ಆರೆಸ್ಸೆಸ್ ಹಿರಿಯ ಪ್ರಚಾರಕ್ ಶಿವಶಂಕರ್ ಇನ್ನಿಲ್ಲ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕ್ ಶಿವಶಂಕರ್‌ಜಿ ಅವರು ವಿಧಿವಶರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು. ಸೋಮವಾರ ಮಧ್ಯಾಹ್ನ ಹೃದಯಾಘಾತಕ್ಕೀಡಾಗಿ ಅವರು ಕೊನೆಯುಸಿರೆಳೆದರು ಎಂದು ಸಂಘದ ಪ್ರಮುಖರು ತಿಳಿಸಿದ್ದಾರೆ.

ಶೃಂಗೇರಿ-ಕೊಪ್ಪ ಬಳಿಯ ಬಸ್ರಿಕಟ್ಟೆ ಕೆಮ್ಮಣ್ಣು (ಚಂದ್ರಗಿರಿ) ಮೂಲದವರಾದ ಶಿವಶಂಕರ್‌ಜಿ 1954ರ ಸೆ.15ರಂದು ಜನಾರ್ದನಯ್ಯ ಮತ್ತು ಗೌರಮ್ಮ ದಂಪತಿ ಸುಪುತ್ರರಾಗಿ ಜನಿಸಿದವರು.ಇವರು ಬಿಬಿಎಂ ಶಿಕ್ಷಣ ಮುಗಿಸಿ ಸಂಘಪ್ರಚಾರಕರಾಗಿ ಬದುಕನ್ನು ರಾಷ್ಟ್ರಸೇವೆಗೆ ಮುಡಿಪಾಗಿಡಲು ನಿರ್ಧರಿಸಿದರು.ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರಚಾರಕ್ ಆಗಿದ್ದ ಸೇವೆ ಸಲ್ಲಿಸಿದ್ದರು. ಅನಂತರ ಮಂಗಳೂರು ವಿಭಾಗ ಕಾರ್ಯಾಲಯ ಪ್ರಮುಖರಾಗಿ, ಬೆಂಗಳೂರು ವಿಭಾಗ ಕಾರ್ಯಾಲಯ ‘ಮಾಧವಸ್ಮತಿ’ಯ ಕಾರ್ಯಾಲಯ ಪ್ರಮುಖರಾಗಿ ಎಲ್ಲರ ಪ್ರೀತಿ, ಗೌರವಕ್ಕೆ ಪಾತ್ರರಾಗಿದ್ದರು.

ಸರಳ -ಶಿಸ್ತಿನ ಬದುಕನ್ನು ರೂಢಿಸಿಕೊಂಡಿದ್ದ ಅವರು, ಸಹೃದಯಿಯಾಗಿ ನೂರಾರು ಕುಟುಂಬಗಳ ಪ್ರೀತಿಗಳಿಸಿದ್ದರು. ಕಳೆದ ಆರು ತಿಂಗಳುಗಳಿAದ ಅನಾರೋಗ್ಯ ಕಾರಣದಿಂದ ಅವರು ಚನ್ನೇನಹಳ್ಳಿ ವಿದ್ಯಾಕೇಂದ್ರದಲ್ಲಿ ವಿಶ್ರಾಂತಿಯಲ್ಲಿದ್ದರು.

ಸೋಮವಾರ ಮಧ್ಯಾಹ್ನ ಹೃದಯಾಘಾತಕ್ಕೀಡಾಗಿ ಶಿವಶಂಕರ್‌ಜಿ ಕೊನೆಯುಸಿರೆಳೆದರು ಎಂದು ಸಂಘದ ಪ್ರಮುಖರು ತಿಳಿಸಿದ್ದಾರೆ.

Related posts