‘ಮೈಸಾ’ ಚಿತ್ರೀಕರಣದ ಪ್ರಮುಖ ಹಂತ ಪೂರ್ಣ: ಹೊಸ ರೀತಿಯ ಪಾತ್ರದಲ್ಲಿ ರಶ್ಮಿಕಾ

ಮುಂಬೈ: ನಟಿ ರಶ್ಮಿಕಾ ಮಂದಣ್ಣ ತಮ್ಮ ಬಹುನಿರೀಕ್ಷಿತ ಮೈಸಾ (Mysa) ಚಿತ್ರದ ಪ್ರಮುಖ ಚಿತ್ರೀಕರಣ ವೇಳಾಪಟ್ಟಿಯನ್ನು ಕೇರಳದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ದೀರ್ಘ ಹಾಗೂ ತೀವ್ರ ಶ್ರಮದ ಈ ಹಂತ ಮುಗಿದ ಹಿನ್ನೆಲೆಯಲ್ಲಿ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ತಂಡದೊಂದಿಗೆ ತೆಗೆದ ವಿಡಿಯೋ ಹಂಚಿಕೊಂಡಿರುವ ರಶ್ಮಿಕಾ, ಚಿತ್ರತಂಡದ ಪರಿಶ್ರಮಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ನಿರ್ದೇಶಕ ರವೀಂದ್ರ ಪುಲ್ಲೆ ಅವರ ಮಾರ್ಗದರ್ಶನದಲ್ಲಿ ಸಾಗುತ್ತಿರುವ ಈ ಚಿತ್ರಕ್ಕೆ ಎಲ್ಲರೂ ಸಮರ್ಪಿತವಾಗಿ ದುಡಿದಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಈ ಚಿತ್ರಕ್ಕಾಗಿ ರಶ್ಮಿಕಾ ಸಾಕಷ್ಟು ತಯಾರಿ ನಡೆಸಿದ್ದು, ವಿಶೇಷವಾಗಿ ಬ್ಯಾಂಕಾಕ್‌ನಲ್ಲಿ ಗಟ್ಟಿಯಾದ ಆ್ಯಕ್ಷನ್ ತರಬೇತಿ ಪಡೆದಿದ್ದಾರೆ. ದಿನಕ್ಕೆ ಎಂಟು ಗಂಟೆಗಳಿಗಿಂತ ಹೆಚ್ಚು ಕಾಲ ತರಬೇತಿ ಪಡೆದು ಹೈ-ಆಕ್ಟೇನ್ ಸಾಹಸ ದೃಶ್ಯಗಳಿಗೆ ಸಿದ್ಧರಾಗಿದ್ದಾರೆ ಎನ್ನಲಾಗಿದೆ. ಈ ಚಿತ್ರದಲ್ಲಿ ಅವರು ಮೊದಲ ಬಾರಿಗೆ ಗೊಂಡ್ ಬುಡಕಟ್ಟು ಸಮುದಾಯದ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಈಶ್ವರಿ ರಾವ್, ಗುರು…

