ಪ್ರಧಾನಿ ಮನವಿ ಹಿನ್ನೆಲೆ ‘ವಾಹನ ರಹಿತ ದಿನ’ ಆಚರಣೆಗೆ ಬಿಹಾರ ಸಿಎಂ ಕರೆ

ಪಾಟ್ನಾ: ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆ ಹಿನ್ನೆಲೆ ಬಿಹಾರದಲ್ಲಿ ‘ವಾಹನ ರಹಿತ ದಿನ’ ಆಚರಿಸಲಾಯಿತು. ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಸಚಿವಾಲಯಕ್ಕೆ ಶುಕ್ರವಾರ ನಡೆದುಕೊಂಡು ತೆರಳಿ ಇಂಧನ ಸಂರಕ್ಷಣೆಯ ಸಂದೇಶ ನೀಡಿದ್ದಾರೆ. ಮುಖ್ಯಮಂತ್ರಿಗಳ ನಿವಾಸದಿಂದ ಸಚಿವಾಲಯದವರೆಗೆ ಸುಮಾರು 150 ಮೀಟರ್ ನಡೆದುಕೊಂಡು ಹೋದ ಅವರು, ಈಗಾಗಲೇ ಅಧಿಕೃತ ಸಂಚಾರದ ವೇಳೆ ತಮ್ಮ ಬೆಂಗಾವಲಿನ ಗಾತ್ರವನ್ನೂ ಕಡಿಮೆ ಮಾಡಿದ್ದಾರೆ. ಅವರೊಂದಿಗೆ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿಯೂ ಭಾಗಿಯಾಗಿದ್ದರು. ಪಂಚಾಯತ್ ರಾಜ್ ಸಚಿವ ದೀಪಕ್ ಪ್ರಕಾಶ್ ಕೂಡ ಸುಮಾರು ಒಂದು ಕಿಲೋಮೀಟರ್ ನಡೆದುಕೊಂಡು ಕಚೇರಿಗೆ ತೆರಳಿದರು. ಅಮೆರಿಕ-ಇರಾನ್ ಸಂಘರ್ಷದಿಂದ ಉಂಟಾದ ಜಾಗತಿಕ ಬಿಕ್ಕಟ್ಟಿನ ನಡುವೆ ಇಂಧನ ಉಳಿಸುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು. ಶಿಕ್ಷಣ ಸಚಿವ ಮಿಥಿಲೇಶ್ ತಿವಾರಿ ಇ-ರಿಕ್ಷಾದಲ್ಲಿ ಕಚೇರಿಗೆ ತೆರಳಿ ಪರಿಸರ ಸ್ನೇಹಿ ಸಾರಿಗೆಗೆ ಉತ್ತೇಜನ ನೀಡಿದರು. “ಇಂಧನ…

ಇಂಧನ ದರ ಏರಿಕೆ ಮೂಲಕ ₹43 ಲಕ್ಷ ಕೋಟಿ ಸುಲಿಗೆ: ಮೋದಿ ಸರ್ಕಾರ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ನವದೆಹಲಿ: ಕಳೆದ 11 ವರ್ಷಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಗಳ ಮೂಲಕ ಮೋದಿ ಸರ್ಕಾರ ₹43 ಲಕ್ಷ ಕೋಟಿ ಸಂಗ್ರಹಿಸಿದ್ದು, ಇದು ಜನರ ಮೇಲಿನ “ತೆರಿಗೆ ಸುಲಿಗೆ” ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದ್ದಾರೆ. ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ ಅವರು, 2014ರಲ್ಲಿ ಪೆಟ್ರೋಲ್ ಲೀಟರ್‌ಗೆ ₹71.41 ಮತ್ತು ಡೀಸೆಲ್ ₹56.71 ಇತ್ತು. ಆದರೆ ಇಂದು ದೆಹಲಿಯಲ್ಲಿ ಪೆಟ್ರೋಲ್ ₹102.92 ಹಾಗೂ ಡೀಸೆಲ್ ₹90.99ಕ್ಕೆ ತಲುಪಿದೆ ಎಂದು ಹೇಳಿದರು. 2014ರ ಕಚ್ಚಾ ತೈಲ ದರಗಳಿಗಿಂತ ಈಗ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕಡಿಮೆ ಇದ್ದರೂ ಭಾರತದಲ್ಲಿ ಮಾತ್ರ ಬೆಲೆ ಏರಿಕೆಯಾಗಿರುವುದು “ಬಿಜೆಪಿಯ ಲೂಟಿ” ಎಂದು ಟೀಕಿಸಿದರು. 2014ರಿಂದ 2025ರವರೆಗೆ ಪೆಟ್ರೋಲ್ ಮೇಲೆ ಸರಾಸರಿ ₹21.60 ಹಾಗೂ ಡೀಸೆಲ್ ಮೇಲೆ ₹12.80 ಅಬಕಾರಿ ಸುಂಕ ವಿಧಿಸಲಾಗಿದೆ. ಇದರಿಂದ ಸಾಮಾನ್ಯ ಜನರು ಇಂಧನ ಬೆಲೆಯ…

ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಎಐ ಬಳಕೆಗೆ ಸೂಕ್ತ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಸಾಕಷ್ಟು ವಿಸ್ತಾರಗೊಂಡಿರುವ ಕೃತಕಬುದ್ಧಿಮತ್ತೆ (ಎಐ) ಅನ್ನು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲೂ ಬಳಸಿಕೊಳ್ಳುವ ಕುರಿತು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ (ವೈದ್ಯಕೀಯ ಶಿಕ್ಷಣ) ಮೊಹಮ್ಮದ್‌ ಮೊಹ್ಸಿನ್‌ ತಿಳಿಸಿದ್ದಾರೆ. ಉನ್ನತ ಶಿಕ್ಷಣ ಇಲಾಖೆಯು ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಕ್ಯಾಂಪಸ್‌ ಟು ಕೆರಿಯರ್‌ – ಫ್ಯೂಚರ್‌ ರೆಡಿ ಯೂನಿವರ್ಸಿಟಿ ಆಫ್‌ ಕಾಲೇಜಸ್‌ ಶೃಂಗ ಸಭೆಯಲ್ಲಿ ಶುಕ್ರವಾರ ನಡೆದ ಚರ್ಚಾ ಕಾರ್ಯಾಗಾರದಲ್ಲಿ ಮಾತನಾಡಿದ ಮೊಹಮ್ಮದ್‌ ಮೊಹ್ಸಿನ್‌, ಇದು ಯುವ ಸಮೂಹಕ್ಕೆ ಸಾಕಷ್ಟು ಅನುಕೂಲವಾಗಲಿದೆ ಎಂದರು. ಎಐ ಬಳಕೆ ಸಂಬಂಧ ಪ್ರೊಟೊಕಾಲ್‌ ಮತ್ತು ಕಾರ್ಯವಿಧಾನದ ಮಾನದಂಡ (ಎಸ್‌ಒಪಿ) ಕೂಡ ಬಿಡುಗಡೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು. ಈ ನಿಟ್ಟಿನಲಿ ಎಥಿಕಲ್‌ ಯೂಸ್‌ ಆಫ್‌ ಎಐ ಬಗ್ಗೆಯೂ ನಮ್ಮ ಗಮನವಿದೆ ಎಂದು ಮೊಹ್ಸಿನ್‌ ವಿವರಿಸಿದರು. ಮೈಸೂರು ರಸ್ತೆಯ ಭೀಮನಕುಪ್ಪೆಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ…

ಇಂಧನ ಉಳಿಸುವ ಪ್ರಧಾನಿ ಕರೆಗೆ ಕೇಂದ್ರ ಸಚಿವರ ಬೆಂಬಲ; ಸೈಕಲ್’ನಲ್ಲಿ ಕಚೇರಿಗೆ ತೆರಳಿದ ಮಂತ್ರಿ ತೋಖನ್ ಸಾಹು

ನವ ದೆಹಲಿ: ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ರಾಜ್ಯ ಸಚಿವರಾದ ತೋಖನ್ ಸಾಹು ಶುಕ್ರವಾರ ತಮ್ಮ ನಿವಾಸದಿಂದ ಸುಮಾರು 3 ಕಿ.ಮೀ ದೂರದ ಸಂಕಲ್ಪ ಭವನಕ್ಕೆ ಸೈಕಲ್‌ನಲ್ಲಿ ತೆರಳಿ, ಪ್ರಧಾನಮಂತ್ರಿ Narendra Modi ಅವರ ಇಂಧನ ಸಂರಕ್ಷಣೆ ಕೋರಿಕೆಗೆ ಬೆಂಬಲ ಸೂಚಿಸಿದರು. ನಗರಗಳಲ್ಲಿ ಶಾಶ್ವತ ಸಂಚಾರ, ಪರಿಸರ ಜವಾಬ್ದಾರಿ ಹಾಗೂ ರಾಷ್ಟ್ರಸೇವೆಯ ಸಂದೇಶವನ್ನು ಅವರು ಈ ಮೂಲಕ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸಾಹು, ಕೋವಿಡ್‌ ಕಾಲದಲ್ಲಿ ಅನುಸರಿಸಿದ್ದ ವರ್ಕ್ ಫ್ರಂ ಹೋಮ್, ಆನ್‌ಲೈನ್ ತರಗತಿಗಳು, ವರ್ಚುವಲ್ ಸಭೆಗಳು, ಪೆಟ್ರೋಲ್–ಡೀಸಲ್ ಬಳಕೆಯ ಕಡಿತ ಮುಂತಾದ ಕ್ರಮಗಳನ್ನು ಪುನಃ ಜಾರಿಗೆ ತರಬೇಕೆಂಬ ಪ್ರಧಾನಮಂತ್ರಿಯವರ ಕೋರಿಕೆ ಇಂದಿನ ಜಾಗತಿಕ ಅನಿಶ್ಚಿತ ಪರಿಸ್ಥಿತಿಯಲ್ಲಿ ಅತಿ ಸುಸಂಗತ ಎಂದು ಹೇಳಿದರು. ದೇಶದ ಹಿತಕ್ಕಾಗಿ ನಾಗರಿಕರು ತಮ್ಮಿಂದಾಗುವ ಸೇವೆಯನ್ನು ನೀಡಬೇಕೆಂದು ಅವರು ತಿಳಿಸಿದ್ದಾರೆ. ಇಂಧನ ಸಂರಕ್ಷಣೆ ಕೇವಲ ಆರ್ಥಿಕ ಕಾರಣವಲ್ಲ, ಅದು ಪರಿಸರ ಜವಾಬ್ದಾರಿ ಮತ್ತು…

‘ನಾಗಬಂಧಂ’ ಚಿತ್ರದಲ್ಲಿ ಲೀಲಾವತಿಯಾಗಿ ಅನುಸೂಯಾ ಭಾರದ್ವಾಜ್

ಚೆನ್ನೈ: ನಿರ್ದೇಶಕ ಅಭಿಷೇಕ್ ನಾಮ ಅವರ ಬಹುನಿರೀಕ್ಷಿತ ಪೌರಾಣಿಕ ಆಕ್ಷನ್ ಚಿತ್ರ ‘ನಾಗಬಂಧಂ’ನಲ್ಲಿ ನಟಿ ಅನುಸೂಯಾ ಭಾರದ್ವಾಜ್ ‘ಲೀಲಾವತಿ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ಮಾಪಕರು ಬಹಿರಂಗಪಡಿಸಿದ್ದಾರೆ. ಅನುಸೂಯಾ ಭಾರದ್ವಾಜ್ ಅವರ ಹುಟ್ಟುಹಬ್ಬದ ಅಂಗವಾಗಿ ನಿರ್ಮಾಣ ಸಂಸ್ಥೆ ನಿಕ್ ಸ್ಟುಡಿಯೋಸ್ ಸಾಮಾಜಿಕ ಜಾಲತಾಣಗಳಲ್ಲಿ ಅವರ ಲುಕ್ ಬಿಡುಗಡೆ ಮಾಡಿದೆ. “ನಮ್ಮ ‘ಲೀಲಾವತಿ’ಗೆ ಹುಟ್ಟುಹಬ್ಬದ ಶುಭಾಶಯಗಳು” ಎಂದು ಚಿತ್ರತಂಡ ಪೋಸ್ಟ್ ಹಂಚಿಕೊಂಡಿದೆ. ನಟ ವಿರಾಟ್ ಕರ್ಣ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದಲ್ಲಿ ಐಶ್ವರ್ಯ ಮೆನನ್ ಹಾಗೂ ನಭಾ ನಟೇಶ್ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ. ಜಗಪತಿ ಬಾಬು, ಜಯಪ್ರಕಾಶ್, ಮುರಳಿ ಶರ್ಮಾ ಮತ್ತು ಬಿ.ಎಸ್. ಅವಿನಾಶ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ. ‘ನಾಗಬಂಧಂ’ ಚಿತ್ರವು ಭಾರತದ ಪ್ರಾಚೀನ ವಿಷ್ಣು ದೇವಾಲಯಗಳ ರಹಸ್ಯಗಳು ಮತ್ತು ‘ನಾಗಬಂಧ’ ಆಚರಣೆಯ ಸುತ್ತ ಹೆಣೆದ ಕಥೆಯನ್ನು ಒಳಗೊಂಡಿದೆ. ಪದ್ಮನಾಭಸ್ವಾಮಿ ಹಾಗೂ ಪುರಿ ಜಗನ್ನಾಥ ದೇವಸ್ಥಾನಗಳ ನಿಧಿ ರಹಸ್ಯಗಳಿಂದ ಪ್ರೇರಿತವಾದ…