ಇಂದು ಸಂಜೆ ನೇರವೇರಿದ ಕೊಪ್ಪಳ ಗವಿಸಿದ್ದೇಶ್ವರ ರಥೋತ್ಸವ..🙏.🚩 pic.twitter.com/zrVLlJQ8ow — Namo Mahantesh Maganur 🇮🇳🚩 (@MahanteshMagan2) January 8, 2023
Category: ಆದ್ಯಾತ್ಮ
ಮೋಡಗಳ ನಡುವೆ ‘ಕಾರಿಂಜೆ ಕ್ಷೇತ್ರ’ ಹೇಗಿದೆ ಗೊತ್ತಾ?
ಮಂಗಳೂರು: ಕರಾವಳಿಯಲ್ಲಿರುವ ಆಸ್ತಿಕರ ಪಾಲಿಗೆ ದಕ್ಷಿಣ ಕಾಶಿ ಎಂದೇ ಗುರುತಾಗಿರುವ ಕಾರಿಂಜೇಶ್ವರ ಕ್ಷೇತ್ರ ಪ್ರಕೃತಿಯ ಸುಂದರ ಉಡುಗೊರೆಯಲ್ಲದೆ ಬೇರೇನೂ ಅಲ್ಲ. ಮುಗಿಲೆತ್ತರದ ಈ ಏಕಶಿಲಾ ಬೆಟ್ಟದ ಮೇಲೆ ಪರಮೇಶ್ವರ ಸಾನ್ನಿಧ್ಯವಹಿಸಿದ್ದು ಈ ಪುಣ್ಯಕ್ಷೇತ್ರ ಭಕ್ತರ ಪಾಲಿನ ಸ್ವರ್ಗ. ಬೆಟ್ಟಹತ್ತಿ ದೇಗುಲಕ್ಕೆ ತೆರಳುವುದೇ ಸಾಹಸ. ಗರ್ಭಗುಡಿಯೊಳಗಿನ ಕಾರಿಂಜೇಶ್ವರನನ್ನು ಕಂಡಾಗ ಅದೇನೋ ಪುನೀತ ಭಾವ. ಈ ಅನುಭವ ಇತರೆಡೆಗಳಿಗಿಂತ ವಿಭಿನ್ನ ಎಂಬುದು ಹಲವರ ಅಭಿಪ್ರಾಯ. ಶ್ರೀ ಕಾರಿಂಜೇಶ್ವರ ಕ್ಷೇತ್ರವು ‘ಬೆಟ್ಟ ಒಂದು: ಹಲವು ಜಗತ್ತು’ ಎಂಬಂತಿದೆ. ರಾಮಾಯಣ ಮಹಾಭಾರತ ಕಾಲದ ಹಲವು ಪುರಾಣ ಪ್ರಸಂಗಗಳಿಗೆ ಈ ಕ್ಷೇತ್ರ ಸಾಕ್ಷಿಯಾಗಿದೆ ಎಂಬುದು ಹಲವರ ನಂಬಿಕೆ. ಬೇಸಿಗೆಯ ಬಿರುಬಿಸಿಲ ಕಾಲದಲ್ಲೂ ‘ಉಂಗುಷ್ಠ ತೀರ್ಥ’ದ ಪುಟ್ಟ ಗುಂಡಿಯಲ್ಲಿ ಜೀವಜಲ ಸಿಗುವ ಮಹಿಮೆಯೂ ಭಕ್ತರ ಕುತೂಹಲದ ಕೇಂದ್ರಬಿಂದು. ಅದರಲ್ಲೂ ಮಳೆಗಾಲ ಕಳೆದಾಕ್ಷಣದ ಚುಮುಚುಮು ಚಳಿಯ ಕಾಲದಲ್ಲಿ, ಬೆಳ್ಳಂಬೆಳಿಗ್ಗೆ ಬೆಟ್ಟದೆತ್ತರದಲ್ಲಿ ಸಾಗುವ ಮೋಡಗಳ ಸಾಲನ್ನು ನೋಡುವುದೇ ಚೆಂದ.…
ಸಂತಶ್ರೇಷ್ಠ ಕನಕದಾಸರು: ಈ ಕೀರ್ತನಾಕಾರನ ಬದುಕೇ ಆಸ್ತಿಕರಿಗೆ ಸೂತ್ರ
📝 ಎಸ್.ಟಿ.ಸೋಮಶೇಖರ್, ಸಹಕಾರ ಸಚಿವರು ಸಂತಶ್ರೇಷ್ಠ ಕನಕದಾಸರ ಜಯಂತ್ಯುತ್ಸವವನ್ನು ಇಙದು ನಾಡಿನಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಆಸ್ತಿಕರ ಪಾಲಿಗೆ ಗುರು ಸ್ಥಾನದಲ್ಲಿರುವ ಈ ಕೀರ್ತನಾ ಹರಿಕಾರ ಕನಕದಾಸರ ಜಯಂತಿ ಈಗಿನ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ. ದಾಸ ಸಾಹಿತ್ಯದ ಮೂಲಕ ಜೀವನದ ಪಾಠ ಸಾರಿದ ಕನಕದಾಸರು ಕನ್ನಡ ಸಾರಸ್ವತ ಲೋಕದಲ್ಲಿ ಅದ್ವೀತಿಯ ಸ್ಥಾನ ಗಳಿಸಿ ಚಿರಸ್ಮರಣೀಯರಾಗಿದ್ದಾರೆ. ಕವಿ, ಜ್ಞಾನಿ, ದಾರ್ಶನಿಕರಾಗಿ ನೀಡಿದ ಕೊಡುಗೆ ಅಪಾರ. ವ್ಯಾಸರಾಯರ ಮೆಚ್ಚಿನ ಶಿಷ್ಯರಾದ ಕನಕದಾಸರು ಕೃಷ್ಣನ ಪರಮಭಕ್ತರಾಗಿದ್ದರು. ಸರಳ ಭಾಷೆಯಲ್ಲಿ, ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ಕೀರ್ತನೆಗಳ ಮೂಲಕ ಸಮಾಜದ ಒಳಿತು ಕೆಡುಕುಗಳನ್ನು ವಿಶ್ಲೇಷಿಸಿದವರು. ಕನಕದಾಸರ ಜೀವನವೇ ಒಂದು ಪವಾಡ. ದಂಡನಾಯಕರಾಗಿದ್ದ ಅವರು ಮನಪರಿವರ್ತನೆ ಮಾಡಿಕೊಂಡು ಕವಿಯಾಗಿ, ದಾಸರಾಗುತ್ತಾರೆ. ಸಮಾಜದ ಅಂಕು-ಡೊಂಕು ತಿದ್ದುವ ಮೂಲಕ ಶ್ರೇಷ್ಠ ವ್ಯಕ್ತಿಯಾಗುತ್ತಾರೆ. ಕನಕದಾಸರು ಬಹುಮುಖಿ ಸಮಾಜದ ಚಿಂತಕರಾಗಿ ಹೊಸ ಹೊಸ ಚಿಂತನೆಗಳನ್ನು ಮಾಡಿ ಅದಕ್ಕೆ ತಕ್ಕಂತಹ ಕೀರ್ತನೆಗಳನ್ನು…
ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನ ಬ್ರಹ್ಮಕಲಶೋತ್ಸವ; ಸಚಿವ ಪ್ರಭು ಚವ್ಹಾಣ್ ಭೇಟಿ
ಉಡುಪಿ: ಕುಂಜಿಬೆಟ್ಟುವಿನ ಇತಿಹಾಸ ಪ್ರಸಿದ್ಧ ಶ್ರೀ ವೆಂಕಟರಮಣ ದೇವರಿಗೆ, ಶ್ರೀ ಈಶ್ವರ, ಶ್ರೀ ಗಣಪತಿ ಮತ್ತು ಮುಖ್ಯಪ್ರಾಣ ದೇವರಿಗೆ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಸಮಾರಂಭ ಅದ್ದೂರಿಯಾಗಿ ನೆರವೇರಿದೆ. ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಕೊನೆಯ ದಿನವಾದ ಮಂಗಳವಾರ ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವ ಪ್ರಭು ಬಿ. ಚವ್ಹಾಣ್ ಅವರು ಭೇಟಿ ನೀಡಿ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡರು. ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶಾಸಕ ಕೆ. ರಘುಪತಿ ಭಟ್ ಸಚಿವರನ್ನು ದೇವಸ್ಥಾನಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಶ್ರೀ ಕರಂಬಳ್ಳಿ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರುಗಳಾದ ಕೆ. ಲಕ್ಷ್ಮಣ ಶೇರಿಗಾರ್, ಸುಂದರ ಅಮೀನ್, ಶೈಲಶ್ರೀ ದಿವಾಕರ್ ಶೆಟ್ಟಿ, ಪ್ರಧಾನ ಅರ್ಚಕರಾದ ದಿವಾಕರ ಐತಾಳ್, ಪರ್ಯಾಯ ಅರ್ಚಕರಾದ ಗೋವಿಂದ ಐತಾಳ್ ಹಾಗೂ ರಾಧಾಕೃಷ್ಣ ಭಾರಿತ್ತಾಯ, ರಮೇಶ್ ಭಾರಿತ್ತಾಯ, ವಾಸುದೇವ್ ಭಟ್ ಉಪಸ್ಥಿತರಿದ್ದರು.
