ಲ ಎನ್ನುವ ಸಚಿವರೆಲ್ಲ ಸರ್ಕಾರಿ ಖರ್ಚಿನಲ್ಲಿ ಹೊಸ ಐಷಾರಾಮಿ ಕಾರುಗಳಲ್ಲಿ ಮಜಾ ಉಡಾಯಿಸುತ್ತಿದ್ದಾರೆ’ ಎಂದಿರುವ ಬಿಜೆಪಿ, ಸಿದ್ದರಾಮಯ್ಯರವರು ಸರ್ಕಾರದ ಖಜಾನೆಯಿಂದ ಮೊಗೆಮೊಗೆದು ಮಜಾ ಮಾಡುತ್ತಿದ್ದಾರೆ ಎಂದು ಟೀಕಿಸಿದೆ.

Related posts