ಮೈಸೂರು ದಸರಾ: ಜಂಬೂಸವಾರಿ ಮೆರವಣಿಗೆ

ಮೈಸೂರು: ನಾಡಿನೆಲ್ಲೆಡೆ ನವರಾತ್ರಿ ಸಂಭ್ರಮ ಮನೆಮಾಡಿದೆ. ನವರಾತ್ರಿಯ 9ನೇ ದಿನವಾದ ಇಂದು ಎಲ್ಲೆಲ್ಲೂ ಆಯುಧ ಪೂಜೆಯ ಸಡಗರ ಗರಿಗೆದರಿದೆ. ಶಸ್ತ್ರಗಳಿಗೆ ಪೂಜೆಯಷ್ಟೇ ಅಲ್ಲ, ಯಂತ್ರಗಳಿಗೆ, ವಾಹನಗಳಿಗೂ ಪೂಜೆ ಸಲ್ಲಿಸಲಾಗುತ್ತಿದೆ. ದಸರಾ ಖ್ಯಾತಿಯ ಮೈಸೂರಿನಲ್ಲೂ ಆಯುಧ ಪೂಜೆ ಕೈಂಕರ್ಯ ಗಮನಸೆಳೆದಿದೆ. ಮೈಸೂರು ಅರಮನೆಯಲ್ಲಿ ಅರಸರ ಕಾಲದ ಆಯುಧಗಳಿಗೆ ಪೂಜೆ ನೆರವೇರುವುವುದು ಇಲ್ಲಿಯದೇ ಆದ ವಿಶೇಷ. ಯಧುವಂಶದ ಕುವರ ಯಧುವೀರ್ ಒಡೆಯರ್ ಉಪಸ್ಥಿತಿ ಕೂಡಾ ಗಮನಾರ್ಹ. ಇದೇ ವೇಳೆ ಮೈಸೂರು ದಸರಾದಲ್ಲಿ ಜಗತ್ತಿನ ಗಮನ ಕೇಂದ್ರೀಕರಿಸುವ ಜಂಬೂಸವಾರಿ ಮೆರವಣಿಗೆಗೂ ಸಕಲ ತಯಾರಿ ನಡೆದಿದೆ. ವಿಜಯದಶಮಿ ಮೆರವಣಿಗೆಯು ಮಂಗಳವಾರ (ಅಕ್ಟೊಬರ್ 24) ನಡೆಯಲಿದ್ದು, ಅಂತಿಮ ಹಂತದ ತಯಾರಿ ನಡೆದಿವೆ.. ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಪ್ರದರ್ಶಿಸುವ ಸ್ತಬ್ಧಚಿತ್ರಗಳು ಜೊತೆಯಲ್ಲೇ ಗಜಪಡೆಗಳು ನಾಡಿನ ಅಧಿದೇವತೆ ಚಾಮುಂಡಿಯ ಮೂರ್ತಿಯನ್ನು ಚಿನ್ನದ ಅಂಬಾರಿಯಲ್ಲಿ ಹೊತ್ತು ‘ರಾಜಪಥ’ದಲ್ಲಿ ಸಾಗಲಿವೆ. ಜಂಬೂಸವಾರಿ ಮೆರವಣಿಗೆ ತಯಾರಿ ಹೀಗಿದೆ: ಮೈಸೂರು ಅರಮನೆಯ…