ವಾಷಿಂಗ್ಟನ್: ಇರಾನ್ ಜೊತೆಗಿನ ಮಾತುಕತೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಉನ್ನತ ಮಟ್ಟದ ಮಾತುಕತೆ ತಂಡಕ್ಕೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ. ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹಾಗೂ ರಾಯಭಾರಿಗಳಾದ ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಸೇರಿದಂತೆ ಮಾತುಕತೆ ತಂಡಕ್ಕೆ ಈ ಸೂಚನೆ ನೀಡಲಾಗಿದೆ. ವಾಷಿಂಗ್ಟನ್–ಟೆಹ್ರಾನ್ ನಡುವೆ ಇತ್ತೀಚೆಗೆ “ಸಕಾರಾತ್ಮಕ ಚರ್ಚೆಗಳು” ನಡೆದಿರುವ ಸೂಚನೆಗಳ ನಡುವೆಯೇ ಟ್ರಂಪ್ ಈ ನಿರ್ಧಾರ ಕೈಗೊಂಡಿದ್ದಾರೆ. ಇರಾನ್ ತನ್ನ ಬೇಡಿಕೆಗಳನ್ನು ಒಪ್ಪಿಕೊಳ್ಳಲು ಹಿಂಜರಿಯುತ್ತಿರುವ ಬಗ್ಗೆ ಟ್ರಂಪ್ ಅಸಮಾಧಾನಗೊಂಡಿದ್ದು, ಮಾತುಕತೆ ಪುನರಾರಂಭಕ್ಕೂ ಮುನ್ನ ಟೆಹ್ರಾನ್ನಿಂದ ಹೊಸ ಇಚ್ಛಾಶಕ್ತಿಯ ನಿರೀಕ್ಷೆಯಲ್ಲಿದ್ದಾರೆ ಎಂದು ವರದಿಯಾಗಿದೆ. ಮತ್ತೊಂದೆಡೆ, ಇರಾನ್ ವಿರುದ್ಧ ಮತ್ತಷ್ಟು ದಾಳಿಗಳ ಬದಲು ಆರ್ಥಿಕ ಒತ್ತಡ ಹೆಚ್ಚಿಸುವ ತಂತ್ರಕ್ಕೆ ಅಮೆರಿಕ ಮುಂದಾಗಿದೆ. ಇರಾನ್ನ ಬ್ಯಾಂಕ್ ಖಾತೆಗಳು, ಕ್ರಿಪ್ಟೋ ವಾಲೆಟ್ಗಳು ಮತ್ತು ವಿದೇಶಿ ಆಸ್ತಿಗಳನ್ನು ಗುರಿಯಾಗಿಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಮೆರಿಕದ ಖಜಾನೆ ಕಾರ್ಯದರ್ಶಿ…
Category: ವಿದೇಶ
ಕತಾರ್ನಿಂದ ಭಾರತಕ್ಕೆ UPI ಮೂಲಕ ಹಣ ಕಳುಹಿಸುವ ಸೇವೆ ಆರಂಭ
ನವದೆಹಲಿ: ಕತಾರ್ನಲ್ಲಿ ವಾಸಿಸುವ ಭಾರತೀಯರಿಗೆ ಅನುಕೂಲವಾಗುವಂತೆ ಕತಾರ್ ಪೋಸ್ಟ್ ಔಟ್ಲೆಟ್ಗಳ ಮೂಲಕ UPI ಆಧಾರಿತ ಡಿಜಿಟಲ್ ರವಾನೆ ಸೇವೆ ಆರಂಭಿಸಲಾಗಿದೆ. ಇದರ ಮೂಲಕ ಕತಾರ್ನಿಂದ ಭಾರತದಲ್ಲಿರುವ UPI ಸಕ್ರಿಯ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಕಳುಹಿಸಬಹುದು. ಭಾರತದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಗಸ್ಟ್ 