ಸಂಜಯ್ ದತ್ ‘ಆಖ್ರಿ ಸವಾಲ್’ ಮೇ 15ರಂದು ಬಿಡುಗಡೆ

ಮುಂಬೈ: ನಟ ಸಂಜಯ್ ದತ್ ಅಭಿನಯದ ‘ಆಖ್ರಿ ಸವಾಲ್’ ಚಿತ್ರದ ಬಿಡುಗಡೆ ದಿನಾಂಕವನ್ನು ನಿರ್ಮಾಪಕರು ಘೋಷಿಸಿದ್ದಾರೆ. ಈ ಚಿತ್ರವು ಮೇ 15, 2026ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರತಂಡ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಪೋಸ್ಟರ್ ಬಿಡುಗಡೆ ಮಾಡಿ, “ಭಾರತ ಎಂದಿಗೂ ಪ್ರಶ್ನೆ ಕೇಳುವುದನ್ನು ನಿಲ್ಲಿಸಲಿಲ್ಲ… ಮೇ 15ರಂದು ಉತ್ತರ ತಿಳಿದುಕೊಳ್ಳಲು ಸಿದ್ಧರಾಗಿ” ಎಂಬ ಟ್ಯಾಗ್‌ಲೈನ್ ಮೂಲಕ ಕುತೂಹಲ ಹೆಚ್ಚಿಸಿದೆ. ಈ ಚಿತ್ರದಲ್ಲಿ ಅಮಿತ್ ಸಾಧ್, ನಮಾಶಿ ಚಕ್ರವರ್ತಿ, ಸಮೀರಾ ರೆಡ್ಡಿ, ತ್ರಿಧಾ ಚೌಧರಿ ಹಾಗೂ ನೀತು ಚಂದ್ರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಅಭಿಜೀತ್ ಮೋಹನ್ ವಾರಂಗ್ ನಿರ್ದೇಶಿಸಿದ್ದಾರೆ. ‘ಪಿಕಾಸೊ’ ಚಿತ್ರಕ್ಕಾಗಿ ವಿಶೇಷ ಮೆಚ್ಚುಗೆಯನ್ನು ಪಡೆದ ಅವರು, ವಿಭಿನ್ನ ಕಥಾಹಂದರಗಳ ಮೂಲಕ ಗಮನ ಸೆಳೆದಿದ್ದಾರೆ. ‘ಆಖ್ರಿ ಸವಾಲ್’ ಚಿತ್ರವು ರಾಷ್ಟ್ರೀಯ ಸ್ವಯಂಸೇವಕ ಸಂಘದ 100 ವರ್ಷಗಳ ಪ್ರಯಾಣವನ್ನು ಆಧರಿಸಿದ ನೈಜ ಕಥೆಯನ್ನು ತೆರೆಗೆ…

‘ಧುರಂಧರ್ 2’ ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕಾದ ಸಿನಿಮಾ: ರಜನಿಕಾಂತ್ ಪ್ರಶಂಸೆ