ನಟ ಚೇತನ್ ದೂರು: ನಿರ್ಮಾಪಕ ಸಾ.ರಾ. ಗೋವಿಂದು ವಿರುದ್ಧ ಬೆದರಿಕೆ ಆರೋಪ

ಬೆಂಗಳೂರು: ನಟ ಹಾಗೂ ಕಾರ್ಯಕರ್ತೆ ಚೇತನ್ ಅಹಿಂಸಾ ಅವರು ನಿರ್ಮಾಪಕ ಹಾಗೂ ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಮಾಜಿ ಅಧ್ಯಕ್ಷ ಸಾ ರಾ ಗೋವಿಂದು ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದರೆಂದು ಆರೋಪಿಸಿದ್ದಾರೆ. ಕನ್ನಡದ ದಂತಕಥೆ ಡಾ. ರಾಜ್‌ಕುಮಾರ್ ಅವರಿಗೆ ಕರ್ನಾಟಕ ಸರ್ಕಾರ ಮಂಜೂರು ಮಾಡಿದ 2.5 ಎಕರೆ ಭೂಮಿ ವಿಚಾರವನ್ನು ಪ್ರಶ್ನಿಸಿದ್ದ ಹಿನ್ನೆಲೆಯಲ್ಲಿ ಈ ವಿವಾದ ಉದ್ಭವಿಸಿದೆ ಎಂದು ತಿಳಿದುಬಂದಿದೆ. ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಗೋವಿಂದು, ಚೇತನ್ ನಿವಾಸದ ಬಳಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಚೇತನ್ ತಮ್ಮ ಹೇಳಿಕೆ ಕುರಿತು ಕ್ಷಮೆಯಾಚಿಸಿದ್ದರೂ, ಘಟನೆ ಬಗ್ಗೆ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಅವರು ಮತ್ತು ವಿವಿಧ ಜನಪರ ಸಂಘಟನೆಗಳ ಸದಸ್ಯರು ಶೇಷಾದ್ರಿಪುರಂ ಪೊಲೀಸ್ ಠಾಣೆ ಯಲ್ಲಿ ದೂರು ಸಲ್ಲಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಚೇತನ್, “ಏಪ್ರಿಲ್ 25ರಂದು ನಾವು ಅವರ ಮನೆಗೆ…

‘ಲವ್ ಮಾಕ್ಟೇಲ್ 3’ OTTಗೆ: ಮೇ 8ರಿಂದ ಸ್ಟ್ರೀಮಿಂಗ್

ಸ್ಯಾಂಡಲ್‌ವುಡ್ ನಟ-ನಿರ್ದೇಶಕ ಡಾರ್ಲಿಂಗ್ ಕೃಷ್ಣ ಅವರ ‘ಲವ್ ಮಾಕ್ಟೇಲ್’ ಸರಣಿಯ ಮೂರನೇ ಭಾಗವಾದ Love Mocktail 3 ಈಗ OTTಗೆ ಬರುತ್ತಿದೆ. ‘ಕ್ರಿಸ್ಮಿ ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ನಿರ್ಮಿಸಿರುವ ಈ ಸಿನಿಮಾ ಮಾರ್ಚ್ 19ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಹಿಟ್ ಆಗಿದೆ. ಈ ಸಿನಿಮಾ, ಇದೀಗ ZEE5 ಮೂಲಕ ಮೇ 8ರಿಂದ ವೀಕ್ಷಣೆಗೆ ಲಭ್ಯವಾಗಲಿದೆ. ತಂದೆ-ಮಗಳ ಭಾವುಕ ಕಥೆ ‘ಲವ್ ಮಾಕ್ಟೇಲ್ 3’ ಸಿನಿಮಾದ ಮುಖ್ಯ ಆಕರ್ಷಣೆ ತಂದೆ-ಮಗಳ ಭಾವುಕ ಸಂಬಂಧ. ಆದಿತ್ಯ (ಡಾರ್ಲಿಂಗ್ ಕೃಷ್ಣ) ಮತ್ತು ನಿಧಿ (ಸಂವೃತಾ) ನಡುವಿನ ಬಾಂಧವ್ಯವನ್ನು ಮನಸೂರೆಗೊಳ್ಳುವ ರೀತಿಯಲ್ಲಿ ಚಿತ್ರಿಸಲಾಗಿದೆ. ದತ್ತು ಪಡೆದ ಮಗಳ ಜೊತೆಗಿನ ದಿನಚರಿ, ತುಂಟಾಟ, ಪ್ರೀತಿ ಹಾಗೂ ಕುಟುಂಬದ ಸನ್ನಿವೇಶಗಳು ಪ್ರೇಕ್ಷಕರ ಮನಸೆಳೆಯುತ್ತವೆ. ಚಿತ್ರದ ದ್ವಿತೀಯಾರ್ಧದಲ್ಲಿ ಭಾವುಕ ತಿರುವು ಮೂಡಿ ಬರುತ್ತದೆ. ಆದಿತ್ಯ ತನ್ನ ಮಗಳನ್ನು ಕಳೆದುಕೊಳ್ಳುತ್ತಾನೆಯೇ ಎಂಬ ಪ್ರಶ್ನೆ…

