ಕಸೌಲಿ ಕಾಡ್ಗಿಚ್ಚು ನಿಯಂತ್ರಣ: ಐಎಎಫ್ ಹೆಲಿಕಾಪ್ಟರ್‌ ಕಾರ್ಯಾಚರಣೆ ಯಶಸ್ವಿ

ನವದೆಹಲಿ: ಹಿಮಾಚಲ ಪ್ರದೇಶದ ಕಸೌಲಿಯಲ್ಲಿ ಸಂಭವಿಸಿದ ಭಾರೀ ಕಾಡ್ಗಿಚ್ಚನ್ನು ನಿಯಂತ್ರಿಸಲು ಭಾರತೀಯ ವಾಯುಪಡೆ (IAF) 24 ಗಂಟೆಗಳ ವೈಮಾನಿಕ ಅಗ್ನಿಶಾಮಕ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದೆ.

ಮೇ 26ರಂದು ಕಸೌಲಿ ಸಮೀಪದ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡ ಬಳಿಕ, ಪರಿಸ್ಥಿತಿಯನ್ನು ಅವಲೋಕಿಸಲು ಮೊದಲು ಎಚ್‌ಎಎಲ್ ಚೀತಾ ಹೆಲಿಕಾಪ್ಟರ್‌ನ್ನು ನಿಯೋಜಿಸಲಾಯಿತು. ಬಳಿಕ ಮಿಲ್ Mi-17 ಹೆಲಿಕಾಪ್ಟರ್‌ಗಳ ಮೂಲಕ ಅಗ್ನಿಶಾಮಕ ಕಾರ್ಯಾಚರಣೆ ಆರಂಭಿಸಲಾಯಿತು.

ಸೋಲನ್ ಜಿಲ್ಲೆಯ ಕಸೌಲಿ ಬೀಟ್ ಪ್ರದೇಶದಲ್ಲಿ ಸುಮಾರು 10 ಹೆಕ್ಟೇರ್ ವ್ಯಾಪ್ತಿಗೆ ಹರಡಿದ್ದ ಬೆಂಕಿಯಿಂದ ವಸತಿ ಪ್ರದೇಶಗಳು, ಪ್ರಮುಖ ಮೂಲಸೌಕರ್ಯಗಳು ಹಾಗೂ ಮಿಲಿಟರಿ ಸ್ಥಾಪನೆಗಳಿಗೆ ಅಪಾಯ ಉಂಟಾಗಿತ್ತು.

Indian Airforce with active assistance from the Army and the State administration played major role in extinguishing Kasauli Forest Fire.

Mi-17 V5 using Bambi Bucket were pressed into action on 26th May 2026 to airdrop water over areas affected by fire. The operations was… pic.twitter.com/HUcEpKRM1r

— Ministry of Defence, Government of India (@SpokespersonMoD) May 30, 2026

ರಾಜ್ಯ ಆಡಳಿತ, ಅರಣ್ಯ ಇಲಾಖೆ, ಸೇನೆ ಹಾಗೂ ಸ್ಥಳೀಯ ಅಧಿಕಾರಿಗಳ ಸಹಯೋಗದಲ್ಲಿ ಕಾರ್ಯಾಚರಣೆ ನಡೆಸಿದ ಐಎಎಫ್, ಸುಖ್ನಾ ಸರೋವರದಿಂದ ನೀರನ್ನು ಸಂಗ್ರಹಿಸಿ ‘ಬಾಂಬಿ ಬಕೆಟ್’ ತಂತ್ರದ ಮೂಲಕ ಬೆಂಕಿ ಪೀಡಿತ ಪ್ರದೇಶಗಳಿಗೆ ಸುರಿಯಿತು. ಪ್ರತಿ ಹಾರಾಟದಲ್ಲಿ ಸುಮಾರು 2,000 ರಿಂದ 2,500 ಲೀಟರ್ ನೀರನ್ನು ಸಾಗಿಸಲಾಗಿದ್ದು, ಒಟ್ಟು 93,000 ಲೀಟರ್‌ಗಿಂತ ಹೆಚ್ಚು ನೀರನ್ನು ಸುರಿಸಲಾಗಿದೆ.

ವಿಶೇಷವೆಂದರೆ, ಐಎಎಫ್ ಇತಿಹಾಸದಲ್ಲೇ ಮೊದಲ ಬಾರಿಗೆ ನೈಟ್ ವಿಷನ್ ಗಾಗಲ್ಸ್ (NVG) ಬಳಸಿ ರಾತ್ರಿ ವೇಳೆಯಲ್ಲೂ ಬಾಂಬಿ ಬಕೆಟ್ ಕಾರ್ಯಾಚರಣೆ ನಡೆಸಲಾಗಿದೆ. ಇದರಿಂದ ಕಡಿಮೆ ಗೋಚರತೆ ಮತ್ತು ದುರ್ಗಮ ಪರ್ವತ ಪ್ರದೇಶಗಳಲ್ಲಿಯೂ ಅಗ್ನಿಶಾಮಕ ಕಾರ್ಯ ನಿರಂತರವಾಗಿ ಮುಂದುವರಿಸಲು ಸಾಧ್ಯವಾಗಿದೆ.

Related posts