ಮುಂಬೈ: ‘ಧುರಂಧರ್: ದಿ ರಿವೆಂಜ್’ ಚಿತ್ರಕ್ಕೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದು, “ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕಾದ ಚಿತ್ರ” ಎಂದು ಹೊಗಳಿದ್ದಾರೆ. ಸೋಮವಾರ ತಮ್ಮ ಸಾಮಾಜಿಕ ಜಾಲತಾಣ Xನಲ್ಲಿ ಪ್ರತಿಕ್ರಿಯಿಸಿದ ಅವರು, “ಎಂತಹ ಚಿತ್ರ ‘ಧುರಂಧರ್ 2’. ನಿರ್ದೇಶಕ ಆದಿತ್ಯ ಧರ್ ಬಾಕ್ಸ್ ಆಫೀಸ್ ಕಾ ಬಾಪ್. ರಣವೀರ್ ಸಿಂಗ್ ಹಾಗೂ ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು. ಇದು ನೋಡಲೇಬೇಕಾದ ಸಿನಿಮಾ. ಜೈ ಹಿಂದ್” ಎಂದು ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಿರ್ದೇಶಕ ಆದಿತ್ಯ ಧರ್, ರಜನಿಕಾಂತ್ ಅವರ ಮಾತುಗಳನ್ನು “ಜೀವನದ ಅತ್ಯಂತ ದೊಡ್ಡ ಸೂಪರ್ ಸ್ಟಾರ್ ಕ್ಷಣ” ಎಂದು ವರ್ಣಿಸಿದರು. “ನಮ್ಮಲ್ಲಿ ಮನರಂಜನೆಗೆ ಮಾನದಂಡವೇ ನೀವು. ನಿಮ್ಮಿಂದಲೇ ನಾವು ಪ್ರೇರಿತರಾಗಿದ್ದೇವೆ. ‘ಧುರಂಧರ್ 2’ ಅನ್ನು ನೀವು ನೋಡಲೇಬೇಕಾದ ಸಿನಿಮಾ ಎಂದಿರುವುದು ನನಗೆ ಅತ್ಯಂತ ಗೌರವದ ಸಂಗತಿ” ಎಂದು ಹೇಳಿದರು. ಆದಿತ್ಯ ಧರ್ ನಿರ್ದೇಶನದ ಈ ಚಿತ್ರದಲ್ಲಿ…

‘ದೃಶ್ಯಂ 3’ ಬಿಡುಗಡೆ ಮುಂದೂಡಿಕೆ; ಮೋಹನ್ ಲಾಲ್ ಹುಟ್ಟುಹಬ್ಬದಂದು ಥಿಯೇಟರ್‌ಗಳಿಗೆ ಎಂಟ್ರಿ

ಮುಂಬೈ: ಮಲಯಾಳಂ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರ ‘ದೃಶ್ಯಂ 3’ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಇದೀಗ ಈ ಚಿತ್ರವು ಮೇ 21ರಂದು, ನಟ ಮೋಹನ್ ಲಾಲ್ ಅವರ ಹುಟ್ಟುಹಬ್ಬದಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಮೊದಲಿಗೆ ಏಪ್ರಿಲ್ 2ರಂದು ಬಿಡುಗಡೆಯಾಗಬೇಕಿದ್ದ ಚಿತ್ರವನ್ನು ತಯಾರಕರು ಮುಂದೂಡಿದ್ದು, ಹೊಸ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಮಾಹಿತಿ ಹಂಚಿಕೊಂಡ ಮೋಹನ್ ಲಾಲ್, “ಭೂತಕಾಲ ಎಂದಿಗೂ ಮೌನವಾಗಿರುವುದಿಲ್ಲ… ಅದು ಕಾಯುತ್ತದೆ. ಜಾರ್ಜ್‌ಕುಟ್ಟಿ ಮೇ 21, 2026ರಂದು ಬರುತ್ತಾನೆ” ಎಂದು ಬರೆದುಕೊಂಡಿದ್ದಾರೆ. ಈ ಚಿತ್ರದ ನಿರ್ದೇಶನವನ್ನು ಜೀತು ಜೋಸೆಫ್ ಮಾಡಿದ್ದು, ಬಿಡುಗಡೆ ಮುಂದೂಡಿಕೆಗೆ ಪಶ್ಚಿಮ ಏಷ್ಯಾದ ಉದ್ವಿಗ್ನತೆಯೂ ಒಂದು ಕಾರಣವಾಗಿರಬಹುದು ಎಂದು ವರದಿಗಳು ಸೂಚಿಸುತ್ತಿವೆ. ‘ದೃಶ್ಯಂ 3’ ಚಿತ್ರದಲ್ಲಿ ಮೋಹನ್ ಲಾಲ್ ಮತ್ತೆ ಜಾರ್ಜ್‌ಕುಟ್ಟಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಮೀನಾ, ಅನ್ಸಿಬಾ ಹಸನ್, ಎಸ್ತರ್ ಅನಿಲ್, ಆಶಾ ಶರತ್, ಸಿದ್ದಿಕ್ ಸೇರಿದಂತೆ ಪ್ರಮುಖ ಕಲಾವಿದರು ನಟಿಸಿದ್ದಾರೆ.…

