ವಾಷಿಂಗ್ಟನ್: ಉಕ್ರೇನ್ ವಿರುದ್ಧದ ಯುದ್ಧಕ್ಕೆ ರಷ್ಯಾ ಬಳಸುತ್ತಿರುವ ಹಣಕಾಸಿನ ಮೂಲಗಳಿಗೆ ಹೊಡೆತ ನೀಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ರಷ್ಯಾ ವಿರುದ್ಧ ವ್ಯಾಪಕ ಆರ್ಥಿಕ ನಿರ್ಬಂಧಗಳನ್ನು ಜಾರಿಗೊಳಿಸಲು ಅಧಿಕಾರ ನೀಡುವ ಮಸೂದೆಗೆ ಟ್ರಂಪ್ ಶುಕ್ರವಾರ ಸಹಿ ಹಾಕಿದ್ದಾರೆ. ಅಮೆರಿಕ ಕಾಂಗ್ರೆಸ್ನಲ್ಲಿ ಮಸೂದೆಗೆ ಅನುಮೋದನೆ ದೊರೆತ ಬೆನ್ನಲ್ಲೇ ಟ್ರಂಪ್ ಸಹಿ ಮಾಡಿದ್ದಾರೆ. ರಷ್ಯಾದ ಇಂಧನ ಮತ್ತು ರಕ್ಷಣಾ ವಲಯಗಳ ಜತೆಗೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಇತರ ಹಿರಿಯ ಅಧಿಕಾರಿಗಳನ್ನೂ ನಿರ್ಬಂಧಗಳ ವ್ಯಾಪ್ತಿಗೆ ತರಲು ಮಸೂದೆ ಅವಕಾಶ ನೀಡುತ್ತದೆ. ‘ಶ್ಯಾಡೋ ಫ್ಲೀಟ್’ಗೂ ಬಿಸಿ ಪಾಶ್ಚಿಮಾತ್ಯ ರಾಷ್ಟ್ರಗಳ ನಿರ್ಬಂಧಗಳನ್ನು ತಪ್ಪಿಸಲು ರಷ್ಯಾ ಬಳಸುತ್ತಿದೆ ಎನ್ನಲಾಗಿರುವ ‘ಶ್ಯಾಡೋ ಫ್ಲೀಟ್’ ತೈಲ ಟ್ಯಾಂಕರ್ಗಳ ಮೇಲೂ ಕ್ರಮ ಕೈಗೊಳ್ಳಲು ಮಸೂದೆ ಅವಕಾಶ ನೀಡಿದೆ. ರಷ್ಯಾದ ತೈಲ ಮತ್ತು ಅನಿಲವನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುವ ದೇಶಗಳ ಮೇಲೆ ಶೇ.100ರವರೆಗೆ ಸುಂಕ…
Blog
ಮಹಾರಾಣಿ ಕ್ಲಸ್ಟರ್ ವಿವಿಯಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ: ಅಂಬೇಡ್ಕರ್ ವಿಚಾರಧಾರೆ ಪ್ರತಿಯೊಬ್ಬರಿಗೂ ತಲುಪಲಿ ಎಂದ ಮಾವಳ್ಳಿ ಶಂಕರ್
ಬೆಂಗಳೂರು: ಡಾ. ಬಿ.ಆರ್. ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ವಿಚಾರಧಾರೆ ಹಾಗೂ ಕೊಡುಗೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ಅಗತ್ಯವಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಂಚಾಲಕ ಮಾವಳ್ಳಿ ಶಂಕರ್ ಹೇಳಿದರು. ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ವತಿಯಿಂದ ಗುರುವಾರ ಆಯೋಜಿಸಿದ್ದ ವಿಶ್ವಜ್ಞಾನಿ ಡಾ. ಬಿ.