ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಮತ್ತೊಮ್ನೆ ಭೇಟಿ ನೀಡಲಿದ್ದಾರೆ. ಜನವರಿ 12ರಂದು ಹುಬ್ಬಳ್ಳಿ ಧಾರವಾಡದಲ್ಲಿ ಅವರು ಕಾರ್ಯಕ್ರಮಗಳಲ್ಲಿ ಭಾಗವಹಸಿಲಿದ್ದಾರೆ.
ಹುಬ್ಬಳ್ಳಿ ಧಾರವಾಡದಲ್ಲಿ ಆರಂಭವಾಗಲಿರುವ ರಾಷ್ಟ್ರೀಯ ಯುವಜನ ಮೇಳವನ್ನು ಉದ್ಘಾಟಿಸಲು ಪ್ರಾಧನಿ ಆಗಮಿಸಲಿದ್ದಾರೆ. ಪ್ರಧಾನಿ ಭೇಟಿ ಕುರಿತಂತೆ ಸಿಎಂ ಬಸವರಾಜ್ ಬೊನಮ್ಮಾಯಿ ಅವರು ಮಾಹಿತಿ ಹಂಚೊಕೊಂಡಿದ್ದಾರೆ. ಜನವರಿ 19ರಂದು ನಾರಾಯಣಪುರದಲ್ಲಿ ನಡೆಯುವ ಕಾರ್ಯಕ್ರಮಕ್ಕೂ ಸಹ ಆಗಮಿಸಲಿದ್ದಾರೆ ಎಂದವರು ತಿಳಿಸಿದ್ದಾರೆ. ಮೋದಿಯವರ ಈ ಸರಣಿ ಭೇಟಿ ಬಿಜೆಪಿ ಕಾರ್ಯಕರ್ತರಲ್ಲಿ ರಣೋತ್ಸಾಹ ತುಂಬಲಿದ್ದು ಇದಕ್ಕಾಗಿ ಬಿಜೆಪಿ ಭರ್ಜರಿ ತಯಾರಿಯಲ್ಲಿ ತೊಡಗಿದೆ.
"ಜನವರಿ 12 ರಂದು ಹುಬ್ಬಳ್ಳಿ ಧಾರವಾಡದಲ್ಲಿ ಆರಂಭವಾಗಲಿರುವ ರಾಷ್ಟ್ರೀಯ ಯುವಜನ ಮೇಳವನ್ನು ಉದ್ಘಾಟಿಸಲು ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳಾದ ಶ್ರೀ @narendramodi ಅವರು ಆಗಮಿಸಲಿದ್ದಾರೆ. ಇದಾದ ಬಳಿಕ ಜನವರಿ 19ರಂದು ನಾರಾಯಣಪುರದಲ್ಲಿ ನಡೆಯುವ ಕಾರ್ಯಕ್ರಮಕ್ಕೂ ಸಹ ಆಗಮಿಸಲಿದ್ದಾರೆ." ಮುಖ್ಯಮಂತ್ರಿ: @BSBommai pic.twitter.com/K1JgmXB9Ie
— CM of Karnataka (@CMofKarnataka) January 9, 2023