ನಟ ಲೆಜೆಂಡ್ ಸರವಣನ್ ಮೂವಿ ‘ಲೀಡರ್’ ಏಪ್ರಿಲ್ 9ರಂದು ತೆರೆಗೆ

ಚೆನ್ನೈ: ಉದ್ಯಮಿ-ನಟ ಲೆಜೆಂಡ್ ಸರವಣನ್ ನಾಯಕನಾಗಿ ಅಭಿನಯಿಸಿರುವ ಬಹು ನಿರೀಕ್ಷಿತ ತಮಿಳು ಚಿತ್ರ ಲೀಡರ್ ಏಪ್ರಿಲ್ 9ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಚಿತ್ರಕ್ಕೆ ಆರ್.ಎಸ್. ದುರೈ ಸೆಂಥಿಲ್‌ಕುಮಾರ್ ನಿರ್ದೇಶನ ನೀಡಿದ್ದು, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಯು/ಎ ಪ್ರಮಾಣಪತ್ರ ನೀಡಿರುವುದರಿಂದ ಕುಟುಂಬ ಸಮೇತರಾಗಿ ವೀಕ್ಷಿಸಬಹುದಾಗಿದೆ. ನಿರ್ದೇಶಕರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ದಿನಾಂಕದ ಪೋಸ್ಟರ್ ಹಂಚಿಕೊಂಡು, ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಈಗಾಗಲೇ ಬಿಡುಗಡೆಯಾದ ಟೀಸರ್ ಸಿನಿ ಪ್ರೇಮಿಗಳ ಗಮನ ಸೆಳೆದಿದ್ದು, ತಂದೆ-ಮಗಳು ಸಂಬಂಧದ ಸುತ್ತ ಸಾಗುವ ಭಾವನಾತ್ಮಕ ಕಥೆಯ ಜೊತೆಗೆ ಆಕ್ಷನ್ ಮತ್ತು ಥ್ರಿಲ್ ಅಂಶಗಳು ಚಿತ್ರದಲ್ಲಿ ಮೇಳೈಸಿರುವುದು ಕಂಡುಬರುತ್ತಿದೆ. ಸರವಣನ್ ಅವರು ‘ಶಕ್ತಿವೇಲ್’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತನ್ನ ಮಗಳನ್ನು ರಕ್ಷಿಸಲು ಯಾವ ಮಟ್ಟಕ್ಕೂ ಹೋಗುವ ತಂದೆಯ ಕಥೆಯನ್ನು ಚಿತ್ರ ಹೇಳಲಿದೆ. ಚಿತ್ರದಲ್ಲಿ ಬಾಲಿವುಡ್ ನಟಿ ಪಾಯಲ್…