ಗುರುಪುರದಲ್ಲಿ ‘ಗುತ್ತುದ ವರ್ಸೋದ ಪರ್ಬೋ’; ಕೈಂಕರ್ಯದ ಸಿದ್ದತೆಗೆ ಅಂತಿಮ ಸ್ಪರ್ಶ
ಮಂಗಳೂರು: ತುಳನಾಡು ಪರಶುರಾಮನಿಂದ ಸೃಷ್ಟಿಯಾದ ತಪೋಭೂಮಿ ಎಂಬ ನಂಬಿಕೆ ಇದೆ. ಸಾಲು ಸಾಲು ದುರ್ಗಾ ದೇವಿಗಳ ತಾಣ ಎಂಬ ಪ್ರತೀತಿಗೆ ಪಾತ್ರವಾಗಿರುವ ಕರಾವಳಿಯಲ್ಲಿ ತುಳು ಪರಂಪರೆಯ ದೈವಾರಾಧನೆಗೂ ಮಹತ್ವವಿದೆ. ಸೀಮೆಗೊಂದು ದೈವಸ್ಥಾನ, ಕುಟುಂಬಕ್ಕೊಂದು ದೈವಸ್ಥಾನ ಹೀಗೆ ಭೂತಾರಾಧನೆಯ ಮಜಲುಗಳು ಅನೇಕ ಇವೆ. ಅದರಲ್ಲೂ ‘ಗುತ್ತು’ ಪರಂಪರೆಯಲ್ಲಿನ ಆಚರಣೆಯ ಗತ್ತು ಗಮ್ಮತ್ತು ತುಳುಪರಂಪರೆಗಷ್ಟೇ ಸೀಮಿತ ಎನ್ನಬಹುದು. ಅಂತಹಾ ಗುತ್ತುಗಳ ವರ್ಷದ ಪರ್ಬೋ ತನ್ಬದೇ ಅದ ಆಕರ್ಷಣೆಯಿಂದ ನಾಡಿನ ಗಮನ ಕೇಂದ್ರೀಕರಿಸುತ್ತದೆ. ಈ ಸೊಗಸು ಸೊಬಗಿಗೆ ಸಾಕ್ಷಿಯಾಗುತ್ತದೆ ಮಂಗಳೂರು ಹೊರವಲಯದ ಗುರುಪುರದ ಗೋಳಿದಡಿ ಗುತ್ತು. ಪ್ರತೀ ವರ್ಷದಂತೆ ಈ ಬಾರಿಯೂ ಇಲ್ಲಿ ‘ಗುತ್ತುದ ವರ್ಸೋದ ಪರ್ಬೋ’ ನಡೆಯಲಿದೆ. ಜನವರಿ 19 ಮತ್ತು 20ರಂದು ನಡೆಯುವ ಅನನ್ಯ ವೈಭವದ ಈ ಕೈಂಕರ್ಯದ ಸಿದ್ದತೆಗೆ ಅಂತಿಮ ಸ್ಪರ್ಷ ಸಿಕ್ಕಿದೆ. ದೇವಾಲಯಗಳಲ್ಲಿ ನೆರವೇರುವ ವರ್ದಂತ್ಯುತ್ಸವದ ರೀತಿಯಲ್ಲೇ ಈ ದೈವಾರಾಧನೆಯ, ನ್ಯಾಯದೇಗುಲ ಸ್ವರೂಪದ ಗದ್ದುಗೆಯಲ್ಲಿ ವಾರ್ಷಿಕ ಜಾತ್ರೆ…
ಭಾಲ್ಕಿಯಲ್ಲಿ ಬಾಲಯೇಸು ಮಹೋತ್ಸವ; ಕಣ್ಮನ ಸೆಳೆದ ದೃಶ್ಯ ವೈಭಾವ