ಡಾಲಿ ಧನಂಜಯ್ ದಂಪತಿಗೆ ಗಂಡು ಮಗು; ಮನೆ ತುಂಬ ಸಂತಸ

ಬೆಂಗಳೂರು: ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ಡಾಲಿ ಧನಂಜಯ್ (Dolly Dhananjay) ಹಾಗೂ ವೈದ್ಯೆ ಧನ್ಯತಾ (Dhanyata) ದಂಪತಿಗೆ ಮೇ 2ರಂದು ಗಂಡು ಮಗು ಜನಿಸಿದ್ದು, ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ. 2025ರ ಫೆಬ್ರವರಿ 16ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ, ಮದುವೆಯಾದ ಒಂದು ವರ್ಷದ ಸಂಭ್ರಮದ ಬೆನ್ನಲ್ಲೇ ಇದೀಗ ಮಗುವನ್ನು ಸ್ವಾಗತಿಸಿದೆ. ಗಂಡು ಮಗು ಜನಿಸಿದ ಸಂತಸದ ವಿಚಾರವನ್ನು ಡಾಲಿ ಧನಂಜಯ್ (Dolly Dhananjay) ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಗುವಿನ ಪುಟ್ಟ ಕೈಗಳ ಫೋಟೋವನ್ನು ಪೋಸ್ಟ್ ಮಾಡುತ್ತಾ ತಾವು ತಂದೆಯಾದ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಈ ಸುದ್ದಿ ತಿಳಿದ ತಕ್ಷಣ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ದಂಪತಿಗೆ ಶುಭಾಶಯಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.

ಮೂರು ವಿಭಿನ್ನ ಲೋಕ; ಸ್ವಯಂಭು’ ಭರ್ಜರಿ ಸೆಟ್‌

ಮುಂಬೈ: ಮುಂಬರುವ ಪ್ಯಾನ್-ಇಂಡಿಯಾ ಚಿತ್ರ ‘ಸ್ವಯಂಭು’ ಭರ್ಜರಿ ಸೆಟ್‌ಗಳ ಮೂಲಕ ಸಿನಿರಂಗದಲ್ಲಿ ಚರ್ಚೆಗೆ ಕಾರಣವಾಗಿದೆ. ಚಿತ್ರದ ನಿರ್ದೇಶಕ ಭರತ್ ಕೃಷ್ಣಮಾಚಾರಿ, ಒಳಾಂಗಣ ಚಿತ್ರೀಕರಣಕ್ಕಾಗಿ ನಿರ್ಮಿಸಲಾದ ಎರಡು ಬೃಹತ್ ಸೇತುವೆಗಳ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಚಿತ್ರದ ನಿರ್ಮಾಣದಲ್ಲಿ ಮೂರು ವಿಭಿನ್ನ ಲೋಕಗಳನ್ನು ಸೃಷ್ಟಿಸಲಾಗಿದೆ ಎಂದು ನಿರ್ದೇಶಕರು ಹೇಳಿದ್ದಾರೆ. ಹೈದರಾಬಾದ್‌ನ ಜನವಾಡದಲ್ಲಿ ಸುಮಾರು 6ರಿಂದ 8 ಎಕರೆ ಪ್ರದೇಶದಲ್ಲಿ ಪೂರ್ಣ ಪ್ರಮಾಣದ ಹಳ್ಳಿಯ ಸೆಟ್ ನಿರ್ಮಿಸಲಾಗಿದ್ದು, ಇದಕ್ಕೆ ಸುಮಾರು 40ರಿಂದ 45 ದಿನಗಳ ಕಾಲ ಹಿಡಿದಿದೆ. ನೈಜತೆ ಮತ್ತು ವಿವರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇನ್ನೊಂದು ಲೋಕವನ್ನು ನಾಯಕಿಯ ಕಥಾಹಂದರಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾಗಿದ್ದು, ಮೊದಲ ಸೆಟ್‌ನಿಂದಲೇ ರೂಪುಗೊಂಡಿದ್ದರೂ, ಸಂಪೂರ್ಣವಾಗಿ ವಿಭಿನ್ನ ಗುರುತನ್ನು ನೀಡಲಾಗಿದೆ. ಚಿತ್ರದ ಕ್ಲೈಮ್ಯಾಕ್ಸ್ ಭಾಗವೇ ಅತ್ಯಂತ ವೈಭವಶಾಲಿಯಾಗಿದ್ದು, ಅನ್ನಪೂರ್ಣ ಸ್ಟುಡಿಯೋದಲ್ಲಿ ಸುಮಾರು 70ರಿಂದ 80 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಇಲ್ಲಿ…

‘ಕೆಡಿ: ದಿ ಡೆವಿಲ್’: ಟ್ರೇಲರ್‌ ಎಡವಟ್ಟು ಬಗ್ಗೆ ಚಿತ್ರತಂಡ ವಿಷಾದ

ಚೆನ್ನೈ: ನಿರ್ದೇಶಕ ಪ್ರೇಮ್ ಅವರ ಬಹುನಿರೀಕ್ಷಿತ ಚಿತ್ರ ಕೆಡಿ: ದಿ ಡೆವಿಲ್ ಟ್ರೇಲರ್‌ಗೆ ಸಂಬಂಧಿಸಿದಂತೆ ನಿರ್ಮಾಪಕರು ವಿಷಾದ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್‌ನಲ್ಲಿ ಪ್ರಮಾಣೀಕರಿಸದ ಕೆಲವು ದೃಶ್ಯಗಳು ಆಕಸ್ಮಿಕವಾಗಿ ಸೇರಿರುವುದನ್ನು ಗಮನಿಸಿದ ಹಿನ್ನೆಲೆಯಲ್ಲಿ, ಟ್ರೇಲರ್ ಅನ್ನು ಯೂಟ್ಯೂಬ್‌ನಿಂದ ತೆಗೆದುಹಾಕಲಾಗಿದೆ. ಚಿತ್ರವನ್ನು ನಿರ್ಮಿಸಿರುವ KVN Productions ಸಂಸ್ಥೆ ಸಾಮಾಜಿಕ ಮಾಧ್ಯಮದ ಮೂಲಕ ಪ್ರಕಟಣೆ ನೀಡಿ, “ಪ್ರಮಾಣೀಕರಣ ಪ್ರಕ್ರಿಯೆಯಲ್ಲಿ ಕೆಲವು ದೃಶ್ಯಗಳು ಅಜಾಗರೂಕತೆಯಿಂದ ಒಳಗೊಂಡಿವೆ. ಈ ಕಾರಣದಿಂದ ಟ್ರೇಲರ್ ಅನ್ನು ತೆಗೆದುಹಾಕಲಾಗಿದೆ. ಶೀಘ್ರದಲ್ಲೇ ಮಾರ್ಗಸೂಚಿಗಳಿಗೆ ಅನುಗುಣವಾದ ಪರಿಷ್ಕೃತ ಆವೃತ್ತಿಯನ್ನು ಅಪ್‌ಲೋಡ್ ಮಾಡಲಾಗುತ್ತದೆ” ಎಂದು ತಿಳಿಸಿದೆ. ಈ ತಪ್ಪಿಗೆ ವಿಷಾದ ವ್ಯಕ್ತಪಡಿಸಿರುವ ನಿರ್ಮಾಪಕರು, ಎಲ್ಲಾ ಪ್ರಮಾಣೀಕರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. ಕೆಡಿ: ದಿ ಡೆವಿಲ್ ಚಿತ್ರವು ಈಗಾಗಲೇ ದೇಶಾದ್ಯಂತ ಸಾಕಷ್ಟು ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಜೊತೆಗೆ ಶಿಲ್ಪಾ ಶೆಟ್ಟಿ,…