‘ಕರುಪ್ಪು’: ಮೇ 14, 2026ರಂದು ವಿಶ್ವಾದ್ಯಂತ ತೆರೆಗೆ

ಚೆನ್ನೈ: ತಮಿಳು ಸಿನಿ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿರುವ ಆಕ್ಷನ್ ಥ್ರಿಲ್ಲರ್ ಕರುಪ್ಪು ಮೇ 14, 2026ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ ಎಂದು ನಿರ್ಮಾಪಕರು ಘೋಷಿಸಿದ್ದಾರೆ. ಚಿತ್ರದಲ್ಲಿ ನಟ ಸೂರ್ಯ ನಾಯಕನಾಗಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ನಿರ್ದೇಶನ ನೀಡಿರುವ ಆರ್ ಜೆ ಬಾಲಾಜಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ದಿನಾಂಕವನ್ನು ಪ್ರಕಟಿಸಿ, “#ಕರುಪ್ಪು – 14-05-2026. ಬ್ಲಾಕ್‌ಬಸ್ಟರ್ ಬೇಸಿಗೆ ಪ್ರಾರಂಭವಾಗುತ್ತದೆ!” ಎಂದು ಬರೆದು ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಿಸಿದ್ದಾರೆ. ಈಗಾಗಲೇ ಬಿಡುಗಡೆಯಾದ ಟೀಸರ್ ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಕರುಪ್ಪು ದೇವರ ಆರಾಧನೆಯ ಹಿನ್ನೆಲೆಯೊಂದಿಗೆ ಕಥೆ ಸಾಗುವುದರ ಸೂಚನೆ ನೀಡಿದೆ. ಟೀಸರ್‌ನಲ್ಲಿ ಸೂರ್ಯ ಅವರು ‘ಸರವಣನ್’ ಎಂಬ ವಕೀಲರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, “ಕರುಪ್ಪು” ಎಂಬ ಇನ್ನೊಂದು ಗುರುತಿನೊಂದಿಗೆ ತೀವ್ರ ಆಕ್ಷನ್ ಅವತಾರದಲ್ಲಿ ಮಿಂಚಿದ್ದಾರೆ. ಚಿತ್ರವು ಆಕ್ಷನ್, ಸಸ್ಪೆನ್ಸ್ ಮತ್ತು ವಾಣಿಜ್ಯ ಅಂಶಗಳ ಸಮನ್ವಯವಾಗಿದ್ದು, ಹಲವು ಪವರ್‌ಫುಲ್ ಡೈಲಾಗ್‌ಗಳು ಮತ್ತು ಭರ್ಜರಿ ಹೋರಾಟದ…

‘ಕೆಡಿ ದಿ ಡೆವಿಲ್’ ಹಾಡು ವಿವಾದ: ಮಹಿಳಾ ಆಯೋಗ ಕೆಂಡ

ಬೆಂಗಳೂರು : ‘ಕೆಡಿ ದಿ ಡೆವಿಲ್’ (KD The Devil) ಚಿತ್ರದ ‘ಸರ್ಸೆ ನಿನ್ನ ಸೆರಗ’ ಹಾಡು ಬಿಡುಗಡೆಯಾಗುತ್ತಿದ್ದಂತೆಯೇ ಭಾರೀ ವಿವಾದಕ್ಕೆ ಗುರಿಯಾಗಿದೆ. ಜೋಗಿ ಪ್ರೇಮ್ ನಿರ್ದೇಶನದಲ್ಲಿ ಧ್ರುವ ಸರ್ಜಾ (Dhruva Sarja) ಅಭಿನಯದ ಈ ಚಿತ್ರಕ್ಕೆ ಆರಂಭದಲ್ಲೇ ಅಡೆತಡೆ ಎದುರಾಗಿದ್ದು, ಹಾಡಿನ ಹಿಂದಿ ಆವೃತ್ತಿಯನ್ನು ಯೂಟ್ಯೂಬ್ (YouTube) ಸೇರಿದಂತೆ ಎಲ್ಲ ಪ್ಲಾಟ್‌ಫಾರ್ಮ್‌ಗಳಿಂದ ತೆಗೆದುಹಾಕಲಾಗಿದೆ ಎಂದು ತಿಳಿದುಬಂದಿದೆ. ಹಾಡಿನ ಸಾಹಿತ್ಯ ಮಾತ್ರವಲ್ಲದೆ ನೃತ್ಯ ಸಂಯೋಜನೆಯ ಮೇಲೂ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೃಶ್ಯಗಳು ಅಸಭ್ಯವಾಗಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ಕೇಳಿಬಂದಿದೆ. ವಿವಾದ ತೀವ್ರಗೊಳ್ಳುತ್ತಿದ್ದಂತೆಯೇ ಕರ್ನಾಟಕ ರಾಜ್ಯ ಮಹಿಳಾ ಆಯೋಗ (Karnataka State Women Commission) ಚಿತ್ರರಂಗದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film Chamber of Commerce) ಹಾಗೂ ಕೇಂದ್ರೀಯ ಚಲನಚಿತ್ರ ಪ್ರಮಾಣಪತ್ರ ಮಂಡಳಿ (Central Board of Film Certification)ಗೆ ಪತ್ರ…

