ದಾಸವಾಳ ಹೂವಿನಿಂದಲೂ ಚಹಾ ತಯಾರಿಸಬಹುದು. ಇದು ಆರೋಗ್ಯಪೂರ್ಣ ಟೀ ಎನ್ನುತ್ತಾರೆ ಪರಿಣಿತರು. ಬೇಕಾಗುವ ಸಾಮಾಗ್ರಿ ದಾಸವಾಳ ಹೂ 8 ನೀರು 7 ಕಪ್ ಸಕ್ಕರೆ 5 ಚಮಚ ನಿಂಬೆ ರಸ 3 ಚಮಚ ಮಾಡುವ ವಿಧಾನ ದಾಸವಾಳ ಹೂ ಎಸಳನ್ನು ತೆಗದು ಚೆನ್ನಾಗಿ ಸ್ವಚ್ಛ ಮಾಡಿ, ತೊಳೆದು ಇಡಬೇಕು. ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಬೇಕು. ಕುದಿಸಿದ ನೀರನ್ನು ದಾಸವಾಳಕ್ಕೆ ಹಾಕಿ.
Category: ವೈವಿದ್ಯ
‘ಪತ್ರೊಡೆ ಒಗ್ಗರಣೆ’ಯ ರುಚಿಯನ್ನು ನೀವೂ ಒಮ್ಮೆ ಸವಿಯಿರಿ.
ಮೀನು ಪ್ರೀಯರಿಗೂ ಇಷ್ಟ.. ಉದ್ಯೋಗ ಸೃಷ್ಟಿಯೂ ಪಕ್ಕಾ; ChefTalk ಪೂಜಾರಿಯ ‘ಮತ್ಷ್ಯದರ್ಶಿನಿ’ ವೈಶಿಷ್ಟ್ಯ
ಬೆಂಗಳೂರು: ಉದ್ಯೋಗ ಉತ್ತೇಜನ ಪರಿಕಲ್ಪನೆಯಲ್ಲಿ ಯಶಸ್ವಿಯಾಗಿರುವ Chef Talk ಕಂಪೆನಿಯ ಪ್ರವರ್ತಕರಾದ ಗೋವಿಂದ ಪೂಜಾರಿ ಇದೀಗ ರಾಜ್ಯ ಸರ್ಕಾರದ ಮೀನುಗಾರಿಕಾ ಇಲಾಖೆ ಜೊತೆ ಕೈಜೋಡಿಸಿದ್ದಾರೆ. ಮತ್ಯೋದ್ಯಮಕ್ಕೆ ಸ್ಫೂರ್ತಿಯಾಗಿ ಹಾಗೂ ನಿರುದ್ಯೋಗಿಳಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ‘ಮತ್ಸ್ಯಬಂಧ’ ಯೋಜನೆಯನ್ನು ಆರಂಭಿಸಿರುವ ಗೋವಿಂದ ಬಾಬು ಪೂಜಾರಿ, ಇದೀಗ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಹೊನ್ನಪ್ಪ ರೆಡ್ಡಿ ಬಡಾವಣೆಯಲ್ಲಿ ‘ಮತ್ಸ್ಯದರ್ಶಿನಿ’ ಆರಂಭಿಸಿದ್ದಾರೆ. ಮತ್ಸ್ಯಪ್ರಿಯರ ಅಭಿರುಚಿಗೆ ತಕ್ಕಂತೆ ಖಾದ್ಯ ಸಿದ್ದಪಡಿಸಿ ಒದಗಿಸುವ ಈ ದರ್ಶಿನಿಗೆ ರಾಜ್ಯ ಸರ್ಕಾರದ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧಿಕಾರಿಗಳು ಬುಧವಾರ ಚಾಲನೆ ನೀಡಿದರು. ಕಬ್ಬನ್ ಪಾರ್ಕ್ ಬಳಿ ಗ್ರಾಹಕರನ್ನು ಸಂತುಷ್ಟಗೊಳಿಸುವಲ್ಲಿ ಯಶಸ್ವಿಯಾಗಿರುವ ಮತ್ಸ್ಯದರ್ಶಿನಿ ರೀತಿಯಲ್ಲೇ ಹೊನ್ನಪ್ಪ ರೆಡ್ಡಿ ಲೇಔಟ್ನ ಟಿ.ರಾಮಣ್ಣ ಗಾರ್ಡನ್ನಲ್ಲಿ ಸುಸಜ್ಜಿತ ಮತ್ಸ್ಯದರ್ಶಿನಿ ಆರಂಭಗೊಂಡಿದೆ. ಕಡಲ ತೋರಕ್ಕಷ್ಟೇ ಸೀಮಿತವಾಗಿದ್ದ ವಿವಿಧ ತಳಿಗಳ ಮೀನುಗಳ ಖಾಧ್ಯ ಇಲ್ಲಿ ಲಬ್ಯವಿದೆ. ತಾಜಾ ಮೀನುಗಳ ಪೂರೈಕೆಗೂ ಅವಕಾಶ ನೀಡಲಾಗುತ್ತಿದೆ ಎಂದು ಇದರ ಮಾಲಕರೂ…
ಬಂಬೂ ವೆಜ್ ಬಿರಿಯಾನಿ.. ಸ್ವಾದ ಹೇಗಿದೆ ಗೊತ್ತಾ?