ಆರ್. ಅಂಬೇಡ್ಕರ್ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಅಂಬೇಡ್ಕರ್ ಅವರನ್ನು ದಲಿತರು, ಕೆಳಜಾತಿ ಹಾಗೂ ಮೀಸಲಾತಿಗೆ ಸೀಮಿತಗೊಳಿಸಿ ನೋಡುವ ಮನೋಭಾವವಿದೆ. ಅವರ ಬಹುಮುಖ ಚಿಂತನೆ, ಶಿಕ್ಷಣ ಹಾಗೂ ದೇಶಕ್ಕೆ ನೀಡಿದ ಕೊಡುಗೆಗಳ ಕುರಿತು ಹೆಚ್ಚಿನ ಅರಿವು ಮೂಡಬೇಕು ಎಂದರು. ವಿದ್ಯಾರ್ಥಿಗಳು ಅಂಬೇಡ್ಕರ್ ಕುರಿತು ಓದಬೇಕು ಅಂಬೇಡ್ಕರ್ ಅವರು ಹೇಗೆ ಶಿಕ್ಷಣ ಪಡೆದರು, ಉನ್ನತ ಶಿಕ್ಷಣವನ್ನು ಹೇಗೆ ಮುಂದುವರಿಸಿದರು ಹಾಗೂ ವಿವಿಧ ಹುದ್ದೆಗಳಲ್ಲಿ ನಿರ್ವಹಿಸಿದ ಜವಾಬ್ದಾರಿಗಳ ಅನುಭವಗಳು ಎಲ್ಲರಿಗೂ ಪ್ರೇರಣಾದಾಯಕವಾಗಿವೆ. ಭಾರತೀಯರಾದ ನಾವು ಅವರ ಬದುಕು ಮತ್ತು ಚಿಂತನೆಗಳನ್ನು…
‘ತುಳು ಭಾಷೆಗೆ ಮಾನ್ಯತೆ, ಮೂಲಸೌಕರ್ಯ ಮತ್ತು ಪ್ರವಾಸೋದ್ಯಮಕ್ಕೆ ಒತ್ತು’; ರಾಜ್ಯ ಸಂಪುಟ ನಿರ್ಧಾರಗಳನ್ನು ‘ಕರಾವಳಿ ಜನರ ಬದುಕಿಗೆ ನವೋದಯ’ ಎಂದ ಪದ್ಮರಾಜ್ ಪೂಜಾರಿ
ಮಂಗಳೂರು: ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ಅಭಿವೃದ್ಧಿ ಹಾಗೂ ತುಳು ಭಾಷೆಯ ಮಾನ್ಯತೆಗೆ ಸಂಬಂಧಿಸಿದಂತೆ ಕೈಗೊಂಡ ನಿರ್ಧಾರಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಸಂತಸ ವ್ಯಕ್ತಪಡಿಸಿದ್ದಾರೆ. ಕರಾವಳಿಯ ಜನರ ಭಾವನೆಗಳನ್ನು ರಾಜಕೀಯವಾಗಿ ಬಳಸಿಕೊಳ್ಳುವುದಕ್ಕಿಂತ ಅವರ ಬದುಕು ಸುಧಾರಿಸುವ ನೈಜ ಅಭಿವೃದ್ಧಿಗೆ ಆದ್ಯತೆ ನೀಡಬೇಕಿತ್ತು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಂಪುಟ ಸಭೆಯ ನಿರ್ಧಾರಗಳು ಕರಾವಳಿ ಅಭಿವೃದ್ಧಿಗೆ ಹೊಸ ದಿಕ್ಕು ನೀಡಿವೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ತುಳು ಭಾಷೆಗೆ ಗೌರವ ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಮಾನ್ಯತೆ ನೀಡಿರುವುದು ಕರಾವಳಿಯ ಜನರಿಗೆ ಹೆಮ್ಮೆಯ ಸಂಗತಿ. ಸುಮಾರು ಎರಡೂವರೆ ಸಾವಿರ ವರ್ಷಗಳ ಇತಿಹಾಸ, ಶ್ರೀಮಂತ ಸಾಹಿತ್ಯ, ಯಕ್ಷಗಾನ ಹಾಗೂ ಜಾನಪದ ಪರಂಪರೆ ಹೊಂದಿರುವ ತುಳು ಭಾಷೆಗೆ ದೊರೆತ ಗೌರವವು ತುಳುನಾಡಿನ ಹಿರಿಯರ…