15ರಿಂದ ‘PosTransfer’ ಸೇವೆ ಕತಾರ್ನಲ್ಲಿ ಕಾರ್ಯಾರಂಭಿಸಿದೆ. ಕತಾರ್ ಪೋಸ್ಟ್, ಇಂಡಿಯಾ ಪೋಸ್ಟ್, ಯುನಿವರ್ಸಲ್ ಪೋಸ್ಟಲ್ ಯೂನಿಯನ್ನ ಇಂಟರ್ಕನೆಕ್ಷನ್ ಪ್ಲಾಟ್ಫಾರ್ಮ್ (UPU-IP) ಮತ್ತು NPCI ಇಂಟರ್ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್ (NIPL) ಸಹಯೋಗದಲ್ಲಿ ಈ ಸೇವೆ ಅಭಿವೃದ್ಧಿಪಡಿಸಲಾಗಿದೆ. ಗ್ರಾಹಕರು ಕತಾರ್ ಪೋಸ್ಟ್ ಔಟ್ಲೆಟ್ನಲ್ಲಿ ಫಲಾನುಭವಿಯ UPI ಐಡಿ ಹಾಗೂ ಅಗತ್ಯ ಗುರುತಿನ ವಿವರಗಳನ್ನು ನೀಡಿ ಹಣ ವರ್ಗಾವಣೆ ಮಾಡಬಹುದು. ಫಲಾನುಭವಿಯು ತಮ್ಮ UPI ಆ್ಯಪ್ನಲ್ಲಿ ವಿದೇಶಿ ಒಳಮುಖ ರವಾನೆ ಸ್ವೀಕರಿಸುವ ಸೌಲಭ್ಯವನ್ನು ಸಕ್ರಿಯಗೊಳಿಸಿರಬೇಕು. ಸೌಲಭ್ಯ ಸಕ್ರಿಯವಾಗಿದ್ದರೆ, ಹಣವು ಫಲಾನುಭವಿಯ UPI-ಸಕ್ರಿಯ ಬ್ಯಾಂಕ್ ಖಾತೆಗೆ ತಕ್ಷಣ ಜಮೆಯಾಗಲಿದೆ.…
MAITREE-XV ಜಂಟಿ ಸೇನಾ ಕವಾಯತು: ಥೈಲ್ಯಾಂಡ್ಗೆ ಭಾರತೀಯ ಸೇನಾ ತುಕಡಿ
ನವದೆಹಲಿ: 15ನೇ ಭಾರತ–ಥೈಲ್ಯಾಂಡ್ ಜಂಟಿ ಸೇನಾ ಕವಾಯತು MAITREE-XV (2026) ನಲ್ಲಿ ಭಾಗವಹಿಸಲು ಭಾರತೀಯ ಸೇನಾ ತುಕಡಿ ಸೋಮವಾರ ಥೈಲ್ಯಾಂಡ್ಗೆ ತೆರಳಿದೆ. ಆಗಸ್ಟ್ 18ರಿಂದ 31ರವರೆಗೆ ಥೈಲ್ಯಾಂಡ್ನ ಸೂರತ್ ಥಾನಿಯಲ್ಲಿರುವ ವಿಭಾವಡಿ ರಂಗಸಿತ್ ಶಿಬಿರದಲ್ಲಿ ಸೇನಾ ಕಸರತ್ತು ನಡೆಯಲಿದೆ. 2025ರ ಸೆಪ್ಟೆಂಬರ್ನಲ್ಲಿ ಮೇಘಾಲಯದ ಉಮ್ರೊಯ್ನಲ್ಲಿ ಹಿಂದಿನ ಆವೃತ್ತಿಯ ವ್ಯಾಯಾಮ ನಡೆದಿತ್ತು. ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗೆ ಒತ್ತು ಭಾರತ ಮತ್ತು ಥೈಲ್ಯಾಂಡ್ ಸೇನೆಗಳು ತಲಾ 85 ಸಿಬ್ಬಂದಿಯನ್ನು ನಿಯೋಜಿಸಲಿವೆ. ಭಾರತೀಯ ತುಕಡಿಯಲ್ಲಿ ಮುಖ್ಯವಾಗಿ 9 ಗೂರ್ಖಾ ರೈಫಲ್ಸ್ ಸಿಬ್ಬಂದಿ ಇದ್ದರೆ, ಥಾಯ್ ತುಕಡಿಯಲ್ಲಿ 5ನೇ ಡಿವಿಷನ್ನ 25ನೇ ಪದಾತಿ ದಳದ 3ನೇ ಬೆಟಾಲಿಯನ್ ಸಿಬ್ಬಂದಿ ಭಾಗವಹಿಸಲಿದ್ದಾರೆ. ಕಂಪನಿ ಮಟ್ಟದಲ್ಲಿ ನಡೆಯುವ ಈ ಜಂಟಿ ವ್ಯಾಯಾಮದಲ್ಲಿ ಅರಣ್ಯ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಜಂಟಿ ಕಾರ್ಯಾಚರಣೆ, ದಂಗೆ ನಿಗ್ರಹ ಹಾಗೂ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಿಗೆ ತರಬೇತಿ ನೀಡಲಾಗುತ್ತದೆ. ಕ್ಷೇತ್ರ ತರಬೇತಿ, ಯುದ್ಧ…
ಅಮೆರಿಕದಲ್ಲಿ ಜನನ ಪ್ರವಾಸೋದ್ಯಮಕ್ಕೆ ಕಡಿವಾಣ; 600ಕ್ಕೂ ಹೆಚ್ಚು ವೀಸಾ ರದ್ದು
ವಾಷಿಂಗ್ಟನ್: ಅಮೆರಿಕದಲ್ಲಿ ಹೆರಿಗೆಗಾಗಿ ಪ್ರಯಾಣಿಸುವ ‘ಜನನ ಪ್ರವಾಸೋದ್ಯಮ’ಕ್ಕೆ ಕಡಿವಾಣ ಹಾಕುವ ಹೊಸ ಕ್ರಮದ ಭಾಗವಾಗಿ 600ಕ್ಕೂ ಹೆಚ್ಚು ವಿದೇಶಿ ಪ್ರಜೆಗಳ ವೀಸಾಗಳನ್ನು ರದ್ದುಗೊಳಿಸಲಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಬುಧವಾರ ತಿಳಿಸಿದೆ. ಜನನ ಪ್ರವಾಸೋದ್ಯಮದ ಮೂಲಕ ಅಮೆರಿಕಕ್ಕೆ ಆಗಮಿಸುವವರು ಹಾಗೂ ಇಂತಹ ಪ್ರಯಾಣಗಳಿಗೆ ನೆರವು ನೀಡುವವರನ್ನು ಪತ್ತೆಹಚ್ಚಲು ವಿಶೇಷ ಕಾರ್ಯಪಡೆಯನ್ನು ರಚಿಸಲಾಗಿದೆ. ವೀಸಾ ಹೊಂದಿರುವವರ ಪ್ರಯಾಣ ದಾಖಲೆಗಳು ಸೇರಿದಂತೆ ಗೃಹ ಭದ್ರತಾ ಇಲಾಖೆ ಮತ್ತು ಇತರ ಫೆಡರಲ್ ಸಂಸ್ಥೆಗಳಿಂದ ಲಭ್ಯವಾಗುವ ಮಾಹಿತಿಯನ್ನು ಕಾರ್ಯಪಡೆ ಪರಿಶೀಲಿಸುತ್ತಿದೆ. ಜನನ ಪ್ರವಾಸೋದ್ಯಮದ ಹೆಸರಿನಲ್ಲಿ ಕಾರ್ಯನಿರ್ವಹಿಸುವ ಜಾಲಗಳನ್ನು ಪತ್ತೆಹಚ್ಚುವುದು, ವೀಸಾಗಳನ್ನು ರದ್ದುಪಡಿಸುವುದು ಮತ್ತು ಇಂತಹ ಪ್ರಯಾಣದಿಂದ ಲಾಭ ಪಡೆಯುವ ಮಧ್ಯವರ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಕಾರ್ಯಪಡೆಯ ಪ್ರಮುಖ ಉದ್ದೇಶವಾಗಿದೆ ಎಂದು ಇಲಾಖೆ ತಿಳಿಸಿದೆ. ಟ್ರಂಪ್ ಆದೇಶದ ಬೆನ್ನಲ್ಲೇ ಕ್ರಮ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಸ್ಟ್ 6ರಂದು ಹೊರಡಿಸಿದ ಕಾರ್ಯಕಾರಿ ಆದೇಶದ ಬಳಿಕ ಈ…
ಜಿಂಬಾಬ್ವೆಯ ಕರಿಬಾ ಕೆರೆಯಲ್ಲಿ ದೋಣಿ ಮಗುಚಿ 15 ಮಂದಿ ಜಲಸಮಾಧಿ