ತರಕಾರಿಯಲ್ಲಿ ಹಲವಾರು ಬಗೆಯ ಬಿರಿಯಾನಿ ಮಾಡಬಹುದು. ನಳ ಪಾಕ ಪ್ರವೀಣರು ‘ಬಿದಿರು ತರಕಾರಿ ಬಿರಿಯಾನಿ’ ತಯಾರಿಕೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಈ ‘ಬಿದಿರು ತರಕಾರಿ ಬಿರಿಯಾನಿ’ ಘಮಿಸುವ ಸುವಾಸಾಸನೆಯ ಜೊತೆ ಸ್ವಾದಿಷ್ಟ ರುಚಿಯೂ ಹೌದು. ಇದನ್ನು ಮಾಡುವ ವಿಧಾನವೂ ಸುಲಭ.. ಈರುಳ್ಳಿ 1 ವರೆ ಕಪ್ ಟೊಮ್ಯಾಟೋ 2 ಕಪ್ ಬೀನ್ಸ್ 1 ವರೆ ಕಪ್ ಕ್ಯಾರೆಟ್ 1 ಕಪ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ 2 ಚಮಚ ಪುದಿನ ಸೊಪ್ಪು 1 ಕಪ್ ಕೊತ್ತಂಬರಿ ಸೊಪ್ಪು 1 ಕಪ್ ಬಿರಿಯಾನಿ ಹುಡಿ 2 ಚಮಚ ಲವಂಗ 5 ಏಲಕ್ಕಿ 2 ಚೆಕ್ಕೆ 1 ಚಮಚ ನಕ್ಷತ್ರ ಹೂ 1 ಕಾಯಿ ಮೆಣಸು 2 ಲಿಂಬೆ ರಸ 3 ಚಮಚ ತುಪ್ಪ 5 ಚಮಚ ಎಣ್ಣೆ ಅರ್ಧ ಕಪ್ ಕಲ್ಲುಪ್ಪು 2 ಚಮಚ ಅರಿಶಿನ ಹುಡಿ 1 ಚಮಚ ಅಕ್ಕಿ…
ಕರಾವಳಿ ಶೈಲಿ ‘ಪನೀರ್ ಗೀ ರೋಸ್ಟ್’ನ ರುಚಿ ಸವಿದಿದ್ದೀರಾ?