ಕರಾವಳಿ ಕರ್ನಾಟಕಕ್ಕೆ ಪ್ರತ್ಯೇಕ ಹೈಕೋರ್ಟ್ ಪೀಠ ಸ್ಥಾಪನೆಗೆ ಹೆಚ್ಚಿದ ಒತ್ತಡ, ಸಿಎಂ, ಗೃಹ ಸಚಿವರಿಗೆ ವಕೀಲರ ನಿಯೋಗ ಮನವಿ
ಮಂಗಳೂರು: ಕರಾವಳಿ ಕರ್ನಾಟಕದ ಜನರಿಗೆ ನ್ಯಾಯದ ಲಭ್ಯತೆ ಸುಲಭವಾಗುವಂತೆ ಧಾರವಾಡ ಮತ್ತು ಕಲಬುರಗಿ ಮಾದರಿಯಲ್ಲಿ ಮಂಗಳೂರಿನಲ್ಲೂ ಕರ್ನಾಟಕ ಹೈಕೋರ್ಟ್ನ ಸರ್ಕ್ಯೂಟ್ ಅಥವಾ ಶಾಶ್ವತ ಪೀಠ ಸ್ಥಾಪಿಸಬೇಕು ಎಂದು ಮಂಗಳೂರಿನ ವಕೀಲರ ನಿಯೋಗ ಆಗ್ರಹಿಸಿದೆ. ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟದ ವಿಶೇಷ ಸಭೆಯ ಸಂದರ್ಭದಲ್ಲಿ (ಶುಕ್ರವಾರ) ವಕೀಲರ ನಿಯೋಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ವಿವಿಧ ಬೇಡಿಕೆಗಳ ಕುರಿತು ಮನವಿ ಸಲ್ಲಿಸಿತು. ಪೀಠ ಸ್ಥಾಪನೆಗೆ ಸಂಪುಟದ ಅನುಮೋದನೆ ಅಗತ್ಯ: ಮಂಗಳೂರು ವಕೀಲರ ಸಂಘದ ಮಾಜಿ ಉಪಾಧ್ಯಕ್ಷರೂ ಆದ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಮನೋರಾಜ್ ರಾಜೀವ್ ನೇತೃತ್ವದ ನಿಯೋಗ, ಹಲವು ವರ್ಷಗಳಿಂದ ಹೈಕೋರ್ಟ್ ಪೀಠ ಸ್ಥಾಪನೆಗೆ ಒತ್ತಾಯಿಸಲಾಗುತ್ತಿದ್ದರೂ ಈವರೆಗೆ ಸರ್ಕಾರಗಳಿಂದ ನಿರೀಕ್ಷಿತ ಸ್ಪಂದನೆ ದೊರೆತಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ…
‘ಮತ ಕಳ್ಳತನ, ಸರ್ಕಾರ ಕಳ್ಳತನ, ಈಗ ಪಕ್ಷ ಕಳ್ಳತನ’; TMC ಚಿಹ್ನೆ ನಿರ್ಬಂಧ ಕ್ರಮಕ್ಕೆ ರಾಹುಲ್ ಆಕ್ಷೇಪ
ನವದೆಹಲಿ: ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಹೆಸರು ಹಾಗೂ ‘ಹೂವು–ಹುಲ್ಲು’ ಚುನಾವಣಾ ಚಿಹ್ನೆಯನ್ನು ಪಶ್ಚಿಮ ಬಂಗಾಳದ ಉಪಚುನಾವಣೆಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ತಾತ್ಕಾಲಿಕವಾಗಿ ಬಳಸದಂತೆ ನಿರ್ಬಂಧಿಸಿರುವ ಕ್ರಮವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಬಿಜೆಪಿ ಮತ್ತು ಚುನಾವಣಾ ಆಯೋಗ ಒಟ್ಟಾಗಿ ರಾಜಕೀಯ ಪಕ್ಷಗಳನ್ನು ವಿಭಜಿಸುತ್ತಿವೆ ಎಂದು ಅವರು ಆರೋಪಿಸಿದ್ದಾರೆ. ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಮೊದಲು ಶಿವಸೇನೆ, ನಂತರ ಎನ್ಸಿಪಿ, ಈಗ ತೃಣಮೂಲ ಕಾಂಗ್ರೆಸ್. ಪ್ರತಿಬಾರಿಯೂ ಒಂದೇ ಮಾದರಿ” ಎಂದು ಆರೋಪಿಸಿದರು. ಪಕ್ಷದ ಚಿಹ್ನೆ ಕಸಿದುಕೊಳ್ಳುವ ಮೂಲಕ ಜನಾದೇಶವನ್ನು ಬುಡಮೇಲು ಮಾಡುವ ಶಕ್ತಿಗಳಿಗೆ ಚುನಾವಣಾ ಆಯೋಗ ನೆರವಾಗುತ್ತಿದೆ ಎಂದೂ ದೂರಿದರು. “ಮತ ಕಳ್ಳತನ, ಸರ್ಕಾರ ಕಳ್ಳತನ, ಈಗ ಪಕ್ಷ ಕಳ್ಳತನ” ಎಂದು ಅವರು ಟೀಕಿಸಿದ್ದು, ಈ ಹೋರಾಟ ಕೇವಲ ಮಮತಾ ಬ್ಯಾನರ್ಜಿ ಅವರದ್ದಲ್ಲ; ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಬಯಸುವ ಪ್ರತಿಯೊಬ್ಬ ಮತದಾರ ಹಾಗೂ…
ಸೆ.18ರಿಂದ ರಾಷ್ಟ್ರವ್ಯಾಪಿ ಸಂಕಲ್ಪ ಸಮಾರಂಭ; 300 ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿಜ್ಞೆ, ಸಹಿ ಸಂಗ್ರಹ
ನವದೆಹಲಿ: ಮಾದಕವಸ್ತು ದುರುಪಯೋಗದ ವಿರುದ್ಧ ಯುವಜನರನ್ನು ಸಂಘಟಿಸಿ ನಿರಂತರ ಜಾಗೃತಿ ಮೂಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 100 ವಾರಗಳ ‘ನಶಾ ಮುಕ್ತ ಯುವ ಅಭಿಯಾನ’ಕ್ಕೆ ಸೆ.18ರಿಂದ ನಡೆಯಲಿದೆ. ದೇಶಾದ್ಯಂತ ‘ರಾಷ್ಟ್ರೀಯ ಸಂಕಲ್ಪ ಸಮಾರಂಭ’, ಯುವಜನರ ಪ್ರತಿಜ್ಞೆ ಹಾಗೂ ಸಹಿ ಸಂಗ್ರಹ ಅಭಿಯಾನ ನಡೆಯಲಿದೆ. ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಯುವ ವ್ಯವಹಾರಗಳ ಇಲಾಖೆ, ಮೇರಾ ಯುವ ಭಾರತ್ (MY Bharat) ಮತ್ತು ರಾಷ್ಟ್ರೀಯ ಸೇವಾ ಯೋಜನೆ (NSS) ಸಹಯೋಗದಲ್ಲಿ ಅಭಿಯಾನವನ್ನು ಮುನ್ನಡೆಸಲಿದೆ. 300 ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸೆ.18ರಂದು NSS ಗುರುತಿಸಿರುವ 300 ಶಿಕ್ಷಣ ಸಂಸ್ಥೆಗಳಲ್ಲಿ ಉದ್ಘಾಟನಾ ರಾಷ್ಟ್ರೀಯ ಸಂಕಲ್ಪ ಸಮಾರಂಭ ನಡೆಯಲಿದೆ. ಕಾಲೇಜು, ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಸಾಮೂಹಿಕ ಪ್ರತಿಜ್ಞೆ ಸ್ವೀಕರಿಸಲಿದ್ದಾರೆ. ಬೀದಿ ನಾಟಕ, ಘೋಷವಾಕ್ಯ ರಚನೆ ಹಾಗೂ ಯುವಜನರ ನೇತೃತ್ವದ ಚರ್ಚೆಗಳ ಮೂಲಕವೂ ಜಾಗೃತಿ ಮೂಡಿಸಲಾಗುತ್ತದೆ. ಆಧ್ಯಾತ್ಮಿಕ ಸಂಘಟನೆಗಳು,…