ಮದುವೆಯ ಬಳಿಕ ರಶ್ಮಿಕಾ–ವಿಜಯ್ ಮೊದಲ ನೃತ್ಯ..

ಮುಂಬೈ: ನವವಿವಾಹಿತ ದಂಪತಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ (Vijay Deverakonda) ಮದುವೆಯ ನಂತರ ಮೊದಲ ಬಾರಿಗೆ ಒಟ್ಟಿಗೆ ನೃತ್ಯ ಮಾಡುತ್ತಿರುವ ಮುದ್ದಾದ ಕ್ಷಣದ ವೀಡಿಯೊವನ್ನು ನಟ ಆನಂದ್ ದೇವರಕೊಂಡ (Anand Deverakonda) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬುಧವಾರ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಆನಂದ್ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ವಿಜಯ್ ಮತ್ತು ರಶ್ಮಿಕಾ ಸ್ನೇಹಿತರೊಂದಿಗೆ ಹಸಿರು ಹುಲ್ಲಿನ ಮೈದಾನದಲ್ಲಿ ಉಲ್ಲಾಸದಿಂದ ನೃತ್ಯ ಮಾಡುತ್ತಿರುವ ದೃಶ್ಯಗಳು ಕಾಣಿಸುತ್ತವೆ. ಈ ಸಂದರ್ಭದಲ್ಲೇ ಆನಂದ್ ಸಹ ದಂಪತಿಗಳೊಂದಿಗೆ ಸೇರಿಕೊಂಡು ಸಂತೋಷದ ಕ್ಷಣವನ್ನು ಹಂಚಿಕೊಳ್ಳುತ್ತಿರುವುದು ವೀಡಿಯೊದಲ್ಲಿ ಸೆರೆಹಿಡಿಯಲಾಗಿದೆ. ವೀಡಿಯೊದಲ್ಲಿ ವಿಜಯ್ ಬಿಳಿ ಪ್ಯಾಂಟ್‌ಗೆ ವರ್ಣರಂಜಿತ ಶರ್ಟ್ ಧರಿಸಿದ್ದರೆ, ರಶ್ಮಿಕಾ ಶಾರ್ಟ್ಸ್ ಮತ್ತು ಶರ್ಟ್ ಧರಿಸಿರುವುದು ಗಮನ ಸೆಳೆಯುತ್ತದೆ. ಸುತ್ತಮುತ್ತಲಿದ್ದ ಸ್ನೇಹಿತರು ಕೂಡ ಈ ಸಂಭ್ರಮದಲ್ಲಿ ಭಾಗಿಯಾಗಿ ನೃತ್ಯ ಮಾಡುತ್ತಿರುವುದು ಕಾಣಿಸುತ್ತದೆ. ಈ ವೀಡಿಯೊದ ಹಿನ್ನೆಲೆಯಾಗಿ ಆನಂದ್ ಅಭಿನಯದ…