ಹರಾರೆ: ಜಿಂಬಾಬ್ವೆಯ ಕರಿಬಾ ಕೆರೆಯಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮಗುಚಿ ಬಿದ್ದ ಪರಿಣಾಮ ಕನಿಷ್ಠ 15 ಮಂದಿ ಮೃತಪಟ್ಟಿದ್ದು, 27 ಮಂದಿ ನಾಪತ್ತೆಯಾಗಿದ್ದಾರೆ. 77 ಮಂದಿಯನ್ನು ರಕ್ಷಿಸಲಾಗಿದ್ದು, ಅವರು ಕೆರೆಯಲ್ಲಿರುವ ಸಣ್ಣ ದ್ವೀಪವೊಂದನ್ನು ತಲುಪಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ. ಜಿಂಬಾಬ್ವೆ ಮತ್ತು ಜಾಂಬಿಯಾ ನಡುವೆ ಹಂಚಿಕೊಂಡಿರುವ ಕರಿಬಾ ಕೆರೆ ವಿಶ್ವದ ಅತಿದೊಡ್ಡ ಮಾನವ ನಿರ್ಮಿತ ಸರೋವರಗಳಲ್ಲಿ ಒಂದಾಗಿದೆ. ರಕ್ಷಿಸಲ್ಪಟ್ಟವರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ದೋಣಿಗಳನ್ನು ಕಳುಹಿಸಲಾಗಿದ್ದು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ನೀರಿನೊಳಗೆ ಕಾರ್ಯನಿರ್ವಹಿಸುವ ವಿಶೇಷ ತಂಡದ ಜತೆಗೆ ಹೆಲಿಕಾಪ್ಟರ್ಗಳು ಮತ್ತು ವೇಗದ ದೋಣಿಗಳನ್ನೂ ಕಾರ್ಯಾಚರಣೆಗೆ ಬಳಸಲಾಗುತ್ತಿದೆ. ನೋಂದಾಯಿತ ಟಿಕೆಟ್ ದಾಖಲೆಗಳ ಪ್ರಕಾರ ದೋಣಿಯಲ್ಲಿ 114 ವಯಸ್ಕ ಪ್ರಯಾಣಿಕರು ಹಾಗೂ ಐವರು ಸಿಬ್ಬಂದಿ ಇದ್ದರು. ಆದರೆ ಟಿಕೆಟ್ ಪಡೆಯುವ ವಯಸ್ಸಿಗೆ ತಲುಪದ ಮಕ್ಕಳ ಸಂಖ್ಯೆ ತಿಳಿದಿಲ್ಲ. ಹೀಗಾಗಿ ನಾಪತ್ತೆಯಾದವರ ಸಂಖ್ಯೆ ಮತ್ತಷ್ಟು…
ಅದಾನಿ ವಿರುದ್ಧದ ಅಮೆರಿಕದ ಕ್ರಿಮಿನಲ್ ಪ್ರಕರಣ ವಜಾ; ಭಾರೀ ರಿಲೀಫ್
ನ್ಯೂಯಾರ್ಕ್: ಉದ್ಯಮಿ ಗೌತಮ್ ಅದಾನಿ, ಅವರ ಸೋದರಳಿಯ ಸಾಗರ್ ಅದಾನಿ ಹಾಗೂ ಮಾಜಿ ಉದ್ಯೋಗಿ ವಿನೀತ್ ಜೈನ್ ವಿರುದ್ಧ ಅಮೆರಿಕದಲ್ಲಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಫೆಡರಲ್ ನ್ಯಾಯಾಲಯ ವಜಾಗೊಳಿಸಿದೆ. ನ್ಯೂಯಾರ್ಕ್ನ ಬ್ರೂಕ್ಲಿನ್ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ನಿಕೋಲಸ್ ಜಿ. ಗರೌಫಿಸ್ ಅವರು ಅಮೆರಿಕದ ನ್ಯಾಯಾಂಗ ಇಲಾಖೆಯ ಮನವಿ ಮೇರೆಗೆ ಪ್ರಕರಣವನ್ನು ‘ಡಿಸ್ಮಿಸ್ಡ್ ವಿತ್ ಪ್ರಿಜುಡಿಸ್’ ಎಂದು ವಜಾಗೊಳಿಸಿದ್ದಾರೆ. ಇದರೊಂದಿಗೆ ಇದೇ ಆರೋಪಗಳ ಆಧಾರದ ಮೇಲೆ ಪ್ರಕರಣವನ್ನು ಮತ್ತೆ ದಾಖಲಿಸಲು ಅವಕಾಶ ಇರುವುದಿಲ್ಲ. 2024ರ ನವೆಂಬರ್ನಲ್ಲಿ ಅಮೆರಿಕದ ಪ್ರಾಸಿಕ್ಯೂಟರ್ಗಳು ಅದಾನಿ ಮತ್ತು ಇತರರ ವಿರುದ್ಧ ಭಾರತದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಸುಮಾರು 25 ಕೋಟಿ ಡಾಲರ್ ಲಂಚ ನೀಡುವ ಸಂಚು ರೂಪಿಸಿ ಸೌರ ವಿದ್ಯುತ್ ಯೋಜನೆಗಳ ಗುತ್ತಿಗೆ ಪಡೆಯಲು ಯತ್ನಿಸಿದ ಆರೋಪ ಹೊರಿಸಿದ್ದರು. ಅಮೆರಿಕದ ಮಾರುಕಟ್ಟೆಗಳಲ್ಲಿ 300 ಕೋಟಿ ಡಾಲರ್ಗೂ ಹೆಚ್ಚು ಹಣ ಸಂಗ್ರಹಿಸುವಾಗ ಹೂಡಿಕೆದಾರರನ್ನು ದಾರಿ ತಪ್ಪಿಸಿದ ಆರೋಪವೂ…
ಕೊಲಂಬಿಯಾದಲ್ಲಿ 7.4 ತೀವ್ರತೆಯ ಭೂಕಂಪ; 110ಕ್ಕೂ ಹೆಚ್ಚು ಮಂದಿ ಸಾವು
ಬೊಗೋಟಾ: ಕೊಲಂಬಿಯಾದ ಪಶ್ಚಿಮ ಭಾಗದಲ್ಲಿ ಸೋಮವಾರ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ 110ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ನೂರಾರು ಕಟ್ಟಡಗಳು ಹಾನಿಗೊಳಗಾಗಿದ್ದು, ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಭೂಕಂಪದ ತೀವ್ರತೆ ನೆರೆಯ ಈಕ್ವೆಡಾರ್ ಮತ್ತು ಪನಾಮ ದೇಶಗಳಲ್ಲೂ ಅನುಭವವಾಗಿದೆ. ಪೆರೇರಾ, ಕ್ವಿಬ್ಡೊ, ಕಾಲಿ ಹಾಗೂ ಮನಿಜಾಲೆಸ್ ಸೇರಿದಂತೆ ಪಶ್ಚಿಮ ಭಾಗದ ಹಲವು ನಗರಗಳಲ್ಲಿ ಭೂಕಂಪದಿಂದ ಭಾರೀ ಹಾನಿಯಾಗಿದೆ. ರಕ್ಷಣಾ ಸಿಬ್ಬಂದಿ ಹಾಗೂ ಸ್ಥಳೀಯರು ಅವಶೇಷಗಳ ನಡುವೆ ಸಿಲುಕಿರುವವರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ತಮ್ಮ ಕುಟುಂಬಸ್ಥರನ್ನು ಕಳೆದುಕೊಂಡಿರುವವರು ಆತಂಕದಲ್ಲಿ ರಕ್ಷಣಾ ಕಾರ್ಯಾಚರಣೆಯ ಸ್ಥಳಗಳಲ್ಲಿ ಬೀಡುಬಿಟ್ಟಿದ್ದಾರೆ. ರಿಸಾರಾಲ್ಡಾ ಪ್ರದೇಶದಲ್ಲಿ ಕನಿಷ್ಠ 40 ಮಂದಿ, ವ್ಯಾಲೆ ಡೆಲ್ ಕೌಕಾದಲ್ಲಿ 27 ಮಂದಿ, ಚೋಕೋದಲ್ಲಿ 9 ಮಂದಿ ಹಾಗೂ ಕಾಲ್ಡಾಸ್ನಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಆಂಟಿಯೋಕಿಯಾ ಪ್ರದೇಶದಲ್ಲಿ 73 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಭೂಕಂಪದ ಕೇಂದ್ರಬಿಂದು ಕೊಲಂಬಿಯಾದ ಪೆಸಿಫಿಕ್…