ಬಹುನಿರೀಕ್ಷಿತ ಚಿತ್ರ ದೃಶ್ಯಂ 3ಗೆ ಭರ್ಜರಿ ಹೂಡಿಕೆ

ಚೆನ್ನೈ: ಮಲಯಾಳಂ ಸಿನಿರಂಗದ ಬಹುನಿರೀಕ್ಷಿತ ಚಿತ್ರ ದೃಶ್ಯಂ 3ಗೆ ಭರ್ಜರಿ ಹೂಡಿಕೆ ಹರಿದುಬರುತ್ತಿದೆ. ಜನಪ್ರಿಯ ನಿರ್ಮಾಣ ಸಂಸ್ಥೆ Pen Studios, ಈ ಚಿತ್ರಕ್ಕಾಗಿ ₹100 ಕೋಟಿ ಹೂಡಿಕೆ ಮಾಡುವುದಾಗಿ ಘೋಷಿಸಿದೆ. ನಿರ್ದೇಶಕ ಜೀತು ಜೋಸೆಫ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್ ನಾಯಕನಾಗಿ ನಟಿಸುತ್ತಿದ್ದಾರೆ. ಚಿತ್ರವನ್ನು ನಿರ್ಮಿಸುತ್ತಿರುವ Aashirvad Cinemas ಸಂಸ್ಥೆಯಲ್ಲಿ, Panorama Studios ಮೂಲಕ ಈ ಹೂಡಿಕೆ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಣೆ ನೀಡಿರುವ Pen Studios, “ಭಾರತದ ಅತ್ಯಂತ ಪ್ರತಿಷ್ಠಿತ ಥ್ರಿಲ್ಲರ್‌ಗಳಲ್ಲಿ ಒಂದಾದ ‘ದೃಶ್ಯಂ 3’ಗೆ ₹100 ಕೋಟಿ ಹೂಡಿಕೆ” ಎಂದು ತಿಳಿಸಿದೆ. ಜೊತೆಗೆ, ಚಿತ್ರದ ಹೊಸ ಬಿಡುಗಡೆ ದಿನಾಂಕವನ್ನು ಮೇ 21 ಎಂದು ಘೋಷಿಸಿದೆ. ಮುಂಬರುವ ಚಿತ್ರವು ಮೊದಲು ಏಪ್ರಿಲ್ 2ರಂದು ಬಿಡುಗಡೆಯಾಗಬೇಕಾಗಿದ್ದರೂ, ಪರಿಸ್ಥಿತಿಗಳ ಹಿನ್ನೆಲೆ ಬಿಡುಗಡೆ ಮುಂದೂಡಲಾಗಿದೆ. ಈಗ ಮೇ 21ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ‘ದೃಶ್ಯಂ’…