ಬೀದರ್: ಗುಲ್ಬರ್ಗಾ ಧರ್ಮಪ್ರಾಂತ್ಯದ ಪುಣ್ಯಕ್ಷೇತ್ರ ಭಾಲ್ಕಿ ನಗರದ ಬಾಲ ಯೇಸು ದೇವಾಲಯದಲ್ಲಿ ವಾರ್ಷಿಕ ಮಹೋತ್ಸವವು ಅದ್ದೂರಿಯಾಗಿ ನೆರವೇರಿತು. ನಾಡಿನಾದ್ಯಂತ ಬಾಲ ಎಸು ದೇವಾಲಯಗಳಲ್ಲಿ ವಾರ್ಷಿಕ ಉತ್ಸವ ಜರುಗಿದ್ದು ಬಾಲ್ಕಿಯಲ್ಲಿನ ಈ ಮಹೋತ್ಸವವು ವಿಶೇಷತೆಗಳಿಂದಾಗಿ ಗಮನಸೆಳೆಯಿತು. ಈ ಉತ್ಸವ ಧಾರ್ಮಿಕ ಕೈಂಕರ್ಯಕ್ಕಷ್ಟೇ ಅಲ್ಲ ಸಾಮಾಜಿಕ ಕಾರ್ಯಕ್ರಮದಿಂದಲೂ ಸಾರ್ವಜನಿಕರ ಗಮನ ಕೇಂದ್ರೀಕರಿಸಿತು. ಪ್ರತೀ ವರ್ಷವೂ ಈ ಬಾಲ ಯೇಸು ದೇಗುಲದಲ್ಲಿ ವಾರ್ಷಿಕ ಮಹೋತ್ಸವ ವಿರಂಭಣೆಯಿಂದ ನೆರವೇರುತ್ತಿದೆ. ಈ ಬಾರಿ ಕೊರೋನಾ ಕಾರಣದಿಂದಾಗಿ ಕೆಲವು ಮಾನದಂಡಗಳನ್ನು ಅನುಸರಿಸಿದ್ದರಿಂದಾಗಿ ಭಕ್ತರಿಗೆ ಅಲ್ಪ ಮಟ್ಟಿನ ಅನಾನುಕೂಲತೆಗಳು ಉಂಟಾಗಿದೆಯಾದರೂ ಭಕ್ತ ಸಮೂಹವು ದೇವಾಲಯದ ನಿಯಮಗಳನ್ನು ಪಾಲಿಸಿ ಸಹಕಾರ ನೀಡಿದ್ದಾರೆ. ಅನನ್ಯ ಪೂಜಾ ವೈವಿಧ್ಯ ಬಾಲ ಎಸು ಮಹೋತ್ಸವ ಸಂದರ್ಭದಲ್ಲಿ ಫಾದರ್ ಕರುನೇಶ್ ದೇವರ ವಾಕ್ಯವನ್ನು ಬೋಧಿಸಿದರೆ, ನಂತರ ಫಾದರ್ ಜಾರ್ಜ್ ಮಾರ್ಗದರ್ಶನದಲ್ಲಿ ಆರಾಧನೆ ವೈಭವ ಭಕ್ತರ ಮನಸೆಳೆಯಿತು. ಪ್ರಧಾನ ಯಾಜಕ ರಾಗಿ ಫಾದರ್ ಸ್ಟ್ಯಾನಿ ಲೋಬೊ…
ಕಟೀಲು ಶ್ರೀ ದೇವಿಗೆ ಧನುರ್ಮಾಸದ ಬೆಳಿಗ್ಗಿನ ಮಹಾಪೂಜೆ.. ಇಲ್ಲಿದೆ ವಿಶೇಷ ಕೈಂಕರ್ಯದ ವೀಡಿಯೊ..
