ಸಂವಿಧಾನದಿಂದ ‘ಸಮಾಜವಾದಿ’, ‘ಜಾತ್ಯತೀತ’ ಪದಗಳನ್ನು ತೆಗೆದುಹಾಕುವ RSS ಅಭಿಪ್ರಾಯಕ್ಕೆ ಕಾಂಗ್ರೆಸ್ ಆಕ್ಷೇಪ

ನವದೆಹಲಿ: ಸಂವಿಧಾನ ಪೀಠಿಕೆಯಿಂದ ಸಮಾಜವಾದಿ ಮತ್ತು ಜಾತ್ಯತೀತ ಪದಗಳನ್ನು ಕೈಬಿಡಬೇಕು ಎಂಬ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆಯ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಆರ್‌ಎಸ್‌ಎಸ್‌ನ ನಿಜವಾದ ಮುಖವಾಡ ಮತ್ತೆ ಬಹಿರಂಗವಾಗಿದೆ” ಎಂದು ತೀವ್ರ ಟೀಕೆ ಮಾಡಿದ್ದಾರೆ.

“ಸಂವಿಧಾನ ಸಮಾನತೆ, ಜಾತ್ಯತೀತತೆ ಹಾಗೂ ನ್ಯಾಯದ ಕುರಿತು ಮಾತನಾಡುವುದರಿಂದ ಆರ್‌ಎಸ್‌ಎಸ್ ತೀವ್ರ ಅಸಹನೆಯನ್ನು ವ್ಯಕ್ತಪಡಿಸುತ್ತಿದೆ,” ಎಂದು ಅವರು ‘ಎಕ್ಸ್ ‘ನಲ್ಲಿ ಬರೆದಿದ್ದಾರೆ.

ಆರ್‌ಎಸ್‌ಎಸ್ ಮತ್ತು ಬಿಜೆಪಿಗೆ ಸಂವಿಧಾನ ಅಗತ್ಯವಿಲ್ಲ. ಅವರಿಗೆ ‘ಮನುಸ್ಮೃತಿ’ ಬೇಕು. ಅಂಚಿನಲ್ಲಿರುವವರು ಮತ್ತು ಬಡವರ ಹಕ್ಕುಗಳನ್ನು ಕಸಿದು, ಅವರನ್ನು ಪುನಃ ಗುಲಾಮರನ್ನಾಗಿ ಮಾಡುವ ಉದ್ದೇಶ ಇವರದು. ಸಂವಿಧಾನದಂತಹ ಶಕ್ತಿಶಾಲಿ ಅಸ್ತ್ರವನ್ನು ಮುಟ್ಟಿಸಿ ಬಿಡುವುದು ಇವರ ನಿಜವಾದ ಕಾರ್ಯಸೂಚಿ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

Related posts