‘ಲಾರೆನ್ಸ್ ಆಫ್ ಪಂಜಾಬ್’ ಸಾಕ್ಷ್ಯಚಿತ್ರ ಸರಣಿ: ಅಪರಾಧ ಲೋಕದ ಅನಾವರಣ

ಮುಂಬೈ: ಲಾರೆನ್ಸ್ ಆಫ್ ಪಂಜಾಬ್ ಎಂಬ ಮುಂಬರುವ ಸಾಕ್ಷ್ಯಚಿತ್ರ ಸರಣಿ, ಪಂಜಾಬ್‌ನ ಅಪರಾಧ ಜಗತ್ತಿನ ಒಳಹೊಟ್ಟೆಯನ್ನು ಅನಾವರಣಗೊಳಿಸುವ ಪ್ರಯತ್ನವಾಗಿ ಗಮನಸೆಳೆಯುತ್ತಿದೆ. ಈ ಸರಣಿ ಲಾರೆನ್ಸ್ ಬಿಷ್ಣೋಯ್ ಜೀವನ, ಅವನ ಉದಯ ಮತ್ತು ಅದರ ಹಿಂದೆ ಇರುವ ಸಾಮಾಜಿಕ-ಸಾಂಸ್ಕೃತಿಕ ಅಂಶಗಳನ್ನು ಆಳವಾಗಿ ಪರಿಶೀಲಿಸುತ್ತದೆ. ವಿದ್ಯಾರ್ಥಿ ರಾಜಕೀಯದಿಂದ ಸಂಗೀತ, ಸಿದ್ಧಾಂತ ಮತ್ತು ಮಾಧ್ಯಮ ಪ್ರಭಾವದವರೆಗೆ ಲಾರೆನ್ಸ್ ಬಿಷ್ಣೋಯ್ ಏರಿಕೆಯ ಹಾದಿಯನ್ನು ಈ ಸರಣಿ ಹತ್ತಿರದಿಂದ ಅನ್ವೇಷಿಸುತ್ತದೆ. ಆದರೆ, ನಿರೂಪಣೆ ವ್ಯಕ್ತಿಯ ಮಟ್ಟದಲ್ಲೇ ನಿಲ್ಲದೇ, ಅಪರಾಧವನ್ನು ರೂಪಿಸುವ ದೊಡ್ಡ ಸಾಮಾಜಿಕ ವ್ಯವಸ್ಥೆ ಮತ್ತು ಸಂಸ್ಕೃತಿಯ ಮೇಲೂ ಬೆಳಕು ಚೆಲ್ಲುತ್ತದೆ. ಸರಣಿಯ ನಿರ್ದೇಶಕ ರಾಘವ್ ಡಾರ್ ಹೇಳುವಂತೆ, “ಇದು ಕೇವಲ ಅಪರಾಧ ಕಥೆಯಲ್ಲ; ವ್ಯಕ್ತಿತ್ವವನ್ನು ರೂಪಿಸುವ ಪರಿಸರ, ಪ್ರಭಾವಗಳು ಮತ್ತು ವ್ಯವಸ್ಥೆಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವಾಗಿದೆ. ಜೊತೆಗೆ, ಇಂತಹ ಪ್ರಯಾಣಗಳು ಸಮಾಜದ ಮೇಲೆ ಬೀರುವ ಪರಿಣಾಮಗಳನ್ನೂ ಗಮನದಲ್ಲಿಟ್ಟಿದ್ದೇವೆ” ಎಂದಿದ್ದಾರೆ. ನಿರ್ಮಾಪಕ ರಾಘವ್ ಖನ್ನಾ, ಪಂಜಾಬ್‌ನ…