ಹಾರ್ಮುಜ್ ಜಲಸಂಧಿ ಭದ್ರತೆಗೆ ಇರಾನ್ ಕಾರ್ಯತಂತ್ರ; ಅಮೆರಿಕದೊಂದಿಗೆ ಮಾತುಕತೆ ಇಲ್ಲ
ಟೆಹ್ರಾನ್: ಹಾರ್ಮುಜ್ ಜಲಸಂಧಿ ಮತ್ತು ಪರ್ಷಿಯನ್ ಕೊಲ್ಲಿಯ ಭದ್ರತೆ ಹಾಗೂ ಸುಸ್ಥಿರ ಪ್ರಗತಿಗಾಗಿ ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ಸಮಿತಿ ಕಾರ್ಯತಂತ್ರದ ಕ್ರಿಯಾ ಯೋಜನೆಯ ಸಾಮಾನ್ಯ ರೂಪುರೇಷೆಗಳಿಗೆ ಅನುಮೋದನೆ ನೀಡಿದೆ. ಸಮಿತಿ ಸಭೆಯಲ್ಲಿ ಯೋಜನೆಯನ್ನು ಯಾವುದೇ ವಿರೋಧವಿಲ್ಲದೆ ಅಂಗೀಕರಿಸಲಾಗಿದೆ ಎಂದು ವಕ್ತಾರ ಹಸನ್ ಕಶ್ಕವಿ ತಿಳಿಸಿದ್ದಾರೆ. ಸಂಬಂಧಿತ ಇರಾನ್ ಸಂಸ್ಥೆಗಳ ಪ್ರಸ್ತಾವನೆಗಳನ್ನು ಪರಿಶೀಲಿಸಿದ ಬಳಿಕ ಅನುಮೋದನೆ ನೀಡಲಾಗಿದೆ. ಜುಲೈ 13ರಂದು ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿತ್ತು. ಹಾರ್ಮುಜ್ ಜಲಸಂಧಿಯಲ್ಲಿ ಸುರಕ್ಷಿತ ಸಮುದ್ರ ಸಂಚಾರಕ್ಕಾಗಿ ತಾತ್ಕಾಲಿಕ ಮಾರ್ಗ ಗುರುತಿಸುವ ಕುರಿತು ಇರಾನ್ ಮತ್ತು ಒಮಾನ್ ಮಾತುಕತೆ ನಡೆಸುತ್ತಿದ್ದು, ಒಪ್ಪಂದಕ್ಕೆ ಎರಡೂ ದೇಶಗಳು ಹತ್ತಿರ ಬಂದಿವೆ ಎಂದು ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ. ಆದರೆ ಅಮೆರಿಕದೊಂದಿಗೆ ಸದ್ಯ ಯಾವುದೇ ನೇರ ಮಾತುಕತೆ ನಡೆಯುತ್ತಿಲ್ಲ ಎಂದು ಅರಾಘ್ಚಿ ಸ್ಪಷ್ಟಪಡಿಸಿದ್ದಾರೆ. ಅಮೆರಿಕ ಹಿಂದಿನ ತಿಳುವಳಿಕೆ ಒಪ್ಪಂದದ…
ರಿಯೊ ಡಿ ಜನೈರೊದಲ್ಲಿ ಹೆಲಿಕಾಪ್ಟರ್ ಪತನ; ನಾಲ್ವರು ಸಾವು
ರಿಯೊ ಡಿ ಜನೈರೊ: ಬ್ರೆಜಿಲ್ನ ರಿಯೊ ಡಿ ಜನೈರೊ ನಗರದ ಅರಣ್ಯ ಪ್ರದೇಶದಲ್ಲಿ ಶನಿವಾರ ಹೆಲಿಕಾಪ್ಟರ್ ಪತನಗೊಂಡು ನಾಲ್ವರು ಮೃತಪಟ್ಟಿದ್ದಾರೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ರಿಯೊದಲ್ಲಿ ಇತ್ತೀಚೆಗೆ ನಡೆದ ಮತ್ತೊಂದು ಹೆಲಿಕಾಪ್ಟರ್ ದುರಂತದ ಬಳಿಕ ಈ ಘಟನೆ ನಡೆದಿದೆ. ಜೂನ್ನಲ್ಲಿ ಎರಡು ಹೆಲಿಕಾಪ್ಟರ್ಗಳು