ಸೋಶಿಯಲ್ ಮೀಡಿಯಾದಲ್ಲಿ ಹೆಣ್ಮಕ್ಕಳಿಗೆ ಕಿರುಕುಳ ನಿಲ್ಲಬೇಕು’; ರಮ್ಯಾ

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಕಾಮೆಂಟ್‌ಗಳು ಮತ್ತು ಸಂದೇಶಗಳನ್ನು ಕಳುಹಿಸಿದವರ ವಿರುದ್ಧ ಕಾನೂನು ಹೋರಾಟ ಆರಂಭಿಸಿರುವ ನಟಿ ರಮ್ಯಾ (Ramya Divya Spandana) ಅವರು, ಆರೋಪಿಗಳನ್ನು ನೋಡಿದಾಗ ಕೆಲವೊಮ್ಮೆ ಬೇಸರವಾಗುತ್ತದೆ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರಿಗೆ ಹೆಚ್ಚುತ್ತಿರುವ ಕಿರುಕುಳದ ವಿರುದ್ಧ ಕ್ರಮ ಕೈಗೊಳ್ಳುವ ಉದ್ದೇಶದಿಂದಲೇ ಈ ಪ್ರಕರಣವನ್ನು ದಾಖಲಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ. ತಮ್ಮ ದೂರಿನ ಸಂಬಂಧ ಬೆಂಗಳೂರು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಸಾಕ್ಷಿ ಹೇಳಿಕೆಗಾಗಿ ಮಂಗಳವಾರ ರಮ್ಯಾ ನ್ಯಾಯಾಲಯಕ್ಕೆ ಹಾಜರಾದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಆರೋಪಿಗಳನ್ನು ನೋಡಿದರೆ ಪಾಪ ಅನ್ಸುತ್ತೆ. ಆದರೆ ನಾನು ಇದನ್ನು ನನಗೋಸ್ಕರ ಮಾಡುತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಹೆಣ್ಮಕ್ಕಳಿಗೆ ತುಂಬಾ ಕಿರುಕುಳ ನೀಡಲಾಗುತ್ತಿದೆ. ಅದನ್ನು ನಿಲ್ಲಿಸಬೇಕು. ಮಹಿಳೆಯರಿಗೆ ರಕ್ಷಣೆ ದೊರಕಬೇಕು. ಅದಕ್ಕಾಗಿ ಈ ಕೇಸ್ ಹಾಕಿದ್ದೇನೆ,” ಎಂದು ಹೇಳಿದರು. ಈ ಪ್ರಕರಣದಲ್ಲಿ ಮಂಗಳವಾರ ಅವರು ಸಾಕ್ಷಿ ನೀಡಿದ್ದಾರೆ. ಮುಂದಿನ ದಿನಾಂಕದಲ್ಲಿ…

ಅಭಿಷೇಕ್ ಜೊತೆ ಸಲ್ಮಾನ್ ಹಾಡಿಗೆ ಐಶ್ವರ್ಯಾ ರೈ ನೃತ್ಯ

ಮುಂಬೈ: ಮುಂಬೈನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) ತಮ್ಮ ಪತಿ ಅಭಿಷೇಕ್ ಬಚ್ಚನ್ (Abhishek Bachchan) ಜೊತೆ ನಟ ಸಲ್ಮಾನ್ ಖಾನ್ (Salman Khan) ಅವರ ಹಾಡಿಗೆ ನೃತ್ಯ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಐಶ್ವರ್ಯಾ ಮತ್ತು ಅಭಿಷೇಕ್ 2007ರಲ್ಲಿ ಬಿಡುಗಡೆಯಾದ ಸಲಾಮ್-ಎ-ಇಷ್ಕ್ (Salaam‑e‑Ishq) ಚಿತ್ರದ ಶೀರ್ಷಿಕೆ ಹಾಡಿಗೆ ಒಟ್ಟಿಗೆ ಹೆಜ್ಜೆ ಹಾಕುತ್ತಿರುವುದು ಕಾಣಿಸುತ್ತದೆ. ಈ ಚಿತ್ರದಲ್ಲಿ ಅನಿಲ್ ಕಪೂರ್ (Anil Kapoor), ಗೋವಿಂದ (Govinda), ಜೂಹಿ ಚಾವ್ಲಾ (Juhi Chawla), ಅಕ್ಷಯ್ ಖನ್ನಾ (Akshaye Khanna), ಜಾನ್ ಅಬ್ರಹಾಂ (John Abraham), ಪ್ರಿಯಾಂಕಾ ಚೋಪ್ರಾ (Priyanka Chopra), ವಿದ್ಯಾ ಬಾಲನ್ (Vidya Balan), ಆಯೇಷಾ ಟಕಿಯಾ (Ayesha Takia) ಮತ್ತು ಇಶಾ ಕೊಪ್ಪಿಕರ್ (Isha Koppikar) ಸೇರಿದಂತೆ ಹಲವರು…