ಮಂಗಳೂರು: ವೈಕುಂಠ ಏಕಾದಶಿ ದಿನವಾದ ಇಂದು ಕರಾವಳಿಯ ದೇವಸ್ಥಾನಗಳಲ್ಲಿ ವಿಶೇಶ ಉತ್ಸವಗಳು ಗಮನಸೆಳೆದಿವೆ. ಕೃಷ್ಣನ ನಾಡು ಉಡುಪಿಯ ಮಠಕ್ಕೆ ಭಕ್ತಸಾಗರವೇ ಹರಿದುಬಂದಿದೆ. ಇದೇ ವೇಳೆ, ಪ್ರತೀ ಹಬ್ಬಗಳಂದು ವಿಶೇಷ ಉತ್ಸವಗಳಿಗೆ ಸಾಕ್ಷಿಯಾಗುತ್ತಿರುವ, ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರ ಸಹಿತ ಕರಾವಳಿಯ ದೇಗುಲಗಳಲ್ಲಿ ವಿಶೇಷ ಪೂಜೆಗಳಲ್ಲಿ ಆಸ್ತಿಕರು ಭಾಗವಹಿಸಿ ಪುನೀತರಾದರು. ಈ ನಡುವೆ ಕಟೀಲು ಶ್ರೀ ದೇವಳದಲ್ಲಿ ಶ್ರೀ ದೇವಿಗೆ ಧನುರ್ಮಾಸದ ಬೆಳಿಗ್ಗಿನ ಮಹಾಪೂಜೆ ನೆರವೇರಿತು. ಭಾರೀ ಸಂಖ್ಯೆಯಲ್ಲಿ ಭಕ್ತರು ಈ ಪೂಜಾ ಕ್ಷಣಕ್ಕೆ ಸಾಕ್ಷಿಯಾದರು. https://youtu.be/rZpCWCLR3fM
ವೈಕುಂಠ ಏಕಾದಶಿ.. ಎಲ್ಲೆಲ್ಲೂ ಗೋವಿಂದನ ಸ್ಮರಣೆ
ವೈಕುಂಠ ಏಕಾದಶಿ. ಬದುಕಿನ ಸಕಲ ಕಷ್ಟಗಳನ್ನೂ ತೊಲಗಿಸಿ ಬಾಳು ಬಂಗಾರವಾಗಿಸು ಎಂದು ದೇವರಲ್ಲಿ ಪ್ರಾರ್ಥಿಸುವ ಕ್ಷಣ. ವೈಕುಂಠದ ಬಾಗಿಲು ತೆರೆದಿದೆ ಎಂಬ ನಂಬಿಕೆಯೂ ಆಸ್ಥಿಕರದ್ದು. ಹಾಗಾಗಿಯೇ ನಾಡಿನ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಮಹೋತ್ಸವಗಳೇ ನೆರವೇರುತ್ತಿದೆ. ಬೆಂಗಳೂರಿನ ಇಸ್ಕಾನ್ ದೇಗುಲ, ವೈಯ್ಯಾಲಿಕಾಲ್ ಬಳಿಯ ತಿರುಮಲ ದೇವಾಲಯ ಸಹಿತ ಬಹುತೇಕ ಎಲ್ಲಾ ದೇವಾಲಯಗಳಲ್ಲೂ ವಿಶೇಷ ಉತ್ಸವಗಳು ಭಕ್ತರ ಗಮನಸೆಳೆದಿದೆ. ವೈಕುಂಠ ಕಥಾಸಾರ ಹೀಗಿದೆ. ಪದ್ಮ ಪುರಾಣದಲ್ಲಿ ಹೇಳಲಾದ ಕಥೆಯಇಲ್ಲಿ ಗಮನಾರ್ಹ. ಮುರನೆಂಬ ರಾಕ್ಷಸನು ದೇವತೆಗಳಿಗೆ ತುಂಬಾ ಉಪಟಳ ಕೋಡುತ್ತಿದ್ದನಂತೆ. ಆಗ ವಿಷ್ಣುನೇ ಆ ರಾಕ್ಷಸನ ಸಂಹಾರಕ್ಕೆ ಮುಂದಾಗುತ್ತಾನಂತೆ.. ವಿಷ್ಣುವಿನ ಅಂಶದಿಂದ ಪ್ರಕಟಗೊಂಡ ‘ಹೈನಮತಿ’ ಎಂಬ ಸ್ತ್ರೀ ದೇವತೆ ಆ ರಾಕ್ಷಸನನ್ನು ಸಂಹರಿಸುತ್ತಾಳೆ. ಆಗ ವಿಷ್ಣುವು ಸಂಪ್ರಿತಗೊಂಡು ಏನಾದರೂ ವರವನ್ನು ಕೇಳು ಎಂದು ಆ ದೇವತೆಗೆ ಹೇಳುತ್ತಾನೆ. ಆಗ ಅವಳು ‘ಯಾರು ಈ ವೈಕುಂಠ ಏಕಾದಶಿ ದಿನದಂದು ವ್ರತವನ್ನು…
ಪೊಳಲಿ ರಾಜರಾಜೇಶ್ವರಿ ದೇವಾಲಯ ಬಳಿ ಸ್ವಚ್ಛ ಭಾರತ್
