ಲಾಕ್’ಡೌನ್ ಸಡಿಲಿಕೆ; ಏನಿರಲ್ಲ? ಏನಿರುತ್ತೆ? ಹೊಸ ನಿಯಮ ಹೀಗಿದೆ..

ಬೆಂಗಳೂರು: ಕೊರೋನಾ ಕಾರಣಕ್ಕಾಗಿ ಲಾಕ್’ಡೌನ್ ಜಾರಿಗೊಳಿಸಿದ್ದ ಸರ್ಕಾರ ಇದೀಗ ಕಠಿಣ ನಿಯಮಗಳಲ್ಲಿ ಸಡಿಲಿಕೆ ಮಾಡಿದೆ. ಲಾಕ್’ಡೌನ್’ನಿಂದಾಗಿ ಆರ್ಥಿಕ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಹಾಗಾಗಿ ಪುನಶ್ಚೇತನಗೊಳಿಸುವ ಉದ್ದೇಶದಿಂದ ಬುಧವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಮಾರ್ಗಸೂಚಿಯಲ್ಲಿ ಬದಲಾವಣೆ ತರಲಾಗಿದೆ.

ಕೊವಿಡ್​​-19 ಸೋಂಕಿನ ಪ್ರಕರಣಗಳು ಹೆಚ್ಚು ಕಂಡುಬಂದಿರುವ ಹಿನ್ನೆಲೆಯಲ್ಲಿ​​ ಕಂಟೇನ್’ನ್ಮೆಂಟ್‌ ಝೋನ್’ಗಳೆಂದು ಗುರುತಿಸಲ್ಪಟ್ಟಿರುವ ಪ್ರದೇಶಗಳನ್ನು ಹೊರತುಪಡಿಸಿ ಇನ್ನುಳಿದ ಕಡೆ ಹೊಸ ಮಾರ್ಗಸೂಚಿ ಪ್ರಕಾರ ಲಾಕ್​​ಡೌನ್ ನಿರ್ಬಂಧ‌ ಸಡಿಲಗೊಳಿಸಲಾಗಿದೆ. ಪ್ರದೇಶಗಳಲ್ಲಿ
ಅಗತ್ಯ ಸೇವೆಗಳಿಗೆ ಲಾಕ್​​ಡೌನ್‌ ನಿಂದ ವಿನಾಯಿತಿ ನೀಡಲಾಗಿದೆ. ಆದರೆ ಮನರಂಜನೆ ಹಾಗೂ ಸಾರಿಗೆ ಸಹಿತ ಕೆಲವು ಸೇವೆಗಳಿಗೆ ಯಾವುದೇ ಅನುಮತಿ ಸಿಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಅವಕಾಶ:

  • ಪಾಸ್ ಇದ್ದವರಿಗಷ್ಟೇ ಸಂಚಾರಕ್ಕೆ ಅನುಮತಿ
  • ಹೊಟೆಲ್​ಗಳಲ್ಲಿ ಪಾರ್ಸೆಲ್ ಸೇವೆಗಳಿಗೆ ಅವಕಾಶ
  • ಕೊರಿಯರ್‌ ಸೇವೆಗೆ ಅನುಮತಿ
  • ಪೇಪರ್, ರಸಗೊಬ್ಬರ, ಎಪಿಎಂಸಿ ಮಾರ್ಕೆಟ್ ತೆರೆಯಲಿವೆ
  • ಕೃಷಿ ಮತ್ತು ಮೀನುಗಾರಿಕೆ ವಲಯಕ್ಕೆ ಅನುಮತಿ
  • ಕೃಷಿ ನೀರಾವರಿಗೆ ಯಾವುದೇ ನಿರ್ಬಂಧ ಇಲ್ಲ
  • ಕಟ್ಟಡ ನಿರ್ಮಾಣ, ಕಟ್ಟಡ ಕಾಮಗರಿಗಳಿಗೆ ಅನುಮತಿ
  • ಟೀ ಕಾಫಿ ಪ್ಲಾಂಟೇಷನ್​​ಗೆ ಅವಕಾಶ
  • ಗ್ರಾಮೀಣ ಪ್ರದೇಶದಲ್ಲಿ ರಸ್ತೆ ಕಾಮಗಾರಿಗೆ ಅವಕಾಶ
  • ಪಶುಸಂಗೋಪನೆ, ಬ್ಯಾಂಕುಗಳ ನಿರ್ವಹಣೆ
  • ಲಾರಿ ರಿಪೇರಿ ಮಾಡುವ ಗ್ಯಾರೇಜ್’ಗೆ ಅವಕಾಶ

ಅವಕಾಶ ಇಲ್ಲ

  • ಮೆಟ್ರೋ ರೈಲು ಸಂಚಾರಕ್ಕೆ ಅವಕಾಶ ಇಲ್ಲ
  • ಶಾಪಿಂಗ್ ಮಾಲ್, ಸಿನಿಮಾ ಥಿಯೇಟರ್ ತೆರೆಯುವುದಿಲ್ಲ
  •  ಶಾಲಾ ಕಾಲೇಜು ತೆರೆಯುವಂತಿಲ್ಲ
  • ಟ್ಯಾಕ್ಸಿ ಆಟೋ ಬಸ್ ಸಂಚಾರ ಬಂದ್

Related posts