ನಟ ವಿಜಯ್ ವಿರುದ್ಧ ಮತ್ತೆ ಕೋರ್ಟ್ ಮೆಟ್ಟಿಲೇರಿದ ಪತ್ನಿ ಸಂಗೀತಾ

ಚೆನ್ನೈ: ನಟ ಹಾಗೂ ವಿಜಯ್ ಅವರೊಂದಿಗೆ ನಡೆಯುತ್ತಿರುವ ವೈವಾಹಿಕ ವಿವಾದದ ನಡುವೆ, ಅವರ ಪತ್ನಿ ಸಂಗೀತಾ ಸೊರ್ನಲಿಂಗಂ ಕಾನೂನು ರಕ್ಷಣೆ ಹಾಗೂ ನೀಲಂಕರೈಯಲ್ಲಿರುವ ಮನೆಯಲ್ಲಿ ವಾಸಿಸುವ ಹಕ್ಕು ಕೋರಿ ಚೆಂಗಲ್ಪಟ್ಟು ಕುಟುಂಬ ನ್ಯಾಯಾಲಯದ ಮೊರೆ ಹೋಗಿದ್ದಾರೆ. ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ, ಚೆನ್ನೈ (Chennai) ಸಮೀಪದ ನೀಲಂಕರೈ (Neelankarai) ನಿವಾಸದಲ್ಲಿ ವಾಸಿಸಲು ತಮ್ಮನ್ನು ತಡೆಯಲಾಗುತ್ತಿದೆ ಮತ್ತು ತಾವು ಪ್ರಸ್ತುತ ಮನೆ ಇಲ್ಲದೆ ಉಳಿದಿರುವುದಾಗಿ ಸಂಗೀತಾ ಆರೋಪಿಸಿದ್ದಾರೆ. ಆದ್ದರಿಂದ ಆಸ್ತಿಯಲ್ಲಿ ವಾಸಿಸಲು ಅವಕಾಶ ನೀಡುವಂತೆ ನ್ಯಾಯಾಲಯ ಆದೇಶಿಸಬೇಕೆಂದು ಅವರು ಮನವಿ ಮಾಡಿದ್ದಾರೆ. ಅರ್ಜಿಯಲ್ಲಿ, ವಿಜಯ್ ಅವರ ಕಾನೂನು ಪ್ರತಿನಿಧಿಗಳಿಂದ ತಮಗೆ ಬೆದರಿಕೆ ಎದುರಾಗುತ್ತಿದೆ ಎಂದು ಸಂಗೀತಾ ಹೇಳಿಕೊಂಡಿದ್ದಾರೆ. ನೀಲಂಕರೈ ಮನೆಯಲ್ಲಿ ತಮಗೂ ಸಮಾನ ಪಾಲು ಇದೆ ಎಂದು ಹೇಳಿಕೊಂಡು, ಆಸ್ತಿಯಲ್ಲಿ ಶೇಕಡಾ 50ರಷ್ಟು ಮಾಲೀಕತ್ವಕ್ಕೆ ತಾವು ಅರ್ಹರು ಎಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ದಂಪತಿಗಳ ನಡುವಿನ ಕಾನೂನು ಪ್ರಕ್ರಿಯೆಗಳು ಮುಕ್ತಾಯಗೊಳ್ಳುವವರೆಗೆ…