(ವರದಿ: ಮಹದೇವಸ್ವಾಮಿ ಜಿ. ಗೌಡ) ಚಾಮರಾಜನಗರ: ಪುಟಾಣಿ ಮಕ್ಕಳ ಹೆಜ್ಜೆ, ಅಜ್ಜಿಯರ ನಗು ಹಾಗೂ ಬಾಂಧವ್ಯದ ಸಂಭ್ರಮಕ್ಕೆ ಹನೂರಿನ ಕ್ರಿಸ್ತರಾಜ ಶಾಲೆ ಸಾಕ್ಷಿಯಾಯಿತು. ಶಾಲೆಯಲ್ಲಿ ಶನಿವಾರ ಎಲ್ಕೆಜಿ ಮತ್ತು ಯುಕೆಜಿ ಮಕ್ಕಳಿಗಾಗಿ ಆಯೋಜಿಸಿದ್ದ ಗ್ರ್ಯಾಂಡ್ ಮದರ್ಸ್ ಡೇ ಕಾರ್ಯಕ್ರಮ ಅಜ್ಜಿ-ಮೊಮ್ಮಕ್ಕಳ ನಡುವಿನ ಪ್ರೀತಿಯ ಬಂಧವನ್ನು ಅನಾವರಣಗೊಳಿಸಿತು. ಶಾಲೆಯ ವ್ಯವಸ್ಥಾಪಕ ಫಾದರ್ ಸಂಜಯ್ ಕುಮಾರ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮಕ್ಕಳನ್ನು ಕೇವಲ ಅಂಕಗಳ ಯಂತ್ರಗಳನ್ನಾಗಿ ರೂಪಿಸುವುದಲ್ಲ, ಪ್ರಗತಿಪರ ಚಿಂತನೆ ಹಾಗೂ ಸಾಮಾಜಿಕ ಪ್ರಜ್ಞೆ ಹೊಂದಿರುವ ಉತ್ತಮ ಪ್ರಜೆಗಳನ್ನಾಗಿ ಬೆಳೆಸುವುದು ಶಿಕ್ಷಣ ಸಂಸ್ಥೆಯ ಉದ್ದೇಶವಾಗಿದೆ ಎಂದರು. ಮಕ್ಕಳಲ್ಲಿರುವ ಸೃಜನಶೀಲ ಪ್ರತಿಭೆಯನ್ನು ಹೊರತರುವಲ್ಲಿ ಶಿಕ್ಷಕರ ಪರಿಶ್ರಮ ಮಹತ್ವದ್ದಾಗಿದೆ. ಮಕ್ಕಳನ್ನು ಹುರಿದುಂಬಿಸಲು ಅಮೂಲ್ಯ ಸಮಯ ನೀಡಿ ಆಗಮಿಸಿದ ಪೋಷಕರು ಹಾಗೂ ಅಜ್ಜಿಯರಿಗೆ ಕೃತಜ್ಞತೆ ಸಲ್ಲಿಸಿದರು. ಮುಖ್ಯ ಅತಿಥಿ ಶಿಕ್ಷಣ ಸಂಯೋಜಕ (ಇಸಿಒ) ಮಹೇಶ್ ಮಾತನಾಡಿ,…
Day: August 30, 2026
ಮೈಸೂರು ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶ್ರೀ ದತ್ತ ವಿಜಯಾನಂದ ತೀರ್ಥರ ಚಾತುರ್ಮಾಸ್ಯ ವೈಭವ
ಮೈಸೂರು: ನಗರದ ಊಟಿ ರಸ್ತೆಯಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಕಿರಿಯ ಪೀಠಾಧಿಪತಿಗಳಾದ ಶ್ರೀ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರ 23ನೇ ಚಾತುರ್ಮಾಸ್ಯ ವೈಭವದಿಂದ ನಡೆಯುತ್ತಿದೆ. ಚಾತುರ್ಮಾಸ್ಯದ ಅಂಗವಾಗಿ ಸ್ವಾಮೀಜಿಯವರು ಗೋಪೂಜೆ ನೆರವೇರಿಸಿದರು. ಬಳಿಕ ವಿಶ್ವ ಪ್ರಾರ್ಥನಾ ಮಂದಿರದಲ್ಲಿ ಹಯಗ್ರೀವ ಜಯಂತಿಯನ್ನು ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಶ್ರೀಚಕ್ರ ಪೂಜೆಯೊಂದಿಗೆ ಸ್ವಾಮೀಜಿಯವರಿಗೆ ವಿಶೇಷ ಅಭಿಷೇಕ ಹಾಗೂ ಪೂಜೆ ನೆರವೇರಿಸಲಾಯಿತು. ಇದೇ ಸಂದರ್ಭದಲ್ಲಿ ವಿದ್ವಾನ್ ಪ್ರಜ್ವಲ್ ರಂಗರಾಜು ಹಾಗೂ ತಂಡದಿಂದ ಪೂರ್ಣಿಮಾ ಸಂಗೀತ ಸೇವೆ ನಡೆಯಿತು. ಬಳಿಕ ಪವಮಾನ ಹೋಮ ಹಾಗೂ ಪೂರ್ಣಾಹುತಿ ನೆರವೇರಿತು. ಸಂಜೆ ಪೌಂಡರೀಕ ಮಂಟಪದಲ್ಲಿ ನಡೆದ ಧರ್ಮಸಭೆಯಲ್ಲಿ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ‘ವಿಷ್ಣುಪುರಾಣ’ ಕಥಾ ಮಾಲಿಕೆಯ ಕುರಿತು ಪ್ರವಚನ ನೀಡಿದರು. ವಿಷ್ಣುಪುರಾಣದ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಸಂದೇಶಗಳನ್ನು ಭಕ್ತರಿಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಶ್ರಮಕ್ಕೆ…