ಮಂಗಳೂರು: ಗಾಂಧೀ ಜಯಂತಿ ದಿನವಾದ ಇಂದು ಮಂಗಳೂರು ಸಮೀಪದ ಪೊಳಲಿ ರಾಜರಾಜೇಶ್ವರಿ ದೇವಾಲಯ ಬಳಿ ಯುವಕರ ಸಮೂಹ ವಿಶಿಷ್ಟ ಕಾರ್ಯಕ್ರಮ ಆಯೋಜಿಸುವ ಮೂಲಕ ಗಮನಸೆಳೆದರು. ಪುರಾಣ ಪ್ರಸಿದ್ಧ ಪೊಳಲಿ ಕ್ಷೇತ್ರ ಸುತ್ತಮುತ್ತಲ ಪ್ರದೇಶಗಳನ್ನು ಸ್ವಚ್ಛ ಭಾರತ್ ಅಭಿಯಾನ ಮೂಲಕ ಶುಚಿಗೊಳಿಸಲಾಯಿತು. ಬಿಜೆಪಿ ಯುವಮೋರ್ಚಾ ಬಂಟ್ವಾಳ ಇದರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ವಠಾರವನ್ನು ಸ್ವಚ್ಛಗೊಳಿಸಿದ ಕೈಂಕರ್ಯದಲ್ಲಿ ಗ್ರಾಮಸ್ಥರೂ ಸಾಥ್ ನೀಡಿದರು. ಬಿಜೆಪಿ ಮಂಡಲ ಉಪಾಧ್ಯಕ್ಷರಾದ ಚಂದ್ರವತಿ ಪೊಳಲಿ, ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ್ ಬಜ, ಯುವಮೋರ್ಚಾ ಅಧ್ಯಕ್ಷರಾದ ಪ್ರದೀಪ್ ಅಜ್ಜಿಬೆಟ್ಟು, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನೇಶ್ ದಂಬೆದಾರು, ಜಿಲ್ಲಾ ಯುವಮೋರ್ಚಾ ಸದಸ್ಯರಾದ ಕಿಶೋರ್ ಪಲ್ಲಿಪ್ಪಾಡಿ ಸೇರಿದಂತೆ ಅನೇಕ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಅನಂತ ಚತುರ್ದಶಿ ವ್ರತ; ಕೊಂಚಾಡಿ ಕಾಶೀ ಮಠದಲ್ಲಿ ವಿಶೇಷ ಕೈಂಕರ್ಯ
ಮಂಗಳೂರು : ಕಡಲ ತಡಿ ಮಂಗಳೂರಿನ ಪುಣ್ಯ ಕ್ಷೇತ್ರ ಕೊಂಚಾಡಿ ಶ್ರೀ ಕಾಶೀ ಮಠದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಗಮನ ಸೆಳೆಯುತ್ತಿವೆ. ಶ್ರೀ ಅನಂತ ಚತುರ್ದಶಿ (ನೋಪಿ) ವ್ರತ ಪ್ರಯುಕ್ತ ಕೊಂಚಾಡಿ ಶ್ರೀ ಕಾಶೀ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿ ಸಹಿತ ಹಲವರು ಭಾಗಿಯಾದರು. ಚಾತುರ್ಮಾಸ ವ್ರತ ಆಚರಿಸುತ್ತಿರುವ ಶ್ರೀ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ಸಂಸ್ಥಾನದ ದೇವರ ಸಮ್ಮುಖದಲ್ಲಿ ವಿಶೇಷವಾಗಿ ಅನಂತ ಚತುರ್ದಶಿ ಕಲಶ ಪ್ರತಿಷ್ಠಾಪಿಸಿ ವಿಶೇಷ ಪೂಜೆ ನೆರವೇರಿತು. ದೇವರಿಗೆ ವಿಶೇಷವಾಗಿ ತಯಾರಿಸಲ್ಪಟ್ಟ ನೈವೇದ್ಯ ಸಮರ್ಪಿಸಲಾಯಿತು. ಇದನ್ನೂ ಓದಿ.. ಕೊಂಚಾಡಿ ಕಾಶೀ ಮಠದಲ್ಲಿ ದಶಮಸ್ಕಂದ ಹವನ; ಬುಧವಾರ ಸೀಮೋಲಂಘನ ಕೈಂಕರ್ಯ