ಹೋಟೆಲ್’ನಲ್ಲಿ ಸ್ನೇಹಿತರಿಗೆ ಪಾರ್ಟಿ ಕೊಡುವಾಗ ಪಕ್ಕ ವೆಜ್ ಅಂದುಕೊಂಡವರಿಗೆ ಚಿಕನ್-ಮಟನ್’ಗೆ ಪರ್ಯಾಯವಾಗಿ ಆಯ್ಕೆ ಮಾಡುವ ಪದಾರ್ಥವೇ ಪನೀರ್.. ಹಾಲಿನಿಂದ ತಯಾರಾದ ಪನೀರ್’ನಲ್ಲಿ ಹಲವಾರು ಸ್ವಾದಿಷ್ಟ ಪದಾರ್ಥಗಳನ್ನು ತಯಾರಿಸಬಹುದು. ಉತ್ತರ ಭಾರತ ಶೈಲಿಯ ಖಾದ್ಯಕ್ಕಿಂತಲೂ ವಿಶಿಷ್ಟವಾಗಿ ಕರಾವಳಿ ಶೈಲಿ (ಉಡುಪಿ ಶೈಲಿ) ಡಿಶ್ ಅಂದ್ರೆ… ಅದು ವಿಶಿಷ್ಟದಲೂ ವಿಶಿಷ್ಟ. ಅದರಲ್ಲೂ ಮಂಗಳೂರು-ಉಡುಪಿ ಕಡೆ ಔತಣಕ್ಕೆ ಪ್ರತಿಷ್ಠೆ ಕರುಣಿಸುವ ‘ಪನೀರ್ ಗೀ ರೋಸ್ಟ್’ನ ರುಚಿ ಸವಿದಿದ್ದೀರಾ? ಹಾಗಿದ್ದರೆ ಈ ರೀತಿ ‘ಪನೀರ್ ಗೀ ರೋಸ್ಟ್’ ತಯಾರಿಸಿ ರುಚಿ ಸವಿಯಿರಿ.. ಇದನ್ನು ಮಾಡುವ ವಿಧಾನವೂ ಸುಲಭ..
ರಾಮಭಕ್ತರನ್ನು ರೊಚ್ಚಿಗೆಬ್ಬಿಸಿದ ಹಾಡು.. ಪೂಜಾ ಹಾಡಿನ ಮೋಡಿ ಹೇಗಿದೆ ಗೊತ್ತಾ?
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಸಂಬಂಧ ಪ್ರಕ್ರಿಯೆಗಳು ಬಿರುಸುಗೊಂಡಿದೆ. ಶಿಲಾನ್ಯಾಸ ಸಮಾರಂಭದ ಸನ್ನಿವೇಶದಿಂದಾಗಿ ರಾಮ ಜನ್ಮಸ್ಥಾನ ಸುತ್ತಮುತ್ತಲ ನಗರಗಳಲ್ಲಿ ಹಬ್ಬದ ವಾತಾವರಣ ಕಂಡುಬಂದಿದೆ. ಈ ಸಡಗರ ಅಯೋಧ್ಯೆಗಷ್ಟೇ ಸೀಮಿತವಾಗಿಲ್ಲ. ದೇಶವ್ಯಾಪಿ ಕೇಸರಿ ಕಾರ್ಯಕರ್ತರಲ್ಲಿ ಸಂಭ್ರಮ ಮೂಡಿಸಿದೆ. ಈ ಸಂದರ್ಭದಲ್ಲಿ ವಿಶೇಷ ಹಾಡೊಂದು ರಾಮಭಕ್ತರನ್ನು ರೊಚ್ಚಿಗೆಬ್ಬಿಸಿದೆ. ‘ಮೇರಾ ಭಾರತ್ ಕ ಬಚ್ಚಾ ಬಚ್ಚಾ ಜೈ ಜೈ ಶ್ರೀ ರಾಮ್ ಬೋಲೆಗ’ ಹಾಡು ಶ್ರೀಮ ಭಕ್ತರ ಉತ್ಸಾಹವನ್ನು ಹೆಚ್ಚಿಸಿದೆ. ಸುಮಾರು 2 ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡು ಹರಿದಾಡಿತ್ತಾದರೂ, ಇತ್ತೀಚಿನ ಕೆಲವು ದಿನಗಳಲ್ಲಿ ಈ ಹಾಡು ಮುನ್ನೆಲೆಗೆ ಬಂದಿದೆ. ಪೂಜಾ ಗೊಲ್ಹಾನಿಯಾ ಹಾಡಿನ ಮೋಡಿ ಎಲ್ಲರ ಗಮನವನ್ನು ಸೂಜಿಗಲ್ಲಿನಂತೆ ಸೆಳೆದಿದೆ. ಎಲ್ಲೆಲ್ಲೂ ಈ ಹಾಡೇ ಝೇಂಕರಿಸುತ್ತಿದ್ದು, ಭಾರೀ ಸುದ್ದಿಯಾಗುತ್ತಿದೆ. ಇದನ್ನೂ ನೋಡಿ.. ‘ದಿ ಕಾರ್ಗಿಲ್ ಗರ್ಲ್..’ ವೀರ ವನಿತೆಯ ಸಾಹಸ ಗಾಥೆ; ಟ್ರೈಲರ್’ನಲ್ಲೇ ಅಡಗಿದೆ ಥ್ರಿಲ್
‘ಟೆಲಿಗ್ರಾಮ್’ನಲ್ಲಿದೆ ದೈತ್ಯ ಫೇಲ್’ಗಳನ್ನು ಕಳುಹಿಸಲು ಅವಕಾಶ
ವಾಟ್ಸಾಪ್ ಜಗತ್ತಿನಲ್ಲೇ ಜನಪ್ರಿಯ ಮೆಸೆಂಜರ್ ಆಗಿ ಗಮನಸೆಳೆದಿದೆ. ಆದರೆ ಇದೀಗ ವಾಟ್ಸಾಪ್’ಗಿಂತಲೂ ಉತ್ತಮ ಆಯ್ಕೆಗೆ ‘ಟೆಲಿಗ್ರಾಮ್’ ವೇದಿಕೆಯಾಗುತ್ತಿದೆ. ವೀ ಟ್ರಾನ್’ಸ್ಫರ್ ನಿರ್ಬಂಧಿಸಲ್ಪಟ್ಟ ನಂತರ ದೈತ್ಯ ಫೈಲ್’ಗಳನ್ನು ಕಳುಹಿಸುವುದು ಪ್ರಯಾಸದ ಕೆಲಸವಾಗಿದೆ. ಇದೀಗ ಆ ಚಿಂತೆಯನ್ನು ಟೆಲಿಗ್ರಾಮ್ ದೂರ ಮಾಡಿದೆ. ಸೋಶಿಯಲ್ ಮೆಸೇಜಿಂಗ್ ಆ್ಯಪ್ ವಾಟ್ಸ್ ಆಪ್ ನ ಪ್ರತಿಸ್ಪರ್ಧಿ ಟೆಲಿಗ್ರಾಮ್ ತನ್ನ ಚಂದಾದಾರರಿಗೆ ಹೆಚ್ಚಿನ ಸೌಲಭ್ಯ ಒದಗಿಸಿದ್ದು, ಸಂದೇಶ ರವಾನೆಯ ಜೊತೆಗೆ 2 ಜಿಬಿ ವರೆಗಿನ ಫೈಲ್’ ಗಳನ್ನು ಕಳಿಸುವ ಅವಕಾಶ ನೀಡಿದೆ. ಫೈಲ್ ವರ್ಗಾವಣೆ ಮಿತಿಯನ್ನು 1.5ಜಿಬಿಯಿಂದ 2 ಜಿಬಿಗಳಿಗೆ ಏರಿಕೆಮಾಡಿರುವ ಟೆಲಿಗ್ರಾಮ್, 500 ಸದಸ್ಯರಿರುವ ಗ್ರೂಪ್ ರಚನೆಗೂ ಅವಕಾಶ ನೀಡಿದೆ. ಜೊತೆಗೆ ಅನಾಮಿಕ ಖಾತೆಯಿಂದ ಬರುವ ಸಂದೇಶಗಳನ್ನು ತಡೆಯುವ ಆಯ್ಕೆಗೂ ಅವಕಾಶವಿದೆ.