ದಿಗ್ಗಜ ಗಾಯಕಿ ಆಶಾ ಭೋಸ್ಲೆ ವಿಧಿವಶ; ಶ್ರದ್ದಾಂಜಲಿಯ ಮಹಾಪೂರ

ಮುಂಬೈ,: ಭಾರತೀಯ ಚಿತ್ರರಂಗದ ದಿಗ್ಗಜ ಗಾಯಕಿ ಆಶಾ ಭೋಸ್ಲೆ (Asha Bhosle) ಅವರು ಭಾನುವಾರ ನಿಧನ ಹೊಂದಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ತೀವ್ರ ಉಸಿರಾಟದ ಸಮಸ್ಯೆ ಮತ್ತು ಎದೆನೋವಿನಿಂದ ಬಳಲುತ್ತಿದ್ದ ಅವರು ಮುಂಬೈನ Breach Candy Hospitalನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತೀವ್ರ ನಿಗಾ ಘಟಕದಲ್ಲಿ ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದರೂ, ಚಿಕಿತ್ಸೆಗೆ ಸ್ಪಂದಿಸದೆ ಮಧ್ಯಾಹ್ನದ ವೇಳೆಗೆ ಕೊನೆಯುಸಿರೆಳೆದರು. ಆಶಾ ಭೋಸ್ಲೆ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಚಿತ್ರರಂಗದ ಗಣ್ಯರು ಹಾಗೂ ಸಂಗೀತ ಕ್ಷೇತ್ರದ ಅನೇಕರು ಅವರ ಶೀಘ್ರ ಚೇತರಿಕೆಗೆ ಪ್ರಾರ್ಥನೆ ಸಲ್ಲಿಸಿದ್ದರು. ಆದರೆ, ಆ ಪ್ರಾರ್ಥನೆ ಫಲಕಾರಿಯಾಗದೆ, ಸಂಗೀತ ಲೋಕವು ತನ್ನ ಅಮೂಲ್ಯ ಧ್ವನಿಯನ್ನು ಕಳೆದುಕೊಂಡಂತಾಗಿದೆ. ಹಿಂದಿ ಸೇರಿದಂತೆ ಕನ್ನಡ, ತಮಿಳು, ತೆಲುಗು, ಮರಾಠಿ, ಮಲಯಾಳಂ, ಬೆಂಗಾಲಿ ಸೇರಿದಂತೆ ಅನೇಕ ಭಾಷೆಗಳಲ್ಲಿ ಲಕ್ಷಾಂತರ ಹಾಡುಗಳನ್ನು ಹಾಡಿರುವ ಆಶಾ ಭೋಸ್ಲೆ, ಭಾರತೀಯ ಸಂಗೀತಕ್ಕೆ ಅಪಾರ ಕೊಡುಗೆ…

‘ಜನ ನಾಯಗನ್’ ಚಿತ್ರದ ದೃಶ್ಯ ಇಂಟರ್ನೆಟ್‌ನಲ್ಲಿ ಸೋರಿಕೆ

ಹೈದರಾಬಾದ್: ಬಹು ನಿರೀಕ್ಷಿತ ‘ಜನ ನಾಯಗನ್’ ಚಿತ್ರದ ದೃಶ್ಯಾವಳಿ ಇಂಟರ್ನೆಟ್‌ನಲ್ಲಿ ಸೋರಿಕೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ತೆಲುಗು ನಟ ವಿಜಯ್ ದೇವರಕೊಂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಅವರು, “#ಜನನಾಯಗನ್ ಸೋರಿಕೆ ನನಗೆ ಕೋಪ ತರಿಸುತ್ತದೆ. ವೃತ್ತಿಜೀವನದ ಆರಂಭದಲ್ಲಿ ಇಂತಹ ಘಟನೆ ಎದುರಿಸಿದ ಅನುಭವವಿದೆ. ಇದು ಕೇವಲ ನನ್ನ ವಿಷಯವಲ್ಲ; ಸಹ-ನಟರು, ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಅನೇಕ ಜನರ ಕನಸುಗಳಿಗೆ ಹೊಡೆತ ನೀಡುತ್ತದೆ” ಎಂದು ಹೇಳಿದ್ದಾರೆ. ಈ ಸಮಸ್ಯೆಯನ್ನು ತಕ್ಷಣ ಬಗೆಹರಿಸಿ, ಅದರ ಹಿಂದಿರುವವರನ್ನು ಪತ್ತೆಹಚ್ಚಬೇಕು. ಇಲ್ಲವಾದರೆ ಇದು ವ್ಯವಸ್ಥೆಯ ವೈಫಲ್ಯವೆನ್ನಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ, ಚಿತ್ರದ ಸಂಪೂರ್ಣ ತಂಡಕ್ಕೆ ತಮ್ಮ ಬೇಷರತ್ತಾದ ಬೆಂಬಲವನ್ನೂ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮುನ್ನ ಖ್ಯಾತ ನಿರ್ದೇಶಕ ಎ.ಆರ್. ಮುರುಗದಾಸ್ ಕೂಡ ಸೋರಿಕೆಯನ್ನು ಖಂಡಿಸಿ, “ಚಿತ್ರ ಸೋರಿಕೆ ಎಂದರೆ ಕೇವಲ ಸಿನಿಮಾ ಅಲ್ಲ; ಅದು ಹಲವರ ಕನಸು,…