‘ರಾಜಮಾರ್ಗಯಾತ್ರಾ ಆ್ಯಪ್’ನಲ್ಲಿ ಹೊಸ ಸೇವೆ; 13 ಕೋಟಿ ಬಳಕೆದಾರರಿಗೆ ಹೆಚ್ಚಿನ ಆಯ್ಕೆ
ನವದೆಹಲಿ: FASTag ಬಳಕೆದಾರರು ವಾಹನಕ್ಕೆ ಅಂಟಿಸಿರುವ ಭೌತಿಕ ಟ್ಯಾಗ್ ಬದಲಾಯಿಸದೇ, ಅದನ್ನು ನೀಡಿರುವ ಬ್ಯಾಂಕ್ನ್ನು ಬದಲಾಯಿಸಿಕೊಳ್ಳಲು ಅನುಕೂಲವಾಗುವ ‘OneTag’ FASTag ಪೋರ್ಟಬಿಲಿಟಿ ಸೇವೆಯನ್ನು NHAIಯ ‘ರಾಜಮಾರ್ಗಯಾತ್ರಾ’ ಮೊಬೈಲ್ ಆ್ಯಪ್ನಲ್ಲಿ ಪರಿಚಯಿಸಲಾಗಿದೆ. ಈ ಸೇವೆಯಿಂದ ಬಳಕೆದಾರರಿಗೆ FASTag ನೀಡುವ ಬ್ಯಾಂಕ್ ಆಯ್ಕೆ ಮಾಡಿಕೊಳ್ಳುವ ಹೆಚ್ಚಿನ ಸ್ವಾತಂತ್ರ್ಯ ದೊರೆಯಲಿದೆ. ಈಗಾಗಲೇ ಆ್ಯಪ್ನಲ್ಲಿ ಲಭ್ಯವಿರುವ FASTag ವಾರ್ಷಿಕ ಪಾಸ್, ಸ್ಥಳೀಯ ಪಾಸ್ ಹಾಗೂ 1033 ತುರ್ತು ಸಹಾಯವಾಣಿ ಸೇವೆಗಳಿಗೂ ಇದು ಸೇರ್ಪಡೆಯಾಗಿದೆ. ಹೇಗೆ ಕಾರ್ಯನಿರ್ವಹಿಸುತ್ತದೆ? ಬಳಕೆದಾರರು ರಾಜಮಾರ್ಗಯಾತ್ರಾ ಆ್ಯಪ್ನಲ್ಲಿ ವಾಹನ ನೋಂದಣಿ ಸಂಖ್ಯೆಯನ್ನು ನಮೂದಿಸಿ OneTagಗೆ ಅರ್ಹತೆಯನ್ನು ಪರಿಶೀಲಿಸಬಹುದು. ಬಳಿಕ ಪ್ರಸ್ತುತ FASTag ನೀಡಿರುವ ಬ್ಯಾಂಕ್ನಿಂದ ಆರು ಅಂಕಿಯ ಮೊಬೈಲ್ ಪರಿಶೀಲನಾ ಕೋಡ್ (MVC) ಪಡೆದು ದೃಢೀಕರಣ ಪೂರ್ಣಗೊಳಿಸಬೇಕು. ನಂತರ ಹೊಸ ಬ್ಯಾಂಕ್ ಆಯ್ಕೆ ಮಾಡಿಕೊಂಡು ಗ್ರಾಹಕ ಪರಿಶೀಲನೆ ಪೂರ್ಣಗೊಳಿಸಿ ಹೊಸ ಬ್ಯಾಂಕ್ನ ವಾಲೆಟ್ ಸಕ್ರಿಯಗೊಳಿಸಬಹುದು. ಪ್ರಕ್ರಿಯೆ ಪೂರ್ಣಗೊಂಡ ಬಳಿಕ FASTag…
ಹಾರ್ಮುಜ್ನಲ್ಲಿ ತೈಲ ಟ್ಯಾಂಕರ್ ತಡೆದ ಇರಾನ್; ಇಸ್ರೇಲ್ ಆಡಳಿತ ಉರುಳಿಸುವುದಾಗಿ ನೆತನ್ಯಾಹು