ಡಿಕ್ಕಿ ಹೊಡೆದು ಆರು ಮಂದಿ ಮೃತಪಟ್ಟಿದ್ದರು. ಸರಣಿ ಅಪಘಾತಗಳು ನಗರದ ಹೆಲಿಕಾಪ್ಟರ್ ಹಾರಾಟಗಳ ಸುರಕ್ಷತೆ ಕುರಿತು ಮತ್ತೊಮ್ಮೆ ಕಳವಳ ಮೂಡಿಸಿವೆ. ಆಲ್ಟೊ ಡ ಬೋವಾ ವಿಸ್ಟಾದ ವಿಸ್ಟಾ ಚೈನೆಸಾ ಪ್ರದೇಶದಲ್ಲಿ ಸ್ಥಳೀಯ ಕಾಲಮಾನ ಬೆಳಿಗ್ಗೆ 11.11ರ ಸುಮಾರಿಗೆ ಅಪಘಾತ ಸಂಭವಿಸಿದೆ. ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಹಾಗೂ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ, ದಟ್ಟ ಅರಣ್ಯದ ನಡುವೆ ಹೆಲಿಕಾಪ್ಟರ್ನ ಅವಶೇಷಗಳನ್ನು ಪತ್ತೆಹಚ್ಚಿವೆ. ಅಪಘಾತದ ಬಳಿಕ ಹೆಲಿಕಾಪ್ಟರ್ಗೆ ಬೆಂಕಿ ಹೊತ್ತಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಮೃತರಲ್ಲಿ ಪೈಲಟ್ ಹಾಗೂ ಒಂದೇ…
ರಷ್ಯಾದ ತೈಲ ಖರೀದಿಸುವ ಭಾರತ, ಚೀನಾಗೆ ಶೇ.100 ಸುಂಕ; ಅಮೆರಿಕದ ಸೇಡಿನ ಕ್ರಮ
ವಾಷಿಂಗ್ಟನ್: ರಷ್ಯಾದ ತೈಲ ಮತ್ತು ಅನಿಲ ಖರೀದಿಸುವ ಭಾರತ ಹಾಗೂ ಚೀನಾ ಸೇರಿದಂತೆ ಪ್ರಮುಖ ದೇಶಗಳ ಮೇಲೆ ಭಾರಿ ಸುಂಕ ವಿಧಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಧಿಕಾರ ನೀಡುವ ಮಸೂದೆಗೆ ಅಮೆರಿಕದ ಸೆನೆಟ್ ಭಾರಿ ಬಹುಮತದಿಂದ ಅನುಮೋದನೆ ನೀಡಿದೆ. ‘ಲಿಂಡ್ಸೆ ಒ. ಗ್ರಹಾಂ ಸ್ಯಾಂಕ್ಷನಿಂಗ್ ರಷ್ಯಾ ಅಂಡ್ ಇರಾನ್ ಆಕ್ಟ್ ಆಫ್ 2026’ ಎಂದು ಮರುನಾಮಕರಣಗೊಂಡಿರುವ ಮಸೂದೆಗೆ ಸೆನೆಟ್ನಲ್ಲಿ 86-11 ಮತಗಳ ಬೆಂಬಲ ದೊರೆತಿದೆ. ರಷ್ಯಾದ ತೈಲ ಅಥವಾ ನೈಸರ್ಗಿಕ ಅನಿಲವನ್ನು ಅತಿ ಹೆಚ್ಚು ಖರೀದಿಸುವ ವಿಶ್ವದ ಐದು ಪ್ರಮುಖ ದೇಶಗಳ ಸರಕುಗಳ ಮೇಲೆ ಗರಿಷ್ಠ ಶೇ.100ರಷ್ಟು ಸುಂಕ ವಿಧಿಸಲು ಮಸೂದೆ ಅವಕಾಶ ನೀಡುತ್ತದೆ. ಈ ಪಟ್ಟಿಯಲ್ಲಿ ಚೀನಾ ಮತ್ತು ಭಾರತ ಸೇರಿದಂತೆ ಅಜರ್ಬೈಜಾನ್, ಹಂಗೇರಿ ಹಾಗೂ ಸ್ಲೋವಾಕಿಯಾ ಸೇರಿವೆ. ರಷ್ಯಾದಿಂದ ತಮ್ಮ ನೈಸರ್ಗಿಕ ಅನಿಲದ ಶೇ.15ಕ್ಕಿಂತ ಕಡಿಮೆ ಪ್ರಮಾಣವನ್ನು ಆಮದು ಮಾಡಿಕೊಳ್ಳುವ ಹಾಗೂ ಆಮದು…