ವರಮಹಾಲಕ್ಷ್ಮಿ ಹಬ್ಬ; ಎಲ್ಲೆಲ್ಲೂ ಹಬ್ಬದ ಆಚರಣೆಯ ಸೊಬಗು
ಇಂದು ವರಮಹಾಲಕ್ಷ್ಮಿ ಹಬ್ಬ. ಎಲ್ಲೆಲ್ಲೂ ಹಬ್ಬದ ಆಚರಣೆಯ ಸೊಬಗು.. ಎಲ್ಲೆಲ್ಲೂ ಅದೃಷ್ಟ ಲಕ್ಷ್ಮಿಯ ಆರಾಧನೆಯ ಸೊಗಸು.. ಆಸ್ತಿಕ ಬಂಧುಗಳು ಮನೆಗಳಲ್ಲಿ ಲಕ್ಷ್ಮೀಯನ್ನು ಪ್ರತಿಷ್ಠಾಪಿಸಿ ವರಮಹಾ ಲಕ್ಷ್ಮಿ ಪೂಜೆಯನ್ನು ಶ್ರದ್ದಾ ಭಕ್ತಿಯಿಂದ ಆಚರಿಸುತ್ತಿದ್ದಾರೆ. ನಾಡಿನ ದೇವಾಲಯಗಳಲ್ಲೂ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದೆ. ಈ ನಡುವೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಾಡಿನ ಜನತೆಗೆ ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ‘ಈ ಹಬ್ಬವು ಎಲ್ಲರಿಗೂ ಸುಖ, ಸಂತೋಷ, ಸಮೃದ್ಧಿಗಳನ್ನು ಕರುಣಿಸಲಿ, ಎಲ್ಲ ಸಂಕಷ್ಟಗಳನ್ನು ಪರಿಹರಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಭಕ್ತಿಪೂರ್ವಕ ಶುಭಕಾಮನೆಗಳು. ಜಗನ್ಮಾತೆಯು ಎಲ್ಲರಿಗೂ ಸುಖ, ಸಂತೋಷ, ಸಮೃದ್ಧಿಗಳನ್ನು ಕರುಣಿಸಲಿ, ಎಲ್ಲ ಸಂಕಷ್ಟಗಳನ್ನು ಪರಿಹರಿಸಲಿ ಎಂದು ಪ್ರಾರ್ಥಿಸುತ್ತೇನೆ. ಕೊರೋನಾ ಹಿನ್ನಲೆಯಲ್ಲಿ ಮನೆಗಳಲ್ಲಿಯೇ ಸರಳವಾಗಿ ಹಬ್ಬವನ್ನು ಆಚರಿಸೋಣ, ಮುನ್ನೆಚ್ಚರಿಕೆಗಳನ್ನು, ಸುರಕ್ಷತಾ ನಿಯಮಗಳನ್ನು ಪಾಲಿಸೋಣ. pic.twitter.com/rADdi5vf6j — B.S.Yediyurappa…
ಒಂದೇ ನಂಬರ್.. 4 ಮೊಬೈಲ್’ಗಳಲ್ಲಿ ಬಳಕೆ : WhatsApp ಹೊಸ ಫೀಚರ್ ಬಗ್ಗೆ ಗೊತ್ತಾ?
ಸಾಮಾಜಿಕ ಜಾಲತಾಣಗಳ ಪೈಕಿ ಜನಸ್ನೇಹಿಯಾಗಿರುವ ವಾಟ್ಸಪ್ ಇದೀಗ ತನ್ನ ಚಂದಾದಾರರಿಗೆ ಮತ್ತಷ್ಟು ಅನುಕೂಲ ಕಲ್ಪಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಫೇಸ್’ಬುಕ್’ನ ಅಂಗ ಸಂಸ್ಥೆ ವಾಟ್ಸಪ್ ದಿಟ್ಟ ಹೆಜ್ಜೆ ಇಟ್ಟಿದೆ. ಒಂದೇ ನಂಬರಿನ ವಾಟ್ಸಪ್’ನ್ನು ನಾಲ್ಕು ಮೊಬೈಲ್ ಸೆಟ್’ಗಳಲ್ಲಿ ಆಪರೇಟ್ ಮಾಡಲು ಸಾಧ್ಯವಾಗುವ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಪ್ರಸ್ತುತ ಒಂದು ನಂಬರಿನಲ್ಲಿ ಇನ್’ಸ್ಟಾಲ್ ಮಾಡಿರುವ ವಾಟ್ಸಪ್’ನ ಆಪ್ ಅದೇ ಹೊತ್ತಿಗೆ ಬೇರೋದು ಸೆಟ್’ನಲ್ಲಿ ಬಳಸಲು ಸಾಧ್ಯವಿಲ್ಲ. ಒಂದು ಮೊಬೈಲ್ ಸೆಟ್ ಹಾಗೂ ನಿಗದಿತ ಅಂತರದಲ್ಲಿ ಒಂದು ವೆಬ್ ವಾಟ್ಸಾಪ್ ಮೂಲಕ ಬಳಕೆ ಸಾಧ್ಯವಿದೆ. ಇನ್ನು ಮುಂದೆ ಮಲ್ಟಿ ಡಿವೈಸ್ ಫೀಚರನ್ನು ನೀಡಲು ವಾಟ್ಸಪ್ ಮುಂದಾಗಿದೆ. ಈ ಮೂಲಕ ಯಾರಾದರೂ ತಮ್ಮ ಒಂದೇ ವಾಟ್ಸಪ್ ನಂಬರನ್ನು ಏಕಕಾಲದಲ್ಲಿ ನಾಲ್ಕು ಬೇರೆಬೇರೆ ಡಿವೈಸ್ ಗಳಲ್ಲಿ ಬಳಸಲು ಅನುಕೂಲವಾಗಲಿದೆ. ಸಧ್ಯ ವಾಟ್ಸಪ್ ಬಿಟಾ ಆವೃತ್ತಿಯಲ್ಲಿ ಈ ಫೀಚರ್ ಲಭ್ಯವಿದ್ದು, ಶೀಘ್ರದಲ್ಲೇ ಎಲ್ಲರೂ…
ಪೈನಾಪಲ್ ದೋಸಾ.. ಸ್ವಾದಿಷ್ಟದ ಖಾದ್ಯ
ನಳಪಾಕ ಪ್ರವೀಣರು ಏನು ಮಾಡಿದರೂ ಸ್ವಾದಿಷ್ಟ. ಆ ಪಟ್ಟಿಯಲ್ಲಿದೆ ಅನಾನಾಸು ದೋಸೆ. ಅನಾನಾಸು ಕೇವಲ ಹಣ್ಣಲ್ಲ, ಜ್ಯುಸ್ ಅಷ್ಟೇ ಅಲ್ಲ, ತಿಂಡಿ ತಿನಿಸಿಗೂ ಈ ಹಣ್ಣು ಸೂಕ್ತ. ಇದೇ ಹಣ್ಣಿನ ದೋಸೆ ಕೂಡಾ ಬಲು ರುಚಿ. ಇದನ್ನು ಮಾಡುವ ವಿಧಾನವೂ ಸುಲಭ.. ಬೇಕಾದ ಸಾಮಾಗ್ರಿ: ದೋಸೆ ಅಕ್ಕಿ 2 ಕಪ್ ಅನಾನಾಸು 1 ಕಪ್ ಉಪ್ಪು ರುಚಿಗೆ ತಕ್ಕಷ್ಟು ಮಾಡುವ ವಿಧಾನ: ದೋಸೆ ಅಕ್ಕಿಯನ್ನು 4 ಗಂಟೆ ಅಥವಾ ರಾತ್ರಿ ಇಡಿ ನೆನೆ ಹಾಕಿ. ನಂತರ ಒಂದು ಜಾರಿನಲ್ಲಿ ನೆನೆ ಹಾಕಿದ ಅಕ್ಕಿ, ತುಂಡು ಮಾಡಿಕೊಂಡ ಅನಾನಸ್, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಬೇಕಾದಲ್ಲಿ ನೀರು ಹಾಕಿ ಹಿಟ್ಟಿನ ಹದ ಮಾಡಿಕೊಳ್ಳಬೇಕು. ಬಿಸಿ ಬಿಸಿ ಕಾವಲಿಗೆ ಹಿಟ್ಟನ್ನು ಹಾಕಿ ದೋಸೆ ಎರೆದು ಬೇಯಿಸಿ. ಬೇಯಿಸುವಾಗ ತುಪ್ಪ ಅಥವಾ ಎಣ್ಣೆ…
