ಉಗ್ರರ ವಿರುದ್ದ ಭರ್ಜರಿ ಬೇಟೆ: ಎನ್‌ಕೌಂಟರ್‌ನಲ್ಲಿ LET ಕಮಾಂಡರ್ ಹತ್ಯೆ

ಶ್ರೀನಗರ: ಪಹಲ್ಲಾಮ್ ದಾಳಿ ನಂತರ ಜಮ್ಮು ಕಾಶ್ಮೀರದಲ್ಲಿ ಉಗ್ರರ ಬೇಟೆನ್ನು ಬಿರುಸುಗೊಳಿಸಿರುವ ಸೇನೆ, ಭರ್ಜರಿ‌ ಕಾರ್ಯಾಚರಣೆ ನಡೆಸಿ, ಲಷ್ಕರ್ ಇ ತೊಯ್ದಾದ ಟಾಪ್ ಕಮಾಂಡರ್ ಅಲ್ತಾಫ್ ಲಲ್ಲಿಯನ್ನು ಹತ್ಯೆ‌ಮಾಡಿದೆ.

ಭಯೋತ್ಪಾದಕರನ್ನು ಹುಡುಕಿ ಸದೆಬಡಿಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದರು. ಅದರ ಮರುದಿನವೇ ಬಂಡಿಪೋರಾದಲ್ಲಿ ಸೇನಾ ಕಾರ್ಯಾಚರಣೆ ವೇಳೆ ಎನ್ ಕೌಂಟರ್ ನಡೆದಿದೆ. ಈ ವೇಳೆ ಲಷ್ಕರ್ ಇ ತೊಯ್ದಾದ ಟಾಪ್ ಕಮಾಂಡರ್ ಅಲ್ತಾಫ್ ಲಲ್ಲಿ ಹತ್ಯೆಗೀಡಾಗಿದ್ದಾನೆ ಎಂದು ಮೂಲಗಳು ತಿಳಿಸಿದೆ.

Related posts