ಪೇಜಾವರ ಶ್ರೀಗಳ ತಂದೆ ಕೃಷ್ಣ ಭಟ್ ವಿಧಿವಶ

ಮಂಗಳೂರು: ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವ ಪ್ರಸನ್ನ ತೀರ್ಥರ ತಂದೆ ವಿಧಿವಶರಾಗಿದ್ದಾರೆ. ಪೇಜಾವರ ಶ್ರೀಗಳ ತಂದೆ ಅಂಗಡಿಮಾರ್ ಕೃಷ್ಣ ಭಟ್ ಅವರು ವಯೋ ಸಹಜ ಸ್ಥಿತಿಯಲ್ಲಿದ್ದರು 102 ವರ್ಷ ಹರೆಯದ ಅವರು ಹಳೆಯಂಗಡಿ ಸಮೀಪದ ಪಕ್ಷಿಕೆರೆಯಲ್ಲಿರುವ ಸ್ವಗೃಹದಲ್ಲಿ ಬಾನುವಾರ ರಾತ್ರಿ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಕೃಷ್ಣ ಭಟ್ಟರು ಪುತ್ರ ವಿಶ್ವೇಶ್ವರ ಭಟ್ ಜೊತೆ ವಾಸವಿದ್ದರು. ಕೃಷಿಯ ಜೊತೆ, ವೈದಿಕ ವಿದ್ವಾಂಸರೂ ಆಗಿದ್ದ ಅವರು, ತುಳು ಲಿಪಿಕಾರರಾಗಿ, ಪಂಚಾಂಗ ಕರ್ತರಾಗಿ, ಭಜನೆ, ಪ್ರಾರ್ಥನಾ ಶ್ಲೋಕಗಳ ರಚನೆ ಮೂಲಕ ಆಸ್ತಿಕ ಗಮನಸೆಳೆದಿದ್ದರು. ಹಲವು ಪ್ರಶಸ್ತಿಗಳನ್ನು ಅವರು ಪಡೆದಿದ್ದರು. ಇವರ 12 ಮಕ್ಕಳ ಪೈಕಿ ಪೇಜಾವರ ಶ್ರೀಗಳು 8ನೇ ಮಗ. ಕೃಷ್ಣ ಭಟ್ಟರು ವೈದಿಕ ಪರಂಪರೆಯ ಸಾಧಕರು; ಪ್ರದೀಪ್ ಕಲ್ಕೂರ ತುಳು-ಕನ್ನಡ-ಸಂಸ್ಕೃತ ಬಾಷಾ ಪಾಂಡಿತ್ಯದಿಂದಾಗಿ ಸಾರಸ್ವತ ಹಾಗೂ ವೈದಿಕ ಕ್ಷೇತ್ರದಲ್ಲಿ ಅಂಗಡಿಮಾರ್ ಕೃಷ್ಣ ಭಟ್ಟರು ಗುರು ಶ್ರೇಷ್ಠರೆನಿಸಿದ್ದರು.…