ಹಬ್ಬಗಳು ಸಾಲು ಸಾಲಾಗಿ ಬರುತ್ತಿವೆ. ಪ್ರತೀ ಹಬ್ಬಗಳನ್ನೂ ಒಂದೊಂದು ಖಾದ್ಯದ ವಿಶೇಶದೊಂದಿಗೆ ಗುರುತಿಸಲಾಗುತ್ತಿದೆ. ಅದರಲ್ಲೂ ನಾಗರ ಪಂಚಮಿ ಹಾಗೂ ಶ್ರಾವಣ ಮಾಸದ ಹಬ್ಬಗಳಲ್ಲಿ ಅರಿಶಿನ ಎಲೆ ಗಟ್ಟಿ ಅಥವಾ ಕಡುಬು ಗಮನಸೆಳೆಯುತ್ತವೆ. .ಅರಿಶಿನ ಔಷಧಿಯುಕ್ತ ಸಸ್ಯ. ಅದರ ಎಲೆ ಪರಿಮಳ ಕೂಡಾ. ಅದರ ಎಳೆಯಲ್ಲಿ ಮಾಡಿದ ಗಟ್ಟಿ ಅಥವಾ ಕಡುಬು ಸ್ವಾದಿಷ್ಟ ಖಾದ್ಯ. ಇದನ್ನು ಮಾಡುವ ವಿಧಾನ ಕೂಡಾ ಬಲು ಸುಲಭ.