ಟೆಹ್ರಾನ್/ಜೆರುಸಲೇಂ: ಹಾರ್ಮುಜ್ ಜಲಸಂಧಿಯ ಮೂಲಕ ‘ಅಕ್ರಮವಾಗಿ’ ಸಾಗಲು ಯತ್ನಿಸಿದ ಟೋಗೊ ಧ್ವಜದ ತೈಲ ಟ್ಯಾಂಕರ್ವೊಂದನ್ನು ದಾಳಿ ನಡೆಸಿ ತಡೆದಿರುವುದಾಗಿ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ತಿಳಿಸಿದೆ. ಇದೇ ವೇಳೆ, ಇರಾನ್ ಸರ್ಕಾರವನ್ನು ಉರುಳಿಸುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. IRGCಯ ‘ಸೆಪಾಹ್ ನ್ಯೂಸ್’ ಪ್ರಕಾರ, ‘ಟ್ರೆಂಡ್’ ಹೆಸರಿನ ಟ್ಯಾಂಕರ್ ಜಲಸಂಧಿ ನಿಯಮ ಉಲ್ಲಂಘಿಸಿ ಸಾಗಲು ಯತ್ನಿಸಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ದಾಳಿಯ ಬಳಿಕ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದನ್ನು ತಡೆಹಿಡಿಯಲಾಗಿದೆ ಎಂದು ಹೇಳಿದೆ. ಅಮೆರಿಕ ಸೇನೆಯಿಂದ ‘ಪ್ರಚೋದನೆ’ಗೆ ಒಳಗಾಗಿ ಹಡಗು ಅಕ್ರಮ ಮಾರ್ಗದಲ್ಲಿ ಸಾಗಲು ಪ್ರಯತ್ನಿಸಿದೆ ಎಂದು IRGC ಆರೋಪಿಸಿದೆ. ಹಾರ್ಮುಜ್ ಜಲಸಂಧಿಯ ಮೇಲೆ ತನ್ನ ಪಡೆಗಳಿಗೆ ಬಲವಾದ ನಿಯಂತ್ರಣವಿದ್ದು, ‘ಆಕ್ರಮಣಕಾರಿ’ ಶಕ್ತಿಗಳಿಗೆ ಅವಕಾಶ ನೀಡುವುದಿಲ್ಲ ಎಂದಿದೆ. ಇದಕ್ಕೂ ಮುನ್ನ ‘EL GAIA’ ಎಂಬ ಬೃಹತ್ ತೈಲ ಟ್ಯಾಂಕರ್ ನಿಷೇಧಿತ ಮಾರ್ಗದಲ್ಲಿ ಸಾಗಲು…
30 ವರ್ಷ ಮೇಲ್ಪಟ್ಟ ಸೈನಿಕರಿಗೆ ಟೆಸ್ಟೋಸ್ಟೆರಾನ್ ತಪಾಸಣೆ; ಬೇಟೆ, ಮೀನುಗಾರಿಕೆ ನಿಯಮ ಸಡಿಲ
ವಾಷಿಂಗ್ಟನ್: 30 ವರ್ಷಕ್ಕಿಂತ ಮೇಲ್ಪಟ್ಟ ಪುರುಷ ಸೇನಾ ಸಿಬ್ಬಂದಿಯಲ್ಲಿ ಟೆಸ್ಟೋಸ್ಟೆರಾನ್ ಕೊರತೆ ಪತ್ತೆಹಚ್ಚಲು ಅಮೆರಿಕ ಸೇನೆ ಹೊಸ ವೈದ್ಯಕೀಯ ಮಾರ್ಗಸೂಚಿ ಪ್ರಕಟಿಸಿದೆ. ಇದೇ ವೇಳೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆಡರಲ್ ಭೂಮಿಯಲ್ಲಿ ಬೇಟೆ ಮತ್ತು ಮೀನುಗಾರಿಕೆಗೆ ಹೆಚ್ಚಿನ ಅವಕಾಶ ಕಲ್ಪಿಸುವ ಎರಡು ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಿದ್ದಾರೆ. ರಕ್ಷಣಾ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯಂತೆ, ಟೆಸ್ಟೋಸ್ಟೆರಾನ್ ಕೊರತೆಯ ಲಕ್ಷಣಗಳು ಅಥವಾ ಅಪಾಯಕಾರಿ ಅಂಶಗಳು ಕಂಡುಬಂದರೆ ರಕ್ತ ಪರೀಕ್ಷೆ ನಡೆಸಲಾಗುತ್ತದೆ. ಕೊರತೆ ಖಚಿತಪಡಿಸಲು ವಿಭಿನ್ನ ದಿನಗಳಲ್ಲಿ ಬೆಳಗ್ಗೆ ಎರಡು ಬಾರಿ ಪರೀಕ್ಷೆ ಅಗತ್ಯ. ಲೈಂಗಿಕ ಆಸಕ್ತಿ ಕಡಿಮೆಯಾಗುವುದು, ಶಕ್ತಿ ಕುಂದುವಿಕೆ, ಏಕಾಗ್ರತೆ ಕೊರತೆ ಹಾಗೂ ಸ್ನಾಯು ದ್ರವ್ಯರಾಶಿ ಇಳಿಕೆ ಪ್ರಮುಖ ಲಕ್ಷಣಗಳಾಗಿವೆ. ದೃಢಪಟ್ಟ ಕೊರತೆಯಿರುವವರಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತದೆ. ಕೇವಲ ದೈಹಿಕ ಅಥವಾ ಯುದ್ಧ ಕಾರ್ಯಕ್ಷಮತೆ ಹೆಚ್ಚಿಸುವ ಉದ್ದೇಶಕ್ಕೆ ಟೆಸ್ಟೋಸ್ಟೆರಾನ್ ಬಳಸುವುದನ್ನು ಮಾರ್ಗಸೂಚಿ ಬೆಂಬಲಿಸುವುದಿಲ್ಲ. ಬೇಟೆ, ಮೀನುಗಾರಿಕೆಗೆ ಹೆಚ್ಚಿನ ಅವಕಾಶ…
ಮಂಗಳೂರು ಜೈಲು ಜಾಮ್ಮರ್ನಿಂದ ಮೊಬೈಲ್ ನೆಟ್ವರ್ಕ್ ಸಮಸ್ಯೆ; ತಾಂತ್ರಿಕ ಕ್ರಮ
ಮಂಗಳೂರು: ಜಿಲ್ಲಾ ಕಾರಾಗೃಹದ ಮೊಬೈಲ್ ಸಿಗ್ನಲ್ ಜಾಮ್ಮರ್ಗಳಿಂದ ಸುತ್ತಮುತ್ತಲ ಪ್ರದೇಶಗಳಲ್ಲಿ ಮೊಬೈಲ್ ನೆಟ್ವರ್ಕ್ ಸೇವೆಗೆ ಅಡಚಣೆಯಾಗುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಸಮಸ್ಯೆ ಪರಿಹಾರಕ್ಕೆ ತಾಂತ್ರಿಕ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಅವರು, ಕಾರಾಗೃಹದ ಜಾಮ್ಮರ್ ಕಾರ್ಯಾಚರಣೆಯಿಂದ ಸುತ್ತಮುತ್ತಲ ಪ್ರದೇಶಗಳ ನಾಗರಿಕರಿಗೆ ಮೊಬೈಲ್ ಸಂಪರ್ಕದಲ್ಲಿ ತೊಂದರೆಯಾಗುತ್ತಿರುವ ಬಗ್ಗೆ ದೂರುಗಳು ಬಂದಿವೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಜಂಟಿ ತಾಂತ್ರಿಕ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಯ ಆಧಾರದ ಮೇಲೆ ಸಂಬಂಧಪಟ್ಟ ಸಂಸ್ಥೆಯು ಆಂಟೆನಾ ವಿನ್ಯಾಸ ಮತ್ತು ಜಾಮ್ಮರ್ನ ಸಾಮರ್ಥ್ಯವನ್ನು ಸೂಕ್ತವಾಗಿ ಹೊಂದಿಸುವ (ಆಪ್ಟಿಮೈಸೇಶನ್) ಕಾರ್ಯ ಕೈಗೊಂಡಿದೆ ಎಂದು ಸಚಿವರು ತಿಳಿಸಿದ್ದಾರೆ. ಕಾರಾಗೃಹದೊಳಗಿನ ಭದ್ರತಾ ಉದ್ದೇಶಕ್ಕೆ ಜಾಮ್ಮರ್ಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದರ ಜತೆಗೆ, ಹೊರಭಾಗದಲ್ಲಿ ಮೊಬೈಲ್ ಸಂಪರ್ಕಕ್ಕೆ ಉಂಟಾಗುವ ಅನಗತ್ಯ ಅಡಚಣೆಯನ್ನು ಕನಿಷ್ಠಗೊಳಿಸುವುದು ಸರ್ಕಾರದ ಉದ್ದೇಶವಾಗಿದೆ. ಇದಕ್ಕಾಗಿ ಟೆಲಿಕಾಂ ಸೇವಾ…
